AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಣಿರತ್ನಂ ಜನ್ಮದಿನ: ನಿರ್ದೇಶಕನ ಪ್ರೇಮ ನಿವೇದನೆಯನ್ನು ರಿಜೆಕ್ಟ್ ಮಾಡಿದ್ದ ಸುಹಾಸಿನಿ

Mani Ratnam Birthday: ಮಣಿರತ್ನಂ ಅವರು ಒಮ್ಮೆ ಸುಹಾಸಿನಿ ಎದುರು ಪ್ರೀತಿಯ ಕೋರಿಕೆ ಇಟ್ಟಿದ್ದರು. ಆದರೆ, ಇದನ್ನು ಸುಹಾಸಿನಿ ತಿರಸ್ಕರಿಸಿದ್ದರು.

ಮಣಿರತ್ನಂ ಜನ್ಮದಿನ: ನಿರ್ದೇಶಕನ ಪ್ರೇಮ ನಿವೇದನೆಯನ್ನು ರಿಜೆಕ್ಟ್ ಮಾಡಿದ್ದ ಸುಹಾಸಿನಿ
ಸುಹಾಸಿನಿ-ಮಣಿರತ್ನಂ
ರಾಜೇಶ್ ದುಗ್ಗುಮನೆ
|

Updated on: Jun 02, 2023 | 9:10 AM

Share

ತಮಿಳಿನಲ್ಲಿ ಮಣಿರತ್ನಂ ಅವರಿಗೆ ದೊಡ್ಡ ಹೆಸರು. ಕನ್ನಡದ ‘ಪಲ್ಲವಿ ಅನು ಪಲ್ಲವಿ’ ಸಿನಿಮಾ (Pallavi Anu Pallavi) ಮೂಲಕ ಅವರು ನಿರ್ದೇಶನ ಆರಂಭಿಸಿದರು. 40 ವರ್ಷಗಳ ಬಳಿಕವೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ‘ಪೊನ್ನಿಯಿನ್ ಸೆಲ್ವನ್​, ‘ಪೊನ್ನಿಯಿನ್ ಸೆಲ್ವನ್ 2’ ಅಂತಹ ಹಿಟ್ ಚಿತ್ರಗಳು ನೀಡುತ್ತಿದ್ದಾರೆ. ಅವರಿಗೆ ಇಂದು (ಜೂನ್ 2) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಮಣಿರತ್ನಂ ಹಾಗೂ ಸುಹಾಸಿನಿ 1988ರಲ್ಲಿ ಮದುವೆ ಆದರು. ಇವರ ಮದುವೆ ನಡೆದಿದ್ದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಮಣಿರತ್ನಂ ಹಾಗೂ ಸುಹಾನಿಸಿ ಅವರದ್ದು ಲವ್​ ಮ್ಯಾರೇಜ್ ಅನ್ನೋದು ಅನೇಕರ ಭಾವನೆ. ಆದರೆ, ಅದು ನಿಜವಲ್ಲ. ಸುಹಾಸಿನಿ ಅವರನ್ನು ಮೊದಲ ಭೇಟಿ ಮಾಡಿದಾಗ ಮಣಿ ರತ್ನಂ ಅವರ ವಯಸ್ಸು 33 ವರ್ಷ. ಚಿತ್ರರಂಗದಲ್ಲಿ ಅವರು ಆಗ ಹೆಸರು ಮಾಡುತ್ತಿದ್ದರು. ವಿಶೇಷ ಎಂದರೆ ಸುಹಾಸಿನಿ ಆಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

ಮಣಿರತ್ನಂ ಅವರು ಒಮ್ಮೆ ಸುಹಾಸಿನಿ ಎದುರು ಪ್ರೀತಿಯ ಕೋರಿಕೆ ಇಟ್ಟಿದ್ದರು. ಆದರೆ, ಇದನ್ನು ಸುಹಾಸಿನಿ ತಿರಸ್ಕರಿಸಿದ್ದರಂತೆ. ‘ನನಗೆ ರಿಲೇಶನ್​ಶಿಪ್​ ಬಗ್ಗೆ ನಂಬಿಕೆ ಇಲ್ಲ. ನನಗೇನಿದ್ದರೂ ಮದುವೆ ಬಗ್ಗೆ ಮಾತ್ರ ಆಸಕ್ತಿ’ ಎಂದಿದ್ದರು. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಇಬ್ಬರೂ 1988ರಲ್ಲಿ ಮದುವೆ ಆದರು.

ಮಣಿರತ್ನಂ ಅವರನ್ನು ಸುಹಾಸಿನಿ ಆರಾಧಿಸುತ್ತಿದ್ದರು. ಇಬ್ಬರೂ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರ ಮದುವೆ ತುಂಬಾನೇ ಖಾಸಗಿ ಆಗಿ ನಡೆದಿತ್ತು. ಕೆಲವೇ ಕೆಲವು ಮಂದಿ ಮಾತ್ರ ಈ ಮದುವೆಯಲ್ಲಿ ಭಾಗಿ ಆಗಿದ್ದರು. 1992ರಲ್ಲಿ ಮಣಿರತ್ನಂ ಹಾಗೂ ಸುಹಾಸಿನಿಹೆ ಗಂಡು ಮಗು ಜನಿಸಿತು. ಮಗುವಿಗೆ ನಂದನ್ ಎಂದು ಹೆಸರು ಇಡಲಾಗಿದೆ.

ಇದನ್ನೂ ಓದಿ: ಶರತ್​​ ಬಾಬು ಅಂತ್ಯಕ್ರಿಯೆಗೆ ಬರಲಿಲ್ಲ ಕಮಲ್​ ಹಾಸನ್​; ಕಾರಣ ತಿಳಿಸಿದ ಸುಹಾಸಿನಿ ಮಣಿರತ್ನಂ

ಮಣಿರತ್ನಂ ಅವರಿಗೆ ಈ ವರ್ಷ ಬರ್ತ್​ಡೇ ತುಂಬಾನೇ ಸ್ಪೆಷಲ್ ಎನಿಸಿಕೊಂಡಿದೆ. ಏಪ್ರಿಲ್​ನಲ್ಲಿ ರಿಲೀಸ್ ಆದ ಅವರ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಅವರ ಖ್ಯಾತಿ ಸಾಕಷ್ಟು ಹೆಚ್ಚಿದೆ. ಈ ಚಿತ್ರದಲ್ಲಿ ಐಶ್ವರ್ಯಾ ರೈ, ಕಾರ್ತಿ, ವಿಕ್ರಮ್ ಸೇರಿ ಅನೇಕ ಸ್ಟಾರ್ ಹೀರೋಗಳು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