AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rakshith Shetty: ಮೊದಲ ಬಾರಿ ಕೋರ್ಟ್​ ಒಳಗೆ ಕಾಲಿಟ್ಟ ರಕ್ಷಿತ್​ ಶೆಟ್ಟಿಗೆ ಇಂಥ ಅನುಭವ! ಇನ್ನೂ ಮುಗಿದಿಲ್ಲ ಕಿರಿಕ್​ ಪಾರ್ಟಿ ಕಿರಿಕ್​

ವಿಚಾರಣೆ ಸಲುವಾಗಿ ಇದೇ ಮೊದಲ ಬಾರಿಗೆ ರಕ್ಷಿತ್​ ಶೆಟ್ಟಿ ಕೋರ್ಟ್​ ಒಳಗೆ ಹೋಗಿ ಬಂದಿದ್ದಾರೆ. ಇದು ಅವರಿಗೆ ಮೊದಲ ಅನುಭವ. ಆ ಬಗ್ಗೆ ‘ಸಿಂಪಲ್​ ಸ್ಟಾರ್​’ ಪ್ರತಿಕ್ರಿಯೆ ನೀಡಿದ್ದಾರೆ.

Rakshith Shetty: ಮೊದಲ ಬಾರಿ ಕೋರ್ಟ್​ ಒಳಗೆ ಕಾಲಿಟ್ಟ ರಕ್ಷಿತ್​ ಶೆಟ್ಟಿಗೆ ಇಂಥ ಅನುಭವ! ಇನ್ನೂ ಮುಗಿದಿಲ್ಲ ಕಿರಿಕ್​ ಪಾರ್ಟಿ ಕಿರಿಕ್​
ರಕ್ಷಿತ್​ ಶೆಟ್ಟಿ
ಮದನ್​ ಕುಮಾರ್​
| Edited By: |

Updated on:Apr 13, 2021 | 3:59 PM

Share

‘ಕಿರಿಕ್​ ಪಾರ್ಟಿ’ ಸಿನಿಮಾದ ಹಾಡೊಂದರ ಕಾಪಿರೈಟ್​ ಕೇಸ್​ಗೆ ಸಂಬಂಧಿಸಿದ ಕಿರಿಕ್​ ಇನ್ನೂ ಬಗೆಹರಿದಿಲ್ಲ. ಲಹರಿ ಮ್ಯೂಸಿಕ್​ ಆಡಿಯೋ ಕಂಪನಿ ಮತ್ತು ರಕ್ಷಿತ್ ಶೆಟ್ಟಿ ಅವರ ಪರಮ್​ವಾ ಸ್ಟುಡಿಯೋ ನಡುವೆ ಇನ್ನೂ ಜಟಾಪಟಿ ಮುಂದುವರಿದಿದೆ. ಈ ಪ್ರಕರಣದ ವಿಚಾರಣೆ ಸಲುವಾಗಿ ಸೋಮವಾರ (ಏ.12) ರಕ್ಷಿತ್​ ಶೆಟ್ಟಿ ಕೋರ್ಟ್​ಗೆ ಹಾಜರಾಗಿದ್ದರು. ವಿಚಾರಣೆ ಮುಗಿಸಿ ಹೊರಬಂದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಸಿನಿಮಾ ರಿಲೀಸ್​ ಆಗುವಾಗ ಬೇಕಂತಲೇ ಈ ರೀತಿ ಮಾಡುತ್ತಾರೆ. ತುಂಬ ಸಿನಿಮಾಗಳಿಗೆ ಹೀಗೆ ಮಾಡಲಾಗಿದೆ. ಚಿತ್ರದ ಬಿಡುಗಡೆಗಿಂತ ಒಂದು ದಿನ ಮುಂಚೆ ಬಂತು ಕೇಸ್​ ಹಾಕಿ ತೊಂದರೆ ಕೊಡುತ್ತಾರೆ. ಆಗ ನಾವು ಚೆನ್ನೈಗೆ ಹೋಗಿ ಸಾಂಗ್​ ಕಟ್​ ಮಾಡಿ, 3 ದಿನ ಸಾಂಗ್​ ರಿಲೀಸ್​ ಮಾಡಿರಲಿಲ್ಲ. ನಂತರ ಕೋರ್ಟ್​ ಆರ್ಡರ್​ ಸಿಕ್ಕ ಬಳಿಕ ರಿಲೀಸ್​ ಮಾಡಿದ್ದೆವು. ನಾವು ಆ ಕೇಸ್​ ಕೂಡ ಗೆದ್ದೆವು. ಮತ್ತೆ ಮೂರು ವರ್ಷದ ನಂತರ ಇನ್ನೊಂದು ಕೇಸ್​ ಹಾಕಿದ್ದಾರೆ’ ಎಂದು ರಕ್ಷಿತ್​ ಮಾಹಿತಿ ನೀಡಿದ್ದಾರೆ.

