AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF Chapter 2 Update: ಈ ತಿಂಗಳಾಂತ್ಯದಲ್ಲಿ ಕೆಜಿಎಫ್ ತಂಡದಿಂದ ಬಿಗ್ ಸರ್​ಪ್ರೈಸ್

KGF 2: ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟರಲ್ಲಾಗಲೇ ಕೆಜಿಎಫ್-2 ಥಿಯೇಟರ್​ಗೆ ಅಪ್ಪಳಿಸಬೇಕಿತ್ತು. ಇದೀಗ ಕೊರೋನಾ ಕಾರಣದಿಂದ ಚಿತ್ರತಂಡದ ಸಂಪೂರ್ಣ ಲೆಕ್ಕಚಾರಗಳು ತಲೆಕೆಳಗಾಗಿದ್ದು, ಇದಾಗ್ಯೂ ಚಿತ್ರ ಮಂದಿರದಲ್ಲೇ ಕೆಜಿಎಫ್ 2 ಅನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ.

KGF Chapter 2 Update: ಈ ತಿಂಗಳಾಂತ್ಯದಲ್ಲಿ ಕೆಜಿಎಫ್ ತಂಡದಿಂದ ಬಿಗ್ ಸರ್​ಪ್ರೈಸ್
Kgf 2
TV9 Web
| Edited By: |

Updated on: Jul 27, 2021 | 9:11 PM

Share

ಸಪ್ತಸಾಗರದಾಚೆಗೂ ಸಖತ್ ಸೌಂಡ್ ಮಾಡಿದ್ದ ಕೆ.ಜಿ.ಎಫ್ (KGF 2) ಚಿತ್ರ ಮತ್ತೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ರಾಖಿ ಭಾಯ್​ಯಿಂದಲ್ಲ ಬದಲಾಗಿ ಖಡಕ್ ವಿಲನ್ ಅಧೀರನಿಂದ ಎಂಬುದು ವಿಶೇಷ. ಹೌದು, ಇದೇ ತಿಂಗಳಾಂತ್ಯದಲ್ಲಿ ಕೆಜಿಎಫ್ ಚಿತ್ರತಂಡದಿಂದ ಬಿಗ್ ಸರ್​ಪ್ರೈಸ್​ವೊಂದು ಸಿಗಲಿದೆ. ಇದೇ ತಿಂಗಳ 29 ರಂದು ಅಧೀರ ಅವತಾರಿ ನಟ ಸಂಜಯ್ ದತ್ (Sanjay Dutt) 62ನೇ ವಸಂತಕ್ಕೆ ಕಾಲಿಡಲಿದ್ದಾರೆ. ಕಳೆದ ವರ್ಷ ಸಂಜು ಬಾಬಾ ಅವರ ಹುಟ್ಟುಹಬ್ಬದಂದು ರಗಡ್ ಲುಕ್ ಅನಾವರಣಗೊಳಿಸಿ ಸರ್​ಪ್ರೈಸ್ ನೀಡಿದ್ದ ನಿರ್ದೇಶಕ ಪ್ರಶಾಂತ್ ನೀಲ್, ಈ ಬಾರಿ ಟೀಸರ್​ವೊಂದನ್ನು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ ಎಂಬ ಮಾತುಗಳು ಗಾಂಧಿನಗರದಿಂದ ಕೇಳಿ ಬರುತ್ತಿದೆ.

ಈ ಹಿಂದೆ ಪ್ರಶಾಂತ್ ನೀಲ್, ‘ಅಧೀರ’ ಪಾತ್ರದ ಪೋಸ್ಟರ್ ಹಾಗೂ ಸಣ್ಣ ವಿಡಿಯೋ ತುಣುಕು ಪ್ರದರ್ಶಿಸಿ ಕೆಜಿಎಫ್ (KGF Chapter 2) ಚಿತ್ರತಂಡ ಸಿನಿಪ್ರಿಯರ ಕುತೂಹಲಕ್ಕೆ ಕಿಚ್ಚು ಹಚ್ಚಿದ್ದರು. ಅಷ್ಟೇ ಅಲ್ಲದೆ ಚಾಪ್ಟರ್​ 1 ರಲ್ಲಿ ಅಧೀರನ ಉಂಗುರವನ್ನು ತೋರಿಸುವ ಮೂಲಕ ಕುತೂಹಲಕಾರಿ ಕ್ಲೈಮ್ಯಾಕ್ಸ್​ ಸೃಷ್ಟಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದರು. ಇದಾಗ್ಯೂ ಕಳೆದ ಎರಡು ವರ್ಷಗಳಿಂದ ಅಧೀರನ ಕೌರ್ಯತೆಯನ್ನು ಪ್ರಶಾಂತ್ ನೀಲ್ ಎಲ್ಲೂ ತೋರಿಸಿರಲಿಲ್ಲ. ಇದೀಗ ಜುಲೈ 29 ರಂದು ಅಧೀರನ ಮತ್ತೊಂದು ಮುಖ ಅನಾವರಣಗೊಳಿಸಲಿದ್ದಾರೆ ಎನ್ನಲಾಗುತ್ತಿದೆ.

