AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಟ್ಟಣಗೆರೆ ಶೆಡ್​ಗೆ 4.6 ಸ್ಟಾರ್ ರೇಟಿಂಗ್; ಸಿಗುವ ಸರ್ವಿಸ್ ಬಗ್ಗೆ ರಿವ್ಯೂ ನೀಡಿದ ನೆಟ್ಟಿಗರು

ದರ್ಶನ್​, ಪವಿತ್ರಾ ಗೌಡ ಹಾಗೂ ಅವರ ಸಹಚರರು ಭಾಗಿ ಆಗಿದ್ದಾರೆ ಎನ್ನಲಾದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಿಂದಾಗಿ ಬೆಂಗಳೂರಿನ ಪಟ್ಟಣಗೆರೆ ಶೆಡ್​ ಕುಖ್ಯಾತಿ ಪಡೆದಿದೆ. ಈ ಜಾಗದ ಬಗ್ಗೆ ನೆಟ್ಟಿಗರು ನೂರಾರು ಬಗೆಯ ರಿವ್ಯೂ ಹಂಚಿಕೊಂಡಿದ್ದಾರೆ. ವಿಡಂಬನಾತ್ಮಕವಾಗಿ ಬರೆದಿರುವ ರಿವ್ಯೂಗಳು ವೈರಲ್​ ಆಗುತ್ತಿವೆ. ಗೂಗಲ್​ ಮ್ಯಾಪ್​ನಲ್ಲಿ ಪಟ್ಟಣಗೆರೆ ಶೆಡ್​ಗೆ ಜನರು ಭರ್ಜರಿ ರೇಟಿಂಗ್ ನೀಡಿದ್ದಾರೆ.

ಪಟ್ಟಣಗೆರೆ ಶೆಡ್​ಗೆ 4.6 ಸ್ಟಾರ್ ರೇಟಿಂಗ್; ಸಿಗುವ ಸರ್ವಿಸ್ ಬಗ್ಗೆ ರಿವ್ಯೂ ನೀಡಿದ ನೆಟ್ಟಿಗರು
ದರ್ಶನ್​, ಪಟ್ಟಣಗೆರೆ ಶೆಡ್​
ಮದನ್​ ಕುಮಾರ್​
|

Updated on: Jul 11, 2024 | 9:06 PM

Share

ಪಾಸಿಟಿವ್​ ಅಥವಾ ನೆಗಟಿವ್​ ಏನಿದ್ದರೂ ಸರಿ.. ನಟ ದರ್ಶನ್​ ಏನೇ ಮಾಡಿದರೂ ಟ್ರೆಂಡ್​ ಆಗುತ್ತದೆ. ರೇಣುಕಾ ಸ್ವಾಮಿ ಕೊಲೆ ನಡೆದ ಬಳಿಕ ಬೆಂಗಳೂರಿನ ಪಟ್ಟಣಗೆರೆ ಶೆಡ್​ ಸಿಕ್ಕಾಪಟ್ಟೆ ಸುದ್ದಿ ಆಯಿತು. ಇದೇ ಶೆಡ್​ನಲ್ಲಿ ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ನೀಡಿ ಸಾಯಿಸಲಾಗಿತ್ತು. ಈ ಆರೋಪದಲ್ಲಿ ದರ್ಶನ್​, ಪವಿತ್ರಾ ಗೌಡ ಮುಂತಾದವರು ಜೈಲು ಸೇರಿದ್ದಾರೆ. ಈ ಘಟನೆಯಿಂದಾಗಿ ಪಟ್ಟಣಗೆರೆ ಶೆಡ್​ ಸಿಕ್ಕಾಪಟ್ಟೆ ಕುಖ್ಯಾತಿ ಪಡೆದಿದೆ. ಗೂಗಲ್​ ಮ್ಯಾಪ್​ನಲ್ಲಿ ಈ ಶೆಡ್​ಗೆ ನೆಟ್ಟಿಗರು 4.6 ಸ್ಟಾರ್​ ರೇಟಿಂಗ್​ ನೀಡಿದ್ದಾರೆ! ನೂರಾರು ಜನರು ಇದರ ಬಗ್ಗೆ ರಿವ್ಯೂ ತಿಳಿಸಿದ್ದಾರೆ.

ವಾಹನಗಳ ಪಾರ್ಕಿಂಗ್​ ಸೇರಿದಂತೆ ಬೇರೆ ಬೇರೆ ಕೆಲಸಗಳಿಗೆ ಪಟ್ಟಣಗೆರೆ ಶೆಡ್​ ಬಳಕೆ ಆಗುತ್ತಿತ್ತು. ಆದರೆ ಈ ಜಾಗದಲ್ಲಿ ರೇಣುಕಾ ಸ್ವಾಮಿ ಕೊಲೆ ನಡೆದ ಬಳಿಕ ಇದರ ಬಗ್ಗೆ ಇರುವ ಇಮೇಜ್​ ಬದಲಾಯಿತು. ಇದು ಕಿಡಿಗೇಡಿಗಳ ಅಡ್ಡ ಎಂಬಂತೆ ಬಿಂಬಿತವಾಗಿದೆ. ಇಲ್ಲಿ ಕೇವಲ ಅಕ್ರಮ ಚಟುವಟಿಕೆಗಳೇ ನಡೆಯುತ್ತವೆ ಎಂಬರ್ಥದಲ್ಲಿ ಮೀಮ್​ಗಳನ್ನು ಹಿರಿಬಿಡಲಾಗಿದೆ. ಅಲ್ಲದೇ, ‘ಶೆಡ್ಡಿಗೆ ಬಾ..’ ಎಂಬ ರೀಲ್ಸ್​ ಕೂಡ ವೈರಲ್​ ಆಗಿವೆ. ಇಷ್ಟೆಲ್ಲ ಆದ ಬಳಿಕ ಗೂಗಲ್​ನಲ್ಲಿ ಪಟ್ಟಣಗೆರೆ ಶೆಡ್​ ಬಗ್ಗೆ ಹುಡುಕಾಟ ಮಾಡಿದವರ ಸಂಖ್ಯೆ ಹೆಚ್ಚಾಗಿದೆ.

ಪಟ್ಟಣಗೆರೆ ಶೆಡ್​ನಲ್ಲಿ ಏನೆಲ್ಲ ಸರ್ವಿಸ್​ ಸಿಗುತ್ತದೆ ಎಂಬ ಬಗ್ಗೆ ನೆಟ್ಟಿಗರು ಲೇವಡಿ ಮಾಡಿದ್ದಾರೆ. ದರ್ಶನ್​ ಮತ್ತು ಗ್ಯಾಂಗ್​ನವರು ರೇಣಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಈ ಶೆಡ್​ನಲ್ಲಿ ಚಿತ್ರಹಿಂಸೆ ನೀಡಿದ್ದನ್ನೇ ಗಮನದಲ್ಲಿ ಇಟ್ಟುಕೊಂಡು ಜನರು ಈ ಶೆಡ್​ ಬಗ್ಗೆ ರಿವ್ಯೂ ಬರೆದಿದ್ದಾರೆ. ನೂರಾರು ಮಂದಿ ರಿವ್ಯೂ ಪೋಸ್ಟ್​ ಮಾಡಿದ್ದಾರೆ.

ಈ ಎಲ್ಲ ರಿವ್ಯೂಗಳು ವಿಡಂಬನಾತ್ಮಕಾಗಿವೆ. ‘ಒಂದು ಮೆಸೇಜ್​ ಮಾಡಿದರೆ ಸಾಕು ಉಚಿತವಾಗಿ ಕರೆದುಕೊಂಡು ಹೋಗುತ್ತಾರೆ’, ‘ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸ್ಥಳ. ಆದರೆ ಅದೇ ನಿಮ್ಮ ಕೊನೇ ದಿನ ಆಗುತ್ತದೆ’, ‘ದರ್ಶನ್​ನ ಭೇಟಿ ಮಾಡಬೇಕು ಅಂದರೆ ಇಲ್ಲಿಗೆ ಬನ್ನಿ, ಆದರೆ ನೀವು ವಾಸಪ್​ ಹೋಗಲ್ಲ’, ‘ತುಂಬ ಒಳ್ಳೆಯ ಜಾಗ.. ರಿಸ್ಕ್ ತೆಗೆದುಕೊಂಡು ಬರುವುದಾದರೆ ನಿಮಗೆ ಸುಸ್ವಾಗತ’​, ‘ಇಲ್ಲಿನ ಸಿಬ್ಬಂದಿ ಫ್ರೆಂಡ್ನಿ ಆಗಿದ್ದಾರೆ.. ಒಳ್ಳೆಯ ಮಸಾಜ್​ ಮತ್ತು ಕರೆಂಟ್​ ಕೊಡುವ ಸರ್ವಿಸ್​ ಸಿಗುತ್ತದೆ’ ಎಂಬಿತ್ಯಾದಿ ರಿವ್ಯೂಗಳನ್ನು ಬರೆಯಲಾಗಿದೆ.

ಇದನ್ನೂ ಓದಿ: ವಕೀಲರಿಗೆ ದರ್ಶನ್​, ಪವಿತ್ರಾ ಗೌಡ ಕೋಟಿ ಕೋಟಿ ಕೊಡ್ತಾರಾ? ಲಾಯರ್​ ಹೇಳೋದು ಕೇಳಿ..

‘ಇಲ್ಲಿ ನಾವು ಕುಂಟಾಬಿಲ್ಲೆ ಆಡಬಹುದಾ?’ ಎಂದು ಕೆಲವರು ಪ್ರಶ್ನೆ ಕೇಳಿದ್ದಾರೆ. ‘ಖಂಡಿತವಾಗಿಯೂ ಆಡಬಹುದು’ ಎಂದು ಉತ್ತರ ನೀಡಲಾಗಿದೆ. ‘ನಿಮಗೆ ಮಾಡಲು ಏನೂ ಕೆಲಸ ಇಲ್ಲ ಎಂದರೆ ಇಲ್ಲಿ ಬಂದು ನ್ಯೂಸ್​ ಆ್ಯಂಕರ್​ಗಳ ಜೊತೆ ಕುಂಟಾಬಿಲ್ಲೆ ಆಡಬಹುದು’ ಎಂದು ಕೂಡ ಉತ್ತರ ಬರೆಯಲಾಗಿದೆ. ಇದರ ಸ್ಕ್ರೀನ್​ ಶಾಟ್​ಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