ಪತಿ ರಿಷಬ್ ಶೆಟ್ಟಿಗೆ ವೇದಿಕೆ ಮೇಲೆಯೇ ಅದ್ಭುತ ಉಡುಗೊರೆ ಕೊಟ್ಟ ಪ್ರಗತಿ ಶೆಟ್ಟಿ

Pragathi Shetty: ರಿಷಬ್ ಶೆಟ್ಟಿ ಹುಟ್ಟುಹಬ್ಬ ಕಾರ್ಯಕ್ರಮದ ವೇದಿಕೆಯಲ್ಲಿ ರಿಷಬ್​ರ ಪತ್ನಿ ಪ್ರಗತಿ ಶೆಟ್ಟಿ ಅದ್ಭುತ ಉಡುಗೊರೆಯೊಂದನ್ನು ನೀಡಿದರು.

ಪತಿ ರಿಷಬ್ ಶೆಟ್ಟಿಗೆ ವೇದಿಕೆ ಮೇಲೆಯೇ ಅದ್ಭುತ ಉಡುಗೊರೆ ಕೊಟ್ಟ ಪ್ರಗತಿ ಶೆಟ್ಟಿ
ರಿಷಬ್-ಪ್ರಗತಿ
Follow us
|

Updated on: Jul 07, 2023 | 9:02 PM

ರಿಷಬ್ ಶೆಟ್ಟಿ (Rishab Shetty) ಇಂದು (ಜುಲೈ 07) ಅದ್ಧೂರಿಯಾಗಿ ಅಭಿಮಾನಿಗಳೊಟ್ಟಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಂದಿ ಲಿಂಕ್ ಗ್ರೌಂಡ್ಸ್​ನಲ್ಲಿ ಅದ್ಧೂರಿ ವೇದಿಕೆಯಲ್ಲಿ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ರಿಷಬ್ ಶೆಟ್ಟಿ. ವಿಶೇಷವೆಂದರೆ ಇದೇ ವೇದಿಕೆ ಮೇಲೆ ರಿಷಬ್​ರ ಪತ್ನಿ ಪ್ರಗತಿ ಶೆಟ್ಟಿ (Pragathi Shetty), ಪತಿ ರಿಷಬ್ ಶೆಟ್ಟಿಗೆ ಅದ್ಭುತವಾದ ಉಡುಗೊರೆಯನ್ನು ನೀಡಿದ್ದಾರೆ.

ಪ್ರಗತಿ ಶೆಟ್ಟಿಯವರು ರಿಷಬ್ ಶೆಟ್ಟಿ ಫೌಂಡೇಶನ್ ಅನ್ನು ಇಂದು ಲಾಂಚ್ ಮಾಡಿದ್ದಾರೆ. ಅದರ ಲೋಗೋ ಅನ್ನು ರಿಷಬ್​ರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿಯೇ ಅನಾವರಣ ಸಹ ಮಾಡಲಾಗಿದೆ. ಲೋಗೋ ಅನಾವರಣವಾದ ಬಳಿಕ ಮಾತನಾಡಿದ ಪ್ರಗತಿ ಶೆಟ್ಟಿ, ”ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು’ ಸಿನಿಮಾ ಮಾಡಿದಾಗಿನಿಂದಲೂ ರಿಷಬ್ ಶೆಟ್ಟಿಯವರು ಶಿಕ್ಷಣ ಕ್ಷೇತ್ರದಲ್ಲಿ ಕೈಲಾದ ಸೇವೆ ಮಾಡುತ್ತಲೇ ಇದ್ದಾರೆ. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಆದರೆ ಅದ್ಯಾವುದೂ ಒಂದು ವ್ಯವಸ್ಥಿತ ರೀತಿಯಲ್ಲಿರಲಿಲ್ಲ” ಎಂದಿದ್ದಾರೆ ಪ್ರಗತಿ.

