Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರದನಾಯಕ ಚಿತ್ರದ ನಟಿ ಸಮೀರಾ ರೆಡ್ಡಿಯ ಇಡೀ ಕುಟುಂಬಕ್ಕೆ ಕೊರೊನಾ ಪಾಸಿಟಿವ್

ಚಿಕಿತ್ಸೆ ಪಡೆಯಲು ಆರಂಭಿಸಿದ್ದೇವೆ. ಹಬೆ ತೆಗೆದುಕೊಳ್ಳುತ್ತಿದ್ದೇವೆ. ಉಪ್ಪು ನೀರನ್ನು ಮುಕ್ಕಳಿಸುತ್ತಿದ್ದೇವೆ, ಪ್ರಾಣಾಯಾಮ ಮಾಡುತ್ತಿದ್ದೇವೆ. ಇದೆಲ್ಲದರ ಜೊತೆಗೆ ವೈದ್ಯರ ಸಲಹೆಯನ್ನು ಪಾಲಿಸುತ್ತಿದ್ದೇವೆ ಎಂದು ಸಮೀರಾ ರೆಡ್ಡಿ ಹೇಳಿದ್ದಾರೆ.

ವರದನಾಯಕ ಚಿತ್ರದ ನಟಿ ಸಮೀರಾ ರೆಡ್ಡಿಯ ಇಡೀ ಕುಟುಂಬಕ್ಕೆ ಕೊರೊನಾ ಪಾಸಿಟಿವ್
ಸಮೀರಾ ರೆಡ್ಡಿ ಮತ್ತು ಪತಿ ಅಕ್ಷಯ್​
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Apr 19, 2021 | 5:08 PM

ಮಹಾಮಾರಿ ಕೊರೊನಾ ಕಾಟಕ್ಕೆ ಎಲ್ಲರ ಜೀವನ ಅಸ್ತವ್ಯಸ್ತ ಆಗುತ್ತಿದೆ. ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರಿಗೂ ಕೊವಿಡ್​ ತೊಂದರೆ ಕೊಡುತ್ತಿದೆ. ಇತ್ತೀಚೆಗಂತೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅನೇಕ ಸೆಲೆಬ್ರಿಟಿಗಳಿಗೆ ಕೊರೊನಾ ವೈರಸ್​ ತಗುಲುತ್ತಿದೆ. ಪವನ್​ ಕಲ್ಯಾಣ್​, ಅಕ್ಷಯ್​ ಕುಮಾರ್​, ಸೋನು ಸೂದ್​ ಸೇರಿದಂತೆ ಅನೇಕರಿಗೆ ಪಾಸಿಟಿವ್​ ವರದಿ ಬಂದಿದೆ. ಆ ಸಾಲಿಗೆ ನಟಿ ಸಮೀರಾ ರೆಡ್ಡಿ ಕೂಡ ಸೇರ್ಪಡೆ ಆಗಿದ್ದಾರೆ.

ಕನ್ನಡದ ವರದನಾಯಕ ಸಿನಿಮಾದಲ್ಲಿ ಸುದೀಪ್​ ಜೋಡಿಯಾಗಿ ಸಮೀರಾ ರೆಡ್ಡಿ ನಟಿಸಿದ್ದರು. ಆ ಮೂಲಕ ಅವರು ಕನ್ನಡದ ಸಿನಿಪ್ರಿಯರಿಗೆ ಪರಿಚಿತರಾದರು. ಸದ್ಯ ಸಿನಿಮಾಗಳಿಂದ ದೂರ ಉಳಿದುಕೊಂಡಿರುವ ಅವರು ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಈಗ ತಮಗೆ ಕೊರೊನಾ ವೈರಸ್​ ತಗುಲಿದೆ ಎಂಬುದನ್ನು ಖಚಿತ ಪಡಿಸಿದ್ದಾರೆ.

ಸಮೀರಾ ರೆಡ್ಡಿ ಪತಿ ಅಕ್ಷಯ್​, ಮಕ್ಕಳಾದ ಹನ್ಸ್​ ಮತ್ತು ನೈರಾಗೂ ಕೊರೊನಾ ಪಾಸಿಟಿವ್​ ಆಗಿದೆ. ‘ಕಳೆದ ವಾರ ಹನ್ಸ್​ಗೆ ಹೆಚ್ಚು ಜ್ವರ ಇತ್ತು. 4 ದಿನಗಳ ಕಾಲ ಮುಂದುವರಿಯಿತು. ಅದು ಸಹಜ ಎಂದು ಅನಿಸಲಿಲ್ಲ. ಹಾಗಾಗಿ ಟೆಸ್ಟ್​ ಮಾಡಿಸಿದೆವು. ಆಗ ಕೊವಿಡ್​-19 ಪಾಸಿಟಿವ್​ ಎಂಬುದು ಗೊತ್ತಾಯಿತು. ನಂತರ ನನಗೆ ತುಂಬ ಆತಂಕ ಆಯಿತು. ಇದನ್ನು ಎದುರಿಸಲು ನೀವು ಎಷ್ಟೇ ತಯಾರಾಗಿದ್ದೀರಿ ಎಂದುಕೊಂಡರೂ ಇಂಥ ಪರಿಸ್ಥಿತಿಯಲ್ಲಿ ಅದು ನಿಜವಾಗಿರುವುದಿಲ್ಲ’ ಎಂದು ಸಮೀರಾ ಹೇಳಿದ್ದಾರೆ.

‘ನಂತರ ಮಗಳು ನೈರಾಗೂ ರೋಗ ಲಕ್ಷಣಗಳು ಕಾಣಿಸಿಕೊಂಡವು. ಜ್ವರ ಇರಲಿಲ್ಲ. ಕೊರೊನಾ ಎರಡನೇ ಅಲೆ ಬಗ್ಗೆ ನಾವು ಗಮನ ಹರಿಸಬೇಕಾದ್ದು ಏನೆಂದರೆ ಇದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ರೋಗ ಲಕ್ಷಣಗಳು ಇಲ್ಲದಿದ್ದರೂ ಕೂಡ ಬೇರೆಯವರಿಂದ ನೀವು ನಿಮ್ಮ ಮಕ್ಕಳನ್ನು ಐಸೊಲೇಟ್​ ಮಾಡಬೇಕು’ ಎಂದು ಸಮೀರಾ ಹೇಳಿದ್ದಾರೆ.

‘ಅದೃಷ್ಟವಶಾತ್​ ನನ್ನ ಅತ್ತೆಗೆ ಸೋಂಕು ತಗುಲಿಲ್ಲ. ಅವರಿಗೆ ನೆಗೆಟಿವ್​ ವರದಿ ಬಂದಿದೆ. ನನಗೆ ಮತ್ತು ಅಕ್ಷಯ್​ಗೆ ಪಾಸಿಟಿವ್​ ಆದ ಬಳಿಕ ಮಕ್ಕಳಿಗೂ ಬಂತು. ಚಿಕಿತ್ಸೆ ಪಡೆಯಲು ಆರಂಭಿಸಿದ್ದೇವೆ. ಹಬೆ ತೆಗೆದುಕೊಳ್ಳುತ್ತಿದ್ದೇವೆ. ಉಪ್ಪು ನೀರನ್ನು ಮುಕ್ಕಳಿಸುತ್ತಿದ್ದೇವೆ, ಪ್ರಾಣಾಯಾಮ ಮಾಡುತ್ತಿದ್ದೇವೆ. ಇದೆಲ್ಲದರ ಜೊತೆಗೆ ವೈದ್ಯರ ಸಲಹೆಯನ್ನು ಪಾಲಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಬುದ್ಧಿವಂತಿಕೆಯಿಂದ ಇರಬೇಕು. ಭಯ, ನೆಗೆಟಿವ್​ ಯೋಚನೆ ಬೇಡ. ಎಚ್ಚರಿಕೆಯಿಂದಿರಿ’ ಎಂದು ಸಮೀರಾ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಬಗ್ಗೆ ಟಿವಿಯಲ್ಲಿ ತೋರಿಸೋದು ಸುಳ್ಳು ಅಂದುಕೊಳ್ಳಬೇಡಿ: ಸಾಧುಕೋಕಿಲ ಎಚ್ಚರಿಕೆ

IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?