AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಮಲ್‌ ಹೊಸ ಸಿನಿಮಾ ‘ತೆನಾಲಿ DA LLB’; ಮೊದಲ ಬಾರಿ ಲಾಯರ್ ಪಾತ್ರ

ನಿಜ ಜೀವನದಲ್ಲಿ ಎಲ್​ಎಲ್​ಬಿ ಓದಿರುವ ಕೋಮಲ್ ಅವರು ಸಿನಿಮಾದಲ್ಲೂ ಲಾಯರ್ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾಗೆ ‘ತೆನಾಲಿ ಡಿಎ ಎಲ್‌ಎಲ್‌ಬಿ’ ಎಂದು ಶೀರ್ಷಿಕೆ ಇಡಲಾಗಿದೆ. ಪೋಸ್ಟರ್ ಬಿಡುಗಡೆ ಆಗಿದೆ. ‘ಮರೀಚಿ’ ಸಿನಿಮಾ ಖ್ಯಾತಿಯ ನಿರ್ದೇಶಕ ಸಿದ್ದ್ರುವ್‌ ಸಿದ್ದು ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ.

ಕೋಮಲ್‌ ಹೊಸ ಸಿನಿಮಾ ‘ತೆನಾಲಿ DA LLB’; ಮೊದಲ ಬಾರಿ ಲಾಯರ್ ಪಾತ್ರ
Komal Kumar
ಮದನ್​ ಕುಮಾರ್​
|

Updated on: Jan 20, 2026 | 6:38 PM

Share

ಕಾಮಿಡಿ ಸಿನಿಮಾಗಳಿಂದ ಹೆಸರಾದ ನಟ ಕೋಮಲ್ ಕುಮಾರ್ (Komal Kumar) ಅವರು ಹೊಸ ಕಥೆ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ. ಕಳೆದ ವರ್ಷ ಅವರು ನಟಿಸಿದ ‘ಕೋಣ’ ಸಿನಿಮಾ ಬಿಡುಗಡೆ ಆಗಿತ್ತು. ಈಗ ‘ತೆನಾಲಿ DA LLB’ ಸಿನಿಮಾದ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲಿ ಚ್ಯೂಸಿ ಆಗಿರುವ ಕೋಮಲ್‌ ಅವರು ಬಂದ ಸಿನಿಮಾಗಳನ್ನೆಲ್ಲ ಒಪ್ಪಿಕೊಳ್ಳಲ್ಲ. ಸಾಕಷ್ಟು ಕಥೆಗಳನ್ನು ಕೇಳಿ ವಿಭಿನ್ನ ಎನಿಸುವ ಕಥೆಗೆ ಮಾತ್ರ ಸಹಿ ಮಾಡುತ್ತಿದ್ದಾರೆ. ಈಗ ಅವರಿಗೆ ‘ತೆನಾಲಿ ಡಿಎ ಎಲ್​ಎಲ್​ಬಿ’ (Tenali DA LLB) ಸಿನಿಮಾದ ಕಥೆ ಇಷ್ಟ ಆಗಿದೆ.

ಶೀರ್ಷಿಕೆಯೇ ಸೂಚಿಸುವಂತೆ ‘ತೆನಾಲಿ DA LLB’ ಸಿನಿಮಾದಲ್ಲಿ ಕೋಮಲ್ ಕುಮಾರ್ ಅವರು ಲಾಯರ್ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಪೋಸ್ಟರ್​​ನಲ್ಲಿ ಕೋಮಲ್ ಅವರ ಪಾತ್ರದ ಗೆಟಪ್ ಕಾಣಿಸಿದೆ. ಕಪ್ಪು ಕೋಟು ಧರಿಸಿ, ಲಾಯರ್ ಗೆಟಪ್​​ನಲ್ಲಿ ಕೋಮಲ್ ಅವರು ಪೋಸ್ ನೀಡಿದ್ದಾರೆ.

