ಪುನೀತ್​ ಅವರ ವಿಶೇಷ ಅಭಿಮಾನಿಯನ್ನು ಭೇಟಿ ಮಾಡಿದ ಶಿವಣ್ಣ; ಊರಿಗೆ ಕ್ಷೇಮವಾಗಿ ತಲುಪುವಂತೆ ಸಲಹೆ

| Updated By: ಮದನ್​ ಕುಮಾರ್​

Updated on: Dec 14, 2021 | 9:05 PM

Puneeth Rajkumar Samadhi: ಧಾರವಾಡದಿಂದ ಬೆಂಗಳೂರಿಗೆ ಓಡುತ್ತಾ ಬರುವುದು ಎಂದರೆ ತಮಾಷೆಯ ಮಾತಲ್ಲ. ಅಪ್ಪು ಸಮಾಧಿಗೆ ನಮಿಸಿದ ಬಳಿಕ ದಾಕ್ಷಾಯಿಣಿ ತುಂಬ ಭಾವುಕರಾದರು.

ಪುನೀತ್​ ಅವರ ವಿಶೇಷ ಅಭಿಮಾನಿಯನ್ನು ಭೇಟಿ ಮಾಡಿದ ಶಿವಣ್ಣ; ಊರಿಗೆ ಕ್ಷೇಮವಾಗಿ ತಲುಪುವಂತೆ ಸಲಹೆ
ದಾಕ್ಷಾಯಿಣಿ
Follow us on

ಪುನೀತ್​ ರಾಜ್​ಕುಮಾರ್​ (, Puneeth Rajkumar) ಅವರ ಬಗ್ಗೆ ಜನರು ಇಟ್ಟುಕೊಂಡ ಅಭಿಮಾನ ಸಾಮಾನ್ಯವಾದದ್ದಲ್ಲ. ಹಲವು ಬಗೆಯಲ್ಲಿ ಅವರಿಗೆ ನಮನ ಸಲ್ಲಿಸಲಾಗುತ್ತಿದೆ. ಇಂದು ಅಪ್ಪು ನಮ್ಮೊಂದಿಗೆ ಇಲ್ಲ ಎಂಬ ನೋವು ಎಲ್ಲರ ಮನದಲ್ಲೂ ಇದೆ. ಅದನ್ನು ಮರೆಯಲು ಸಾಧ್ಯವಿಲ್ಲ. ಪುನೀತ್​ ಅವರ ಹೆಸರನ್ನು ಅಮರವಾಗಿಸಲು ಅನೇಕ ಕಾರ್ಯಗಳನ್ನು ಮಾಡಲಾಗುತ್ತಿದೆ. ಅಪ್ಪು ಸಮಾಧಿಗೆ (Puneeth Rajkumar Samadhi) ಇಂದಿಗೂ ಸಾವಿರಾರು ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಕೆಲವರ ಅಭಿಮಾನ ತುಂಬ ವಿಶೇಷ ಎನಿಸುವಂಥದ್ದು. ಧಾರವಾಡದಿಂದ ಮ್ಯಾರಥಾನ್ (Marathon)​ ಮಾಡಿಕೊಂಡು ಬಂದು ಪುನೀತ್​ ಸಮಾಧಿಗೆ ನಮನ ಸಲ್ಲಿಸಿರುವ ದಾಕ್ಷಾಯಿಣಿ ಅವರ ಅಭಿಮಾನಕ್ಕೆ ಡಾ. ರಾಜ್​ ಕುಟುಂಬ ಮನಸೋತಿದೆ. ದಾಕ್ಷಾಯಿಣಿ ಮತ್ತು ಅವರ ಪತಿಯನ್ನು ಶಿವರಾಜ್​ ಕುಮಾರ್ (Shivarajkumar)​ ಅವರು ಭೇಟಿ ಮಾಡಿ ಮಾತನಾಡಿದ್ದಾರೆ.

