AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kabzaa First Half Review: ಹೇಗಿದೆ ‘ಕಬ್ಜ’ ಚಿತ್ರದ ಮೊದಲಾರ್ಧ? ಉಪೇಂದ್ರ-ಆರ್​. ಚಂದ್ರು ತೆರೆದಿಟ್ಟ ಬೇರೊಂದು ಲೋಕ ಇಲ್ಲಿದೆ..

ಉಪೇಂದ್ರ ಅಭಿನಯದ ‘ಕಬ್ಜ’ ಸಿನಿಮಾ ಗ್ರ್ಯಾಂಡ್​ ಆಗಿ ತೆರೆಕಂಡಿದೆ. ಈ ಚಿತ್ರದ ಫಸ್ಟ್​ ಹಾಫ್​ನಲ್ಲಿ ಏನೆಲ್ಲ ಇದೆ ತಿಳಿಯಲು ಈ ಸ್ಟೋರಿ ಓದಿ..

Kabzaa First Half Review: ಹೇಗಿದೆ ‘ಕಬ್ಜ’ ಚಿತ್ರದ ಮೊದಲಾರ್ಧ? ಉಪೇಂದ್ರ-ಆರ್​. ಚಂದ್ರು ತೆರೆದಿಟ್ಟ ಬೇರೊಂದು ಲೋಕ ಇಲ್ಲಿದೆ..
‘ಕಬ್ಜ’ ಸಿನಿಮಾ ಪೋಸ್ಟರ್​
ಮದನ್​ ಕುಮಾರ್​
| Edited By: |

Updated on:Mar 17, 2023 | 1:21 PM

Share

ಕನ್ನಡದ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಶೈನ್​ ಆಗುತ್ತಿವೆ. ಆ ಸಾಲಿನಲ್ಲಿ ‘ಕಬ್ಜ’ ಚಿತ್ರ (Kabzaa Movie) ಕೂಡ ಇದೆ. ಈ ಸಿನಿಮಾಗಾಗಿ ನಿರ್ದೇಶಕ ಆರ್​. ಚಂದ್ರು ಅವರು ನಾಲ್ಕು ವರ್ಷ ಶ್ರಮಿಸಿದ್ದಾರೆ. ಅಭಿಮಾನಿಗಳು ಈ ಸಿನಿಮಾ ಮೇಲೆ ಇಟ್ಟುಕೊಂಡಿದ್ದ ನಿರೀಕ್ಷೆ ಕೂಡ ದೊಡ್ಡದು. ಉಪೇಂದ್ರ (Upendra), ಶಿವರಾಜ್​ಕುಮಾರ್​, ಕಿಚ್ಚ ಸುದೀಪ್​, ಶ್ರೀಯಾ ಶರಣ್​ ಮುಂತಾದವರು ನಟಿಸಿರುವ ‘ಕಬ್ಜ’ ಚಿತ್ರದ ತೆರೆ ಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಇಂದು (ಮಾರ್ಚ್​ 17) ಅದ್ದೂರಿಯಾಗಿ ಈ ಚಿತ್ರ ರಿಲೀಸ್​ ಆಗಿದೆ. ಉಪ್ಪಿ ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ‘ಕಬ್ಜ’ ಸಿನಿಮಾದ ಮೊದಲಾರ್ಧ (Kabzaa First Half) ಹೇಗಿದೆ ಎಂಬುದು ಕೂಡ ಈಗ ಗೊತ್ತಾಗಿದೆ. ಆ ಕುರಿತು ವಿವರ ಇಲ್ಲಿದೆ..

