AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

1960ರಲ್ಲೇ ಚಂದ್ರಲೋಕಕ್ಕೆ ಕಾಲಿಟ್ಟಿದ್ದ ನರಸಿಂಹರಾಜು; ಇಲ್ಲಿದೆ ಅಚ್ಚರಿಯ ವಿಚಾರ

Narasimharaju: 1969ರಲ್ಲಿ ಮಾನವ ಸಹಿತ ಉಪಗ್ರವನ್ನು ಅಮೆರಿಕದವರು ಕಳುಹಿಸಿದ್ದರು. ಅಮೆರಿಕದ ಗಗನಯಾತ್ರಿ ನೀಲ್​ ಆರ್ಮ್​ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ. ಅದಕ್ಕೂ ಮೊದಲೇ ಹಾಸ್ಯನಟರಾದ ನರಸಿಂಹರಾಜು ಹಾಗೂ ಎಂಎಸ್ ಉಮೇಶ್ ಚಂದ್ರನಮೇಲೆ ತೆರಳಿದ್ದರು.

1960ರಲ್ಲೇ ಚಂದ್ರಲೋಕಕ್ಕೆ ಕಾಲಿಟ್ಟಿದ್ದ ನರಸಿಂಹರಾಜು; ಇಲ್ಲಿದೆ ಅಚ್ಚರಿಯ ವಿಚಾರ
ನರಸಿಂಹರಾಜು
ರಾಜೇಶ್ ದುಗ್ಗುಮನೆ
|

Updated on:Aug 26, 2023 | 11:11 AM

Share

ಚಂದ್ರನ ಬಗ್ಗೆ ಅಧ್ಯಯನ ಮಾಡಬೇಕು ಎನ್ನುವ ಕನಸು ನನಸಾಗಿದೆ. ಭಾರತ ಕಳುಹಿಸಿದ ಉಪಗ್ರಹ ‘ಚಂದ್ರಯಾನ್ 3’ (Chandrayan 3) ಚಂದ್ರನ ದಕ್ಷಿಣದ ಧ್ರುವದ ಮೇಲೆ ಇಳಿದಿದೆ. ಚಂದ್ರನ ಈ ಭಾಗಕ್ಕೆ ಕಾಲಿರಿಸಿದ ಮೊದಲ ರಾಷ್ಟ್ರ ಎನ್ನುವ ಖ್ಯಾತಿ ಭಾರತಕ್ಕೆ ಸಿಕ್ಕಿದೆ. ಈ ಉಪಗ್ರಹ ಇಲ್ಲಿ ಅಧ್ಯಯನ ನಡೆಸಲಿದೆ. ಚಂದ್ರನ ಮೇಲೆ ಮಾನವ ಸಹಿತ ಉಪಗ್ರಹ ಕಳಿಸಿದವರು ಅಮೆರಿಕದವರು ಮಾತ್ರ. ಅಚ್ಚರಿಯ ವಿಚಾರ ಎಂದರೆ ಹಾಸ್ಯ ನಟ ನರಸಿಂಹರಾಜು (Narasimharaju) ಹಾಗೂ ಉಮೇಶ್ ಅವರು 1960ರಲ್ಲೇ ಈ ಸಾಧನೆ ಮಾಡಿದ್ದರು!

1969ರಲ್ಲಿ ಮಾನವ ಸಹಿತ ಉಪಗ್ರಹವನ್ನು ಅಮೆರಿಕದವರು ಕಳುಹಿಸಿದ್ದರು. ಅಮೆರಿಕದ ಗಗನಯಾತ್ರಿ ನೀಲ್​ ಆರ್ಮ್​ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ. ಅದಕ್ಕೂ ಮೊದಲೇ ಹಾಸ್ಯನಟರಾದ ನರಸಿಂಹರಾಜು ಹಾಗೂ ಎಂಎಸ್ ಉಮೇಶ್ ಚಂದ್ರನಮೇಲೆ ತೆರಳಿದ್ದರು. ಹೀಗೊಂದು ದೃಶ್ಯ ‘ಮಕ್ಕಳ ರಾಜ್ಯ’ ಸಿನಿಮಾದಲ್ಲಿ ಬರುತ್ತದೆ.