ಕೆಜಿಎಫ್ ಚಾಪ್ಟರ್-2ನಲ್ಲಿ ಅಧೀರನಿಗಾಗಿ ವಿಶೇಷ ಹಾಡೊಂದನ್ನು ಸಂಯೋಜಿಸಲಾಗಿದ್ದು, ಈ ಹಾಡಿನ ಸಣ್ಣ ಟೀಸರ್​ನ ಮೂಲಕ ಸಂಜು ಬಾಬಾನಿಗೆ ಬರ್ತ್​ಡೇ ಗಿಫ್ಟ್ ನೀಡಲು ಪ್ರಶಾಂತ್ ನೀಲ್ ಅ್ಯಂಡ್ ಟೀಮ್ ಪ್ಲ್ಯಾನ್ ಹಾಕಿಕೊಂಡಿದೆ ಎನ್ನಲಾಗಿದೆ. ಅದರಂತೆ ಜುಲೈ 29 ರಂದು ಕೆಜಿಎಫ್ ಚಿತ್ರದ ಹಾಡಿನ ತುಣುಕು ಅಥವಾ ಭರ್ಜರಿ ಹಿನ್ನೆಲೆ ಸಂಗೀತದೊಂದಿಗೆ ಅಧೀರನ ಅವತಾರ ದರ್ಶನವಾಗಲಿದೆ.

ಕೆಜಿಎಫ್ ಚಾಪ್ಟರ್-2 (KGF Chapter 2) ಚಿತ್ರದ ಬಹುತೇಕ ಕೆಲಸಗಳು ಮುಗಿದಿದೆ. ಅದರಲ್ಲೂ ಯಶ್-ಸಂಜಯ್ ದತ್ ಕಾಂಬಿನೇಷನ್​ನಲ್ಲಿರುವ ದೃಶ್ಯಗಳು ಕಂಪ್ಲೀಟ್ ಆಗಿವೆ. ಇನ್ನು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಾಗೂ ಹಾಡೊಂದರ ದೃಶ್ಯಗಳ ಚಿತ್ರೀಕರಣ ಮಾತ್ರ ಉಳಿದಿವೆ. ಹಾಗೆಯೇ ಸಂಜಯ್ ದತ್ ಪಾತ್ರದ ಡಬ್ಬಿಂಗ್ ಕೆಲಸಗಳು ಬಾಕಿ ಉಳಿದಿದ್ದು, ಇದನ್ನೂ ಕೂಡ ಶೀಘ್ರದಲ್ಲೇ ಮುಗಿಸಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟರಲ್ಲಾಗಲೇ ಕೆಜಿಎಫ್-2 ಥಿಯೇಟರ್​ಗೆ ಅಪ್ಪಳಿಸಬೇಕಿತ್ತು. ಇದೀಗ ಕೊರೋನಾ ಕಾರಣದಿಂದ ಚಿತ್ರತಂಡದ ಸಂಪೂರ್ಣ ಲೆಕ್ಕಚಾರಗಳು ತಲೆಕೆಳಗಾಗಿದ್ದು, ಇದಾಗ್ಯೂ ಚಿತ್ರ ಮಂದಿರದಲ್ಲೇ ಕೆಜಿಎಫ್ 2 ಅನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ. ಇನ್ನು ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ನೂರರಷ್ಟು ಅವಕಾಶ ಸಿಕ್ಕ ಬಳಿಕವಷ್ಟೇ ಕೆಜಿಎಫ್-2 ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟಿಸುವ ಇರಾದೆಯಲ್ಲಿದೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್.

ಇದನ್ನೂ ಓದಿ: Rahul Dravid: ಶ್ರೀಲಂಕಾ ನಾಯಕನ ಜೊತೆ ರಾಹುಲ್ ದ್ರಾವಿಡ್ ಮಾತನಾಡಿದ್ದೇನು? ಇಲ್ಲಿದೆ ಉತ್ತರ

ಇದನ್ನೂ ಓದಿ: Ola electric scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?