Ajaneesh Loknath: ‘ಕಾಂತಾರ’ ದೈವದ ಸೌಂಡ್​ ರೆಕಾರ್ಡ್​ ಮಾಡಿದ್ದು ಹೇಗೆ? ಅಜನೀಶ್​ ಹೇಳಿದ ಅಚ್ಚರಿಯ ಕಹಾನಿ ಇಲ್ಲಿದೆ..

| Updated By: ಮದನ್​ ಕುಮಾರ್​

Updated on: Jan 08, 2023 | 3:04 PM

Kantara Movie | Star Suvarna: ‘ಸ್ಟಾರ್​ ಸುವರ್ಣ’ ವಾಹಿನಿಯಲ್ಲಿ ಜನವರಿ 15ರಂದು ಸಂಜೆ 6 ಗಂಟೆಗೆ ‘ಕಾಂತಾರ’ ಸಿನಿಮಾ ಪ್ರಸಾರ​ ಆಗಲಿದೆ. ಈ ಚಿತ್ರದ ಸಂಗೀತದ ಬಗ್ಗೆ ಅಜನೀಶ್​ ಲೋಕನಾಥ್​ ಮಾತನಾಡಿದ್ದಾರೆ.

Ajaneesh Loknath: ‘ಕಾಂತಾರ’ ದೈವದ ಸೌಂಡ್​ ರೆಕಾರ್ಡ್​ ಮಾಡಿದ್ದು ಹೇಗೆ? ಅಜನೀಶ್​ ಹೇಳಿದ ಅಚ್ಚರಿಯ ಕಹಾನಿ ಇಲ್ಲಿದೆ..
ಕಾಂತಾರ ಪೋಸ್ಟರ್​, ಅಜನೀಶ್​ ಲೋಕನಾಥ್​
Follow us on

ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ (Ajaneesh Loknath) ಅವರಿಗೆ ಬ್ಯಾಕ್​ ಟು ಬ್ಯಾಕ್ ಗೆಲುವು ಸಿಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಅವರು ಸಖತ್ ಜನಪ್ರಿಯತೆ ಪಡೆದಿದ್ದಾರೆ. ಅದರಲ್ಲೂ ಈ ವರ್ಷ ಬಿಡುಗಡೆ ಆದ ‘ಕಾಂತಾರ’ ಸಿನಿಮಾ ಮೂಲಕ ಅಜನೀಶ್​ ಲೋಕನಾಥ್​ ಅವರ ಖ್ಯಾತಿ ಇನ್ನಷ್ಟು ಹೆಚ್ಚಿತು. ಈಗ ಅವರಿಗೆ ಸಾಕಷ್ಟು ಆಫರ್​ಗಳು ಹರಿದುಬರುತ್ತಿವೆ. ಇಷ್ಟೆಲ್ಲ ಯಶಸ್ಸಿಗೆ ಕಾರಣ ಆಗಿದ್ದು ಅವರ ಪರಿಶ್ರಮ. ‘ಕಾಂತಾರ’ (Kantara Movie) ಸಿನಿಮಾದಲ್ಲಿ ಬರುವ ದೈವಾರಾಧನೆ ಅಥವಾ ಭೂತಕೋಲದ ದೃಶ್ಯಗಳಲ್ಲಿ ಇರುವ ಸೌಂಡ್​ ರೆಕಾರ್ಡ್​ ಆಗಿದ್ದು ಹೇಗೆ ಎಂಬುದನ್ನು ಅವರೀಗ ವಿವರಿಸಿದ್ದಾರೆ. ‘ಕಾಂತಾರ’ ಸಿನಿಮಾ ‘ಸ್ಟಾರ್​ ಸುವರ್ಣ’ (Star Suvarna) ವಾಹಿನಿಯಲ್ಲಿ ಜನವರಿ 15ರಂದು ಪ್ರಸಾರ ಆಗಲಿದೆ. ಆ ಪ್ರಯುಕ್ತ ಅಪರೂಪದ ಮಾಹಿತಿಯನ್ನು ಅಜನೀಶ್​ ಲೋಕನಾಥ್​ ಅವರು ಹಂಚಿಕೊಂಡಿದ್ದಾರೆ.

