AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kabzaa First Half Review: ಹೇಗಿದೆ ‘ಕಬ್ಜ’ ಚಿತ್ರದ ಮೊದಲಾರ್ಧ? ಉಪೇಂದ್ರ-ಆರ್​. ಚಂದ್ರು ತೆರೆದಿಟ್ಟ ಬೇರೊಂದು ಲೋಕ ಇಲ್ಲಿದೆ..

ಉಪೇಂದ್ರ ಅಭಿನಯದ ‘ಕಬ್ಜ’ ಸಿನಿಮಾ ಗ್ರ್ಯಾಂಡ್​ ಆಗಿ ತೆರೆಕಂಡಿದೆ. ಈ ಚಿತ್ರದ ಫಸ್ಟ್​ ಹಾಫ್​ನಲ್ಲಿ ಏನೆಲ್ಲ ಇದೆ ತಿಳಿಯಲು ಈ ಸ್ಟೋರಿ ಓದಿ..

Kabzaa First Half Review: ಹೇಗಿದೆ ‘ಕಬ್ಜ’ ಚಿತ್ರದ ಮೊದಲಾರ್ಧ? ಉಪೇಂದ್ರ-ಆರ್​. ಚಂದ್ರು ತೆರೆದಿಟ್ಟ ಬೇರೊಂದು ಲೋಕ ಇಲ್ಲಿದೆ..
‘ಕಬ್ಜ’ ಸಿನಿಮಾ ಪೋಸ್ಟರ್​
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ|

Updated on:Mar 17, 2023 | 1:21 PM

Share

ಕನ್ನಡದ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಶೈನ್​ ಆಗುತ್ತಿವೆ. ಆ ಸಾಲಿನಲ್ಲಿ ‘ಕಬ್ಜ’ ಚಿತ್ರ (Kabzaa Movie) ಕೂಡ ಇದೆ. ಈ ಸಿನಿಮಾಗಾಗಿ ನಿರ್ದೇಶಕ ಆರ್​. ಚಂದ್ರು ಅವರು ನಾಲ್ಕು ವರ್ಷ ಶ್ರಮಿಸಿದ್ದಾರೆ. ಅಭಿಮಾನಿಗಳು ಈ ಸಿನಿಮಾ ಮೇಲೆ ಇಟ್ಟುಕೊಂಡಿದ್ದ ನಿರೀಕ್ಷೆ ಕೂಡ ದೊಡ್ಡದು. ಉಪೇಂದ್ರ (Upendra), ಶಿವರಾಜ್​ಕುಮಾರ್​, ಕಿಚ್ಚ ಸುದೀಪ್​, ಶ್ರೀಯಾ ಶರಣ್​ ಮುಂತಾದವರು ನಟಿಸಿರುವ ‘ಕಬ್ಜ’ ಚಿತ್ರದ ತೆರೆ ಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಇಂದು (ಮಾರ್ಚ್​ 17) ಅದ್ದೂರಿಯಾಗಿ ಈ ಚಿತ್ರ ರಿಲೀಸ್​ ಆಗಿದೆ. ಉಪ್ಪಿ ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ‘ಕಬ್ಜ’ ಸಿನಿಮಾದ ಮೊದಲಾರ್ಧ (Kabzaa First Half) ಹೇಗಿದೆ ಎಂಬುದು ಕೂಡ ಈಗ ಗೊತ್ತಾಗಿದೆ. ಆ ಕುರಿತು ವಿವರ ಇಲ್ಲಿದೆ..

