‘ಕನ್ನಡ ಕಲಿಯಿರಿ’; ವೇದಿಕೆ ಮೇಲೆ ಮುಂಬೈ ಮಂದಿಗೆ ನೇರವಾಗಿ ಹೇಳಿದ ಕಿಚ್ಚ ಸುದೀಪ್

ಈ ರೀತಿ ಅವಕಾಶ ಸಿಕ್ಕಾಗ ಅವರು ಎಂದಿಗೂ ಬಿಡುವುದಿಲ್ಲ. ಮುಂಬೈನಲ್ಲಿ ನಡೆದ ‘ಕಬ್ಜ’ ಕಾರ್ಯಕ್ರಮದಲ್ಲೂ ಸುದೀಪ್ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.

‘ಕನ್ನಡ ಕಲಿಯಿರಿ’; ವೇದಿಕೆ ಮೇಲೆ ಮುಂಬೈ ಮಂದಿಗೆ ನೇರವಾಗಿ ಹೇಳಿದ ಕಿಚ್ಚ ಸುದೀಪ್
ಸುದೀಪ್

Updated on: Mar 11, 2023 | 10:34 AM

ಕಿಚ್ಚ ಸುದೀಪ್​ಗೆ (Kichcha Sudeep) ಕನ್ನಡದ ಬಗ್ಗೆ, ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಪ್ರೀತಿ ಇದೆ. ಯಾರಾದರೂ ಕನ್ನಡದ ತಂಟೆಗೆ ಬಂದರೆ ಅವರು ಸುಮ್ಮನಿರುವುದಿಲ್ಲ. ಕಳೆದ ವರ್ಷ ‘ಹಿಂದಿ ರಾಷ್ಟ್ರ ಭಾಷೆ’ ಎಂದು ಹೇಳಿದ್ದ ಅಜಯ್​ ದೇವಗನ್ ಅವರಿಗೆ ಸುದೀಪ್ ಟ್ವಿಟರ್​ನಲ್ಲೇ ತಿರುಗೇಟು ಕೊಟ್ಟಿದ್ದರು. ಸದ್ಯ ಅವರು ‘ಕಬ್ಜ’ ಚಿತ್ರದ (Kabzaa Movie) ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಮುಂಬೈಗೆ ತೆರಳಿದ್ದ ಅವರು ಕನ್ನಡ ಕಲಿಯಿರಿ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸುದೀಪ್ ಅವರು ‘ವಿಕ್ರಾಂತ್ ರೋಣ’ ಸಿನಿಮಾ ಪ್ರಚಾರಕ್ಕಾಗಿ ಬಾಲಿವುಡ್​ಗೆ ತೆರಳಿದ್ದರು. ಅಲ್ಲಿ ಅವರು ಕನ್ನಡವನ್ನು ‘ಕನ್ನಡ್​​’ ಎಂದವರಿಗೆ ಸರಿಯಾದ ಉಚ್ಚಾರ ಯಾವುದು ಎಂಬುದನ್ನು ತಿದ್ದಿ ಹೇಳುವ ಪ್ರಯತ್ನ ಮಾಡಿದ್ದರು. ಈ ರೀತಿ ಅವಕಾಶ ಸಿಕ್ಕಾಗ ಅವರು ಎಂದಿಗೂ ಬಿಡುವುದಿಲ್ಲ. ಮುಂಬೈನಲ್ಲಿ ನಡೆದ ‘ಕಬ್ಜ’ ಕಾರ್ಯಕ್ರಮದಲ್ಲೂ ಸುದೀಪ್ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.

ಇದನ್ನೂ ಓದಿ
ಉಪೇಂದ್ರ, ಸುದೀಪ್​, ಶಿವಣ್ಣ ಅಲ್ಲ, ‘ಕಬ್ಜ’ದಲ್ಲಿರುವ ಅಸಲಿ ಮೂರು ಸ್ಟಾರ್​ಗಳು ಇವರೇ; ಉಪ್ಪಿ ಬಿಚ್ಚಿಟ್ರು ಮಾಹಿತಿ  
Kabzaa: ಕಬ್ಜ ಸಿನಿಮಾ ಟಿಕೆಟ್ ಬುಕಿಂಗ್ ಆರಂಭ ಆದರೆ ಬೆಂಗಳೂರಿನಲ್ಲಲ್ಲ!
‘ನನಗೆ ಸಂಭಾವನೆ ಕೊಡುವಾಗ ಅವರು ಅತ್ತರು’; ವೇದಿಕೆ ಮೇಲೆ ಆರ್​. ಚಂದ್ರು ಕಾಲೆಳೆದ ಸುದೀಪ್