‘ಮತ್ತೆ ಕೇಸ್​ ಹಾಕಿದ್ದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಯಾಕೆಂದರೆ, ನಾನು ಆಗ ಮನೆ ಬದಲಾಯಿಸಿದ್ದೆ. ನನ್ನ ಮೇಲೆ, ಪರಮ್​ವಾ ಸ್ಡುಡಿಯೋ ಮೇಲೆ ಹಾಗೂ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಮೇಲೆ ಕೇಸ್​ ಹಾಕಿದ್ದಾರೆ. ಅದರ ನೋಟಿಸ್​ ಹಳೇ ಮನೆಗೆ ಹೋಗಿದೆ. ಅಜನೀಶ್​ ಅವರಿಗೆ ಸೇರಬೇಕಿದ್ದ ನೋಟಿಸ್​ ಕೂಡ ನನ್ನ ಹಳೇ ಮನೆಗೆ ಹೋಗಿದೆ. ನಮಗೆ ಇದು ಗೊತ್ತಿಲ್ಲದೇ ಇರುವುದರಿಂದ ಕೋರ್ಟ್​ನಿಂದ ವಾರಂಟ್​ ಜಾರಿ ಆಗಿತ್ತು. ನಮ್ಮ ಕೈಗೆ ನೋಟಿಸ್​ ತಲುಪಬಾರದು ಎಂಬುದೇ ಅವರ ಉದ್ದೇಶ ಆಗಿತ್ತು ಎನಿಸುತ್ತದೆ‘ ಎಂದು ರಕ್ಷಿತ್​ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

‘ನಾವು ಕಾನೂನಿನ ಹೋರಾಟ ಮುಂದುವರಿಸುತ್ತೇವೆ. ಯಾವುದೇ ಹಾಡಿನ ನೋಟ್ಸ್​ ಮತ್ತು ಸಾಹಿತ್ಯವನ್ನು ನಾವು ಕಾಪಿ ಮಾಡಿಲ್ಲ. ಹಂಸಲೇಖ ಅವರು 80ರ ದಶಕದಲ್ಲಿ ಬಳಸಿದ ರಿದಂ ನಾವು ಫಾಲೋ ಮಾಡಿದ್ದೇವೆ. ಮ್ಯೂಸಿಕ್​ ಕಾಪಿರೈಟ್​ ಕಾನೂನಿನ ಪ್ರಕಾರ ಅದು ತಪ್ಪಲ್ಲ. 11 ಸೆಕೆಂಡ್​ಗಳಷ್ಟು ಕಾಪಿ ಮಾಡಿದರೂ ತಪ್ಪಲ್ಲ. ಆದರೆ ಈ ಎರಡು ಹಾಡನ್ನು ಪಕ್ಕದಲ್ಲಿ ಇಟ್ಟುಕೊಂಡು ನೋಡಿ. ಕನಿಷ್ಠ 5 ಸೆಕೆಂಡ್​ಗಳಾದರೂ ನೋಟ್ಸ್​ ಕಾಪಿ ಆಗಿದೆ ಎಂಬುದನ್ನು ತೋರಿಸಿ. ಆಗ ನಾನು ಒಪ್ಪಿಕೊಳ್ಳುತ್ತೇನೆ. ಅಹಂ ಸಲುವಾಗಿ ಇದೆಲ್ಲ ಮಾಡುತ್ತಿದ್ದಾರೆ’ ಎಂದು ರಕ್ಷಿತ್​ ಪ್ರತಿಕ್ರಿಯೆ ನೀಡಿದ್ದಾರೆ.

ವಿಚಾರಣೆ ಸಲುವಾಗಿ ಇದೇ ಮೊದಲ ಬಾರಿಗೆ ರಕ್ಷಿತ್​ ಶೆಟ್ಟಿ ಕೋರ್ಟ್​ ಒಳಗೆ ಹೋಗಿ ಬಂದಿದ್ದಾರೆ. ಇದು ಅವರಿಗೆ ಮೊದಲ ಅನುಭವ. ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಇದುವರೆಗೆ ಯಾವತ್ತೂ ಕೋರ್ಟ್​ಗೆ ಬಂದಿರಲಿಲ್ಲ. ಇದು ನನಗೆ ಒಳ್ಳೆಯ ಅನುಭವ. ವಿಚಾರಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಗೊತ್ತಾಯಿತು. ಒಂದು ವೇಳೆ ನನ್ನ ಮುಂದಿನ ಸಿನಿಮಾದಲ್ಲಿ ಕೋರ್ಟ್​ ದೃಶ್ಯಗಳನ್ನು ಬರೆಯುವ ಸಂದರ್ಭ ಬಂದರೆ ಈ ಅನುಭವ ಉಪಯೋಗಕ್ಕೆ ಬರಲಿದೆ. ಇದುವರೆಗೂ ಸಿನಿಮಾಗಳಲ್ಲಿ ದೊಡ್ಡ ದೊಡ್ಡ ಕೋರ್ಟ್​ ನೋಡಿದ್ದೆ ಅಷ್ಟೇ’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: Kirik Party: ರಕ್ಷಿತ್​ ಶೆಟ್ಟಿಯ ಕಿರಿಕ್ ಪಾರ್ಟಿಗೆ ಸಂಕಷ್ಟ; ಚಿತ್ರತಂಡದ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

Published On - 8:38 am, Tue, 13 April 21

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು