AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kotigobba 3: ಬಹುನಿರೀಕ್ಷಿತ ‘ಕೋಟಿಗೊಬ್ಬ 3’ ಚಿತ್ರದ ಪ್ರದರ್ಶನ ರದ್ದು; ಕೆರಳಿದ ಅಭಿಮಾನಿಗಳಿಂದ ವಿಜಯಪುರದಲ್ಲಿ ದಾಂಧಲೆ

Kichcha Sudeep: ರಾಜ್ಯದೆಲ್ಲೆಡೆ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ಕೋಟಿಗೊಬ್ಬ 3’ ಬಿಡುಗಡೆ ರದ್ದಾಗಿದೆ. ಇಂದು ಮುಂಜಾನೆಯಿಂದ ಕಾದು ಕುಳಿತಿದ್ದ ಅಭಿಮಾನಿಗಳು ಕೆಲವೆಡೆ ದಾಂಧಲೆ ನಡೆಸಿದ ಪ್ರಕರಣಗಳು ವರದಿಯಾಗಿವೆ.

Kotigobba 3: ಬಹುನಿರೀಕ್ಷಿತ ‘ಕೋಟಿಗೊಬ್ಬ 3’ ಚಿತ್ರದ ಪ್ರದರ್ಶನ ರದ್ದು; ಕೆರಳಿದ ಅಭಿಮಾನಿಗಳಿಂದ ವಿಜಯಪುರದಲ್ಲಿ ದಾಂಧಲೆ
ಚಿತ್ರಮಂದಿರಕ್ಕೆ ನುಗ್ಗಲು ಯತ್ನಿಸುತ್ತಿರುವ ಅಭಿಮಾನಿಗಳು
Follow us
TV9 Web
| Updated By: shivaprasad.hs

Updated on:Oct 14, 2021 | 1:43 PM

ವಿಜಯಪುರ: ‘ಕೋಟಿಗೊಬ್ಬ 3’ ಚಿತ್ರದ ಪ್ರದರ್ಶನ ರದ್ದಾಗಿರುವುದಕ್ಕೆ ವಿಜಯಪುರದ ಡ್ರೀಂಲ್ಯಾಂಡ್​ ಥಿಯೇಟರ್ ಬಳಿ ಅಭಿಮಾನಿಗಳು ದಾಂಧಲೆ ನಡೆಸಿದ್ದಾರೆ. ಚಿತ್ರಮಂದಿರದ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಥಿಯೇಟರ್ ಬಾಗಿಲು ಮುರಿಯಲು ಯತ್ನಿಸಲಾಗಿದೆ. ಥಿಯೇಟರ್ ಎದುರಿದ್ದ ಲೈಟ್​ಗಳನ್ನು ಒಡೆದು ಹಾಕಲಾಗಿದೆ. ಬೆಳಗ್ಗೆಯಿಂದ ಕಾದು ಕುಳಿತಿದ್ದ ಅಭಿಮಾನಿಗಳು, ಪ್ರದರ್ಶನ ರದ್ದಾದ ನಂತರ ತಾಳ್ಮೆ ಕಳೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ. ನಟ ಕಿಚ್ಚ ಸುದೀಪ್, ನಿರ್ಮಾಪಕ ಸೂರಪ್ಪ ಬಾಬು ಸೇರಿದಂತೆ ಚಿತ್ರತಂಡದವರು ಅಭಿಮಾನಿಗಳಿಗೆ ಶಾಂತ ರೀತಿಯಿಂದ ಇರುವಂತೆ ಕೇಳಿಕೊಂಡಿದ್ದರೂ ಕೂಡ, ಅಭಿಮಾನಿಗಳು ತಾಳ್ಮೆ ಕಳೆದುಕೊಂಡಿದ್ದಾರೆ. ತಾಂತ್ರಿಕ ಸಮಸ್ಯೆಯಲ್ಲಿ ಚಿತ್ರಮಂದಿರದ ತಪ್ಪಿಲ್ಲ ಎಂದು ತಿಳಿಸಲಾಗಿದ್ದರೂ, ಉದ್ರಿಕ್ತ ಅಭಿಮಾನಿಗಳು ಹಾನಿ ಎಸಗಿದ್ದಾರೆ.

ಬೆಳಗಾವಿ: ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ರದ್ದಾದ ಹಿನ್ನೆಲೆಯಲ್ಲಿ ಅಭಿಮಾನಿಗಳನ್ನ ಪ್ರಚೋದಿಸುತ್ತಿದ್ದ ಯುವಕನಿಗೆ ಸಿಪಿಐ ಕಪಾಳಮೋಕ್ಷ ಮಾಡಿದ್ಧಾರೆ. ತಾಂತ್ರಿಕ ಸಮಸ್ಯೆ ಬಗ್ಗೆ ತಿಳಿಹೇಳಿದರೂ ಕೇಳದೇ ಅಭಿಮಾನಿಗಳನ್ನ ಕೆಲವರು ಪ್ರಚೋದಿಸುತ್ತಿದ್ದರು. ನಾಳೆ ಕೋಟಿಗೊಬ್ಬ 3 ರಿಲೀಸ್ ಆಗುತ್ತೆ ಎಂದು ಮೈಕ್‌ನಲ್ಲಿ ಅನೌನ್ಸ್ ಮಾಡುತ್ತಿರುವಾಗ, ಅದಕ್ಕೆ ಆಕ್ರೋಶ ವ್ಯಕ್ತಪಡಿಸಿ ಅಭಿಮಾನಿಗಳನ್ನು ಪಾನಮತ್ತ ಯುವಕನೊಬ್ಬ ಪ್ರಚೋದಿಸಿದಾಗ, ಸಿಪಿಐ ಕಪಾಳಮೋಕ್ಷ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅಭಿಮಾನಿಗಳ ಗುಂಪನ್ನು ಪೊಲೀಸರು ಚದುರಿಸಿದ್ದಾರೆ. ಚಿತ್ರಮಂದಿರದಲ್ಲಿ ಟಿಕೆಟ್ ವಾಪಸ್ ನೀಡಿ ಹಣ ಪಡೆದು ಅಭಿಮಾನಿಗಳು ಮರಳುತ್ತಿದ್ದಾರೆ.

ಪ್ರಚೋದಿಸಿದ ಅಭಿಮಾನಿಗೆ ಸಿಪಿಐ ಕಪಾಳಮೋಕ್ಷ ಮಾಡಿದ ವಿಡಿಯೋ ವರದಿ ಇಲ್ಲಿದೆ:

ಯಾದಗಿರಿ, ಹುಬ್ಬಳ್ಳಿಯಲ್ಲೂ ಅಭಿಮಾನಿಗಳ ಆಕ್ರೋಶ: ಯಾದಗಿರಿ: ಇಂದು ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ರದ್ದಾದ ಹಿನ್ನೆಲೆಯಲ್ಲಿ ಶಹಾಪುರ‌ದ ಜಯಶ್ರೀ ಚಿತ್ರಮಂದಿರದ ಬಳಿ ಕಿಚ್ಚ ಸುದೀಪ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ಧಾರೆ.

ಹುಬ್ಬಳ್ಳಿಯಲ್ಲೂ ಕಿಚ್ಚ ಸುದೀಪ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಬೆಳಗ್ಗೆಯೇ ಬಂದು ಟಿಕೆಟ್ ಪಡೆದಿದ್ವಿ ಎಂದು ಅಲವತ್ತುಕೊಂಡಿದ್ದಾರೆ. ಪೊಲೀಸರ ಮಧ್ಯೆ ಪ್ರವೇಶದಿಂದ ಪರಸ್ಥಿತಿ ತಿಳಿಯಾಗಿದ್ದು, ನಾಳೆ ಈಗಾಗಲೇ ಟಿಕೆಟ್ ಪಡೆದವರಿಗೆ ಅವಕಾಶ ನೀಡುವುದಾಗಿ ಚಿತ್ರಮಂದಿರ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:

Kichcha Sudeep: ‘ಕೋಟಿಗೊಬ್ಬ 3’ ಬಿಡುಗಡೆಯಾಗದ ಹಿನ್ನೆಲೆ; ಫ್ಯಾನ್ಸ್ ಬಳಿ ಕ್ಷಮೆ ಕೋರಿದ ಕಿಚ್ಚ ಸುದೀಪ್

