AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದ ‘ಪಿಂಕಿ ಎಲ್ಲಿ?’ ಚಿತ್ರ ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವದ ಪ್ರಶಸ್ತಿ ಸುತ್ತಿಗೆ ಆಯ್ಕೆ

IFFM: ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವದ ಪ್ರಶಸ್ತಿ ಸುತ್ತಿಗೆ ಕನ್ನಡದ ‘ಪಿಂಕಿ ಎಲ್ಲಿ’ ಆಯ್ಕೆಯಾಗಿದ್ದು, ಹಲವು ವಿಭಾಗಗಳಲ್ಲಿ ಸ್ಪರ್ಧಿಸಲಿದೆ. ಪ್ರಶಸ್ತಿ ಸಮಾರಂಭವು ಆಗಸ್ಟ್ 20ರಂದು ನಡೆಯಲಿದೆ.

ಕನ್ನಡದ ‘ಪಿಂಕಿ ಎಲ್ಲಿ?’ ಚಿತ್ರ ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವದ ಪ್ರಶಸ್ತಿ ಸುತ್ತಿಗೆ ಆಯ್ಕೆ
ಸ್ಥಳ್​ಪುರಾಣ್, ಪಿಂಕಿ ಎಲ್ಲಿ ಹಾಗೂ ಫೈರ್ ಇನ್​ ದಿ ಮೌಂಟೇನ್ ಚಿತ್ರದ ಪೋಸ್ಟರ್​ಗಳು
TV9 Web
| Updated By: shivaprasad.hs|

Updated on: Aug 05, 2021 | 5:46 PM

Share

ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವ- 2021(ಐಎಫ್​ಎಫ್​ಎಂ)ರ ಅಂತಿಮ ಪ್ರಶಸ್ತಿ ಸುತ್ತಿಗೆ ಆಯ್ಕೆಯಾದ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಕನ್ನಡದ ‘ಪಿಂಕಿ ಎಲ್ಲಿ’ ಚಿತ್ರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಪಿಂಕಿ ಎಲ್ಲಿ ಚಿತ್ರವು ಅತ್ಯುತ್ತಮ ಸ್ವತಂತ್ರ ಚಲನ ಚಿತ್ರ ಹಾಗೂ ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ಸ್ಪರ್ಧಿಸಲಿದೆ. ಹನ್ನೆರಡನೇ ವರ್ಷದ ಚಿತ್ರೋತ್ಸವದ ಪಟ್ಟಿಯನ್ನು ಮೆಲ್ಬರ್ನ್​ನ ವಿಕ್ಟೋರಿಯಾ ಸರ್ಕಾರವು ಬಿಡುಗಡೆಗೊಳಿಸಿದ್ದು, ಪ್ರಶಸ್ತಿ ಸಮಾರಂಭವು ಆನ್​ಲೈನ್​ನಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ. ಹಿಂದಿಯ ಲೂಡೊ, ಶೆರ್ನಿ ಚಿತ್ರಗಳು, ಮಲಯಾಳಂನ ದಿ ಗ್ರೇಟ್ ಇಂಡಿಯನ್ ಕಿಚನ್, ತಮಿಳಿನ ‘ಸೂರರೈ ಪೊಟ್ರು’ ಮೊದಲಾದ ಚಿತ್ರಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ರೀಚಾ ಛಡ್ಡಾ ಹಾಗೂ ನಿರ್ದೇಶಕ ಓನಿರ್ ಐಎಫ್​ಎಫ್​ಎಂ ಚಿತ್ರೋತ್ಸವಕ್ಕೆ ತೀರ್ಪುಗಾರರಾಗಿದ್ದಾರೆ. ಭಾರತದ ವಿವಿಧ ಭಾಷೆಯ ನೂರಕ್ಕೂ ಅಧಿಕ ಅತ್ಯುತ್ತಮ ಚಿತ್ರಗಳನ್ನು ಆಗಸ್ಟಟ್ 12ರಿಂದ ಆಗಸ್ಟ್ 20ರ ನಡುವೆ ಪ್ರದರ್ಶಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಇತ್ತೀಚೆಗೆ ಒಟಿಟಿ ಮಾದರಿಯ ಚಿತ್ರಗಳು ಅಧಿಕವಾಗಿರುವ ಕಾರಣ ಅದಕ್ಕಾಗಿ ಪ್ರತ್ಯೇಕ ಪ್ರಶಸ್ತಿಯನ್ನು ಆಯೋಜಿಸಿರುವ ಆಯೋಜಕರು, ಅದರಲ್ಲಿ ಅತ್ಯುತ್ತಮ ಸೀರೀಸ್, ಸೀರೀಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಉತ್ತಮ ನಟ ಹಾಗೂ ಉತ್ತಮ ನಟಿ ಪ್ರಶಸ್ತಿಯನ್ನು ಘೋಷಿಸಿದ್ದಾರೆ.

