AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾವೈಕ್ಯತೆಗೆ ಸಾಕ್ಷಿಯಾದ ಬಾಗಲಕೋಟೆ: ಮೊಹರಂಗೆ ಮೆರಗು ನೀಡಿದ ಹುಲಿಕುಣಿತ, ಡೊಳ್ಳು ಕುಣಿತ

ಬಾಗಲಕೋಟೆಯಲ್ಲಿ ಮೊಹರಂ ಹಬ್ಬವು ಧರ್ಮ-ಜಾತಿ ಮೀರಿದ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಹಿಂದೂ-ಮುಸ್ಲಿಂ ಬಾಂಧವರು ಒಗ್ಗೂಡಿ ಅಣ್ಣ-ತಮ್ಮಂದಿರಂತೆ ಸಂಭ್ರಮದಿಂದ ಆಚರಿಸಿದರು. ವಲ್ಲಭಬಾಯಿ ವೃತ್ತದಲ್ಲಿ 25-30 ಅಡಿ ತಾಝಿಯಾಗಳು, ಹುಲಿವೇಷ, ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ನಡೆಯಿತು. ಅಲಾವಿ ದೇವರುಗಳ ಸಮಾಗಮವು ಈ ಹಬ್ಬದ ವಿಶೇಷ. ಇದು ಸಹೋದರತ್ವ ಮತ್ತು ಸಾಂಸ್ಕೃತಿಕ ಸೌಹಾರ್ದಕ್ಕೆ ಮಾದರಿಯಾಗಿದೆ.

ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Jun 26, 2026 | 10:54 PM

Share
ನಾಡಿನಲ್ಲಿ ಹಲವು ಹಬ್ಬಗಳು ಬರುತ್ತವೆ. ಆದರೆ ಮೊಹರಂ ಎರಡು ಧರ್ಮಗಳ ಬಾಂಧವ್ಯ ಬೆಸೆಯುವ ಅಪರೂಪದ ಹಬ್ಬ. ಬಾಗಲಕೋಟೆಯಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಅಣ್ಣ-ತಮ್ಮಂದಿರಂತೆ ಒಟ್ಟಾಗಿ ಸೇರಿ ಈ ಮೊಹರಂ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ.

ನಾಡಿನಲ್ಲಿ ಹಲವು ಹಬ್ಬಗಳು ಬರುತ್ತವೆ. ಆದರೆ ಮೊಹರಂ ಎರಡು ಧರ್ಮಗಳ ಬಾಂಧವ್ಯ ಬೆಸೆಯುವ ಅಪರೂಪದ ಹಬ್ಬ. ಬಾಗಲಕೋಟೆಯಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಅಣ್ಣ-ತಮ್ಮಂದಿರಂತೆ ಒಟ್ಟಾಗಿ ಸೇರಿ ಈ ಮೊಹರಂ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ.

1 / 6
ನಗರದ ವಲ್ಲಭಬಾಯಿ ವೃತ್ತದಲ್ಲಿ ಸಹಸ್ರಾರು ಜನರ ಸಮ್ಮುಖದಲ್ಲಿ ಹಬ್ಬ ಜರುಗಿತು. ಅಲಾವಿ ಪಂಜಾ ದೇವರುಗಳ ಭವ್ಯ ಮೆರವಣಿಗೆಯಲ್ಲಿ 25-30 ಅಡಿ ಎತ್ತರದ ಬಣ್ಣಬಣ್ಣದ ತಾಝಿಯಾಗಳನ್ನು ಯುವಕರು ತೂಗಿಸುತ್ತಾ ಸಾಗಿದರು. ತಮಟೆ ಹಾಗೂ ಡೊಳ್ಳು ವಾದ್ಯಗಳ ನಾದ ಮೆರವಣಿಗೆಗೆ ಕಳೆಕಟ್ಟಿತು.

ನಗರದ ವಲ್ಲಭಬಾಯಿ ವೃತ್ತದಲ್ಲಿ ಸಹಸ್ರಾರು ಜನರ ಸಮ್ಮುಖದಲ್ಲಿ ಹಬ್ಬ ಜರುಗಿತು. ಅಲಾವಿ ಪಂಜಾ ದೇವರುಗಳ ಭವ್ಯ ಮೆರವಣಿಗೆಯಲ್ಲಿ 25-30 ಅಡಿ ಎತ್ತರದ ಬಣ್ಣಬಣ್ಣದ ತಾಝಿಯಾಗಳನ್ನು ಯುವಕರು ತೂಗಿಸುತ್ತಾ ಸಾಗಿದರು. ತಮಟೆ ಹಾಗೂ ಡೊಳ್ಳು ವಾದ್ಯಗಳ ನಾದ ಮೆರವಣಿಗೆಗೆ ಕಳೆಕಟ್ಟಿತು.

2 / 6
ಹರಕೆ ತೀರಿಸಲು ಭಕ್ತರು ಹುಲಿವೇಷಧಾರಿ ನೃತ್ಯ ಸೇವೆ ನಡೆಸಿದರು. ದೇಹಕ್ಕೆ ಹಳದಿ-ಕಪ್ಪು ಬಣ್ಣ ಬಳಿದುಕೊಂಡು  ವೇಷಧಾರಿಗಳು ಕುಣಿದು ಎಲ್ಲರ ಗಮನ ಸೆಳೆದರು. ಎರಡು ಸಮುದಾಯದ ಜನರು ಅಲಾವಿ ದೇವರಿಗೆ ಸಕ್ಕರೆ ನೈವೇದ್ಯ ಅರ್ಪಿಸಿ, ದೇವರ ಕೃಪೆಗೆ ಪಾತ್ರರಾದರು.

ಹರಕೆ ತೀರಿಸಲು ಭಕ್ತರು ಹುಲಿವೇಷಧಾರಿ ನೃತ್ಯ ಸೇವೆ ನಡೆಸಿದರು. ದೇಹಕ್ಕೆ ಹಳದಿ-ಕಪ್ಪು ಬಣ್ಣ ಬಳಿದುಕೊಂಡು ವೇಷಧಾರಿಗಳು ಕುಣಿದು ಎಲ್ಲರ ಗಮನ ಸೆಳೆದರು. ಎರಡು ಸಮುದಾಯದ ಜನರು ಅಲಾವಿ ದೇವರಿಗೆ ಸಕ್ಕರೆ ನೈವೇದ್ಯ ಅರ್ಪಿಸಿ, ದೇವರ ಕೃಪೆಗೆ ಪಾತ್ರರಾದರು.

3 / 6
ವಿವಿಧ ಓಣಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲಾವಿ ದೇವರುಗಳು ವಲ್ಲಭಬಾಯಿ ವೃತ್ತದಲ್ಲಿ ಒಂದಾಗಿ ಸಮಾಗಮಗೊಂಡವು. ಈ ಅಪರೂಪದ ದೃಶ್ಯವನ್ನು ಸಾರ್ವಜನಿಕರು ತಮ್ಮ ಮನೆಗಳ ಬಾಲ್ಕನಿ ಹಾಗೂ ಟೆರೇಸ್ ಮೇಲೆ ನಿಂತು ವೀಕ್ಷಿಸಿದರು. ಇತ್ತ ಗ್ರಾಮೀಣ ಭಾಗದಲ್ಲೂ ಮೊಹರಂ ಅದ್ದೂರಿಯಾಗಿ ನೆರವೇರಿತು.

ವಿವಿಧ ಓಣಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲಾವಿ ದೇವರುಗಳು ವಲ್ಲಭಬಾಯಿ ವೃತ್ತದಲ್ಲಿ ಒಂದಾಗಿ ಸಮಾಗಮಗೊಂಡವು. ಈ ಅಪರೂಪದ ದೃಶ್ಯವನ್ನು ಸಾರ್ವಜನಿಕರು ತಮ್ಮ ಮನೆಗಳ ಬಾಲ್ಕನಿ ಹಾಗೂ ಟೆರೇಸ್ ಮೇಲೆ ನಿಂತು ವೀಕ್ಷಿಸಿದರು. ಇತ್ತ ಗ್ರಾಮೀಣ ಭಾಗದಲ್ಲೂ ಮೊಹರಂ ಅದ್ದೂರಿಯಾಗಿ ನೆರವೇರಿತು.

4 / 6
ಬಾಗಲಕೋಟೆ ತಾಲೂಕಿನ ಕರಡಿ ಗ್ರಾಮದಲ್ಲಿ ಅಲಾವಿ ದೇವರನ್ನು ಊರ ತುಂಬಾ ಮೆರವಣಿಗೆ ಮಾಡಲಾಯಿತು. ಮೊಹರಂ ಹಬ್ಬ ಹಿನ್ನೆಲೆ ವಿಶೇಷ ಹಾಡುಗಳಿಗೆ ಯುವಕರು ಒಟ್ಟಾಗಿ ಹೆಜ್ಜೆ ಹಾಕಿದರು. ಇಲ್ಲಿ ಯಾವುದೇ ಭೇದವಿಲ್ಲದೆ, ಎಲ್ಲರೂ ಅಣ್ಣ-ತಮ್ಮಂದಿರಂತೆ ಹಬ್ಬ ಆಚರಿಸುತ್ತೇವೆ ಎಂದು ಹಿಂದೂ ಬಾಂಧವರು ಹೆಮ್ಮೆಯಿಂದ ಹೇಳಿದರು.

ಬಾಗಲಕೋಟೆ ತಾಲೂಕಿನ ಕರಡಿ ಗ್ರಾಮದಲ್ಲಿ ಅಲಾವಿ ದೇವರನ್ನು ಊರ ತುಂಬಾ ಮೆರವಣಿಗೆ ಮಾಡಲಾಯಿತು. ಮೊಹರಂ ಹಬ್ಬ ಹಿನ್ನೆಲೆ ವಿಶೇಷ ಹಾಡುಗಳಿಗೆ ಯುವಕರು ಒಟ್ಟಾಗಿ ಹೆಜ್ಜೆ ಹಾಕಿದರು. ಇಲ್ಲಿ ಯಾವುದೇ ಭೇದವಿಲ್ಲದೆ, ಎಲ್ಲರೂ ಅಣ್ಣ-ತಮ್ಮಂದಿರಂತೆ ಹಬ್ಬ ಆಚರಿಸುತ್ತೇವೆ ಎಂದು ಹಿಂದೂ ಬಾಂಧವರು ಹೆಮ್ಮೆಯಿಂದ ಹೇಳಿದರು.

5 / 6
ಹೀಗೆ ಬಾಗಲಕೋಟೆಯಲ್ಲಿ ಜರುಗಿದ ಮೊಹರಂ ಹಬ್ಬವು ಧರ್ಮ ಮತ್ತು ಜಾತಿಯ ಗಡಿಗಳನ್ನು ಮೀರಿದ ಭಾವೈಕ್ಯತೆಗೆ ಸಾಕ್ಷಿಯಾಯಿತು. ಹಿಂದೂ ಹಾಗೂ ಮುಸ್ಲಿಂ ಬಾಂಧವರು ಸಕ್ಕರೆಯಂತೆ ಪರಸ್ಪರ ಬೆರೆತು ಆಚರಿಸಿದ ಈ ಸೌಹಾರ್ದತೆಯ ಹಬ್ಬ ಇಡೀ ನಾಡಿಗೆ ಮಾದರಿಯಾಗಿದೆ.

ಹೀಗೆ ಬಾಗಲಕೋಟೆಯಲ್ಲಿ ಜರುಗಿದ ಮೊಹರಂ ಹಬ್ಬವು ಧರ್ಮ ಮತ್ತು ಜಾತಿಯ ಗಡಿಗಳನ್ನು ಮೀರಿದ ಭಾವೈಕ್ಯತೆಗೆ ಸಾಕ್ಷಿಯಾಯಿತು. ಹಿಂದೂ ಹಾಗೂ ಮುಸ್ಲಿಂ ಬಾಂಧವರು ಸಕ್ಕರೆಯಂತೆ ಪರಸ್ಪರ ಬೆರೆತು ಆಚರಿಸಿದ ಈ ಸೌಹಾರ್ದತೆಯ ಹಬ್ಬ ಇಡೀ ನಾಡಿಗೆ ಮಾದರಿಯಾಗಿದೆ.

6 / 6
Follow Us
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?