  1. ಎಲ್ಲರಿಗಿಂತ ಮೊದಲ ಸುದೀಪ್ ಎಂಟ್ರಿ. ಪೊಲೀಸ್ ಕಮಿಷನರ್ ಭಾರ್ಗವ್ ಬಕ್ಷಿ ಪಾತ್ರದಲ್ಲಿ ಅಬ್ಬರಿಸುವ ಕಿಚ್ಚ
  2. ಫ್ಲಾಶ್‌ಬ್ಯಾಕ್ ಮೂಲಕ ಕತೆ ಹೇಳುವ ಭಾರ್ಗವ್ ಬಕ್ಷಿ. ಸುದೀಪ್ ನಿರೂಪಣೆಯಲ್ಲಿ ಸಾಗುವ ‘ಕಬ್ಜ’ ಕಹಾನಿ.
  3. ಬ್ರಿಟಿಷ್‌ ಕಾಲದ ಕಥೆ ಶುರುವಾಗೋದು 1945ರ ಸಂಗ್ರಾಮ ನಗರದಲ್ಲಿ. ನಂತರ ಅಮರಪುರ, ವಿಶಾಖಪಟ್ಟಣ ಮುಂತಾದ ಕಡೆಗೆ ಕಥೆ ಸಾಗುತ್ತದೆ.
  4. ಗ್ಯಾಂಗ್‌ಸ್ಟರ್ ಮತ್ತು ಪೈಲೆಟ್.. ಹೀಗೆ ಎರಡು ಗೆಟಪ್‌ನಲ್ಲಿ ಎದುರುಗೊಳ್ಳುವ ಉಪೇಂದ್ರ ಅವರ ಪಾತ್ರ. ಆ ಮೂಲಕ ಕೌತುಕ ಮೂಡಿಸುತ್ತವೆ ಓಪನಿಂಗ್ ದೃಶ್ಯಗಳು.
  5. ‘ನಮಾಮಿ ನಮಾಮಿ..’ ಹಾಡಿನಿಂದ ಶ್ರಿಯಾ ಶರಣ್ ಎಂಟ್ರಿ. ರಾಜಮನೆತನದ ಮಧುಮತಿ ಎಂಬ ರಾಜಕುಮಾರಿ ಪಾತ್ರ ಮಾಡಿದ್ದಾರೆ ಶ್ರೀಯಾ ಶರಣ್.
  6. ಸ್ವತಂತ್ರ ಭಾರತದಲ್ಲೂ ಅಧಿಕಾರಕ್ಕಾಗಿ ಮಸಲತ್ತು ನಡೆಸುವ ರಾಜ ಮನೆತನದ ಒಡೆಯನಾಗಿ ಕಾಣಿಸಿಕೊಂಡಿದ್ದಾರೆ ಹಿರಿಯ ನಟ ಮುರಳಿ ಶರ್ಮಾ.
  7. ರೆಬಲ್ ಸ್ವಭಾವದ ಸಂಕೇಶ್ವರ ಎಂಬ ಪಾತ್ರದಲ್ಲಿ ಕಥೆಗೆ ಮೊದಲ ಕಿಚ್ಚು ಹಚ್ಚುವ ಸುನೀಲ್ ಪುರಾಣಿಕ್. ಆ ಪಾತ್ರದಿಂದಲೇ ‘ಕಬ್ಜ’ ಕಥೆಗೆ ಮೇಜರ್ ಟ್ವಿಸ್ಟ್.
  8. ಜೈಲ್ ಫೈಟ್ ಮೂಲಕ ಆ್ಯಕ್ಷನ್ ಪ್ರಿಯರಿಗೆ ಫಸ್ಟ್ ಹಾಫ್‌ನಲ್ಲಿ ಸಖತ್ ಮನರಂಜನೆ ನೀಡ್ತಾರೆ ಉಪೇಂದ್ರ.
  9. ಚುರುಕಾದ ನಿರೂಪಣೆಯಿಂದ ಮೊದಲಾರ್ಧದ ಮೆರುಗು ಹೆಚ್ಚಿಸಿದ ನಿರ್ದೇಶಕ ಆರ್. ಚಂದ್ರು. ಎಲ್ಲಿಯೂ ಬೋರ್ ಎನಿಸದೇ ಸಾಗುತ್ತದೆ ‘ಕಬ್ಜ’ ಫಸ್ಟ್ ಹಾಫ್.
  10. ಬೃಹತ್ ಸೆಟ್‌ಗಳ ಮೂಲಕ 1970ರ ಕಾಲವನ್ನು ಪ್ರೇಕ್ಷಕರ ಎದುರಿಗೆ ತಂದಿದ್ದಾರೆ ಕಲಾ ‌ನಿರ್ದೇಶಕ ಶಿವ ಕುಮಾರ್. ಬೇರೊಂದು ದುನಿಯಾವನ್ನು ನೋಡಿದ ಫೀಲ್ ಸಿಗುತ್ತದೆ.
  11. ಉಪೇಂದ್ರ, ಕಿಚ್ಚ ಸುದೀಪ್, ಸುನೀಲ್ ಪುರಾಣಿಕ್, ಮರಳಿ ಶರ್ಮಾ, ಶ್ರಿಯಾ ಶರಣ್ ಮಾತ್ರವಲ್ಲದೇ ನೀನಾಸಂ ಅಶ್ವತ್ಥ್, ದಾನಿಶ್ ಅಖ್ತರ್ ಮುಂತಾದ ಕಲಾವಿದರು ಕೂಡ ಫಸ್ಟ್ ಹಾಫ್‌ನಲ್ಲಿ ಅಬ್ಬರಿಸುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:35 am, Fri, 17 March 23

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
ಇಂಡಿಗೋ ವಿಮಾನದೊಳಗೆ ಎಸಿ, ಕರೆಂಟ್ ಇಲ್ಲದೆ ಒದ್ದಾಡಿದ ಪ್ರಯಾಣಿಕರು
ಇಂಡಿಗೋ ವಿಮಾನದೊಳಗೆ ಎಸಿ, ಕರೆಂಟ್ ಇಲ್ಲದೆ ಒದ್ದಾಡಿದ ಪ್ರಯಾಣಿಕರು
ನಾರ್ವೆಯಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ
ನಾರ್ವೆಯಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು
ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ
ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ
ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ!
ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ!
ಉದ್ಯಮಿಗೆ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಲೇಡಿ ಡಾನ್!
ಉದ್ಯಮಿಗೆ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಲೇಡಿ ಡಾನ್!
ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಕಲಬುರ್ಗಿಯಲ್ಲಿ ಮೃಗಾಲಯ ಉದ್ಘಾಟಿಸಿದ ಸಚಿವ ಖಂಡ್ರೆ!
ಕಲಬುರ್ಗಿಯಲ್ಲಿ ಮೃಗಾಲಯ ಉದ್ಘಾಟಿಸಿದ ಸಚಿವ ಖಂಡ್ರೆ!
ಬರದಲ್ಲೂ ಬತ್ತಿಲ್ಲ ಈ ದೇಗುಲದ ಕೆರೆ: ಬಾದಾಮಿಯಲ್ಲೊಂದು ಅಚ್ಚರಿ!
ಬರದಲ್ಲೂ ಬತ್ತಿಲ್ಲ ಈ ದೇಗುಲದ ಕೆರೆ: ಬಾದಾಮಿಯಲ್ಲೊಂದು ಅಚ್ಚರಿ!