AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ಜೀವ ನಿಮಗೆ ಅರ್ಪಣೆ’: ಡಿಕೆ ಶಿವಕುಮಾರ್ ಸ್ನೇಹವನ್ನು ಕೊಂಡಾಡಿದ ಕ್ರೇಜಿಸ್ಟಾರ್

DK Shivakumar-V Ravichandran: ರವಿಚಂದ್ರನ್ ಅವರಿಗೆ ಚಿತ್ರರಂಗದ ಜೊತೆಗೆ ರಾಜಕೀಯ ರಂಗದ ಹಲವು ಪ್ರಮುಖರ ಆಪ್ತ ಪರಿಚಯವಿದೆ. ಆದರೆ ರವಿಚಂದ್ರನ್ ಅವರು ಎಂದಿಗೂ ರಾಜಕೀಯದ ಅಖಾಡದತ್ತ ಮುಖ ಸಹ ಹಾಕಿದವರಲ್ಲ. ಅವರ ಗೆಳೆತನವನ್ನು ಬಳಸಿಕೊಂಡವರೂ ಅಲ್ಲ. ಆದರೆ ಇದೀಗ ಕಾರ್ಯಕ್ರಮವೊಂದರಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಮನಸಾರೆ ಕೊಂಡಾಡಿರುವ ರವಿಚಂದ್ರನ್, ‘ಈ ಜೀವ ನಿಮಗೆ ಅರ್ಪಣೆ’ ಎಂದು ಭಾವುಕರಾಗಿ ಹೇಳಿದ್ದಾರೆ.

‘ಈ ಜೀವ ನಿಮಗೆ ಅರ್ಪಣೆ’: ಡಿಕೆ ಶಿವಕುಮಾರ್ ಸ್ನೇಹವನ್ನು ಕೊಂಡಾಡಿದ ಕ್ರೇಜಿಸ್ಟಾರ್
Dk Shivakumar Ravichandran
ಮಂಜುನಾಥ ಸಿ.
|

Updated on: May 07, 2026 | 7:59 PM

Share

ನಟ ರವಿಚಂದ್ರನ್ (Ravichandran) ದಶಕಗಳಿಂದಲೂ ಚಿತ್ರರಂಗದಲ್ಲಿರುವವರು. ಅವರ ತಂದೆ ವೀರಾಸ್ವಾಮಿ ಖ್ಯಾತ ನಿರ್ಮಾಪಕರು ಮತ್ತು ಉದ್ಯಮಿಗಳು ಸಹ ಆಗಿದ್ದವರು. ರವಿಚಂದ್ರನ್ ಅವರಿಗೆ ಚಿತ್ರರಂಗದ ಜೊತೆಗೆ ರಾಜಕೀಯ ರಂಗದ ಹಲವು ಪ್ರಮುಖರ ಆಪ್ತ ಪರಿಚಯವಿದೆ. ಆದರೆ ರವಿಚಂದ್ರನ್ ಅವರು ಎಂದಿಗೂ ರಾಜಕೀಯದ ಅಖಾಡದತ್ತ ಮುಖ ಸಹ ಹಾಕಿದವರಲ್ಲ. ಅವರ ಗೆಳೆತನವನ್ನು ಬಳಸಿಕೊಂಡವರೂ ಅಲ್ಲ. ಆದರೆ ಇದೀಗ ಕಾರ್ಯಕ್ರಮವೊಂದರಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಮನಸಾರೆ ಕೊಂಡಾಡಿರುವ ರವಿಚಂದ್ರನ್, ‘ಈ ಜೀವ ನಿಮಗೆ ಅರ್ಪಣೆ’ ಎಂದು ಭಾವುಕರಾಗಿ ಹೇಳಿದ್ದಾರೆ.

ಕಳೆದ ಕೆಲ ದಿನಗಳಿಂದಲೂ ನಡೆಯುತ್ತಿರುವ ಮದ್ದೂರು ಉತ್ಸವ 2026 ಕಾರ್ಯಕ್ರಮದಲ್ಲಿ ನಿನ್ನೆ (ಮೇ 06) ಭಾಗಿ ಆಗಿದ್ದ ನಟ ರವಿಚಂದ್ರನ್, ಕೆಲ ಹಳೆಯ ವಿಷಯಗಳನ್ನು ನೆನಪು ಮಾಡಿಕೊಂಡರು. ಜೊತೆಗೆ ಅದೇ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿ ಆಗಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬಗ್ಗೆಯೂ ಮಾತನಾಡಿದರು. ‘ಮನುಷ್ಯ ಅಂದ ಮೇಲೆ ಕಟ್ಟ ಗಳಿಗೆಗಳು ಕೆಲವೊಮ್ಮೆ ಬಂದು ಬಿಡುತ್ತವೆ. ಅಂಥಹಾ ಸಮಯ ಬಂದಾಗ, ಯಾರು ನಮ್ಮ ಕೈ ಹಿಡಿಯುತ್ತಾರೆ ಎಂದು ನಾವೂ ಸಹ ಎದುರು ನೋಡುತ್ತಿರುತ್ತೇವೆ. ಆದರೆ ನನಗೆ (ರವಿಚಂದ್ರನ್) ಕೈ ಚಾಚಿ ಅಭ್ಯಾಸವೇ ಇಲ್ಲ. ಆದರೆ ನಾನು ಕೈ ಚಾಚುವ ಮುಂಚೆಯೇ ನನ್ನ ಕೈ ಹಿಡಿದವರು ಡಿಕೆ ಶಿವಕುಮಾರ್ ಅವರು’ ಎಂದಿದ್ದಾರೆ ಕ್ರೇಜಿ ಸ್ಟಾರ್.

‘ನಿಮ್ಮನ್ನು ಈ ಜೀವನದಲ್ಲಿ ಮರೆಯೋದಿಲ್ಲ ಸರ್, ಈ ಜೀವ ನಿಮಗೇ ಅರ್ಪಣೆ ಸರ್’ ಎಂದು ವೇದಿಕೆ ಮುಂದೆ ಆಸೀನರಾಗಿದ್ದ ಡಿಕೆ ಶಿವಕುಮಾರ್ ಅವರನ್ನು ಉದ್ದೇಶಿಸಿ ಹೇಳಿದ ರವಿಚಂದ್ರನ್, ‘ಚಿತ್ರರಂಗಕ್ಕೆ ಬಂದು 40 ವರ್ಷವಾಯ್ತು. ಆದರೆ ನಾನು ಕೈಚಾಚುವ ಮುಂಚೆ, ನನ್ನ ಹೆಗಲ ಮೇಲೆ ಕೈಹಾಕಿ ಡಿಕೆ ಶಿವಕುಮಾರ್ ಅವರು ಕೇಳಿದ್ದು ಒಂದೇ ಮಾತು, ‘ನಾನು ಏನು ಮಾಡಬೇಕು ಏಳಪ್ಪ’ ಎಂದಿದ್ದರು’ ಎಂದು ರವಿಚಂದ್ರನ್ ಹೇಳಿದರು.

ಇದನ್ನೂ ಓದಿ:ಜೂ ಎನ್​​ಟಿಆರ್-ಪ್ರಶಾಂತ್ ನೀಲ್ ಸಿನಿಮಾಕ್ಕೆ ಮತ್ತೊಬ್ಬ ಕನ್ನಡದ ನಟ ಸೇರ್ಪಡೆ

‘ನಾನು ಬಿದ್ದಾಗ ಹೆದರಲಿಲ್ಲ, ಜನ ಕೈಬಿಟ್ಟಿರಲಿಲ್ಲ. ‘ರಾಮಾಚಾರಿ’ಯಲ್ಲಿ ಪಂಚೆ ಹಾಕಿ ಬಂದಾಗಲೂ ಜನ ನನ್ನ ಕೈಬಿಡಲಿಲ್ಲ. ಈಗ ನೀವು ನನ್ನ ಕೈಹಿಡಿದಿದ್ದೀರ ನನಗೆ ಅಷ್ಟೇ ಸಾಕು. ನಾವು ಒಟ್ಟಿಗೆ ಶಾಲೆ ಕಲಿತವರು, 40-50 ವರ್ಷಗಳ ಸ್ನೇಹ ನಮ್ಮದು ಆದರೆ ಎಂದಿಗೂ ಆ ಸ್ನೇಹವನ್ನು ನಾನು ಬಳಸಿಕೊಂಡಿಲ್ಲ. ಆದರೆ ಇತ್ತೀಚೆಗೆ ಅವರು ನನಗೆ ಮಾಡಿದ ಉಪಕಾರವನ್ನು ನನ್ನ ಜೀವನದಲ್ಲಿ ಮರೆಯುವುದಿಲ್ಲ’ ಎಂದರು ರವಿಚಂದ್ರನ್.

‘ಅದೇ ರೀತಿ, ಮದ್ಧೂರು ಶಾಸಕ ಉದಯ್ ಸಹ ನನಗೆ ಸಹಾಯ ಮಾಡಿದ್ದಾರೆ. ಅದೂ ನನಗೆ ಗೊತ್ತಿಲ್ಲದೆ. ಅವರು ನನಗೆ ಸಹಾಯ ಮಾಡಿರುವ ವಿಷಯ ನನಗೆ ಒಂದೆರಡು ವರ್ಷ ಆದ ಮೇಲೆ ಗೊತ್ತಾಯ್ತು. ನನ್ನ ಸ್ನೇಹಿತರ ಮೂಲಕ ಅವರು ನನಗೆ ಸಹಾಯ ಮಾಡಿದ್ದಾರೆ. ನನ್ನ ಜೀವ ಇರುವವರೆಗೆ ಪ್ರೀತಿಗೆ, ಸ್ನೇಹಕ್ಕೆ ಮಾತ್ರವೇ ನಾನು ತಲೆ ಬಾಗೋದು. ಇಲ್ಲಿಗೆ ಬಂದಿದ್ದು ಸಹ ಉದಯ್ ಅವರಿಗಾಗಿ ಹಾಗೂ ಡಿಕೆ ಶಿವಕುಮಾರ್ ಅವರಿಗಾಗಿ. ಡಿಕೆ ಶಿವಕುಮಾರ್ ಎಲ್ಲಿರುತ್ತಾರೋ ಅಲ್ಲಿ ರವಿಚಂದ್ರನ್ ಇರುತ್ತಾರೆ’ ಎಂದರು ರವಿಚಂದ್ರನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