AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಟಿ ವೇಳೆ ಸ್ಥಳೀಯರು ದೂರು ನೀಡಿದ್ದು ನಿಜ -ನಟ ಯೋಗೀಶ್

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಜೊತೆ ಡ್ರಗ್ಸ್ ಜಾಲ ತಳುಕು ಹಾಕಿಕೊಂಡಿರುವ ಪ್ರಕರಣ ಸಂಬಂಧ ನೋಟಿಸ್ ಪಡೆದಿರುವ ನಟ ಯೋಗೀಶ್ ಅಲಿಯಾಸ್ ಲೂಸ್​ ಮಾದ, ಇತ್ತೀಚೆಗೆ  ಪಾರ್ಟಿ ವೇಳೆ ಸ್ಥಳೀಯರು ದೂರು ನೀಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಲೂಸ್​ ಮಾದ ಯೋಗೀಶ್​ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ನಿನ್ನೆ ISD ಪೊಲೀಸರು ಯೋಗೀಶ್‌ನನ್ನು ತನಿಖೆಗೆ ಒಳಪಡಿಸಿದ್ದರು. ತನಿಖೆ ಬಳಿಕ ಲೂಸ್​ ಮಾದ ಯೋಗೀಶ್ ಬೆಂಗಳೂರಿನ ಕೋಣನಕುಂಟೆ ‌ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಪಾರ್ಟಿ ಮಾಡಿದ್ದು, ಅದಕ್ಕೆ ಸ್ಥಳೀಯರು […]

ಪಾರ್ಟಿ ವೇಳೆ ಸ್ಥಳೀಯರು ದೂರು ನೀಡಿದ್ದು ನಿಜ -ನಟ ಯೋಗೀಶ್
ಆಯೇಷಾ ಬಾನು
ಆಯೇಷಾ ಬಾನು|

Updated on:Sep 22, 2020 | 1:14 PM

Share

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಜೊತೆ ಡ್ರಗ್ಸ್ ಜಾಲ ತಳುಕು ಹಾಕಿಕೊಂಡಿರುವ ಪ್ರಕರಣ ಸಂಬಂಧ ನೋಟಿಸ್ ಪಡೆದಿರುವ ನಟ ಯೋಗೀಶ್ ಅಲಿಯಾಸ್ ಲೂಸ್​ ಮಾದ, ಇತ್ತೀಚೆಗೆ  ಪಾರ್ಟಿ ವೇಳೆ ಸ್ಥಳೀಯರು ದೂರು ನೀಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಲೂಸ್​ ಮಾದ ಯೋಗೀಶ್​ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ನಿನ್ನೆ ISD ಪೊಲೀಸರು ಯೋಗೀಶ್‌ನನ್ನು ತನಿಖೆಗೆ ಒಳಪಡಿಸಿದ್ದರು. ತನಿಖೆ ಬಳಿಕ ಲೂಸ್​ ಮಾದ ಯೋಗೀಶ್ ಬೆಂಗಳೂರಿನ ಕೋಣನಕುಂಟೆ ‌ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಪಾರ್ಟಿ ಮಾಡಿದ್ದು, ಅದಕ್ಕೆ ಸ್ಥಳೀಯರು ದೂರು ನೀಡಿರುವುದರ ಬಗ್ಗೆ ಮಾತನಾಡಿದ್ದಾರೆ.

ಶನಿವಾರ ನನಗೆ ನೋಟಿಸ್‌ ನೀಡಿದ್ದರು. ಸುಮಾರು 2 ಗಂಟೆ ಪೊಲೀಸರು ವಿಚಾರಣೆ ನಡೆಸಿದ್ರು. ಮಾಹಿತಿ ಪಡೆಯಲು ನನ್ನನ್ನು ಕರೆದಿರಬಹುದು. ರಾಗಿಣಿ ಬಗ್ಗೆ ನನ್ನ ಬಳಿ ಯಾವುದೇ ಪ್ರಶ್ನೆ ಕೇಳಿಲ್ಲ. 2013ರ ನಂತರ ನಟಿ ರಾಗಿಣಿ ಜತೆ ನಾನು ಸಂಪರ್ಕದಲ್ಲಿಲ್ಲ. ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದ್ದೇನೆ. ವಿಚಾರಣೆಗೆ ಮತ್ತೆ ಕರೆದ್ರೆ ಬರಬೇಕೆಂದು ಪೊಲೀಸರು ಹೇಳಿದ್ದಾರೆ ಎಂದು ಹೇಳಿದ್ರು.

ಸಿಗರೇಟ್‌, ಮದ್ಯ, ಗುಟ್ಕಾ ಸೇವಿಸಿ ಅಭ್ಯಾಸ ಇದೆ. ಆದರೆ ಬೇರೆ ಅಭ್ಯಾಸವಿಲ್ಲ: ನಾನು ಪಾರ್ಟಿಯಲ್ಲಿ ಭಾಗಿಯಾಗಿದ್ದು ನಿಜ. ಪಾರ್ಟಿ ವೇಳೆ ಸ್ಥಳೀಯರು ಸೌಂಡ್ ಹೆಚ್ಚು ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಪಾರ್ಟಿ ಸ್ಥಳಕ್ಕೆ ಪೊಲೀಸರು ಬಂದಿದ್ರು. ನನಗೆ ಸಿಗರೇಟ್‌, ಮದ್ಯ, ಗುಟ್ಕಾ ಸೇವಿಸಿ ಅಭ್ಯಾಸ ಇದೆ. ಆದರೆ ಬೇರೆ ಅಭ್ಯಾಸವಿಲ್ಲ. ಪೊಲೀಸರು ನನ್ನ ಮೊಬೈಲ್‌ ಫೋನ್‌ ವಶಕ್ಕೆ ಪಡೆದಿಲ್ಲ ಎಂದು ಅವರ ಮೇಲಿದ್ದ ಪಾರ್ಟಿ ಆರೋಪವನ್ನು ತಳ್ಳಿ ಹಾಕಿದ್ದಾರೆ.

Published On - 1:05 pm, Tue, 22 September 20

Follow Us
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!