AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rakshith Shetty: ಮೊದಲ ಬಾರಿ ಕೋರ್ಟ್​ ಒಳಗೆ ಕಾಲಿಟ್ಟ ರಕ್ಷಿತ್​ ಶೆಟ್ಟಿಗೆ ಇಂಥ ಅನುಭವ! ಇನ್ನೂ ಮುಗಿದಿಲ್ಲ ಕಿರಿಕ್​ ಪಾರ್ಟಿ ಕಿರಿಕ್​

ವಿಚಾರಣೆ ಸಲುವಾಗಿ ಇದೇ ಮೊದಲ ಬಾರಿಗೆ ರಕ್ಷಿತ್​ ಶೆಟ್ಟಿ ಕೋರ್ಟ್​ ಒಳಗೆ ಹೋಗಿ ಬಂದಿದ್ದಾರೆ. ಇದು ಅವರಿಗೆ ಮೊದಲ ಅನುಭವ. ಆ ಬಗ್ಗೆ ‘ಸಿಂಪಲ್​ ಸ್ಟಾರ್​’ ಪ್ರತಿಕ್ರಿಯೆ ನೀಡಿದ್ದಾರೆ.

Rakshith Shetty: ಮೊದಲ ಬಾರಿ ಕೋರ್ಟ್​ ಒಳಗೆ ಕಾಲಿಟ್ಟ ರಕ್ಷಿತ್​ ಶೆಟ್ಟಿಗೆ ಇಂಥ ಅನುಭವ! ಇನ್ನೂ ಮುಗಿದಿಲ್ಲ ಕಿರಿಕ್​ ಪಾರ್ಟಿ ಕಿರಿಕ್​
ರಕ್ಷಿತ್​ ಶೆಟ್ಟಿ
ಮದನ್​ ಕುಮಾರ್​
| Updated By: Digi Tech Desk|

Updated on:Apr 13, 2021 | 3:59 PM

Share

‘ಕಿರಿಕ್​ ಪಾರ್ಟಿ’ ಸಿನಿಮಾದ ಹಾಡೊಂದರ ಕಾಪಿರೈಟ್​ ಕೇಸ್​ಗೆ ಸಂಬಂಧಿಸಿದ ಕಿರಿಕ್​ ಇನ್ನೂ ಬಗೆಹರಿದಿಲ್ಲ. ಲಹರಿ ಮ್ಯೂಸಿಕ್​ ಆಡಿಯೋ ಕಂಪನಿ ಮತ್ತು ರಕ್ಷಿತ್ ಶೆಟ್ಟಿ ಅವರ ಪರಮ್​ವಾ ಸ್ಟುಡಿಯೋ ನಡುವೆ ಇನ್ನೂ ಜಟಾಪಟಿ ಮುಂದುವರಿದಿದೆ. ಈ ಪ್ರಕರಣದ ವಿಚಾರಣೆ ಸಲುವಾಗಿ ಸೋಮವಾರ (ಏ.12) ರಕ್ಷಿತ್​ ಶೆಟ್ಟಿ ಕೋರ್ಟ್​ಗೆ ಹಾಜರಾಗಿದ್ದರು. ವಿಚಾರಣೆ ಮುಗಿಸಿ ಹೊರಬಂದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಸಿನಿಮಾ ರಿಲೀಸ್​ ಆಗುವಾಗ ಬೇಕಂತಲೇ ಈ ರೀತಿ ಮಾಡುತ್ತಾರೆ. ತುಂಬ ಸಿನಿಮಾಗಳಿಗೆ ಹೀಗೆ ಮಾಡಲಾಗಿದೆ. ಚಿತ್ರದ ಬಿಡುಗಡೆಗಿಂತ ಒಂದು ದಿನ ಮುಂಚೆ ಬಂತು ಕೇಸ್​ ಹಾಕಿ ತೊಂದರೆ ಕೊಡುತ್ತಾರೆ. ಆಗ ನಾವು ಚೆನ್ನೈಗೆ ಹೋಗಿ ಸಾಂಗ್​ ಕಟ್​ ಮಾಡಿ, 3 ದಿನ ಸಾಂಗ್​ ರಿಲೀಸ್​ ಮಾಡಿರಲಿಲ್ಲ. ನಂತರ ಕೋರ್ಟ್​ ಆರ್ಡರ್​ ಸಿಕ್ಕ ಬಳಿಕ ರಿಲೀಸ್​ ಮಾಡಿದ್ದೆವು. ನಾವು ಆ ಕೇಸ್​ ಕೂಡ ಗೆದ್ದೆವು. ಮತ್ತೆ ಮೂರು ವರ್ಷದ ನಂತರ ಇನ್ನೊಂದು ಕೇಸ್​ ಹಾಕಿದ್ದಾರೆ’ ಎಂದು ರಕ್ಷಿತ್​ ಮಾಹಿತಿ ನೀಡಿದ್ದಾರೆ.

