AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಟ್ಟಣಗೆರೆ ಶೆಡ್​ಗೆ 4.6 ಸ್ಟಾರ್ ರೇಟಿಂಗ್; ಸಿಗುವ ಸರ್ವಿಸ್ ಬಗ್ಗೆ ರಿವ್ಯೂ ನೀಡಿದ ನೆಟ್ಟಿಗರು

ದರ್ಶನ್​, ಪವಿತ್ರಾ ಗೌಡ ಹಾಗೂ ಅವರ ಸಹಚರರು ಭಾಗಿ ಆಗಿದ್ದಾರೆ ಎನ್ನಲಾದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಿಂದಾಗಿ ಬೆಂಗಳೂರಿನ ಪಟ್ಟಣಗೆರೆ ಶೆಡ್​ ಕುಖ್ಯಾತಿ ಪಡೆದಿದೆ. ಈ ಜಾಗದ ಬಗ್ಗೆ ನೆಟ್ಟಿಗರು ನೂರಾರು ಬಗೆಯ ರಿವ್ಯೂ ಹಂಚಿಕೊಂಡಿದ್ದಾರೆ. ವಿಡಂಬನಾತ್ಮಕವಾಗಿ ಬರೆದಿರುವ ರಿವ್ಯೂಗಳು ವೈರಲ್​ ಆಗುತ್ತಿವೆ. ಗೂಗಲ್​ ಮ್ಯಾಪ್​ನಲ್ಲಿ ಪಟ್ಟಣಗೆರೆ ಶೆಡ್​ಗೆ ಜನರು ಭರ್ಜರಿ ರೇಟಿಂಗ್ ನೀಡಿದ್ದಾರೆ.

ಪಟ್ಟಣಗೆರೆ ಶೆಡ್​ಗೆ 4.6 ಸ್ಟಾರ್ ರೇಟಿಂಗ್; ಸಿಗುವ ಸರ್ವಿಸ್ ಬಗ್ಗೆ ರಿವ್ಯೂ ನೀಡಿದ ನೆಟ್ಟಿಗರು
ದರ್ಶನ್​, ಪಟ್ಟಣಗೆರೆ ಶೆಡ್​
ಮದನ್​ ಕುಮಾರ್​
|

Updated on: Jul 11, 2024 | 9:06 PM

Share

ಪಾಸಿಟಿವ್​ ಅಥವಾ ನೆಗಟಿವ್​ ಏನಿದ್ದರೂ ಸರಿ.. ನಟ ದರ್ಶನ್​ ಏನೇ ಮಾಡಿದರೂ ಟ್ರೆಂಡ್​ ಆಗುತ್ತದೆ. ರೇಣುಕಾ ಸ್ವಾಮಿ ಕೊಲೆ ನಡೆದ ಬಳಿಕ ಬೆಂಗಳೂರಿನ ಪಟ್ಟಣಗೆರೆ ಶೆಡ್​ ಸಿಕ್ಕಾಪಟ್ಟೆ ಸುದ್ದಿ ಆಯಿತು. ಇದೇ ಶೆಡ್​ನಲ್ಲಿ ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ನೀಡಿ ಸಾಯಿಸಲಾಗಿತ್ತು. ಈ ಆರೋಪದಲ್ಲಿ ದರ್ಶನ್​, ಪವಿತ್ರಾ ಗೌಡ ಮುಂತಾದವರು ಜೈಲು ಸೇರಿದ್ದಾರೆ. ಈ ಘಟನೆಯಿಂದಾಗಿ ಪಟ್ಟಣಗೆರೆ ಶೆಡ್​ ಸಿಕ್ಕಾಪಟ್ಟೆ ಕುಖ್ಯಾತಿ ಪಡೆದಿದೆ. ಗೂಗಲ್​ ಮ್ಯಾಪ್​ನಲ್ಲಿ ಈ ಶೆಡ್​ಗೆ ನೆಟ್ಟಿಗರು 4.6 ಸ್ಟಾರ್​ ರೇಟಿಂಗ್​ ನೀಡಿದ್ದಾರೆ! ನೂರಾರು ಜನರು ಇದರ ಬಗ್ಗೆ ರಿವ್ಯೂ ತಿಳಿಸಿದ್ದಾರೆ.

ವಾಹನಗಳ ಪಾರ್ಕಿಂಗ್​ ಸೇರಿದಂತೆ ಬೇರೆ ಬೇರೆ ಕೆಲಸಗಳಿಗೆ ಪಟ್ಟಣಗೆರೆ ಶೆಡ್​ ಬಳಕೆ ಆಗುತ್ತಿತ್ತು. ಆದರೆ ಈ ಜಾಗದಲ್ಲಿ ರೇಣುಕಾ ಸ್ವಾಮಿ ಕೊಲೆ ನಡೆದ ಬಳಿಕ ಇದರ ಬಗ್ಗೆ ಇರುವ ಇಮೇಜ್​ ಬದಲಾಯಿತು. ಇದು ಕಿಡಿಗೇಡಿಗಳ ಅಡ್ಡ ಎಂಬಂತೆ ಬಿಂಬಿತವಾಗಿದೆ. ಇಲ್ಲಿ ಕೇವಲ ಅಕ್ರಮ ಚಟುವಟಿಕೆಗಳೇ ನಡೆಯುತ್ತವೆ ಎಂಬರ್ಥದಲ್ಲಿ ಮೀಮ್​ಗಳನ್ನು ಹಿರಿಬಿಡಲಾಗಿದೆ. ಅಲ್ಲದೇ, ‘ಶೆಡ್ಡಿಗೆ ಬಾ..’ ಎಂಬ ರೀಲ್ಸ್​ ಕೂಡ ವೈರಲ್​ ಆಗಿವೆ. ಇಷ್ಟೆಲ್ಲ ಆದ ಬಳಿಕ ಗೂಗಲ್​ನಲ್ಲಿ ಪಟ್ಟಣಗೆರೆ ಶೆಡ್​ ಬಗ್ಗೆ ಹುಡುಕಾಟ ಮಾಡಿದವರ ಸಂಖ್ಯೆ ಹೆಚ್ಚಾಗಿದೆ.