‘ಕೋಟಿಗೊಬ್ಬ 3’ ರಿಲೀಸ್​ ಏಕಾಗಲಿಲ್ಲ? ಅಸಲಿಗೆ ಆಗಿದ್ದೇನು? ಇಲ್ಲಿದೆ ನಿಜವಾದ ಕಾರಣ

Published On - 1:30 pm, Thu, 14 October 21

ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ
ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ
ವಿಮಾನ ಅಪಘಾತದ ವೇಳೆ ಹಾಸ್ಟೆಲ್​ನಿಂದ ಹಾರಿದ ವೈದ್ಯಕೀಯ ವಿದ್ಯಾರ್ಥಿಗಳು
ವಿಮಾನ ಅಪಘಾತದ ವೇಳೆ ಹಾಸ್ಟೆಲ್​ನಿಂದ ಹಾರಿದ ವೈದ್ಯಕೀಯ ವಿದ್ಯಾರ್ಥಿಗಳು
ರಸ್ತೆ ಪಕ್ಕದ ಕಟ್ಟೆ ಮೇಲೆ ಕುಳಿತು ಘರ್ಜಿಸಿದ ಹುಲಿ: ಅಪರೂಪದ ದೃಶ್ಯ ಇಲ್ಲಿದೆ
ರಸ್ತೆ ಪಕ್ಕದ ಕಟ್ಟೆ ಮೇಲೆ ಕುಳಿತು ಘರ್ಜಿಸಿದ ಹುಲಿ: ಅಪರೂಪದ ದೃಶ್ಯ ಇಲ್ಲಿದೆ
ಈಡಿ ಸಮನ್ಸ್ ಮತ್ತು ನೋಟೀಸುಗಳು ನಮಗೆ ಹೊಸದೇನಲ್ಲ: ಶಿವಕುಮಾರ್
ಈಡಿ ಸಮನ್ಸ್ ಮತ್ತು ನೋಟೀಸುಗಳು ನಮಗೆ ಹೊಸದೇನಲ್ಲ: ಶಿವಕುಮಾರ್
ಬೇರೆ ಘಟನೆ ಉಲ್ಲೇಖಿಸಿ ಸಿಎಂ ಹೊಣೆಗಾರಿಕೆ ತಪ್ಪಿಸಿಕೊಳ್ಳುತ್ತಿದ್ದಾರೆ: ರವಿ
ಬೇರೆ ಘಟನೆ ಉಲ್ಲೇಖಿಸಿ ಸಿಎಂ ಹೊಣೆಗಾರಿಕೆ ತಪ್ಪಿಸಿಕೊಳ್ಳುತ್ತಿದ್ದಾರೆ: ರವಿ
ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮ ಬೇಡವೆಂದರೂ ಸಿಎಂ ಒತ್ತಾಯಿಸಿದರು: ಅಶೋಕ
ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮ ಬೇಡವೆಂದರೂ ಸಿಎಂ ಒತ್ತಾಯಿಸಿದರು: ಅಶೋಕ
ನಿನ್ನೆ ಗುಡ್ಡ ಕುಸಿದರೂ ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಜನ
ನಿನ್ನೆ ಗುಡ್ಡ ಕುಸಿದರೂ ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಜನ
ಅಪ್ಪನಿಗೇ ಆವಾಜ್ ಹಾಕಿದ ನಯನತಾರಾ ಮಗ; ಇಲ್ಲಿದೆ ಫನ್ನಿ ವಿಡಿಯೋ
ಅಪ್ಪನಿಗೇ ಆವಾಜ್ ಹಾಕಿದ ನಯನತಾರಾ ಮಗ; ಇಲ್ಲಿದೆ ಫನ್ನಿ ವಿಡಿಯೋ
ಮಾಧ್ಯಮಗಳ ಜೊತೆ ಮಾತಾಡುವ ಮೊದಲು ಸೈಕ್ಲಿಂಗ್ ಮಾಡಿದ ಶಿವಕುಮಾರ್
ಮಾಧ್ಯಮಗಳ ಜೊತೆ ಮಾತಾಡುವ ಮೊದಲು ಸೈಕ್ಲಿಂಗ್ ಮಾಡಿದ ಶಿವಕುಮಾರ್
VIDEO: ಎರಡಂಕಿ ಸ್ಕೋರ್​ಗೆ ಆಲೌಟ್: RCB ದಾಖಲೆ ಸೇಫ್..!
VIDEO: ಎರಡಂಕಿ ಸ್ಕೋರ್​ಗೆ ಆಲೌಟ್: RCB ದಾಖಲೆ ಸೇಫ್..!