AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಬ್ಯುಲೆನ್ಸ್ ಸೇವೆಗೆ ಚುರುಕು, ಬೆಂಗಳೂರಿನ ಈ ಟ್ರಾಫಿಕ್​​ನಲ್ಲೂ 13 ನಿಮಿಷಕ್ಕೆ ಸೇವೆ ಕೊಡುವ ಗುರಿ..!

ಹೊಸದಾಗಿ ಆರೋಗ್ಯ ಸಚಿವರಾಗಿರುವ ಯುಟಿ ಖಾದರ್ ಅವರು ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.. ಟ್ರಾಫಿಕ್ ಸಿಟಿ ಎಂಬ ಹಣೆಪಟ್ಟಿ ಕಟ್ಟಿಕೊಂಡ ಐಟಿ ಸಿಟಿ‌ಯಲ್ಲಿ ಆಂಬ್ಯುಲೆನ್ಸ್ ಸೇವೆಯನ್ನ 13 ನಿಮಿಷಕ್ಕೆ ತರುವ ಆಲೋಚನೆಯಲ್ಲಿದ್ದಾರೆ. ಆಲೋಚನೆ ಏನೋ ಸರಿ ಇದೆ, ಆದ್ರೆ ಬೆಂಗಳೂರು ಅಂತಹ ಟ್ರಾಫಿಕ್ ನಗರದಲ್ಲಿ ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ. ಸಾಧ್ಯಾಸಾಧ್ಯತೆಗಳೇನು? ಇಲಾಖೆ ಬಳಿ ಇರುವ ಆಂಬ್ಯುಲೆನ್ಸ್ ಗಳೆಷ್ಟು ಎಂಬ ವಿಸ್ತೃತ ವರದಿ ಇಲ್ಲಿದೆ.

ಆಂಬ್ಯುಲೆನ್ಸ್ ಸೇವೆಗೆ ಚುರುಕು, ಬೆಂಗಳೂರಿನ ಈ ಟ್ರಾಫಿಕ್​​ನಲ್ಲೂ 13 ನಿಮಿಷಕ್ಕೆ ಸೇವೆ ಕೊಡುವ ಗುರಿ..!
Ambulance
Vinay Kashappanavar
| Edited By: |

Updated on: Jun 27, 2026 | 10:43 PM

Share

ಮುಖ್ಯಾಂಶಗಳು

  • ಆಂಬ್ಯುಲೆನ್ಸ್ ಸೇವೆಗೆ ಚುರುಕು ಮುಟ್ಟಿಸುವ ಪ್ರಯತ್ನ
  • ಬೆಂಗಳೂರಿನ ಈ ಟ್ರಾಫಿಕ್​​ನಲ್ಲೂ 13 ನಿಮಿಷಕ್ಕೆ ಸೇವೆ ಕೊಡುವ ಗುರಿ
  • ಟ್ರಾಫಿಕ್ ನಗರದಲ್ಲಿ ಇದು ಎಷ್ಟರ ಮಟ್ಟಿಗೆ ಸಕ್ಸಸ್

ಬೆಂಗಳೂರು, (ಜೂನ್ 27): ರೋಗಿಗಳ ಪಾಲಿನ ಸಂಜೀವಿನಿ ಎನ್ನಿಸಿಕೊಂಡಿರುವ ಆಂಬ್ಯುಲೆನ್ಸ್  (Ambulance)ಸೇವೆ ಸದ್ಯ ಹಲವು ಆರೋಪಗಳನ್ನು ಎದುರಿಸುತ್ತಿದೆ. ಸಕಾಲದಲ್ಲಿ ಆಂಬ್ಯುಲೆನ್ಸ್ ಸೇವೆ ಸಿಗಲ್ಲ, ಹಣ ಪಡಿತಾರೆ ಜೊತೆಗೆ ಸಿಕ್ಕಾಪಟ್ಟೆ ಲೇಟ್ ಬರುತ್ತೆ ಎಂಬಿತ್ಯಾದಿ ಆರೋಪಗಳಿದೆ.‌ ಸದ್ಯ ಟ್ರಾಫಿಕ್ ನಗರಿ ಎನ್ನಿಸಿಕೊಂಡ ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್ ಸಕಾಲದಲ್ಲಿ ಆಸ್ಪತ್ರೆ ತಲುಪಲು ಸಾಧ್ಯವಾಗ್ತಿಲ್ಲ. ಉದಾಹರಣೆಗೆ ಸೈರನ್ ಹಾಕಿದ್ರೂ ವಿಕ್ಟೋರಿಯಾ ಆಸ್ಪತ್ರೆ ತಲುಪಲು ಕೆಲವೊಮ್ಮೆ 50 ನಿಮಿಷ ಬೇಕಾಗುತ್ತದೆ. 10 ಕಿಲೋಮೀಟರ್ ದೂರಕ್ಕೆ 2 ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಳ್ತಿದೆ.‌ ಸ್ಟ್ಯಾಂಡರ್ಡ್ ಟೈಮಿಂಗ್ ಪ್ರಕಾರ ಒಂದು ಆಂಬ್ಯುಲೆನ್ಸ್ 8 ಕಿಲೋಮೀಟರ್ ಅನ್ನು 20 ನಿಮಿಷಕ್ಕೆ ತಲುಪಬೇಕು. ಆದರೆ ಬೆಂಗಳೂರಿನಲ್ಲಿ ಇದು ಡಬ್ಬಲ್ ಆಗ್ತಿದೆ. ಈ ವಿಚಾರವನ್ನು ಖುದ್ದು ಆರೋಗ್ಯ ಸಚಿವರೇ ಒಪ್ಪಿಕೊಂಡಿದ್ದಾರೆ. ಈ ಎಲ್ಲಾ ಆರೋಪಗಳಿಗೆ ಬ್ರೇಕ್ ಹಾಕಿ, ಕೇವಲ 13 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಸೇವೆ ನೀಡುವ ಗುರಿಯನ್ನು ನೂತನ ಆರೋಗ್ಯ ಸಚಿವ ಯು.ಟಿ.ಖಾದರ್ ಹೊಂದಿದ್ದಾರೆ.

ಆಂಬ್ಯುಲೆನ್ಸ್ ಪ್ರಾಯೋಗಿಕ ರೇಡಿಯಸ್ ಹೇಗಿದೆ?

ರಾಜ್ಯದಲ್ಲಿ ಒಟ್ಟು 715 ಆಂಬ್ಯುಲೆನ್ಸ್ ಗಳಿವೆ. ಈ ಪೈಕಿ‌ 530 ಮಾತ್ರ ಲಭ್ಯವಿದೆ. ಇನ್ನುಳಿದ  ಶೇ.25  ಆಂಬ್ಯುಲೆನ್ಸ್ ಗಳು ರಿಪೇರಿ, ಔಟ್ ಆಫ್ ಸರ್ವೀಸ್ ಇದೆ. ಇನ್ನು ಆಂಬ್ಯುಲೆನ್ಸ್ ಪ್ರಾಯೋಗಿಕ ರೇಡಿಯಸ್ ಹೇಗಿದೆ ಅಂತ ನೋಡುವುದಾದರೆ, ಸ್ಟ್ಯಾಂಡರ್ಡ್ ‌8 ಕಿ.ಮೀ 20 ನಿಮಿಷ, ಬೆಂಗಳೂರು ಸರಾಸರಿ 5-7 ಕಿ.ಮಿ 15 ನಿಮಿಷ, ಟ್ರಾಫಿಕ್ ಪೀಕ್ ಹವರ್ 2-3 ಕಿ.ಮೀ 30-50 ನಿಮಿಷ, ಗ್ರೀನ್ ಕಾರಿಡಾರ್‌ 14 ಕಿ.ಮೀ 13 ನಿಮಿಷ.

13 ನಿಮಿಷಗಳಿಗೆ ತರುವುದಕ್ಕೆ ಅನೇಕ ಸವಾಲುಗಳು

ಆಂಬ್ಯುಲೆನ್ಸ್ 13 ನಿಮಿಷಗಳಿಗೆ ತರುವುದಕ್ಕೆ ಅನೇಕ ಸವಾಲುಗಳಿವೆ. ಉದಾಹರಣೆಗೆ 19 ಕಿಲೋಮೀಟರ್ ಗೆ ಪೀಕ್ ಹವರ್ ನಲ್ಲಿ ಗಂಟೆಗಟ್ಟಲೆ ಬೇಕಾಗುತ್ತದೆ. ಆಂಬ್ಯುಲೆನ್ಸ್ ಕೊರತೆ ಸಮಸ್ಯೆ ಹೆಚ್ವಿಸಿದರೆ, ಪ್ರತಿ ಬಾರಿ ಗ್ರೀನ್ ಕಾರಿಡಾರ್ ಸಾಧ್ಯವಿಲ್ಲ.

ಒಟ್ನಲ್ಲಿ ಸಚಿವರ 13 ನಿಮಿಷದ ಗುರಿ ಸರಿಯೇ. ಆದರೆ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದೇ, ಕೇವಲ ಆಂಬ್ಯುಲೆನ್ಸ್ ಹೆಚ್ಚಿಸಿದರೆ ಸಾಲದು. ಗ್ರೀನ್ ಕಾರಿಡಾರ್, ಸಾರ್ವಜನಿಕರ ಸಹಕಾರ, ಸಿಗ್ನಲ್ ಮ್ಯಾನೇಜ್ಮೆಂಟ್ ಎಲ್ಲವೂ ಒಟ್ಟಿಗೆ ಸೇರಿದರೆ ಗುರಿ ಮುಟ್ಟಲು ಸಾಧ್ಯವಿದರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