AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ ನೋಡುವ ಆಸೆಯಿಂದ ಬೆಂಗಳೂರಿಗೆ ಬಂದು ಹೆಣವಾದ ರೇಣುಕಾ ಸ್ವಾಮಿ; ಕಿಡ್ನ್ಯಾಪರ್​ಗಳ ಐಡಿಯಾ ಹೇಗಿತ್ತು?

ಚಿತ್ರದುರ್ಗದ ಹೊರವಲಯದಲ್ಲಿ ರೇಣುಕಾ ಸ್ವಾಮಿಯನ್ನು ಆಟೋದಿಂದ ಕಾರಿಗೆ ಶಿಫ್ಟ್ ಮಾಡಿದರು. ನಟ ದರ್ಶನ್ ಜೊತೆ ಭೇಟಿ ಮಾಡಿಸುತ್ತೇನೆ ಎಂದು ರೇಣುಕಾಸ್ವಾಮಿಗೆ ರಘು ನಂಬಿಸಿದ್ದ. ಆತನ ಮಾತನ್ನು ನಂಬಿದ ರೇಣುಕಾ ಸ್ವಾಮಿಯು ದರ್ಶನ್​ರನ್ನು ಭೇಟಿ ಮಾಡುವ ಆಸೆಗೆ ಖುಷಿಯಿಂದ ಅಪಹರಣಕಾರರ ಜೊತೆ ಹೋಗಿದ್ದ. ಆದರೆ ಕೊನೆಯಲ್ಲಿ ಪತ್ತೆಯಾಗಿದ್ದು ಶವವಾಗಿ ಎಂಬುದೇ ದುರಂತ.

ದರ್ಶನ್​ ನೋಡುವ ಆಸೆಯಿಂದ ಬೆಂಗಳೂರಿಗೆ ಬಂದು ಹೆಣವಾದ ರೇಣುಕಾ ಸ್ವಾಮಿ; ಕಿಡ್ನ್ಯಾಪರ್​ಗಳ ಐಡಿಯಾ ಹೇಗಿತ್ತು?
ರೇಣುಕಾ ಸ್ವಾಮಿ, ದರ್ಶನ್​
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Jun 13, 2024 | 6:12 PM

Share

ಚಿತ್ರದುರ್ಗದ ಹೊರವಲಯದಲ್ಲಿ ರೇಣುಕಾ ಸ್ವಾಮಿಯನ್ನು ಆಟೋದಿಂದ ಕಾರಿಗೆ ಶಿಫ್ಟ್ ಮಾಡಿದರು. ನಟ ದರ್ಶನ್ (Darshan) ಜೊತೆ ಭೇಟಿ ಮಾಡಿಸುತ್ತೇನೆ ಎಂದು ರೇಣುಕಾಸ್ವಾಮಿಗೆ ರಘು ನಂಬಿಸಿದ್ದ. ಆತನ ಮಾತನ್ನು ನಂಬಿದ ರೇಣುಕಾ ಸ್ವಾಮಿಯು ದರ್ಶನ್​ರನ್ನು ಭೇಟಿ ಮಾಡುವ ಆಸೆಗೆ ಖುಷಿಯಿಂದ ಅಪಹರಣಕಾರರ ಜೊತೆ ಹೋಗಿದ್ದ. ಆದರೆ ಕೊನೆಯಲ್ಲಿ ಪತ್ತೆಯಾಗಿದ್ದು ಶವವಾಗಿ ಎಂಬುದೇ ದುರಂತ.ಪವಿತ್ರಾ ಗೌಡಗೆ (Pavithra Gowda) ಅಶ್ಲೀಲವಾಗಿ ಮೆಸೇಜ್​ ಕಳಿಸಿದ್ದ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ ಬದುಕು ದುರಂತ ಅಂತ್ಯ ಕಂಡಿದೆ. ದರ್ಶನ್​ ಸ್ನೇಹಿತೆ ಪವಿತ್ರಾ ಗೌಡಗೆ ಸೋಶಿಯಲ್​ ಮೀಡಿಯಾ ಮೂಲಕ ಅಸಭ್ಯ ಫೋಟೋ ಕಳಿಸಿದ್ದ ರೇಣುಕಾ ಸ್ವಾಮಿಗೆ (Renuka Swamy) ಬುದ್ಧಿ ಕಲಿಸಲು ದರ್ಶನ್​ ಹಾಗೂ ಸಹಚರರು ಕಾನೂನು ಕೈಗೆತ್ತಿಕೊಂಡರು. ರೇಣುಕಾ ಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತರಲಾಗಿತ್ತು. ದುರಂತ ಏನೆಂದರೆ, ದರ್ಶನ್​ರನ್ನು ನೋಡುವ ಆಸೆಯಿಂದ ಕಿಡ್ನ್ಯಾಪರ್​ಗಳ ಕಾರು ಹತ್ತಿದ್ದ ರೇಣುಕಾ ಸ್ವಾಮಿ. ಆದರೆ ಬೆಂಗಳೂರಿಗೆ ಬಂದಾಗ ಆಗಿದ್ದು ಮಾತ್ರ ದೊಡ್ಡ ದುರಂತ.

