AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಬರ್ಟ್ ಸಿನಿಮಾ ಪೈರಸಿ ಕಾಪಿ ಹರಿಬಿಟ್ಟ ವ್ಯಕ್ತಿ ಅರೆಸ್ಟ್​; ಪೊಲೀಸರಿಂದ ಖಡಕ್​ ವಾರ್ನಿಂಗ್​

ಬೆಂಗಳೂರಿನ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಸತತ ಮೂರು ದಿನಗಳಿಂದ ‘ರಾಬರ್ಟ್’​ ಸಿನಿಮಾವನ್ನು ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯ ಬಗ್ಗೆ ಚಿತ್ರಮಂದಿರದ ಮಾಲೀಕರಿಗೆ ಸಂಶಯ ಬಂದಿದ್ದು, ಚಿತ್ರತಂಡಕ್ಕೆ ಮಾಹಿತಿ ನೀಡಿದ್ದಾರೆ. ಇಂದು ಕೂಡ ಒಂದೂವರೆ ಗಂಟೆ ಸಿನಿಮಾ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯನ್ನು ಸದ್ಯ ಪುಟ್ಟೇನಹಳ್ಳಿ ಠಾಣೆಯ ಪೊಲೀಸರಿಗೆ ಚಿತ್ರತಂಡ ಒಪ್ಪಸಿದೆ.

ರಾಬರ್ಟ್ ಸಿನಿಮಾ ಪೈರಸಿ ಕಾಪಿ ಹರಿಬಿಟ್ಟ ವ್ಯಕ್ತಿ ಅರೆಸ್ಟ್​; ಪೊಲೀಸರಿಂದ ಖಡಕ್​ ವಾರ್ನಿಂಗ್​
ಮಧು ಕೆ.ಬಿ
preethi shettigar
| Edited By: |

Updated on: Mar 13, 2021 | 3:38 PM

Share

ಬೆಂಗಳೂರು: ಶಿವರಾತ್ರಿಯಂದು ಅದ್ದೂರಿಯಾಗಿ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಕನ್ನಡದಲ್ಲಿ ಅಷ್ಟೇ ಅಲ್ಲ ತೆಲುಗಿನಲ್ಲೂ ಕೂಡ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಮಧ್ಯೆಯೇ ಸಿನಿಮಾ ಪೈರಸಿಗೂ ಕೂಡ ಒಳಗಾಗಿತ್ತು. ಇದಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ಪೊಲೀಸರು ಬೆಂಗಳೂರಿನಲ್ಲಿ ಅರೆಸ್ಟ್​​​ ಮಾಡಿದ್ದಾರೆ.

ಬೆಂಗಳೂರಿನ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಸತತ ಮೂರು ದಿನಗಳಿಂದ ‘ರಾಬರ್ಟ್’​ ಸಿನಿಮಾವನ್ನು ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯ ಬಗ್ಗೆ ಚಿತ್ರಮಂದಿರದ ಮಾಲೀಕರಿಗೆ ಸಂಶಯ ಬಂದಿದ್ದು, ಚಿತ್ರತಂಡಕ್ಕೆ ಮಾಹಿತಿ ನೀಡಿದ್ದಾರೆ. ಇಂದು ಕೂಡ ಅದೇ ವ್ಯಕ್ತಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ರೆಕಾರ್ಡ್​ ಮಾಡುತ್ತಿದ್ದ. ಒಂದೂವರೆ ಗಂಟೆ ಸಿನಿಮಾ ರೆಕಾರ್ಡ್ ಕೂಡ ಆಗಿತ್ತು. ಈ ವ್ಯಕ್ತಿಯನ್ನು ಸದ್ಯ ಪುಟ್ಟೇನಹಳ್ಳಿ ಠಾಣೆಯ ಪೊಲೀಸರಿಗೆ ಚಿತ್ರತಂಡ ಒಪ್ಪಿಸಿದೆ.

ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆ ಮತ್ತು ಕುತೂಹಲಗಳಿಗೆ ರಾಬರ್ಟ್‌ ಬೆಳ್ಳಿತೆರೆ ಮೇಲೆ ಉತ್ತರ ಕೊಟ್ಟಿದ್ದು, ದರ್ಶನ್‌ ಅಭಿಮಾನಿಗಳು ಮತ್ತು ಪ್ರೇಕ್ಷಕರು ಮೊದಲ ದಿನವೇ ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ರಾಬರ್ಟ್‌ ಚಿತ್ರದ ಟಿಕೆಟ್‌ ಮುಂಗಡವಾಗೇ ಸೋಲ್ಡ್‌ ಔಟ್‌ ಆಗಿದ್ದರಿಂದ ಮೊದಲ ದಿನ ರಾಜ್ಯದೆಲ್ಲೆಡೆ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಂಡಿದ್ದವು.

