AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಸರ್​ ಮೂಲಕ ಗಮನ ಸೆಳೆದ ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್​’; ಹೊಂಬಾಳೆ ಫಿಲ್ಮ್ಸ್​ ಪ್ರಯತ್ನಕ್ಕೆ ಸಿಕ್ತು ಮೆಚ್ಚುಗೆ

ಭಿನ್ನ ರೀತಿಯ ಚಿತ್ರಗಳನ್ನು ತೆರೆಗೆ ತರೋಕೆ ವಿಜಯ್ ಕಿರಗಂದೂರು ಅವರು ಪ್ರಯತ್ನಿಸುತ್ತಿದ್ದಾರೆ. ಅವರ ಈ ಪ್ರಯತ್ನ ಎಷ್ಟು ಭಿನ್ನವಾದುದು ಎಂಬುದಕ್ಕೆ ‘ಕಾಂತಾರ’ ಹಾಗೂ ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾದ ಟೀಸರ್​ಗಳೇ ಸಾಕ್ಷಿ.

ಟೀಸರ್​ ಮೂಲಕ ಗಮನ ಸೆಳೆದ ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್​’; ಹೊಂಬಾಳೆ ಫಿಲ್ಮ್ಸ್​ ಪ್ರಯತ್ನಕ್ಕೆ ಸಿಕ್ತು ಮೆಚ್ಚುಗೆ
ರಿಷಬ್-ಜಗ್ಗೇಶ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Apr 14, 2022 | 3:32 PM

Share

‘ಹೊಂಬಾಳೆ ಫಿಲ್ಮ್ಸ್​’ ಸಿನಿ (Hombale Fimls) ಪ್ರಿಯರಿಗೆ ಮತ್ತೆ ರಸದೌತಣ ಬಡಿಸಲು ರೆಡಿ ಆಗಿದೆ. ‘ಕೆಜಿಎಫ್ ಚಾಪ್ಟರ್​ 2’ (KGF Chapter 2) ಚಿತ್ರದ ಮೂಲಕ ಹೊಸ ಇತಿಹಾಸ ಬರೆಯುತ್ತಿರುವ ಈ ಸಿನಿಮಾ ನಿರ್ಮಾಣ ಸಂಸ್ಥೆ, ಮತ್ತಷ್ಟು ಹೊಸಹೊಸ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ. ಭಿನ್ನ ರೀತಿಯ ಚಿತ್ರಗಳನ್ನು ತೆರೆಗೆ ತರೋಕೆ ವಿಜಯ್ ಕಿರಗಂದೂರು ಅವರು ಪ್ರಯತ್ನಿಸುತ್ತಿದ್ದಾರೆ. ಅವರ ಈ ಪ್ರಯತ್ನ ಎಷ್ಟು ಭಿನ್ನವಾದುದು ಎಂಬುದಕ್ಕೆ ‘ಕಾಂತಾರ’ (Kanatara Movie)ಹಾಗೂ ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾದ ಟೀಸರ್​ಗಳೇ ಸಾಕ್ಷಿ. ‘ಕೆಜಿಎಫ್ 2’ ರಿಲೀಸ್​ಗೂ ಮುನ್ನ ಈ ಟೀಸರ್ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಎರಡೂ ಟೀಸರ್​ಗಳು ‘ಕೆಜಿಎಫ್​ 2’ ಸಿನಿಮಾ ಜತೆ ಅಟ್ಯಾಚ್​ ಆಗಿ ಪ್ರದರ್ಶನ ಕಾಣಲಿವೆ.

‘ಕಾಂತಾರ’