ದಾಕ್ಷಾಯಿಣಿ ಮತ್ತು ಅವರ ಕುಟುಂಬದವರನ್ನು ಶಿವಣ್ಣ ಇಂದು (ಡಿ.14) ಸಂಜೆ ಭೇಟಿ ಮಾಡಿದರು. ಒಂದಷ್ಟು ಸಮಯ ಮಾತನಾಡಿ ಕುಶಲೋಪರಿ ವಿಚಾರಿಸಿದರು. ನಾಗವಾರದ ನಿವಾಸದಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ ಶಿವರಾಜ್​ಕುಮಾರ್​ ಪತ್ನಿ ಗೀತಾ ಶಿವರಾಜ್​ಕುಮಾರ್​ ಕೂಡ ಇದ್ದರು. ಆರೋಗ್ಯ ವಿಚಾರಿಸಿದ ಬಳಿಕ ಕ್ಷೇಮವಾಗಿ ವಾಪಸ್​ ಊರಿಗೆ ತಲುಪುವಂತೆ ಶಿವಣ್ಣ ಸಲಹೆ ನೀಡಿದರು.

ಧಾರವಾಡದಿಂದ ಬೆಂಗಳೂರಿಗೆ ಓಡುತ್ತಾ ಬರುವುದು ಎಂದರೆ ತಮಾಷೆಯ ಮಾತಲ್ಲ. ದಾಕ್ಷಾಯಿಣಿ ಅವರನ್ನು ರಾಘವೇಂದ್ರ ರಾಜ್​ಕುಮಾರ್​ ಪುತ್ರ ಯುವ ರಾಜ್​ಕುಮಾರ್​ ಅವರು ಬೆಳಗ್ಗೆ ಸಮಾಧಿಯ ಬಳಿ ಬರಮಾಡಿಕೊಂಡರು. ಅದು ದಾಕ್ಷಾಯಿಣಿ ಕುಟುಂಬದವರಿಗೆ ಸಂತಸ ತಂದಿತು. ಅಪ್ಪು ಸಮಾಧಿಗೆ ನಮಿಸಿದ ಬಳಿಕ ದಾಕ್ಷಾಯಿಣಿ ತುಂಬ ಭಾವುಕರಾದರು. ‘ಮಾರ್ಗಮಧ್ಯೆ ನೇತ್ರದಾನ ಮತ್ತು ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತ ಬಂದೆವು. ನಮಗೆ ಅಭಿಮಾನಿ ಸಂಘಗಳು ಬಹಳ ಸಹಕಾರ ನೀಡಿವೆ. ಕುಟುಂಬದ ಬೆಂಬಲ ಕೂಡ ದೊಡ್ಡದು. ಇನ್ನೂ ಎರಡು ವರ್ಷ ಇದೇ ರೀತಿ ಮ್ಯಾರಥಾನ್​ ಮಾಡಿಕೊಂಡು ಸಮಾಧಿಗೆ ಬರುತ್ತೇನೆ. ಅಶ್ವಿನಿ ಮೇಡಂ ಅವರನ್ನು ನೋಡಬೇಕು ಎಂಬ ಆಸೆ ಇತ್ತು. ರಾಘಣ್ಣ ಅವರನ್ನು ಮಾತನಾಡಿಸಬೇಕು ಎಂದುಕೊಂಡಿದ್ದೆ. ಅವರಿಗೆ ಅನಾರೋಗ್ಯ ಆದ ಕಾರಣ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ದಾಕ್ಷಾಯಿಣಿ ಹೇಳಿದ್ದಾರೆ.

ಇದನ್ನೂ ಓದಿ:

ಪುನೀತ್​ ರಾಜ್​ಕುಮಾರ್ ಸಾಧನೆಗಳನ್ನು ಸದನದಲ್ಲಿ ಸಾರಿ ಸಾರಿ ಹೇಳಿದ ಸ್ಪೀಕರ್​ ಕಾಗೇರಿ

ಸದನದಲ್ಲೂ ಪುನೀತ್​ ಬಗ್ಗೆ ಮಾತು; ಕರ್ನಾಟಕ ರತ್ನ, ಪದ್ಮಶ್ರೀ ಪ್ರಶಸ್ತಿ ಬಗ್ಗೆ ಸಿಎಂ ಹೇಳಿದ್ದೇನು?