ಕನ್ನಡ, ತೆಲುಗು ಸೇರಿದಂತೆ 1500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಾಬರ್ಟ್‌ ತೆರೆಕಂಡಿದೆ. ಮೊದಲ ದಿನ 20 ಕೋಟಿ ಗಡಿ ದಅಟಿರುವುದರಿಂದ ರಾಬರ್ಟ್‌ ಹೊಸ ದಾಖಲೆ ನಿರ್ಮಿಸಿದೆ. ಅದರಲ್ಲೂ ಕರ್ನಾಟಕದಲ್ಲಿ ಮಾತ್ರ 17 ಕೋಟಿ ಕಲೆಹಾಕಿದೆ.

ಇನ್ನು ಎರಡನೇ ದಿನ ವಿಕೇಂಡ್ ಆಗಿರುವುದರಿಂದ ರಾಬರ್ಟ್ ಅಬ್ಬರ ಜೋರಾಗಿ ಇತ್ತು. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಂಡ ರಾಬರ್ಟ್ ಕರ್ನಾಟಕದಲ್ಲಿ 12 ಕೋಟಿಗು ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ 30 ಕೋಟಿ ಕ್ಲಬ್ ಸೇರಿದೆ ರಾಬರ್ಟ್ ಸಿನಿಮಾ.

ಹೀಗೆ ಗೆಲುವಿನ ಹಾದಿ ಹಿಡಿದಿರುವ ರಾಬರ್ಟ್​ಗೆ ಪೈರಸಿ ಕಂಟಕ ಶುರುವಾಗಿದೆ. ರಿಲೀಸ್‌ ಬೆನ್ನಲ್ಲೇ ರಾಬರ್ಟ್​ನ ಲಿಂಕ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 2 ಸಾವಿರಕ್ಕೂ ಹೆಚ್ಚು ಲಿಂಕ್‌ ಸೃಷ್ಟಿ ಆಗಿವೆ. ಆದರೆ ಚಿತ್ರತಂಡಕ್ಕೆ ಇದರಿಂದ ಸದ್ಯ ಟೆನ್ಷನ್‌ ಇಲ್ಲ. ಎಕೆಂದರೆ ಚಿತ್ರತಂಡ ಪೈರಸಿ ವಿಚಾರವಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿತ್ತು.

40 ಜನರ ಟೀಂ ರಾಬರ್ಟ್‌ ಚಿತ್ರದ ಪೈರೆಸಿ ತಡೆಗೆ ಕೆಲಸ ಮಾಡಿದೆ. ಹೀಗಾಗಿ ಪೈರಸಿ ಆಗಿರುವ ಲಿಂಕ್‌ನಲ್ಲಿ ಸಿನಿಮಾ ಪ್ರದರ್ಶನವಾಗಲು ಸಾಧ್ಯವಾಗುತ್ತಿಲ್ಲ.. ಸದ್ಯ ಚಿತ್ರತಂಡ ನಿಟ್ಟುಸಿರುಬಿಟ್ಟಿದೆ. ಒಟ್ಟಿನಲ್ಲಿ ಉತ್ತಮ ಚಿತ್ರಗಳಿಗೂ ಪೈರಸಿ ಭೂತ ಬೆನ್ನತ್ತಿದ್ದು, ಚಿತ್ರರಂಗವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಆದರೆ ರಾಬರ್ಟ್ ಸಿನಿಮಾ ಅದೆಲ್ಲವನ್ನೂ ಮೀರಿ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ.

ಇದನ್ನೂ ಓದಿ: ಎರಡನೇ ದಿನವೂ ಬಾಕ್ಸ್​ ಆಫೀಸ್​ನಲ್ಲಿ ರಾಬರ್ಟ್​ ಹವಾ..ಮೂರೇ ದಿನಕ್ಕೆ 50 ಕೋಟಿ ದಾಟಲಿದೆ ಕಲೆಕ್ಷನ್​? 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್