‘ಕಾಂತಾರ’ ಇದೊಂದು ಹಳ್ಳಿಯಲ್ಲಿ ನಡೆಯುವ, ಹಳ್ಳಿಯ ಜನರ ನಂಬಿಕೆಯ ಕಥೆ. ಹಳ್ಳಿಯ ಆಚರಣೆಗಳನ್ನು ಮಾಡುತ್ತಾ, ಕಾಡನ್ನೇ ನಂಬಿ ಜೀವನ ನಡೆಸುವ ಒಂದು ತಂಡ. ಆ ಊರಿಗೆ ಹೊಸ ಫಾರೆಸ್ಟ್​ ಅಧಿಕಾರಿಯ ಆಗಮನವಾಗುತ್ತದೆ. ಏನೇ ನಡೆಯಬೇಕಿದ್ದರೂ ತನ್ನ ಅನುಮತಿ ಪಡೆಯಬೇಕು ಎನ್ನುವ ಆಜ್ಞೆಯನ್ನು ಆತ ಹೊರಡಿಸುತ್ತಾನೆ. ಅಲ್ಲಿಂದ ತಿಕ್ಕಾಟ ಶುರು. ಈ ಟೀಸರ್​ನಲ್ಲಿ ಹಲವು ವಿಚಾರಗಳನ್ನು ತೋರಿಸಲಾಗಿದೆ. ಕಂಬಳ, ಕಾಡಿನ ಜನರ ನಂಬಿಕೆ, ಅಧಿಕಾರಿಯ ದರ್ಪವನ್ನು ತೋರಿಸಲಾಗಿದೆ. ರಿಷಬ್ ಶೆಟ್ಟಿ ಅವರು ಹೀರೋ ಆಗಿ ಮಿಂಚಿದ್ದಾರೆ. ಫಾರೆಸ್ಟ್​ ಅಧಿಕಾರಿಯಾಗಿ ಕಿಶೋರ್ ಗಮನ ಸೆಳೆಯುತ್ತಾರೆ.

ರಿಷನ್ ಶೆಟ್ಟಿ ಅವರು ನಿರ್ದೇಶನದ ವಿಚಾರದಲ್ಲಿ ಸಾಕಷ್ಟು ಪಳಗಿದ್ದಾರೆ. ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಗೆ ಭಿನ್ನ ಕಥೆ ಹೇಳುತ್ತಾರೆ. ಈ ಬಾರಿ ‘ಕಾಂತಾರ’ ಮೂಲಕ ಬರುತ್ತಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮಾಡುತ್ತಿದೆ. ಇದೇ ವರ್ಷ ಚಿತ್ರ ತೆರೆಗೆ ಬರುತ್ತಿದೆ.

‘ರಾಘವೇಂದ್ರ ಸ್ಟೋರ್ಸ್​’

‘ರಾಘವೇಂದ್ರ ಸ್ಟೋರ್ಸ್​ ’ ಸಿನಿಮಾ ಮೂಲಕ ನಟ ಜಗ್ಗೇಶ್ ಹಾಗೂ ನಿರ್ದೇಶಕ ಸಂತೋಷ್ ಆನಂದ್​ರಾಮ್​ ಮೊದಲ ಬಾರಿಗೆ ಒಂದಾಗಿದ್ದಾರೆ. ಇದು ಔಟ್​ ಆ್ಯಂಡ್ ಔಟ್ ಕಾಮಿಡಿ ಸಿನಿಮಾ ಅನ್ನೋದಕ್ಕೆ ಟೀಸರ್ ಸಾಕ್ಷ್ಯ ನೀಡಿದೆ. ಟೀಸರ್​ನಲ್ಲಿ ಹಲವು ಪಂಚಿಂಗ್​ ಹಾಗೂ ಡಬ್ಬಲ್ ಮೀನಿಂಗ್​ ಡೈಲಾಗ್​ಗಳು ಇವೆ. 40 ವರ್ಷವಾದರೂ ಮದುವೆ ಆಗದೆ ಇರುವ ಬಾಣಸಿಗನ ಪಾತ್ರದಲ್ಲಿ ಜಗ್ಗೇಶ್​ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: KGF Chapter 2 Leak: ಯಶ್ ನಟನೆಯ ಚಿತ್ರಕ್ಕೆ ಪೈರಸಿ ಸಮಸ್ಯೆ; ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ‘ಕೆಜಿಎಫ್ 2’ ಲೀಕ್

KGF Chapter 2 Review: ಕೆಜಿಎಫ್​ ಚಾಪ್ಟರ್​ 2 ವಿಮರ್ಶೆ; ಪ್ರಶಾಂತ್ ನೀಲ್ ಕೈಚಳಕ, ಯಶ್ ಫ್ಯಾನ್ಸ್​ಗೆ ಧಮಾಕ

Published On - 1:49 pm, Thu, 14 April 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