‘ತೆನಾಲಿ ಡಿಎ ಎಲ್‌ಎಲ್‌ಬಿ’ ಸಿನಿಮಾವನ್ನು ಸಿದ್ದ್ರುವ್‌ ಸಿದ್ದು ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ವಿಜಯ್ ರಾಘವೇಂದ್ರ ಅಭಿನಯದ ‘ಮರೀಚಿ’ ಸಿನಿಮಾಗೆ ಸಿದ್ದ್ರುವ್‌ ಸಿದ್ದು ಆ್ಯಕ್ಷನ್-ಕಟ್ ಹೇಳಿದ್ದರು. ವಿಮರ್ಶೆಯ ದೃಷ್ಟಿಯಿಂದ ಆ ಸಿನಿಮಾ ಗಮನ ಸೆಳೆದಿತ್ತು. ‘ಮರೀಚಿ’ ಬಳಿಕ ಸಿದ್ದ್ರುವ್‌ ಸಿದ್ದು ಅವರು ಕೋಮಲ್‌ ಅವರಿಗಾಗಿ ವಿಭಿನ್ನವಾದ ಕಥೆ ಬರೆದುಕೊಂಡಿದ್ದಾರೆ. ಇದು ಈಗಿನ ಕಾಲಘಟ್ಟಕ್ಕೆ ಸರಿಹೊಂದುವ ಕಥೆ ಎಂದು ಚಿತ್ರತಂಡ ಹೇಳಿದೆ.

ಸದ್ಯಕ್ಕೆ ಪೋಸ್ಟರ್‌ ಬಿಡುಗಡೆ ಮಾಡಿರೋ ‘ತೆನಾಲಿ ಡಿಎ ಎಲ್‌ಎಲ್‌ಬಿ’ ಚಿತ್ರತಂಡ ಮೇ ತಿಂಗಳಲ್ಲಿ ಶೂಟಿಂಗ್ ಆರಂಭಿಸಲಿದೆ. ವಿಶೇಷ ಏನೆಂದರೆ, ಇದೇ ಮೊದಲ ಬಾರಿಗೆ ಲಾಯರ್‌ ಆಗಿ ನಟನೆ ಮಾಡುತ್ತಿರುವ ಕೋಮಲ್‌ ಕುಮಾರ್ ಅವರು ನಿಜ ಜೀವನದಲ್ಲಿಯೂ ಎಲ್​ಎಲ್​ಬಿ ಓದಿದ್ದಾರೆ. ಈಗ ತೆರೆ ಮೇಲೆ ಲಾಯರ್‌ ಆಗಿ ಮಿಂಚಲು ಅವರು ರೆಡಿಯಾಗಿದ್ದಾರೆ.

ಇದನ್ನೂ ಓದಿ: ತುಳು ಕಲಿಯಲು ಪ್ರಯತ್ನಿಸುತ್ತಿರುವ ನಟ ಕೋಮಲ್

ಸಿದ್ದ್ರುವ್‌ ಸಿದ್ದು ಅವರು ‘ತೆನಾಲಿ ಡಿಎ ಎಲ್‌ಎಲ್‌ಬಿ’ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ. ಸಿದ್ದ್ರುವ್‌ ಸಿದ್ದು, ಸಂತೋಷ್‌ ಮಾಯಪ್ಪ, ರೇಣುಕಾ ಪ್ರಸಾದ್‌, ಪ್ರದೀಪ್‌ ಕುಮಾರ್‌ ಮಹಾಲಿಂಗಯ್ಯ ಅವರು ಬಂಡವಾಳ ಹೂಡುತ್ತಿದ್ದಾರೆ. ರಿತ್ವಿಕ್‌ ಮುರಳಿಧರ್ ಅವರ ಸಂಗೀತ ನಿರ್ದೇಶನ, ಉದಯ್‌ ಲೀಲಾ ಅವರ ಛಾಯಾಗ್ರಹಣ ಈ ಸಿನಿಮಾಗೆ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More