AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈ ಡೇರ್​ಡೆವಿಲ್, ಜೈ ತೇಜಸ್ವಿ ಎಂದ ಅಭಿಮಾನಿ ಯೋಗರಾಜ್ ಭಟ್

Daredevil Mustafa: ಡೇರ್​ಡೆವಿಲ್ ಮುಸ್ತಾಫಾ ಸಿನಿಮಾ ವೀಕ್ಷಿಸಿದ ನಿರ್ದೇಶಕ ಯೋಗರಾಜ್ ಭಟ್, ಚಿತ್ರತಂಡವನ್ನು ಶ್ಲಾಘಿಸಿದ್ದಾರೆ.

ಜೈ ಡೇರ್​ಡೆವಿಲ್, ಜೈ ತೇಜಸ್ವಿ ಎಂದ ಅಭಿಮಾನಿ ಯೋಗರಾಜ್ ಭಟ್
ಡೇರ್​ಡೆವಿಲ್ ಮುಸ್ತಾಫಾ
Follow us
ಮಂಜುನಾಥ ಸಿ.
|

Updated on:Jun 02, 2023 | 5:18 PM

ಪೂರ್ಣಚಂದ್ರ ತೇಜಸ್ವಿ (Poornachandra Tejaswi) ಅವರ ಕತೆ ಆಧರಿಸಿದ ಹೊಸ ಸಿನಿಮಾ ಡೇರ್​ಡೆವಿಲ್ ಮುಸ್ತಾಫಾ (Daredevil Mustafa) ಸಹೃದಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಶಶಾಂಕ ಸೋಗಾಲ ನಿರ್ದೇಶನ ಮಾಡಿ ಬಹುತೇಕ ಹೊಸಹುಡುಗರೇ ನಟಿಸಿರುವ ಈ ಸಿನಿಮಾದ ಬಗ್ಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಾಹಿತಿಗಳು, ಹಿರಿಯ ಸಿನಿಮಾ ನಿರ್ದೇಶಕರುಗಳು, ನಟರು ಸೇರಿದಂತೆ ಸಂಸದ ಪ್ರತಾಪ್ ಸಿಂಹ ಹಾಗೂ ಇನ್ನೂ ಅನೇಕರು ಸಿನಿಮಾ ನೋಡಿ ವಾವ್ ಎಂದಿದ್ದಾರೆ. ಇದೀಗ ಈ ಪಟ್ಟಿಗೆ ನಿರ್ದೇಶಕ ಯೋಗರಾಜ್ ಭಟ್ (Yogaraj Bhatt) ಸಹ ಸೇರಿಕೊಂಡಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಅವರ ಅಪ್ಪಟ ಅಭಿಮಾನಿಯಾಗಿರುವ ನಿರ್ದೇಶಕ ಯೋಗರಾಜ್ ಭಟ್, ಡೇರ್​ಡೆವಿಲ್ ಮುಸ್ತಾಫಾ ಸಿನಿಮಾ ವೀಕ್ಷಿಸಿ, ಚಿತ್ರದ ನಿರ್ದೇಶಕ ಹಾಗೂ ಚಿತ್ರತಂಡದ ಇತರೆ ಕೆಲವು ಸದಸ್ಯರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಭಟ್ಟರು, ”ನಾನು ಪೂರ್ಣಚಂದ್ರ ತೇಜಸ್ವಿ ಅವರ ಪರಮ ಭಕ್ತ. ಅವರ ಪ್ರತಿ ಅಕ್ಷರವನ್ನೂ ಬೆನ್ನು ಹತ್ತಿ ಓದಿದ್ದೇನೆ. ನನ್ನ ಜೀನವದ ಹಲವು ತಿರುವುಗಳಲ್ಲಿ ತೇಜಸ್ವಿ ಸಿಕ್ಕಿದ್ದಾರೆ. ಅವರು ಹೋದ ದಿನ ಬಿಟ್ಟರೆ ನಾನು ಎಂದಿಗೂ ಅವರನ್ನು ಭೇಟಿಯಾಗಿಲ್ಲ ಆದರೆ ನನ್ನ ಜೀವನದ ಮೇಲೆ ಅವರ ಪ್ರಭಾವ ದೊಡ್ಡದು” ಎಂದಿದ್ದಾರೆ ತೇಜಸ್ವಿ.

”ನಾನು ಸಾಕಷ್ಟು ಜನರನ್ನು ಭೇಟಿಯಾಗುತ್ತಿರುತ್ತೇನೆ. ಹಲವರು ನನ್ನ ಭೇಟಿಯಾಗಲು ಬರುತ್ತಾರೆ, ಹೊಸಬರು ಸಲಹೆಗೆ ಬರುತ್ತಾರೆ, ನಾನು ಕಾರ್ಯಕ್ರಮಗಳಿಗೆ ಹೋದಾಗ, ಹಾಡು ಬರೆಸಿಕೊಳ್ಳಲು ಬರುವವರಿಗೆ ಎಲ್ಲರಿಗೂ ಕನ್ನಡ ಓದಿರಿ, ಸಾಹಿತ್ಯ ಓದಿರಿ ಎಂದು ಕೇಳಿಕೊಳ್ಳುತ್ತೇನೆ. ಆದರೆ ಕೆಲವರು ಎರಡು ಪುಟ ಓದಿ, ಓದಿದ್ದೇನೆ ಎನ್ನುವವರು, ತೇಜಸ್ವಿಯವರು ಅರ್ಥವಾಗುತ್ತಾರಾ ನಿಮಗೆ ಎಂದು ಕೇಳಿದವರೂ ಇದ್ದಾರೆ. ಆದರೆ ಅದ್ಯಾವುದೂ ಇಲ್ಲದೆ ತೇಜಸ್ವಿಯವರನ್ನು ಆಮೂಲಾಗ್ರವಾಗಿ ಓದಿ, ಅವರದ್ದೇ ಕತೆಯನ್ನು ತೆರೆಗೆ ತಂದಿದ್ದಾರೆ ಈ ತಂಡ” ಎಂದು ಹೊಗಳಿದ್ದಾರೆ ಯೋಗರಾಜ್ ಭಟ್.