ನರಸಿಂಹರಾಜು ಹುಟ್ಟಿದ್ದು 1923ರಲ್ಲಿ. 1954ರಲ್ಲಿ ‘ಬೇಡರ ಕಣ್ಣಪ್ಪ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಅವರು ಕಾಲಿಟ್ಟರು. ನಂತರ ಹಲವು ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದರು. 1960ರಲ್ಲಿ ರಿಲೀಸ್ ಆದ ‘ಮಕ್ಕಳ ರಾಜ್ಯ’ ಸಿನಿಮಾ ಗಮನ ಸೆಳೆಯಿತು. ಬಿಆರ್ ಪಂತುಲು ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಬರುವ ದೃಶ್ಯವೊಂದು ಈಗ ವೈರಲ್ ಆಗುತ್ತಿದೆ.

ವಿಜ್ಞಾನಿಯೋರ್ವ ಚಂದ್ರಗ್ರಹಕ್ಕೆ ತೆರಳುವ ಕನಸು ಕಂಡಿರುತ್ತಾನೆ. ಇದಕ್ಕೆ ಯಾವುದೇ ಮನುಷ್ಯರು ಮುಂದೆ ಬರದ ಕಾರಣ ನಾಯಿಯೊಂದಕ್ಕೆ ತರಬೇತಿ ನೀಡುತ್ತಾನೆ. ಆದರೆ, ನಾಯಿ ಓಡಿ ಹೋಗುತ್ತದೆ. ಆಗ ಆ ವಿಜ್ಞಾನಿಗೆ ಸಿಗೋದು ನರಸಿಂಹರಾಜು ಹಾಗೂ ಉಮೇಶ್. ಇಬ್ಬರನ್ನೂ ಒಂದು ವಿಮಾನದಲ್ಲಿ ಕೂರಿಸಿ ಚಂದ್ರ ಲೋಕಕ್ಕೆ ಕಳಿಸುತ್ತಾನೆ ವಿಜ್ಞಾನಿ. ಚಂದ್ರನ ಮೇಲೆ ಉಮೇಶ್ ಹಾಗೂ ನರಸಿಂಹರಾಜು ಕಾಲಿಡುತ್ತಾರೆ. ಅಲ್ಲಿನ ವ್ಯಕ್ತಿಗಳನ್ನು ಭೇಟಿ ಮಾಡುತ್ತಾರೆ.

(ವಿಡಿಯೋದಲ್ಲಿ 1:37 ಗಂಟೆಯಿಂದ ಚಂದ್ರಯಾನಕ್ಕೆ ಸಂಬಂಧಿಸಿದ ದೃಶ್ಯಗಳು ಇವೆ)

ಇದನ್ನೂ ಓದಿ: ಹಾಸ್ಯ ನಟ ನರಸಿಂಹರಾಜು ಜನ್ಮ ಶತಮಾನೋತ್ಸವ; ವರ್ಷಪೂರ್ತಿ ನಡೆಯಲಿದೆ ಕಾರ್ಯಕ್ರಮ  

ಭೂಮಿಯ ಮೇಲೆ ಜನರು ಸಿಟ್ಟಾಗುತ್ತಾರೆ. ಹೋದವರು ಬಂದಿಲ್ಲ ಎಂದು ವಿಜ್ಞಾನಿಯನ್ನು ಕೊಂದು ಬಿಡುತ್ತಾರೆ. ಇನ್ನೇನು ವಿಜ್ಞಾನಿ ಕಣ್ಮುಚ್ಚಬೇಕು ಎನ್ನುವಾಗ ನರಸಿಂಹರಾಜು-ಉಮೇಶ್ ಮರಳಿ ಬರುತ್ತಾರೆ.  ‘ನಾನು ಕಣ್ಣಿಮುಚ್ಚಿದರೂ ಇನ್ಯಾರೋ ಶೋಧನೆ ಮಾಡುತ್ತಾರೆ. ಸಂಶೋಧನೆ ನನಗೆ ಮಾತ್ರ ಸೀಮಿತ ಅಲ್ಲ’ ಎಂದು ವಿಜ್ಞಾನಿ ಕಣ್ಣು ಮುಚ್ಚುತ್ತಾನೆ. ಈ ರೀತಿಯ ದೃಶ್ಯವೊಂದು ಈಗ ವೈರಲ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:59 am, Sat, 26 August 23

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು