AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಚಿತ್​ಗೆ ವೆಲ್​ಕಮ್​ ಟು ‘S’​ ಗ್ರೂಪ್ ಎಂದ ಶಿವಣ್ಣ, ರವಿಚಂದ್ರನ್ ಬೇಸರ; ಪ್ರಿಯಾ ಕೊಟ್ರು ಉತ್ತರ

ಈ ಕಾರ್ಯಕ್ರಮದಲ್ಲಿ ಶಿವಣ್ಣ ಆಡಿದ ಮಾತು ಗಮನ ಸೆಳೆಯಿತು. ಇದಕ್ಕೆ ರವಿಚಂದ್ರನ್ ಬೇಸರ ಮಾಡಿಕೊಂಡರು. ಪ್ರಿಯಾ ಸುದೀಪ್ ಸಮಾಧಾನ ಆಗುವಂಥ ಉತ್ತರ ಕೊಟ್ಟರು.

ಸಂಚಿತ್​ಗೆ ವೆಲ್​ಕಮ್​ ಟು ‘S’​ ಗ್ರೂಪ್ ಎಂದ ಶಿವಣ್ಣ, ರವಿಚಂದ್ರನ್ ಬೇಸರ; ಪ್ರಿಯಾ ಕೊಟ್ರು ಉತ್ತರ
ಜಿಮ್ಮಿ ಲಾಂಚ್​ ಇವೆಂಟ್
ರಾಜೇಶ್ ದುಗ್ಗುಮನೆ
|

Updated on:Jun 26, 2023 | 7:13 AM

Share

ಕಿಚ್ಚ ಸುದೀಪ್ (Kichcha Sudeep) ಅಕ್ಕನ ಮಗ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ‘ಜಿಮ್ಮಿ’ ಚಿತ್ರದ ಮೂಲಕ ಅವರು ಪರಿಚಯಗೊಳ್ಳುತ್ತಿದ್ದಾರೆ. ನಟನೆಯ ಜೊತೆಗೆ ನಿರ್ದೇಶನ ಕೂಡ ಅವರದೇ. ಈ ಚಿತ್ರಕ್ಕೆ ಸುದೀಪ್ ಪತ್ನಿ ಪ್ರಿಯಾ ಕೂಡ ನಿರ್ಮಾಪಕಿ. ಈಗಾಗಲೇ ಹೀರೋ ಇಂಟ್ರೋಡಕ್ಷನ್ ಟೀಸರ್ ರಿಲೀಸ್ ಮಾಡಲಾಗಿದೆ. ಇದಕ್ಕಾಗಿ ಅದ್ದೂರಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮಕ್ಕೆ ಶಿವರಾಜ್​ಕುಮಾರ್, ರವಿಚಂದ್ರನ್, ಸುದೀಪ್ (Sudeep) ಆಗಮಿಸಿದ್ದರು. ಸುದೀಪ್ ತಂದೆ-ತಾಯಿ ಕೂಡ ಆಗಮಿಸಿ ಆಶೀರ್ವಾದ ಮಾಡಿದರು. ಈ ಕಾರ್ಯಕ್ರಮದಲ್ಲಿ ಶಿವಣ್ಣ ಆಡಿದ ಮಾತು ಗಮನ ಸೆಳೆಯಿತು. ಇದಕ್ಕೆ ರವಿಚಂದ್ರನ್ ಬೇಸರ ಮಾಡಿಕೊಂಡರು. ಪ್ರಿಯಾ ಸುದೀಪ್ ಸಮಾಧಾನ ಆಗುವಂಥ ಉತ್ತರ ಕೊಟ್ಟರು.

ವೆಲ್​ಕಮ್​ ಟು ಎಸ್ ಗ್ರೂಪ್ ಎಂದ ಶಿವಣ್ಣ

ವೇದಿಕೆ ಏರಿದ ಶಿವರಾಜ್​ಕುಮಾರ್ ಅವರು ಸಂಚಿತ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಸಂಚಿತ್ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದರು. ಶಿವರಾಜ್​ಕುಮಾರ್, ಸಂಚಿತ್ ಹಾಗೂ ಸುದೀಪ್ ಎಲ್ಲರ ಹೆಸರೂ ಆರಂಭ ಆಗೋದು ‘ಎಸ್​’ನಿಂದ. ಹೀಗಾಗಿ, ‘ವೆಲ್​ಕಮ್​ ಟು ಎಸ್​ ಗ್ರೂಪ್’ ಎಂದರು ಶಿವಣ್ಣ. ಈ ಮಾತಿಗೆ ಸುದೀಪ್ ಮೆಚ್ಚುಗೆ ಸೂಚಿಸಿದರು.

ರವಿಚಂದ್ರನ್ ಏನಂದ್ರು?

‘ಶಿವಣ್ಣ ಹೇಳಿದ್ರು S ಗ್ರೂಪ್ ಅಂತ. R ಮಾತನಾಡೋದು ವೇಸ್ಟ್​. ಸಂಚಿತ್, ಸುದೀಪ್​ ಹೆಸರಲ್ಲಿ ‘ಆರ್​’ ಕೂಡ ಇಲ್ಲ’ ಎಂದರು. ‘ಆರ್​ ಅಕ್ಷರದಲ್ಲಿ ರಾಜ್​ಕುಮಾರ್ ಇದಾರೆ, ಇನ್ನೇನು ಬೇಕು’ ಎಂದರು ಶಿವಣ್ಣ. ಇದಕ್ಕೆ ಸಖತ್ ಚಪ್ಪಾಳೆ, ಸಿಳ್ಳೆ ಬಿತ್ತು.

ಇದನ್ನೂ ಓದಿ: Kichcha Sudeep: ‘K46’ ಟೀಸರ್​ ಬಗ್ಗೆ ದೊಡ್ಡ ಅಪ್​ಡೇಟ್ ನೀಡಿದ ನಟ ಕಿಚ್ಚ ಸುದೀಪ್  

ಪ್ರಿಯಾ ಕೊಟ್ರು ಉತ್ತರ

ಪ್ರಿಯಾ ಅವರು ಸಂಚಿತ್ ಬಗ್ಗೆ ಮಾತನಾಡೋಕೆ ವೇದಿಕೆ ಏರಿದರು. ಈ ವೇಳೆ ಅವರು ‘ಎಸ್​ ಹಾಗೂ ಆರ್’ ಗ್ರೂಪ್ ಬಗ್ಗೆ ಮಾತನಾಡಿದರು. ಈ ಚಿತ್ರ ನಿರ್ಮಾಣ ಆಗುತ್ತಿರುವುದು ‘Supriyanvi Picture Studio’ ಮೂಲಕ. ‘ರವಿಚಂದ್ರನ್ ಅವರೇ Supriyanvi ಅಲ್ಲಿ ಎಸ್ ಹಾಗೂ ಆರ್​ ಎರಡೂ ಇದೆ’ ಎಂದರು. ಪ್ರಿಯಾ ಮಾತಿಗೂ ಎಲ್ಲರೂ ಮೆಚ್ಚುಗೆ ಸೂಚಿಸಿದರು.

ನಿರ್ದೇಶನದ ಜೊತೆ ನಟನೆ

ಲಹರಿ ಫಿಲ್ಸ್ಮ್ಸ್​, ವೇನಸ್ ಎಂಟರ್​ಟೇನರ್ ಹಾಗೂ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮೂಲಕ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ಈ ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ ಸಂಚಿತ್. ಶೀಘ್ರವೇ ತಂಡದ ಇತರರ ಬಗ್ಗೆ ಮಾಹಿತಿ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:11 am, Mon, 26 June 23

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?