”ಸಮಾಜ ಸೇವೆ ಅದರಲ್ಲಿಯೂ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಕೊಡುವುದು ರಿಷಬ್​ಗೆ ಬಹಳ ಇಷ್ಟವಾಗುವ ಕೆಲಸ. ಈ ಬಗ್ಗೆ ನಾನು ರಿಷಬ್ ಬಹಳ ದಿನಗಳಿಂದ ಯೋಚಿಸುತ್ತಲೇ ಇದ್ದೆವು, ಟ್ರಸ್ಟ್ ಮಾಡಿ ಸಮಾಜಕ್ಕೆ ಉಪಯೋಗುವ ಕೆಲಸ ಮಾಡಬೇಕು ಅಂತ. ಹಾಗಾಗಿಯೇ ಯೋಚಿಸಿ ರಿಷಬ್ ಶೆಟ್ಟಿ ಫೌಂಡೇಶನ್ ಮಾಡಿದ್ದೇವೆ, ಇದಕ್ಕಿಂತಲೂ ಒಳ್ಳೆಯ ಉಡುಗೊರೆಯನ್ನು ರಿಷಬ್​ಗೆ ಕೊಡಲಾರೆ ಎನಿಸಿತು ಹಾಗಾಗಿ ಇದನ್ನು ಮಾಡಿದ್ದೇವೆ. ಮತ್ತು ಇದನ್ನು ಲಾಂಚ್ ಮಾಡಲು ಇದಕ್ಕಿಂತಲೂ ಒಳ್ಳೆಯ ದಿನವೂ ಸಿಗಲಾರದು” ಎಂದಿದ್ದಾರೆ ಪ್ರಗತಿ ಶೆಟ್ಟಿ.

ಇದನ್ನೂ ಓದಿ:‘ಕಾಂತಾರ’ ರಾಣಿ ಪ್ರಗತಿ ಶೆಟ್ಟಿಗೆ ಕಾಡುತ್ತಿದೆ ಚಿತ್ರೀಕರಣದ ನೆನಪು, ಕಾಂತಾರ 2 ನಲ್ಲಿ ಪತ್ನಿಗೆ ಮರು ಅವಕಾಶ ಕೊಡ್ತಾರಾ ರಿಷಬ್?

”ಶಿಕ್ಷಣ ನಮ್ಮ ಆದ್ಯತೆ, ನಮ್ಮ ಮೂಲಭೂತ ಹಕ್ಕು ಸಹ. ಹಾಗಿದ್ದರೂ ಸಹ ಎಷ್ಟೋ ಜನ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಎಷ್ಟೋ ಶಾಲೆಗಳಲ್ಲಿ ಸೂಕ್ತವಾದ ವ್ಯವಸ್ಥೆಗಳು ಇಲ್ಲ. ನಮ್ಮ ಉದ್ದೇಶ ಇಷ್ಟೆ, ನಮ್ಮ ಶಕ್ತಿ ಇದ್ದಷ್ಟು, ದೇವರು ಕೊಟ್ಟಷ್ಟು, ಸಮಾಜಕ್ಕೆ ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಕೊಡುಗೆ ನೀಡುವ ಉದ್ದೇಶ ಹೊಂದಿದ್ದೇವೆ” ಎಂದರು ಪ್ರಗತಿ ಶೆಟ್ಟಿ.

ಅದಕ್ಕೂ ಮುನ್ನ ಮಾತನಾಡಿ, ಪತಿ ರಿಷಬ್ ಶೆಟ್ಟಿಗೆ ನಾಚುತ್ತಲೇ ಹ್ಯಾಪಿ ಬರ್ತ್​ಡೇ ಹೇಳಿದ ಪ್ರಗತಿ ಶೆಟ್ಟಿ, ”ಕಾಂತಾರದಿಂದ ನಾವು ಗಳಿಸಿದ್ದು ನಿಮ್ಮ ಪ್ರೀತಿ. ಅದನ್ನು ಹೀಗೆಯೇ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಇಲ್ಲಿ ನಿಮ್ಮನ್ನೆಲ್ಲ ನೋಡಿ, ಇಷ್ಟೋಂದು ಪ್ರೀತಿ ನೋಡಿ ನಾನು ಭಾವುಕಳಾಗಿದ್ದೇನೆ” ಎಂದರು.

ರಿಷಬ್ ಶೆಟ್ಟಿ ಇಂದು (ಜುಲೈ 07) ಅದ್ಧೂರಿಯಾಗಿ ಅಭಿಮಾನಿಗಳೊಟ್ಟಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ನಂದಿ ಗ್ರೌಂಡ್ಸ್​ನಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡಿ ಅಭಿಮಾನಿಗಳೊಟ್ಟಿಗೆ ಮಾತನಾಡಿ, ಅವರೊಟ್ಟಿಗೆ ಚಿತ್ರಗಳನ್ನು ತೆಗೆಸಿಕೊಂಡು ಸಂಭ್ರಮಿಸಿದ್ದಾರೆ ರಿಷಬ್. ಈ ವೇಳೆ ಅಭಿಮಾನಿಗಳಿಗಾಗಿ ಭರ್ಜರಿ ಊಟದ ವ್ಯವಸ್ಥೆಯನ್ನು ಸಹ ರಿಷಬ್ ಹಾಗೂ ತಂಡ ಆಯೋಜಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು