Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೂಟಿಂಗ್ ವೇಳೆ ದರ್ಶನ್ ಡೆಡಿಕೇಷನ್ ಎಂಥದ್ದು? ವಿವರಿಸಿದ ಸಾಧು ಕೋಕಿಲ

ಸಾಧು ಕೋಕಿಲ ಅವರು ಜೀ ಕನ್ನಡದಲ್ಲಿ "ಸುಂಟರಗಾಳಿ" ಚಿತ್ರದ ಹಾಡಿನ ಚಿತ್ರೀಕರಣದ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಅವರು ಚಾಮುಂಡಿ ಬೆಟ್ಟದಲ್ಲಿ ಸಂಜೆಯಿಂದ ರಾತ್ರಿಯವರೆಗೆ ಒಂದೇ ದೃಶ್ಯಕ್ಕಾಗಿ ಕುಳಿತಿದ್ದರು ಎಂದು ಹೇಳಿದ್ದಾರೆ. ಈ ದೃಶ್ಯಕ್ಕಾಗಿ ಯಾವುದೇ ಗ್ರಾಫಿಕ್ಸ್ ಬಳಸಿಲ್ಲ ಎಂಬುದು ವಿಶೇಷ. ಸಾಧು ಕೋಕಿಲ ಅವರು ದರ್ಶನ್ ಅವರೊಂದಿಗೆ ಹೊಂದಿರುವ ಆತ್ಮೀಯ ಸಂಬಂಧವನ್ನು ಕೂಡಾ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

ಶೂಟಿಂಗ್ ವೇಳೆ ದರ್ಶನ್ ಡೆಡಿಕೇಷನ್ ಎಂಥದ್ದು? ವಿವರಿಸಿದ ಸಾಧು ಕೋಕಿಲ
ದರ್ಶನ್-ಸಧು ಕೋಕಿಲ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 09, 2025 | 8:05 AM

ದರ್ಶನ್ ಅವರು ಸಿನಿಮಾ ಮಾಡೋದರಲ್ಲಿ ಸಖತ್ ಪರ್ಫೆಕ್ಟ್​. ಪ್ರತಿ ದೃಶ್ಯಗಳು ಹೀಗೆಯೇ ಬರಬೇಕು ಎಂದರೆ ಹಾಗೆಯೇ ಬರಬೇಕು ಎಂದು ಆಶಿಸುತ್ತಾರೆ. ಇದಕ್ಕೆ ಹೊಸ ಉದಾಹರಣೆ ಒಂದು ಸಿಕ್ಕಿದೆ. ಜೀ ಕನ್ನಡ ವೇದಿಕೆ ಮೇಲೆ ದರ್ಶನ್ ನಟನೆಯ ಸಿನಿಮಾ ಹಾಡನ್ನು ಹಾಡಲಾಯಿತು. ಈ ವೇಳೆ ಹಾಡಿನ ಹಿನ್ನೆಲೆ ಮತ್ತು ಹಾಡಿನ ಕಥೆ ಏನು ಎಂಬುದನ್ನು ಸಾಧು ಕೋಕಿಲ ಅವರು ವಿವರಿಸಿದರು.

ಹಾವೇರಿಯ ಬಾಳು ಬೆಳಗುಂದಿ ಅವರು ಜೀ ಕನ್ನಡದ ‘ಸರಿಗಮಪ’ ವೇದಿಕೆ ಏರಿದರು. ಅವರು ದರ್ಶನ್ ಹಾಗೂ ರಕ್ಷಿತಾ ಅವರು ನಟಿಸಿದ ‘ಸುಂಟರಗಾಳಿ’ ಚಿತ್ರದ ‘ನೀನ್ ನನ್ನಟ್ಟಿ ಬೆಳ್ಕಂಗಿದ್ದೆ ನಂಜು’ ಹಾಡನ್ನು ಹಾಡಿದರು. ಈ ಹಾಡು ಆ ಸಮಯದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಈ ಹಾಡಿನ ಒಂದು ದೃಶ್ಯದ ಬಗ್ಗೆ ಸಾಧು ಕೋಕಿಲ ಮಾತನಾಡಿದ್ದಾರೆ. ಈ ಚಿತ್ರಕ್ಕೆ ಸಾಧು ಕೋಕಿಲ ಅವರೇ ಸಂಗೀತ ಮಾಡಿದ್ದರು.

ಬೆಟ್ಟದ ಮೇಲೆ ಕುಳಿತು ಇರುವ ದೃಶ್ಯ ಇದಾಗಿದೆ. ನೋಡುತ್ತಾ ಇದ್ದಂತೆ ಸಂಜೆ ಎಂಬುದು ರಾತ್ರಿ ಆಗುತ್ತದೆ. ಈ ದೃಶ್ಯಕ್ಕೆ ‘ಹಗಲೋಡುತ್ತೆ ರಾತ್ರಿ ಬಂತಂದ್ ಅಂಜಿ, ರಾತ್ರೆ ಮುಗ್ದೋದ್ರೆ ಹಗಲೇ ಅಲ್ವ ನಂಜಿ’ ಎಂಬ ಸಾಲು ಬರುತ್ತದೆ. ಈ ಸಾಲುಗಳ ಹಿನ್ನೆಲೆ ವಿವರಿಸಿದ್ದಾರೆ ಶೂಟ್ ಮಾಡಲಾಯಿತು ಎಂಬುದನ್ನು ಸಾಧು ಕೋಕಿಲ ವಿವರಿಸಿದ್ದಾರೆ.

View this post on Instagram

A post shared by Zee Kannada (@zeekannada)

‘ಇದಕ್ಕೆ ನಾನೇ ಕೊರಿಯೋಗ್ರಾಫರ್. ಇದಕ್ಕೆ ಡ್ಯಾನ್ಸ್ ಮಾಸ್ಟರ್​ ಇಲ್ಲ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದರ್ಶನ್​ನ ಸಂಜೆ ನಾಲ್ಕು ಗಂಟೆಗೆ ಕಟ್ಟೆ ಮೇಲೆ ಕೂರಿಸಲಾಯಿತು. ಹಗಲೋಡುತ್ತೆ ರಾತ್ರಿ ಬಂತಂದ್ ಅಂಜಿ ಎಂಬುದನ್ನು ಅಷ್ಟೇ ಹಾಡಿಸಿದೆವು. ರಾತ್ರಿ, 7 ಗಂಟೆವರೆಗೂ ಹಾಗೆಯೇ ಕುಳಿತಿದ್ದರು. ಅಲ್ಲಿವರೆಗೆ ಶಾಟ್ ಓಡ್ತಾನೆ ಇತ್ತು. ಕತ್ತಲಾಗೋದನ್ನು ಗ್ರಾಫಿಕ್ಸ್​​ನಲ್ಲಿ ಮಾಡಿಲ್ಲ’ ಎಂದರು ಸಾಧು ಕೋಕಿಲ. ಈ ಮೂಲಕ ಹಾಡಿನ ಹಿನ್ನೆಲೆ ಏನು ಎಂಬುದನ್ನು ಅವರು ವಿವರಿಸಿದರು.

ಇದನ್ನೂ ಓದಿ: ‘ಉಪೇಂದ್ರ ಇಲ್ಲ ಅಂದ್ರೆ ನಾನಿಲ್ಲ’; ಅವಾರ್ಡ್ ಪಡೆದು ಗುರುವ ನೆನೆದ ಸಾಧು ಕೋಕಿಲ

ಸಾಧು ಕೋಕಿಲ ಅವರು ದೊಡ್ಡ ದರ್ಶನ್ ಜೊತೆ ಒಳ್ಳೆಯ ಒಡನಾಟ ಹೊಂದಿದ್ದಾರೆ. ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲಿನಲ್ಲಿ ಇದ್ದಾಗ ಅವರನ್ನು ಭೇಟಿ ಮಾಡಲು ತೆರಳಿದ್ದರು. ಮೊದಲ ಬಾರಿ ಭೇಟಿ ಸಾಧ್ಯ ಆಗಿರಲಿಲ್ಲ. ಆ ಬಳಿಕ ಮರುವಾರ ಮತ್ತೆ ಬಂದು ದರ್ಶನ್​ನ ಭೇಟಿ ಮಾಡಿಯೇ ತೆರಳಿದ್ದರು ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್