‘ಮತ್ತೆ ಕೇಸ್​ ಹಾಕಿದ್ದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಯಾಕೆಂದರೆ, ನಾನು ಆಗ ಮನೆ ಬದಲಾಯಿಸಿದ್ದೆ. ನನ್ನ ಮೇಲೆ, ಪರಮ್​ವಾ ಸ್ಡುಡಿಯೋ ಮೇಲೆ ಹಾಗೂ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಮೇಲೆ ಕೇಸ್​ ಹಾಕಿದ್ದಾರೆ. ಅದರ ನೋಟಿಸ್​ ಹಳೇ ಮನೆಗೆ ಹೋಗಿದೆ. ಅಜನೀಶ್​ ಅವರಿಗೆ ಸೇರಬೇಕಿದ್ದ ನೋಟಿಸ್​ ಕೂಡ ನನ್ನ ಹಳೇ ಮನೆಗೆ ಹೋಗಿದೆ. ನಮಗೆ ಇದು ಗೊತ್ತಿಲ್ಲದೇ ಇರುವುದರಿಂದ ಕೋರ್ಟ್​ನಿಂದ ವಾರಂಟ್​ ಜಾರಿ ಆಗಿತ್ತು. ನಮ್ಮ ಕೈಗೆ ನೋಟಿಸ್​ ತಲುಪಬಾರದು ಎಂಬುದೇ ಅವರ ಉದ್ದೇಶ ಆಗಿತ್ತು ಎನಿಸುತ್ತದೆ‘ ಎಂದು ರಕ್ಷಿತ್​ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

‘ನಾವು ಕಾನೂನಿನ ಹೋರಾಟ ಮುಂದುವರಿಸುತ್ತೇವೆ. ಯಾವುದೇ ಹಾಡಿನ ನೋಟ್ಸ್​ ಮತ್ತು ಸಾಹಿತ್ಯವನ್ನು ನಾವು ಕಾಪಿ ಮಾಡಿಲ್ಲ. ಹಂಸಲೇಖ ಅವರು 80ರ ದಶಕದಲ್ಲಿ ಬಳಸಿದ ರಿದಂ ನಾವು ಫಾಲೋ ಮಾಡಿದ್ದೇವೆ. ಮ್ಯೂಸಿಕ್​ ಕಾಪಿರೈಟ್​ ಕಾನೂನಿನ ಪ್ರಕಾರ ಅದು ತಪ್ಪಲ್ಲ. 11 ಸೆಕೆಂಡ್​ಗಳಷ್ಟು ಕಾಪಿ ಮಾಡಿದರೂ ತಪ್ಪಲ್ಲ. ಆದರೆ ಈ ಎರಡು ಹಾಡನ್ನು ಪಕ್ಕದಲ್ಲಿ ಇಟ್ಟುಕೊಂಡು ನೋಡಿ. ಕನಿಷ್ಠ 5 ಸೆಕೆಂಡ್​ಗಳಾದರೂ ನೋಟ್ಸ್​ ಕಾಪಿ ಆಗಿದೆ ಎಂಬುದನ್ನು ತೋರಿಸಿ. ಆಗ ನಾನು ಒಪ್ಪಿಕೊಳ್ಳುತ್ತೇನೆ. ಅಹಂ ಸಲುವಾಗಿ ಇದೆಲ್ಲ ಮಾಡುತ್ತಿದ್ದಾರೆ’ ಎಂದು ರಕ್ಷಿತ್​ ಪ್ರತಿಕ್ರಿಯೆ ನೀಡಿದ್ದಾರೆ.

ವಿಚಾರಣೆ ಸಲುವಾಗಿ ಇದೇ ಮೊದಲ ಬಾರಿಗೆ ರಕ್ಷಿತ್​ ಶೆಟ್ಟಿ ಕೋರ್ಟ್​ ಒಳಗೆ ಹೋಗಿ ಬಂದಿದ್ದಾರೆ. ಇದು ಅವರಿಗೆ ಮೊದಲ ಅನುಭವ. ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಇದುವರೆಗೆ ಯಾವತ್ತೂ ಕೋರ್ಟ್​ಗೆ ಬಂದಿರಲಿಲ್ಲ. ಇದು ನನಗೆ ಒಳ್ಳೆಯ ಅನುಭವ. ವಿಚಾರಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಗೊತ್ತಾಯಿತು. ಒಂದು ವೇಳೆ ನನ್ನ ಮುಂದಿನ ಸಿನಿಮಾದಲ್ಲಿ ಕೋರ್ಟ್​ ದೃಶ್ಯಗಳನ್ನು ಬರೆಯುವ ಸಂದರ್ಭ ಬಂದರೆ ಈ ಅನುಭವ ಉಪಯೋಗಕ್ಕೆ ಬರಲಿದೆ. ಇದುವರೆಗೂ ಸಿನಿಮಾಗಳಲ್ಲಿ ದೊಡ್ಡ ದೊಡ್ಡ ಕೋರ್ಟ್​ ನೋಡಿದ್ದೆ ಅಷ್ಟೇ’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: Kirik Party: ರಕ್ಷಿತ್​ ಶೆಟ್ಟಿಯ ಕಿರಿಕ್ ಪಾರ್ಟಿಗೆ ಸಂಕಷ್ಟ; ಚಿತ್ರತಂಡದ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

Published On - 8:38 am, Tue, 13 April 21

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..