ಅಂತಿಮ ಸುತ್ತಿಗೆ ಆಯ್ಕೆಯಾದ ಚಿತ್ರಗಳ ಪಟ್ಟಿ ಇಲ್ಲಿದೆ:

ಅತ್ಯುತ್ತಮ ಚಿತ್ರ:

ಕಾಯಟ್ಟಮ್ (ಮಲಯಾಳಂ) – ಸನಲ್ ಕುಮಾರ್ ಸಸಿಧರನ್(ನಿರ್ದೇಶನ)

ಲೂಟ್​ಕೇಸ್ (ಹಿಂದಿ)- ರಾಜೇಶ್ ಕೃಷ್ಣನ್

ಲುಡೊ(ಹಿಂದಿ)- ಅನುರಾಗ್ ಬಸು

ಶೆರ್ನಿ (ಹಿಂದಿ)- ಅಮಿತ್ ಮಸುರ್ಕರ್

ಸೂರರೈ ಪೊಟ್ರು(ತಮಿಳು)- ಸುಧಾ ಕೊಂಗರಾ

ತಷೇರ್ಘಾರ್(ಬೆಂಗಾಲಿ)- ಸುದಿಪ್ತೊ ರಾಯ್

ಅತ್ಯುತ್ತಮ ಸ್ವತಂತ್ರ ಚಿತ್ರಗಳು:

ಪಿಂಕಿ ಎಲ್ಲಿ? (ಕನ್ನಡ)- ಪೃಥ್ವಿ ಕೊಣ್ಣನೂರ್

ಫೈರ್ ಇನ್ ದಿ ಮೌಂಟೇನ್ಸ್- ಅಜಿತ್ ಪಾಲ್ ಸಿಂಗ್

ಗಾಡ್ ಇನ್ ದಿ ಬಾಲ್ಕನಿ- ಬಿಸ್ವಜೀತ್ ಬೋರಾ

ನಾಸಿರ್- ಅರುಣ್ ಕಾರ್ತಿಕ್

ಸೆತ್ತುಮಾನ್- ತಮಿಳ್

ಸ್ಥಳ್​ಪುರಾಣ್- ಅಕ್ಷಯ್ ಇಂಡಿಕಾರ್

ದಿ ಗ್ರೇಟ್ ಇಂಡಿಯನ್ ಕಿಚನ್- ಜಿಯೊ ಬೇಬಿ

ಅತ್ಯುತ್ತಮ ನಿರ್ದೇಶಕ: 

ಪೃಥ್ವಿ ಕೊಣ್ಣನೂರ್- ಪಿಂಕಿ ಎಲ್ಲಿ?

ಅಜಿತ್ ಪಾಲ್ ಸಿಂಗ್- ಫೈರ್ ಇನ್ ದಿ ಮೌಂಟೇನ್ಸ್

ಅಕ್ಷಯ್ ಇಂಡಿಕಾರ್- ಸ್ಥಳ್​ಪುರಾಣ್

ಅಮಿತ್ ಮಸುರ್ಕರ್- ಶೆರ್ನಿ

ಅನುರಾಗ್ ಬಸು- ಲುಡೊ

ಅರುಣ್ ಕಾರ್ತಿಕ್- ನಾಸಿರ್

ಬಿಸ್ವಜೀತ್ ಬೋರಾ- ಗಾಡ್ ಇನ್ ದಿ ಬಾಲ್ಕನಿ

ಜಿಯೊ ಬೇಬಿ- ದಿ ಗ್ರೇಟ್ ಇಂಡಿಯನ್ ಕಿಚನ್

ಸನಲ್ ಕುಮಾರ್- ಸಸಿಧರನ್ ಕಾಯಟ್ಟಮ್ ಸುಧಾ ಕೊಂಗರಾ- ಸೂರರೈ ಪೊಟ್ರು

ಅತ್ಯುತ್ತಮ ಸೀರೀಸ್​ಗಳು:

ಬಂದಿಶ್ ಬ್ಯಾಂಡಿಟ್ಸ್

ಚುರೈಲ್ಸ್ ಮಿರ್ಜಾಪುರ್ ಸೀಸನ್ 2

ಮಿಸ್​ಮ್ಯಾಚ್ಡ್

ದಿ ಫ್ಯಾಮಿಲಿ ಮ್ಯಾನ್ ಸೀಸನ್ 2

ಇನ್ನೂ ಹಲವಾರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಭಾರತದ ವಿವಿಧ ಭಾಷೆಯ ಚಿತ್ರಗಳು ಪ್ರಶಸ್ತಿ ರೇಸ್​ನಲ್ಲಿವೆ.

ಇದನ್ನೂ ಓದಿ: 

ಬಾಂಗ್ಲಾದೇಶದಲ್ಲಿ ಭಗವಾನ್ ವಿಷ್ಣುವಿನ ಬೆಲೆಬಾಳುವ ವಿಗ್ರಹ ಪತ್ತೆ ; ಮಣ್ಣು ಅಗೆಯುವಾಗ ಸಿಕ್ಕರೂ ಸುಮ್ಮನಿದ್ದ ಶಿಕ್ಷಕ

Sanya Malhotra: ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರಿಯಾದ ದಂಗಲ್ ನಟಿ; ಅವರ ಈ ನಿರ್ಧಾರಕ್ಕೆ ಕಾರಣವೇನು?

(Kannada M0vie Pinki Elli selected for Melbourne Indian Film Festival Ludo and Sherni also selected for Final)

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!