AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘UI’ ಸಿನಿಮಾಕ್ಕೆ ಬುಡಾಪೆಸ್ಟ್​ನಲ್ಲಿ ಸಂಗೀತ ರೆಕಾರ್ಡ್ ಮಾಡಿದ ಉಪ್ಪಿ-ಅಜನೀಶ್

ಉಪೇಂದ್ರ ನಿರ್ದೇಶನದ ‘ಯುಐ’ ಸಿನಿಮಾಕ್ಕೆ ಹಂಗೆರಿಯಲ್ಲಿ ಲೈವ್ ಸಂಗೀತ ರೆಕಾರ್ಡ್ ಮಾಡಲಾಗಿದೆ. ಉಪೇಂದ್ರ ಹಾಗೂ ಅಜನೀಶ್ ಖುದ್ದಾಗಿ ತೆರಳಿ ತಮ್ಮ ಸಿನಿಮಾಕ್ಕೆ ಸಂಗೀತ ರೆಕಾರ್ಡ್ ಮಾಡಿಕೊಂಡಿದ್ದಾರೆ.

‘UI’ ಸಿನಿಮಾಕ್ಕೆ ಬುಡಾಪೆಸ್ಟ್​ನಲ್ಲಿ ಸಂಗೀತ ರೆಕಾರ್ಡ್ ಮಾಡಿದ ಉಪ್ಪಿ-ಅಜನೀಶ್
Follow us
ಮಂಜುನಾಥ ಸಿ.
|

Updated on: May 24, 2024 | 1:10 PM

ಉಪೇಂದ್ರ (Upendra) ನಟಿಸಿ ನಿರ್ದೇಶನ ಮಾಡಿರುವ ಹೊಸ ಸಿನಿಮಾ ‘UI’ ಈಗಾಗಲೇ ಹಲವು ಕಾರಣಗಳಿಂದ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾದ ಟ್ರೋಲ್ ಹಾಡು ಈಗಾಗಲೇ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಸಿನಿಮಾದ ಎಲ್ಲ ಹಾಡನ್ನೂ ಅದ್ಭುತವಾಗಿ ತೆರೆಗೆ ತರಬೇಕೆಂಬ ಪ್ರಯತ್ನದಲ್ಲಿ ಚಿತ್ರತಂಡ ನಿರತವಾಗಿದ್ದು, ಇದೇ ಕಾರಣಕ್ಕೆ ಹಾಡಿನ ರೆಕಾರ್ಡ್​ಗಾಗಿ ಮೊದಲ ಯೂರೂಪಿಯನ್ ದೇಶವಾದ ಹಂಗೆರಿಗೆ ತೆರಳಿದೆ. ಹಂಗೆರಿಯ ಪ್ರಮುಖ ನಗರ ಬುಡಾಪೆಸ್ಟ್​ನಲ್ಲಿ ಹಾಡಿನ ರೆಕಾರ್ಡ್ ಮಾಡಲಾಗುತ್ತಿದೆ. 90-ಪೀಸ್ ಆರ್ಕೆಸ್ಟ್ರಾ ಬಳಸಿ ಸಂಗೀತವನ್ನು ರೆಕಾರ್ಡ್ ಮಾಡಲಾಗುತ್ತಿದೆ.

‘UI’ಗೆ ಹಿನ್ನೆಲೆ ಸಂಗೀತವನ್ನು ಬಿ ಅಜನೀಶ್ ಲೋಕನಾಥ್ ನೀಡುತ್ತಿದ್ದಾರೆ. ಯುರೋಪ್‌ನ ಬುಡಾಪೆಸ್ಟ್ ಆರ್ಕೆಸ್ಟ್ರಾ ತಮ್ಮ ಉತ್ಕೃಷ್ಟ ಗುಣಮಟ್ಟದ ಸಂಗೀತಕ್ಕಾಗಿ ವಿಶ್ವದೆಲ್ಲೆಡೆ ಹೆಸರುವಾಸಿ. ಇದೀಗ ಅವರ ಸಹಯೋಗದೊಂದಿಗೆ ‘ಯುಐ’ ಸಿನಿಮಾಕ್ಕೆ ಹಾಡು ಮಾಡಲಾಗುತ್ತಿದೆ. ನೂರಾರು ಮಂದಿ ಒಂದೇ ಬಾರಿಗೆ ಸಂಗೀತವನ್ನು ನುಡಿಸಿ ಅದನ್ನು ಲೈವ್ ಆಗಿ ರೆಕಾರ್ಡ್ ಮಾಡಲಾಗುತ್ತದೆ. ಬುಡಾಪೆಸ್ಟ್ ನ ಸಂಗೀತಗಾರರಿಗೆ ಜನಪದ ವಾದ್ಯಗಳ ಪರಿಚಯ ಹೆಚ್ಚಾಗಿದೆ, ಅವರ ಸಂಗೀತದ ನುಡಿಸುವಿಕೆ ಇತರೆ ಸಂಗೀತಗಾರರಿಗಿಂತಲೂ ಭಿನ್ನ ಹಾಗೂ ಉತ್ಕೃಷ್ಟವಾಗಿರುತ್ತದೆ ಎನ್ನಲಾಗುತ್ತಿದೆ. ಹಾಗಾಗಿ ಅಜನೀಶ್ ಲೋಕನಾಥ್ ಬುಡಾಪೆಸ್ಟ್​ನಲ್ಲಿ ತಮ್ಮ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿಸುತ್ತಿದ್ದಾರೆ.