”ತೇಜಸ್ವಿಯವರ ಸಣ್ಣ ಕತೆಯನ್ನು, ಒಂದು ಯೋಚನೆಯನ್ನು ಅಚ್ಚುಕಟ್ಟಾದ ಸಿನಿಮಾ ಮಾಡಿ ಆ ಸಿನಿಮಾಕ್ಕೆ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡಿದೆ ಡೇರ್​ಡೆವಿಲ್ ಮುಸ್ತಾಫಾ ತಂಡ. ತೇಜಸ್ವಿಯವರನ್ನು ಸಮಾಜದೊಟ್ಟಿಗೆ ಕನೆಕ್ಟ್ ಮಾಡಿದ್ದಕ್ಕೆ ನಿಮಗೆ ನಮಸ್ಕಾರ” ಎಂದ ಭಟ್ಟರು, ಬದಿಯಲ್ಲೇ ಕುಳಿತಿದ್ದ ಶಶಾಂಕ ಸೋಗಾಲ ಅವರಿಗೆ ಕೈ ಮುಗಿದರು.

ಇದನ್ನೂ ಓದಿ:Daredevil Musthafa: ವಿದೇಶಕ್ಕೆ ಹೊರಟ ‘ಡೇರ್​ಡೆವಿಲ್​ ಮುಸ್ತಫಾ’; ಜೋರಾಯ್ತು ಕನ್ನಡ ಸಿನಿಮಾದ ಹವಾ

”ನಮಗೂ ಹೇಳುತ್ತಾರೆ. ಯಾವುದಾದರೂ ಒಂದು ಪುಟ್ಟ ಪ್ರಯತ್ನ ಮಾಡಿದರೆ ಅದು ಎಷ್ಟೋ ಮಂದಿಗೆ ದಾರಿಯಾಗುತ್ತದೆ ಎಂದು. ನಾವು ಸಹ ಚಿಕ್ಕ ಚಿಕ್ಕ ಪ್ರಯತ್ನಗಳನ್ನು ಮಾಡಿಕೊಂಡೇ ಬಂದವರು. ಯಾರೂ ಈ ಚಿಕ್ಕ ಚಿಕ್ಕ ಪ್ರಯತ್ನಗಳನ್ನು ಮಾಡುತ್ತಾರೆಯೋ ಅವರೇ ಭವಿಷ್ಯದಲ್ಲಿ ದೊಡ್ಡದಾಗಿ ಏನನ್ನಾದರೂ ಸಾಧಿಸಬಲ್ಲ. ಆ ಸಾಧಿಸಬಲ್ಲ ಶಕ್ತಿ ಈ ತಂಡದಲ್ಲಿದೆ ಎನಿಸುತ್ತದೆ. ಹಾಗಾಗಿ ಇಂಥಹಾ ತಂಡಗಳನ್ನು ಪ್ರೋತ್ಸಾಹಿಸಬೇಕು, ಬೆನ್ನು ತಟ್ಟಬೇಕು, ಬಾಚಿ ತಬ್ಬಿಕೊಳ್ಳಬೇಕು ಎಂದು ತೇಜಸ್ವಿಯ ಅಭಿಮಾನಿಯಾಗಿ ಕೇಳಿಕೊಳ್ಳುತ್ತಿದ್ದೇನೆ” ಎಂದಿದ್ದಾರೆ ಯೋಗರಾಜ್ ಭಟ್.

ಡೇರ್​ಡೆವಿಲ್ ಮುಸ್ತಾಫಾ ಸಿನಿಮಾವು ಪೂರ್ಣಚಂದ್ರ ತೇಜಸ್ವಿ ಅವರ ಅದೇ ಹೆಸರಿನ ಕತೆ ಆಧರಿಸಿದ ಸಿನಿಮಾ ಆಗಿದೆ. ಶಶಾಂಕ ಸೋಗಾಲ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಹಲವು ಹೊಸ ಹುಡುಗರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಧರ್ಮ ಸಾಮರಸ್ಯದ ಕುರಿತಾದ ಕತೆ ಇದೆ. ಈ ಸಿನಿಮಾಕ್ಕೆ ನೂರು ಜನ ತೇಜಸ್ವಿ ಅಭಿಮಾನಿಗಳೇ ಬಂಡವಾಳ ಹೂಡಿರುವುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Fri, 2 June 23

VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