AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗ್ಗೆ ರಿಲೀಸ್​ ಆದ ಸಿನಿಮಾ ಸಂಜೆ ಲೀಕ್​! ಸ್ಟಾರ್​ ನಟನ ಚಿತ್ರಕ್ಕೆ ಪೈರಸಿ ಕಾಟ

ನಿರ್ಮಾಪಕರು ಕೋಟ್ಯಾಂತರ ರೂಪಾಯಿ ಹಾಕಿ ಸಿದ್ಧಪಡಿಸಿದ ಸಿನಿಮಾ ಕ್ಷಣಮಾತ್ರದಲ್ಲಿ ಲೀಕ್​ ಮಾಡಿಬಿಡುತ್ತಾರೆ. ಈ ಮೂಲಕ ಸಾವಿರಾರು ಜನರ ಶ್ರಮವನ್ನು ವ್ಯರ್ಥಮಾಡಿ ಬಿಡುತ್ತಾರೆ ಕಳ್ಳರು.

ಬೆಳಗ್ಗೆ ರಿಲೀಸ್​ ಆದ ಸಿನಿಮಾ ಸಂಜೆ ಲೀಕ್​! ಸ್ಟಾರ್​ ನಟನ ಚಿತ್ರಕ್ಕೆ ಪೈರಸಿ ಕಾಟ
ಚಿತ್ರಮಂದಿರ
ರಾಜೇಶ್ ದುಗ್ಗುಮನೆ
| Edited By: |

Updated on: Mar 11, 2021 | 8:13 PM

Share

ಪೈರಸಿ ಅನ್ನೋದು ಚಿತ್ರರಂಗಕ್ಕೆ ಶಾಪವಾಗಿ ಮಾರ್ಪಟ್ಟಿದೆ. ನಿರ್ಮಾಪಕರು ಕೋಟ್ಯಾಂತರ ರೂಪಾಯಿ ಹಾಕಿ ಸಿದ್ಧಪಡಿಸಿದ ಸಿನಿಮಾ ಕ್ಷಣಮಾತ್ರದಲ್ಲಿ ಲೀಕ್​ ಮಾಡಿಬಿಡುತ್ತಾರೆ. ಈ ಮೂಲಕ ಸಾವಿರಾರು ಜನರ ಶ್ರಮವನ್ನು ವ್ಯರ್ಥಮಾಡಿ ಬಿಡುತ್ತಾರೆ. ಈಗಲೂ ಹಾಗೆಯೇ ಆಗಿದೆ. ಇಂದು ರಿಲೀಸ್​ ಆದ ಸ್ಟಾರ್​ ನಟನ ಚಿತ್ರಕ್ಕೆ ಪೈರಸಿ ಕಾಟ ಎದುರಾಗಿದೆ. ಬಾಲಿವುಡ್​ ನಟ ರಾಜ್​ಕುಮಾರ್​ ರಾವ್​ ಹಾಗೂ ಜಾಹ್ನವಿ ಕಪೂರ್​ ನಟನೆಯ ‘ರೂಹಿ’ ಚಿತ್ರ ರಿಲೀಸ್​ ಆದ ದಿನವೇ ಸೋರಿಕೆ ಆಗಿದೆ. Tamilrockers, Movierulz, Telegramಗಳಲ್ಲಿ ಈ ಸಿನಿಮಾದ ಪ್ರಿಂಟ್​ ಹರಿದಾಡಿದೆ. ಇದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾರರ್​ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ಪೈರಸಿ ತೀವ್ರ ಹಿನ್ನಡೆ ಉಂಟು ಮಾಡಿದೆ. ಈ ಮೊದಲು ತೆರೆಕಂಡಿದ್ದ  ರಾಜ್​ಕುಮಾರ್​ ರಾವ್​ ನಟನೆಯ ಸ್ತ್ರೀ ಸಿನಿಮಾ ಹಾರರ್​ ಕಾಮಿಡಿ ಶೈಲಿಯಲ್ಲೇ ಮೂಡಿ ಬಂದಿತ್ತು. ಇದೇ ಮಾದರಿಯಲ್ಲಿ ರೂಹಿ ಸಿನಿಮಾ ಇದೆ ಎಂದು ಹೇಳಲಾಗುತ್ತಿದೆ.

ಶ್ರೀದೇವಿ ಮಗಳಾಗಿರುವ ಜಾಹ್ನವಿ ಚಿತ್ರದ ನಾಯಕಿ. ಅವರ ಸಿನಿಮಾಗೆ ಪದೇ ಪದೇ ಹಿನ್ನಡೆ ಉಂಟಾಗುತ್ತಲೇ ಇದೆ. ಈ ಮೊದಲು ಕಾರ್ಗಿಲ್​ ಸಿನಿಮಾಗೆ ಕಥೆ ತಿರುಚಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದರಿಂದ ಚಿತ್ರಕ್ಕೆ ಹಿನ್ನಡೆ ಉಂಟಾಗಿತ್ತು. ಈಗ ಪೈರಸಿ ವಿಚಾರ ಜಾಹ್ನವಿ ಸಿನಿಮಾಗೆ ಏಟು ನೀಡಿದೆ.

Tamilrockers ಸೇರಿ ಸಾಕಷ್ಟು ಸೈಟ್​ಗಳು ಸಿನಿಮಾ ಪೈರಸಿಯಲ್ಲೇ ತೊಡಗಿಕೊಂಡಿವೆ. ಇವರು ಎಲ್ಲಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನುವ ವಿಚಾರ ಇಲ್ಲಿಯವರೆಗೆ ಬಯಲಾಗಿಲ್ಲ. ಅಷ್ಟೇ ಅಲ್ಲ, ಈ ಸೈಟ್​ಗಳ ವಿರುದ್ಧ ಅದೆಷ್ಟೋ ಕೇಸ್​ಗಳು ಕೂಡ ದಾಖಲಾಗಿವೆ ಎನ್ನುವ ಮಾಹಿತಿಯೂ ಸಿಕ್ಕಿದೆ.

ಇದನ್ನೂ ಓದಿ:

2.74 ಲಕ್ಷ ಬೆಲೆಯ ಉಡುಪು ಧರಿಸಿದ ನಟಿ ಜಾಹ್ನವಿ ಕಪೂರ್

Roberrt Kannada Movie Review: ಒಂದೇ ಟಿಕೆಟ್​ನಲ್ಲಿ ದರ್ಶನ್​ ಫ್ಯಾನ್ಸ್​ಗೆ ರಾಬರ್ಟ್​ ಮತ್ತು ರಾಘವನ ಡಬಲ್​ ಧಮಾಕಾ!

Follow Us
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!