ಇದನ್ನೂ ಓದಿ:Troll Song: ‘ಜೋಡೆತ್ತು ಒಟ್ಟಾಗಿ ನಿಂತ್ರೆ ಗೆಲುವು ಅಕ್ಕಂದೇ’; ‘ಯುಐ’ ಹಾಡಿನಲ್ಲಿ ಟ್ರೋಲ್​ ಆಗುವ ಸಾಹಿತ್ಯ

ಕನ್ನಡದ ‘ವಿಕ್ರಾಂತ್ ರೋಣ’, ‘ಕೆಜಿಎಫ್ 2’ ಸಿನಿಮಾಗಳ ಸಂಗೀತವನ್ನು ಬುಡಾಪೆಸ್ಟ್​ನಲ್ಲಿ ರೆಕಾರ್ಡ್ ಮಾಡಲಾಗಿತ್ತು. ತೆಲುಗಿನ ‘ಸರಿಲೇರು ನೀಕೆವ್ವರು’, ‘ಸಲಾರ್’ ಸಿನಿಮಾಗಳು ಸಂಗೀತವನ್ನು ಸಹ ಈ ಹಿಂದೆ ಬುಡಾಪೆಸ್ಟ್‌ನಲ್ಲಿ ರೆಕಾರ್ಡ್ ಮಾಡಿದ್ದರು. ಆದರೆ ‘ಯುಐ’ ಸಿನಿಮಾಕ್ಕಾಗಿ ಪೂರ್ಣ 90-ಪೀಸ್ ಆರ್ಕೆಸ್ಟ್ರಾ ಬಳಸಿಕೊಂಡು ಸಂಗೀತ ರೆಕಾರ್ಡ್ ಮಾಡಲಾಗುತ್ತಿದೆ. ಅತ್ಯುತ್ತಮ ಸಂಗೀತದ ಅನುಭವವನ್ನು ನೀಡಲೆಂದು ‘ಯುಐ’ ಸಿನಿಮಾ ಶ್ರಮಿಸುತ್ತಿದ್ದು, ಗುಣಮಟ್ಟದ ಹಾಡು ಹಾಗೂ ಹಿನ್ನೆಲೆ ಸಂಗೀತವನ್ನು ‘ಯುಐ’ಗಾಗಿ ನೀಡಲಾಗುತ್ತಿದೆ.

‘UI’ ಸಿನಿಮಾವನ್ನು ಉಪೇಂದ್ರ ನಿರ್ದೇಶಿಸಿದ್ದಾರೆ. 9 ವರ್ಷಗಳ ನಂತರ ಉಪೇಂದ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. 2015 ರಲ್ಲಿ ಉಪೇಂದ್ರ ನಿರ್ದೇಶನ ಮಾಡಿದ್ದ ‘ಉಪ್ಪಿ 2’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾ ಹಿಟ್ ಎನಿಸಿಕೊಂಡಿತ್ತು. ಇದೀಗ ‘ಯುಐ’ ಸಿನಿಮಾಕ್ಕೆ ಲಹರಿ ಫಿಲ್ಮ್ಸ್ ಮತ್ತು ವೀನಸ್ ಎಂಟರ್‌ಟೈನರ್ಸ್ ನಿರ್ಮಾಣ ಸಂಸ್ಥೆಗಳು ಬಂಡವಾಳ ಹೂಡಿವೆ. ಕೆಪಿ ಶ್ರೀಕಾಂತ್ ಹಾಗೂ ಲಹರಿ ವೇಲು ಅವರುಗಳು ‘ಯುಐ’ ಸಿನಿಮಾದ ಔಟ್​ಪುಟ್ ಉತ್ಕೃಷ್ಟ ಗುಣಮಟ್ಟದ್ದಾಗಿರಬೇಕೆಂಬ ನಿರ್ಣಯ ತೆಗೆದುಕೊಂಡಿದ್ದಾರೆ.

ಉಪೇಂದ್ರ ನಿರ್ದೇಶನದ ‘ಎ’ ಸಿನಿಮಾ ಇತ್ತೀಚೆಗಷ್ಟೆ ಮರು ಬಿಡುಗಡೆ ಆಗಿ ಮತ್ತೊಮ್ಮೆ ಸೂಪರ್ ಹಿಟ್ ಎನಿಸಿಕೊಂಡಿದೆ. ಉಪೇಂದ್ರ ನಿರ್ದೇಶನಕ್ಕೆ ಈಗಲೂ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ ಎಂಬುದಕ್ಕೆ ‘ಎ’ ಸಿನಿಮಾದ ಯಶಸ್ಸು ಹೊಸ ಸಾಕ್ಷಿ. ‘ಯುಐ’ ಹೊರತಾಗಿ ಉಪೇಂದ್ರ, ‘ಬುದ್ಧಿವಂತ 2’, ‘ಕಬ್ಜ 2’, ಅರ್ಜುನ್ ಜನ್ಯ ನಿರ್ದೇಶನದ ‘45’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