ಚಿತ್ರದುರ್ಗದಲ್ಲಿ ಐವರು ಸೇರಿಕೊಂಡು ರೇಣುಕಾ ಸ್ವಾಮಿ ಕಿಡ್ನ್ಯಾಪ್ ಮಾಡಿದ್ದರು. ರಾಘವೇಂದ್ರ, ಜಗದೀಶ್, ಅನು, ರಾಜು, ರವಿಯಿಂದ ಕಿಡ್ನ್ಯಾಪ್​ ನಡೆಯಿತು ಎಂಬ ಆರೋಪ ಇದೆ. ಜಗದೀಶ್, ಅನು, ರವಿ ಹಾಗೂ ರಾಜು ಚಿತ್ರದುರ್ಗದವರು. ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ರೇಣುಕಾ ಸ್ವಾಮಿಯ ಕಿಡ್ನ್ಯಾಪ್ ಮಾಡಲಾಯಿತು. ಎಲ್ಲರೂ ಸೇರಿ ರೇಣುಕಾ ಸ್ವಾಮಿಯನ್ನು ಆಟೋದಲ್ಲಿ ಚಿತ್ರದುರ್ಗದ ಹೊರವಲಯಕ್ಕೆ ಕರೆದೊಯ್ದಿದ್ದರು.

ಇದನ್ನೂ ಓದಿ: ಕೊಲೆ ಆರೋಪಿ ದರ್ಶನ್​ ನೋಡಲು ಕಿಕ್ಕಿರಿದು ಸೇರಿದ ಜನರಿಗೆ ಪೊಲೀಸ್​ ಲಾಠಿ ರುಚಿ

ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದ ಹೊರವಲಯದಲ್ಲಿ ಆಟೋದಿಂದ ಕಾರಿಗೆ ಶಿಫ್ಟ್ ಮಾಡಲಾಯಿತು. ಬಾಡಿಗೆಗೆ ಎಂದು ಹೇಳಿ ಕಾರು ಚಾಲಕ ರವಿಯನ್ನು ಕರೆಸಿಕೊಂಡಿದ್ದರು. ದರ್ಶನ್ ಭೇಟಿ ಮಾಡಿಸುತ್ತೇನೆಂದು ರೇಣುಕಾಸ್ವಾಮಿಗೆ ರಘು ನಂಬಿಸಿದ್ದ. ದರ್ಶನ್​ರನ್ನು ಭೇಟಿ ಮಾಡುವ ಆಸೆಯಿಂದ ರೇಣುಕಾ ಸ್ವಾಮಿ ಹೋಗಿದ್ದ. ಆದರೆ ಕೊನೆಗೆ ಶವಾಗಿ ಪತ್ತೆಯಾಗಿದ್ದು ದುರಂತ ಸಂಗತಿ.

ಈ ಕೇಸ್​​ನಲ್ಲಿ ದರ್ಶನ್​, ಪವಿತ್ರಾ ಗೌಡ, ರಾಘವೇಂದ್ರ ಮುಂತಾದವರ ಬಂಧನ ಆಗಿದೆ. ಕಾರು ಚಾಲಕ ರವಿ ಇಂದು (ಜೂನ್​ 13) ಚಿತ್ರದುರ್ಗದಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. 3 ಆರೋಪಿಗಳು ನಾಪತ್ತೆ ಆಗಿದ್ದಾರೆ. ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. 6 ದಿನಗಳ ಕಾಲ ಎಲ್ಲ ಆರೋಪಿಗಳನ್ನು ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ. ಹೈ ಪ್ರೊಫೈಲ್​ ಕೇಸ್​ ಆದ್ದರಿಂದ ತನಿಖೆ ಚುರುಕುಗೊಂಡಿದೆ. ತನಿಖೆಯ ಪ್ರತಿ ಹಂತದಲ್ಲೂ ಹೊಸ ಹೊಸ ಶಾಕಿಂಗ್​ ವಿವಚಾರಗಳು ಹೊರಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!