ಇತ್ತೀಚಿನ ಹೇಳಿಕೆಯೊಂದು ವಿವಾದ ಪಡೆದುಕೊಂಡ ಕುರಿತಂತೆ ಹಂಸಲೇಖ ಪ್ರತಿಕ್ರಿಯಿಸಿದರು. ನಾನು ಭಯಸ್ತನಲ್ಲ, ಮಾಗಡಿ ರೋಡ್ನಲ್ಲಿ ಆಟವಾಡಿ ಬಂದವನು. ‘ಯರೆಬೇವು’ ಪುಸ್ತಕ ದೇಸಿ ಸಮುದಾಯದ ಕರುಳಿನ ಕಥೆಯಾಗಿರುವಂತೆಯೇ, ನಮ್ಮದೂ ಕೂಡ ಅದೇ ರೀತಿಯ ಕರುಳಿನ ಕಥೆ. ಇತ್ತೀಚೆಗೆ ಒಂದು ವಿಚಾರದಲ್ಲಿ ಗೊತ್ತಿಲ್ಲದ ಸಮುದಾಯಗಳೆಲ್ಲ ಬೆಂಬಲ ನೀಡಿವೆ. ಹೀಗೆಲ್ಲ ಆಗುತ್ತೆ ಎಂದು ನನಗೆ ಗೊತ್ತಿರಲಿಲ್ಲ. ಆಗ ನನ್ನ ಬೆಂಬಲಕ್ಕೆ ನಿಂತವರು ಎಸ್.ಜಿ.ಸಿದ್ದರಾಮಯ್ಯ’’ ಎಂದು ಹಂಸಲೇಖ ನುಡಿದಿದ್ದಾರೆ. ಅಲ್ಲದೇ ಕಾರ್ಯಕ್ರಮಕ್ಕೆ ಆಹ್ವಾನಿಸಿ ಬೆನ್ನೆಲುಬಾಗಿ ನಿಂತ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದರು.
ಹಂಸಲೇಖ ಏನಾದರೂ ಅಪರಾಧದ ಹೇಳಿಕೆ ಕೊಟ್ಟಿದ್ದರಾ?; ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ
ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಎಸ್.ಜಿ ಸಿದ್ದರಾಮಯ್ಯ ಅವರ ‘ಯರೆಬೇವು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದರು. ಅವರು ಮಾತನಾಡುತ್ತಾ ಹಂಸಲೇಖ ಅವರ ಹೇಳಿಕೆನ್ನು ಸಮರ್ಥಿಸಿಕೊಂಡರು. ‘‘ಹಂಸಲೇಖ ಏನಾದರೂ ದೊಡ್ಡ ಅಪರಾಧದ ಹೇಳಿಕೆ ಕೊಟ್ಟಿದ್ರಾ?’’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸಂಗೀತ ನಿರ್ದೇಶಕ ವಾಸ್ತವಾಂಶವನ್ನು ತೆರೆದಿಟ್ಟಿದ್ದರು ಅಷ್ಟೇ. ಅವರ ಹೇಳಿಕೆಯ ಬಗ್ಗೆ ದೊಡ್ಡ ರಂಪ ಮಾಡಿಬಿಟ್ಟರು ಎಂದರು.
ಶರಣ ಧರ್ಮವನ್ನು ವೈದಿಕ ಧರ್ಮದ ಬಾಲಂಗೋಚಿ ಮಾಡಲು ಹೊರಟಿದ್ದಾರೆ: ಚಿಂತಕ ಡಾ.ಕೆ ಮರುಳಸಿದ್ದಪ್ಪ
ಪ್ರಗತಿಪರ ಚಿಂತಕ ಡಾ.ಕೆ ಮರುಳಸಿದ್ದಪ್ಪ ಮಾತನಾಡಿ, ‘‘ಹುಟ್ಟಿನಿಂದ ಲಿಂಗಾಯತರಾಗಿರುವವರೆಲ್ಲ ಬಸವಣ್ಣನ ವಾರಸುದಾರರಲ್ಲ. ಇಲ್ಲಿರುವುದು ಶರಣ ಧರ್ಮ. ಆದರೆ, ಇದನ್ನು ವೈದಿಕ ಧರ್ಮದ ಬಾಲಂಗೋಚಿ ಮಾಡಲು ಹೊರಟಿದ್ದಾರೆ. ದೇವಸ್ಥಾನ ಸಂಸ್ಕೃತಿಯನ್ನ ಬಸವಣ್ಣ ವಿರೋಧಿಸಿದ್ದರು. ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಆಳಿವಿಲ್ಲ ಎಂದು ಸಾರಿದ್ದರು. ದೇವಸ್ಥಾನ ಕೇಂದ್ರಿತವಾಗಿದ್ದ ಧರ್ಮವನ್ನ ವಿಕೇಂದ್ರಕರಣಗೊಳಿಸಿದ್ದರು. ನಾನು ಒರಟಾಗಿ ಹೇಳಿದರೆ ಅದು ಬೇರೆ ರೂಪ ಪಡೆದುಕೊಳ್ಳುತ್ತದೆ. ಅದು ರವೀಂದ್ರ ಕಲಾಕ್ಷೇತ್ರ, ಸಾಣೆಹಳ್ಳಿಯಲ್ಲಿ ಅನುಭವಕ್ಕೆ ಬಂದಿದೆ’’ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಬೌದ್ಧ, ಲಿಂಗಾಯತ, ಸಿಖ್, ಜೈನ ಇವೆಲ್ಲವೂ ಹಿಂದೂ ಧರ್ಮದ ಭಾಗವೆಂದು ಬಿಂಬಿಸಲಾಗುತ್ತಿದೆ: ಸಿದ್ದರಾಮಯ್ಯ
ಏರಲೇ ಇಲ್ಲ ರಣವೀರ್ ಸಿಂಗ್ ನಟನೆಯ ‘83’ ಸಿನಿಮಾ ಕಲೆಕ್ಷನ್; ಇದಕ್ಕೆ ಕಾರಣಗಳೇನು?