AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಟ್ಟಣಗೆರೆ ಶೆಡ್​ಗೆ 4.6 ಸ್ಟಾರ್ ರೇಟಿಂಗ್; ಸಿಗುವ ಸರ್ವಿಸ್ ಬಗ್ಗೆ ರಿವ್ಯೂ ನೀಡಿದ ನೆಟ್ಟಿಗರು

ದರ್ಶನ್​, ಪವಿತ್ರಾ ಗೌಡ ಹಾಗೂ ಅವರ ಸಹಚರರು ಭಾಗಿ ಆಗಿದ್ದಾರೆ ಎನ್ನಲಾದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಿಂದಾಗಿ ಬೆಂಗಳೂರಿನ ಪಟ್ಟಣಗೆರೆ ಶೆಡ್​ ಕುಖ್ಯಾತಿ ಪಡೆದಿದೆ. ಈ ಜಾಗದ ಬಗ್ಗೆ ನೆಟ್ಟಿಗರು ನೂರಾರು ಬಗೆಯ ರಿವ್ಯೂ ಹಂಚಿಕೊಂಡಿದ್ದಾರೆ. ವಿಡಂಬನಾತ್ಮಕವಾಗಿ ಬರೆದಿರುವ ರಿವ್ಯೂಗಳು ವೈರಲ್​ ಆಗುತ್ತಿವೆ. ಗೂಗಲ್​ ಮ್ಯಾಪ್​ನಲ್ಲಿ ಪಟ್ಟಣಗೆರೆ ಶೆಡ್​ಗೆ ಜನರು ಭರ್ಜರಿ ರೇಟಿಂಗ್ ನೀಡಿದ್ದಾರೆ.

ಪಟ್ಟಣಗೆರೆ ಶೆಡ್​ಗೆ 4.6 ಸ್ಟಾರ್ ರೇಟಿಂಗ್; ಸಿಗುವ ಸರ್ವಿಸ್ ಬಗ್ಗೆ ರಿವ್ಯೂ ನೀಡಿದ ನೆಟ್ಟಿಗರು
ದರ್ಶನ್​, ಪಟ್ಟಣಗೆರೆ ಶೆಡ್​
ಮದನ್​ ಕುಮಾರ್​
|

Updated on: Jul 11, 2024 | 9:06 PM

Share

ಪಾಸಿಟಿವ್​ ಅಥವಾ ನೆಗಟಿವ್​ ಏನಿದ್ದರೂ ಸರಿ.. ನಟ ದರ್ಶನ್​ ಏನೇ ಮಾಡಿದರೂ ಟ್ರೆಂಡ್​ ಆಗುತ್ತದೆ. ರೇಣುಕಾ ಸ್ವಾಮಿ ಕೊಲೆ ನಡೆದ ಬಳಿಕ ಬೆಂಗಳೂರಿನ ಪಟ್ಟಣಗೆರೆ ಶೆಡ್​ ಸಿಕ್ಕಾಪಟ್ಟೆ ಸುದ್ದಿ ಆಯಿತು. ಇದೇ ಶೆಡ್​ನಲ್ಲಿ ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ನೀಡಿ ಸಾಯಿಸಲಾಗಿತ್ತು. ಈ ಆರೋಪದಲ್ಲಿ ದರ್ಶನ್​, ಪವಿತ್ರಾ ಗೌಡ ಮುಂತಾದವರು ಜೈಲು ಸೇರಿದ್ದಾರೆ. ಈ ಘಟನೆಯಿಂದಾಗಿ ಪಟ್ಟಣಗೆರೆ ಶೆಡ್​ ಸಿಕ್ಕಾಪಟ್ಟೆ ಕುಖ್ಯಾತಿ ಪಡೆದಿದೆ. ಗೂಗಲ್​ ಮ್ಯಾಪ್​ನಲ್ಲಿ ಈ ಶೆಡ್​ಗೆ ನೆಟ್ಟಿಗರು 4.6 ಸ್ಟಾರ್​ ರೇಟಿಂಗ್​ ನೀಡಿದ್ದಾರೆ! ನೂರಾರು ಜನರು ಇದರ ಬಗ್ಗೆ ರಿವ್ಯೂ ತಿಳಿಸಿದ್ದಾರೆ.

ವಾಹನಗಳ ಪಾರ್ಕಿಂಗ್​ ಸೇರಿದಂತೆ ಬೇರೆ ಬೇರೆ ಕೆಲಸಗಳಿಗೆ ಪಟ್ಟಣಗೆರೆ ಶೆಡ್​ ಬಳಕೆ ಆಗುತ್ತಿತ್ತು. ಆದರೆ ಈ ಜಾಗದಲ್ಲಿ ರೇಣುಕಾ ಸ್ವಾಮಿ ಕೊಲೆ ನಡೆದ ಬಳಿಕ ಇದರ ಬಗ್ಗೆ ಇರುವ ಇಮೇಜ್​ ಬದಲಾಯಿತು. ಇದು ಕಿಡಿಗೇಡಿಗಳ ಅಡ್ಡ ಎಂಬಂತೆ ಬಿಂಬಿತವಾಗಿದೆ. ಇಲ್ಲಿ ಕೇವಲ ಅಕ್ರಮ ಚಟುವಟಿಕೆಗಳೇ ನಡೆಯುತ್ತವೆ ಎಂಬರ್ಥದಲ್ಲಿ ಮೀಮ್​ಗಳನ್ನು ಹಿರಿಬಿಡಲಾಗಿದೆ. ಅಲ್ಲದೇ, ‘ಶೆಡ್ಡಿಗೆ ಬಾ..’ ಎಂಬ ರೀಲ್ಸ್​ ಕೂಡ ವೈರಲ್​ ಆಗಿವೆ. ಇಷ್ಟೆಲ್ಲ ಆದ ಬಳಿಕ ಗೂಗಲ್​ನಲ್ಲಿ ಪಟ್ಟಣಗೆರೆ ಶೆಡ್​ ಬಗ್ಗೆ ಹುಡುಕಾಟ ಮಾಡಿದವರ ಸಂಖ್ಯೆ ಹೆಚ್ಚಾಗಿದೆ.