ಪಟ್ಟಣಗೆರೆ ಶೆಡ್​ನಲ್ಲಿ ಏನೆಲ್ಲ ಸರ್ವಿಸ್​ ಸಿಗುತ್ತದೆ ಎಂಬ ಬಗ್ಗೆ ನೆಟ್ಟಿಗರು ಲೇವಡಿ ಮಾಡಿದ್ದಾರೆ. ದರ್ಶನ್​ ಮತ್ತು ಗ್ಯಾಂಗ್​ನವರು ರೇಣಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಈ ಶೆಡ್​ನಲ್ಲಿ ಚಿತ್ರಹಿಂಸೆ ನೀಡಿದ್ದನ್ನೇ ಗಮನದಲ್ಲಿ ಇಟ್ಟುಕೊಂಡು ಜನರು ಈ ಶೆಡ್​ ಬಗ್ಗೆ ರಿವ್ಯೂ ಬರೆದಿದ್ದಾರೆ. ನೂರಾರು ಮಂದಿ ರಿವ್ಯೂ ಪೋಸ್ಟ್​ ಮಾಡಿದ್ದಾರೆ.

ಈ ಎಲ್ಲ ರಿವ್ಯೂಗಳು ವಿಡಂಬನಾತ್ಮಕಾಗಿವೆ. ‘ಒಂದು ಮೆಸೇಜ್​ ಮಾಡಿದರೆ ಸಾಕು ಉಚಿತವಾಗಿ ಕರೆದುಕೊಂಡು ಹೋಗುತ್ತಾರೆ’, ‘ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸ್ಥಳ. ಆದರೆ ಅದೇ ನಿಮ್ಮ ಕೊನೇ ದಿನ ಆಗುತ್ತದೆ’, ‘ದರ್ಶನ್​ನ ಭೇಟಿ ಮಾಡಬೇಕು ಅಂದರೆ ಇಲ್ಲಿಗೆ ಬನ್ನಿ, ಆದರೆ ನೀವು ವಾಸಪ್​ ಹೋಗಲ್ಲ’, ‘ತುಂಬ ಒಳ್ಳೆಯ ಜಾಗ.. ರಿಸ್ಕ್ ತೆಗೆದುಕೊಂಡು ಬರುವುದಾದರೆ ನಿಮಗೆ ಸುಸ್ವಾಗತ’​, ‘ಇಲ್ಲಿನ ಸಿಬ್ಬಂದಿ ಫ್ರೆಂಡ್ನಿ ಆಗಿದ್ದಾರೆ.. ಒಳ್ಳೆಯ ಮಸಾಜ್​ ಮತ್ತು ಕರೆಂಟ್​ ಕೊಡುವ ಸರ್ವಿಸ್​ ಸಿಗುತ್ತದೆ’ ಎಂಬಿತ್ಯಾದಿ ರಿವ್ಯೂಗಳನ್ನು ಬರೆಯಲಾಗಿದೆ.

ಇದನ್ನೂ ಓದಿ: ವಕೀಲರಿಗೆ ದರ್ಶನ್​, ಪವಿತ್ರಾ ಗೌಡ ಕೋಟಿ ಕೋಟಿ ಕೊಡ್ತಾರಾ? ಲಾಯರ್​ ಹೇಳೋದು ಕೇಳಿ..

‘ಇಲ್ಲಿ ನಾವು ಕುಂಟಾಬಿಲ್ಲೆ ಆಡಬಹುದಾ?’ ಎಂದು ಕೆಲವರು ಪ್ರಶ್ನೆ ಕೇಳಿದ್ದಾರೆ. ‘ಖಂಡಿತವಾಗಿಯೂ ಆಡಬಹುದು’ ಎಂದು ಉತ್ತರ ನೀಡಲಾಗಿದೆ. ‘ನಿಮಗೆ ಮಾಡಲು ಏನೂ ಕೆಲಸ ಇಲ್ಲ ಎಂದರೆ ಇಲ್ಲಿ ಬಂದು ನ್ಯೂಸ್​ ಆ್ಯಂಕರ್​ಗಳ ಜೊತೆ ಕುಂಟಾಬಿಲ್ಲೆ ಆಡಬಹುದು’ ಎಂದು ಕೂಡ ಉತ್ತರ ಬರೆಯಲಾಗಿದೆ. ಇದರ ಸ್ಕ್ರೀನ್​ ಶಾಟ್​ಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