  1. ಎಲ್ಲರಿಗಿಂತ ಮೊದಲ ಸುದೀಪ್ ಎಂಟ್ರಿ. ಪೊಲೀಸ್ ಕಮಿಷನರ್ ಭಾರ್ಗವ್ ಬಕ್ಷಿ ಪಾತ್ರದಲ್ಲಿ ಅಬ್ಬರಿಸುವ ಕಿಚ್ಚ
  2. ಫ್ಲಾಶ್‌ಬ್ಯಾಕ್ ಮೂಲಕ ಕತೆ ಹೇಳುವ ಭಾರ್ಗವ್ ಬಕ್ಷಿ. ಸುದೀಪ್ ನಿರೂಪಣೆಯಲ್ಲಿ ಸಾಗುವ ‘ಕಬ್ಜ’ ಕಹಾನಿ.
  3. ಬ್ರಿಟಿಷ್‌ ಕಾಲದ ಕಥೆ ಶುರುವಾಗೋದು 1945ರ ಸಂಗ್ರಾಮ ನಗರದಲ್ಲಿ. ನಂತರ ಅಮರಪುರ, ವಿಶಾಖಪಟ್ಟಣ ಮುಂತಾದ ಕಡೆಗೆ ಕಥೆ ಸಾಗುತ್ತದೆ.
  4. ಗ್ಯಾಂಗ್‌ಸ್ಟರ್ ಮತ್ತು ಪೈಲೆಟ್.. ಹೀಗೆ ಎರಡು ಗೆಟಪ್‌ನಲ್ಲಿ ಎದುರುಗೊಳ್ಳುವ ಉಪೇಂದ್ರ ಅವರ ಪಾತ್ರ. ಆ ಮೂಲಕ ಕೌತುಕ ಮೂಡಿಸುತ್ತವೆ ಓಪನಿಂಗ್ ದೃಶ್ಯಗಳು.
  5. ‘ನಮಾಮಿ ನಮಾಮಿ..’ ಹಾಡಿನಿಂದ ಶ್ರಿಯಾ ಶರಣ್ ಎಂಟ್ರಿ. ರಾಜಮನೆತನದ ಮಧುಮತಿ ಎಂಬ ರಾಜಕುಮಾರಿ ಪಾತ್ರ ಮಾಡಿದ್ದಾರೆ ಶ್ರೀಯಾ ಶರಣ್.
  6. ಸ್ವತಂತ್ರ ಭಾರತದಲ್ಲೂ ಅಧಿಕಾರಕ್ಕಾಗಿ ಮಸಲತ್ತು ನಡೆಸುವ ರಾಜ ಮನೆತನದ ಒಡೆಯನಾಗಿ ಕಾಣಿಸಿಕೊಂಡಿದ್ದಾರೆ ಹಿರಿಯ ನಟ ಮುರಳಿ ಶರ್ಮಾ.
  7. ರೆಬಲ್ ಸ್ವಭಾವದ ಸಂಕೇಶ್ವರ ಎಂಬ ಪಾತ್ರದಲ್ಲಿ ಕಥೆಗೆ ಮೊದಲ ಕಿಚ್ಚು ಹಚ್ಚುವ ಸುನೀಲ್ ಪುರಾಣಿಕ್. ಆ ಪಾತ್ರದಿಂದಲೇ ‘ಕಬ್ಜ’ ಕಥೆಗೆ ಮೇಜರ್ ಟ್ವಿಸ್ಟ್.
  8. ಜೈಲ್ ಫೈಟ್ ಮೂಲಕ ಆ್ಯಕ್ಷನ್ ಪ್ರಿಯರಿಗೆ ಫಸ್ಟ್ ಹಾಫ್‌ನಲ್ಲಿ ಸಖತ್ ಮನರಂಜನೆ ನೀಡ್ತಾರೆ ಉಪೇಂದ್ರ.
  9. ಚುರುಕಾದ ನಿರೂಪಣೆಯಿಂದ ಮೊದಲಾರ್ಧದ ಮೆರುಗು ಹೆಚ್ಚಿಸಿದ ನಿರ್ದೇಶಕ ಆರ್. ಚಂದ್ರು. ಎಲ್ಲಿಯೂ ಬೋರ್ ಎನಿಸದೇ ಸಾಗುತ್ತದೆ ‘ಕಬ್ಜ’ ಫಸ್ಟ್ ಹಾಫ್.
  10. ಬೃಹತ್ ಸೆಟ್‌ಗಳ ಮೂಲಕ 1970ರ ಕಾಲವನ್ನು ಪ್ರೇಕ್ಷಕರ ಎದುರಿಗೆ ತಂದಿದ್ದಾರೆ ಕಲಾ ‌ನಿರ್ದೇಶಕ ಶಿವ ಕುಮಾರ್. ಬೇರೊಂದು ದುನಿಯಾವನ್ನು ನೋಡಿದ ಫೀಲ್ ಸಿಗುತ್ತದೆ.
  11. ಉಪೇಂದ್ರ, ಕಿಚ್ಚ ಸುದೀಪ್, ಸುನೀಲ್ ಪುರಾಣಿಕ್, ಮರಳಿ ಶರ್ಮಾ, ಶ್ರಿಯಾ ಶರಣ್ ಮಾತ್ರವಲ್ಲದೇ ನೀನಾಸಂ ಅಶ್ವತ್ಥ್, ದಾನಿಶ್ ಅಖ್ತರ್ ಮುಂತಾದ ಕಲಾವಿದರು ಕೂಡ ಫಸ್ಟ್ ಹಾಫ್‌ನಲ್ಲಿ ಅಬ್ಬರಿಸುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:35 am, Fri, 17 March 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