ಇದನ್ನೂ ಓದಿ: ಉಪೇಂದ್ರ, ಸುದೀಪ್​, ಶಿವಣ್ಣ ಅಲ್ಲ, ‘ಕಬ್ಜ’ದಲ್ಲಿರುವ ಅಸಲಿ ಮೂರು ಸ್ಟಾರ್​ಗಳು ಇವರೇ; ಉಪ್ಪಿ ಬಿಚ್ಚಿಟ್ರು ಮಾಹಿತಿ   

ವೇದಿಕೆ ಮೇಲೆ ಆಗಿದ್ದೇನು?

‘ಕಬ್ಜ’ ವೇದಿಕೆ ಮೇಲೆ ಸುದೀಪ್​, ಶ್ರೀಯಾ ಶರಣ್​, ಉಪೇಂದ್ರ, ಆರ್​. ಚಂದ್ರು ಇದ್ದರು. ಈ ವೇಳೆ ಆರ್​. ಚಂದ್ರು ಅವರು ಕನ್ನಡದಲ್ಲಿ ಮಾತನಾಡಿದರು. ‘ಕಬ್ಜ ಟೀಂವರ್ಕ್​. ಇದು ಒಳ್ಳೆಯ ತಾಂತ್ರಿಕವರ್ಗದಿಂದ ಆಗಿರೋ ಸಿನಿಮಾ’ ಎಂದರು. ಮುಂಬೈ ಮಂದಿಗೆ ಆರ್. ಚಂದ್ರು ಹೇಳಿದ್ದೇನು ಎಂಬುದು ಅರ್ಥವಾಗಿಲ್ಲ. ಈ ಕಾರಣಕ್ಕೆ ಸುದೀಪ್ ಅವರು ಚಂದ್ರು ಹೇಳಿದ್ದನ್ನು ಭಾಷಾಂತರ ಮಾಡ್ತೀನಿ ಎಂದು ಮೈಕ್ ತೆಗೆದುಕೊಂಡರು. ‘ಅವರು ಹೇಳಿದ್ದು ಇಷ್ಟೇ. ಬೇಗ ಕನ್ನಡ ಕಲಿಯಿರಿ ಎಂದು’ ಎಂಬುದಾಗಿ ಸುದೀಪ್ ಹೇಳಿದರು. ಇದನ್ನು ಕೇಳಿ ಅಲ್ಲಿದ್ದವರೆಲ್ಲ ದೊಡ್ಡದಾಗಿ ನಕ್ಕರು.

ಇದನ್ನೂ ಓದಿ: ‘ನನಗೆ ಸಂಭಾವನೆ ಕೊಡುವಾಗ ಅವರು ಅತ್ತರು’; ವೇದಿಕೆ ಮೇಲೆ ಆರ್​. ಚಂದ್ರು ಕಾಲೆಳೆದ ಸುದೀಪ್

ಮಾರ್ಚ್​ 17ಕ್ಕೆ ಕಬ್ಜ

ಮಾರ್ಚ್​ 17ರಂದು ‘ಕಬ್ಜ’ ಸಿನಿಮಾ ರಿಲೀಸ್ ಆಗುತ್ತಿದೆ. ಅಂದು ಪುನೀತ್​ ರಾಜ್​ಕುಮಾರ್ ಅವರ ಬರ್ತ್​ಡೇ ಅನ್ನೋದು ವಿಶೇಷ. ಈ ಕಾರಣಕ್ಕೂ ಸಿನಿಮಾ ರಿಲೀಸ್ ದಿನಾಂಕ ವಿಶೇಷ ಎನಿಸಿಕೊಂಡಿದೆ. ಈ ಚಿತ್ರಕ್ಕೆ ಆರ್.ಚಂದ್ರು ನಿರ್ದೇಶನ ಇದೆ. ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುದೀಪ್, ಶಿವರಾಜ್​ಕುಮಾರ್ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಯಾ ಶರಣ್ ಚಿತ್ರದ ನಾಯಕಿ. ಈಗಾಗಲೇ ಚಿತ್ರದ ಟ್ರೇಲರ್ ರಿಲೀಸ್ ಆಗಿ ಹವಾ ಸೃಷ್ಟಿ ಮಾಡಿದೆ. ಟ್ರೇಲರ್ ಕೋಟ್ಯಂತರಬಾರಿ ವೀಕ್ಷಣೆ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:30 am, Sat, 11 March 23

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us