ಪಟ್ಟಣಗೆರೆ ಶೆಡ್​ನಲ್ಲಿ ಏನೆಲ್ಲ ಸರ್ವಿಸ್​ ಸಿಗುತ್ತದೆ ಎಂಬ ಬಗ್ಗೆ ನೆಟ್ಟಿಗರು ಲೇವಡಿ ಮಾಡಿದ್ದಾರೆ. ದರ್ಶನ್​ ಮತ್ತು ಗ್ಯಾಂಗ್​ನವರು ರೇಣಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಈ ಶೆಡ್​ನಲ್ಲಿ ಚಿತ್ರಹಿಂಸೆ ನೀಡಿದ್ದನ್ನೇ ಗಮನದಲ್ಲಿ ಇಟ್ಟುಕೊಂಡು ಜನರು ಈ ಶೆಡ್​ ಬಗ್ಗೆ ರಿವ್ಯೂ ಬರೆದಿದ್ದಾರೆ. ನೂರಾರು ಮಂದಿ ರಿವ್ಯೂ ಪೋಸ್ಟ್​ ಮಾಡಿದ್ದಾರೆ.

ಈ ಎಲ್ಲ ರಿವ್ಯೂಗಳು ವಿಡಂಬನಾತ್ಮಕಾಗಿವೆ. ‘ಒಂದು ಮೆಸೇಜ್​ ಮಾಡಿದರೆ ಸಾಕು ಉಚಿತವಾಗಿ ಕರೆದುಕೊಂಡು ಹೋಗುತ್ತಾರೆ’, ‘ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸ್ಥಳ. ಆದರೆ ಅದೇ ನಿಮ್ಮ ಕೊನೇ ದಿನ ಆಗುತ್ತದೆ’, ‘ದರ್ಶನ್​ನ ಭೇಟಿ ಮಾಡಬೇಕು ಅಂದರೆ ಇಲ್ಲಿಗೆ ಬನ್ನಿ, ಆದರೆ ನೀವು ವಾಸಪ್​ ಹೋಗಲ್ಲ’, ‘ತುಂಬ ಒಳ್ಳೆಯ ಜಾಗ.. ರಿಸ್ಕ್ ತೆಗೆದುಕೊಂಡು ಬರುವುದಾದರೆ ನಿಮಗೆ ಸುಸ್ವಾಗತ’​, ‘ಇಲ್ಲಿನ ಸಿಬ್ಬಂದಿ ಫ್ರೆಂಡ್ನಿ ಆಗಿದ್ದಾರೆ.. ಒಳ್ಳೆಯ ಮಸಾಜ್​ ಮತ್ತು ಕರೆಂಟ್​ ಕೊಡುವ ಸರ್ವಿಸ್​ ಸಿಗುತ್ತದೆ’ ಎಂಬಿತ್ಯಾದಿ ರಿವ್ಯೂಗಳನ್ನು ಬರೆಯಲಾಗಿದೆ.

ಇದನ್ನೂ ಓದಿ: ವಕೀಲರಿಗೆ ದರ್ಶನ್​, ಪವಿತ್ರಾ ಗೌಡ ಕೋಟಿ ಕೋಟಿ ಕೊಡ್ತಾರಾ? ಲಾಯರ್​ ಹೇಳೋದು ಕೇಳಿ..

‘ಇಲ್ಲಿ ನಾವು ಕುಂಟಾಬಿಲ್ಲೆ ಆಡಬಹುದಾ?’ ಎಂದು ಕೆಲವರು ಪ್ರಶ್ನೆ ಕೇಳಿದ್ದಾರೆ. ‘ಖಂಡಿತವಾಗಿಯೂ ಆಡಬಹುದು’ ಎಂದು ಉತ್ತರ ನೀಡಲಾಗಿದೆ. ‘ನಿಮಗೆ ಮಾಡಲು ಏನೂ ಕೆಲಸ ಇಲ್ಲ ಎಂದರೆ ಇಲ್ಲಿ ಬಂದು ನ್ಯೂಸ್​ ಆ್ಯಂಕರ್​ಗಳ ಜೊತೆ ಕುಂಟಾಬಿಲ್ಲೆ ಆಡಬಹುದು’ ಎಂದು ಕೂಡ ಉತ್ತರ ಬರೆಯಲಾಗಿದೆ. ಇದರ ಸ್ಕ್ರೀನ್​ ಶಾಟ್​ಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್