‘ಕಾಂತಾರ’ ಸಿನಿಮಾದ ಗೆಲುವಿನಲ್ಲಿ ಸಂಗೀತದ ಕೊಡುಗೆ ದೊಡ್ಡದಿದೆ. ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ದೃಶ್ಯಗಳಲ್ಲಿನ ಹಿನ್ನೆಲೆ ಸಂಗೀತಕ್ಕಾಗಿ ಅಜನೀಶ್​ ಲೋಕನಾಥ್​ ಮತ್ತು ಅವರ ತಂಡ ಸಾಕಷ್ಟು ಶ್ರಮ ವಹಿಸಿದೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ಈ ಪ್ರೋಮೋವನ್ನು ‘ಸ್ಟಾರ್​ ಸುವರ್ಣ’ ವಾಹಿನಿಯ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ಈ ವಿಷಯವನ್ನು ಅಜನೀಶ್​ ಲೋಕನಾಥ್​ ಹೇಳಿದ್ದಾರೆ.

ಇದನ್ನೂ ಓದಿ: Ajaneesh B Loknath: ಅಜನೀಶ್​ ಲೋಕನಾಥ್​ಗೆ ಯಾಕಿಂಥ ಸ್ಥಿತಿ; ಇದು ಹಾಸ್ಟೆಲ್​ ಹುಡುಗರ ಕಿತಾಪತಿ

ಇದನ್ನೂ ಓದಿ
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

‘ದೈವ ಕೂಗು ಹಾಕುವುದು, ದೈವದ ಒಡವೆಯಲ್ಲಿ ಇರುವ ಮಣಿಗಳ ಸೌಂಡ್​, ಗಗ್ಗರದ ಶಬ್ಧ.. ಹೀಗೆ ಯಾವುದೂ ಕೂಡ ಕಂಪ್ಯೂಟರ್​ನಲ್ಲಿ ಜನರೇಟ್​ ಮಾಡಿದ್ದಲ್ಲ. ಪ್ರತಿ ಸೌಂಡ್​ ಕೂಡ ನಾವು ಅಲ್ಲಿ ಹೋಗಿಯೇ ರೆಕಾರ್ಡ್​​ ಮಾಡಿದ್ದು. ಡಿಟಿಎಸ್​ ಕೆಲಸಗಳನ್ನು ಮಾಡುವಾಗ ನಮಗೆ ಇನ್ನೂ ಚೆನ್ನಾಗಿ ಸೌಂಡ್​ ಬೇಕು ಅಂತ ನಮ್ಮ ಸೌಂಡ್​ ಮಿಕ್ಸರ್​ ರಾಜಕೃಷ್ಣ ಅವರು ಇಲ್ಲಿಂದ ಒಂದು ತಂಡವನ್ನು ಮತ್ತೆ ಅಲ್ಲಿಗೆ ಕಳುಹಿಸಿ, ಗಗ್ಗರದ ಶಬ್ಧವನ್ನು ರೆಕಾರ್ಡ್​ ಮಾಡಿಸಿದರು’ ಎಂದಿದ್ದಾರೆ ಅಜನೀಶ್​ ಲೋಕನಾಥ್​.

ಇದನ್ನೂ ಓದಿ: Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್​ ಬಗ್ಗೆ ಸ್ಪೆಷಲ್​ ಮಾತುಗಳನ್ನು ಹೇಳಿದ ಸ್ಟಾರ್​ ನಟಿ

ರಿಷಬ್​ ಶೆಟ್ಟಿ ನಟನೆ-ನಿರ್ದೇಶನದ ‘ಕಾಂತಾರ’ ಸಿನಿಮಾದಲ್ಲಿ ಸಪ್ತಮಿ ಗೌಡ, ಕಿಶೋರ್​, ಅಚ್ಯುತ್​ ಕುಮಾರ್​, ಪ್ರಮೋದ್​​ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಗೆ ಈ ಚಿತ್ರದಿಂದ ಭರ್ಜರಿ ಲಾಭ ಆಗಿದೆ. ಚಿತ್ರಮಂದಿರದಲ್ಲಿ 100 ದಿನಗಳನ್ನು ಪೂರೈಸಿರುವ ಈ ಸಿನಿಮಾ ಈಗ ಟಿವಿಯಲ್ಲಿ ಪ್ರದರ್ಶನವಾಗಲು ಸಮಯ ಹತ್ತಿರವಾಗಿದೆ.

‘ಸ್ಟಾರ್​ ಸುವರ್ಣ’ ವಾಹಿನಿಯಲ್ಲಿ ಜನವರಿ 15ರಂದು ಸಂಜೆ 6 ಗಂಟೆಗೆ ‘ಕಾಂತಾರ’ ಸಿನಿಮಾದ ಟಿಲಿವಿಷನ್​ ಪ್ರೀಮಿಯರ್​ ಆಗಲಿದೆ. ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ಗೆಲುವು ಕಂಡಿರುವ ಈ ಚಿತ್ರವೀಗ ಕಿರುತೆರೆಯಲ್ಲೂ ಧೂಳೆಬ್ಬಿಸಲು ಬರುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:04 pm, Sun, 8 January 23