AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sadhu Kokila: ಸಾಧು ಹೆಸರಿನ ಜೊತೆ ಕೋಕಿಲ ಅಂತ ಸೇರಿಸಿದ್ದು ಕನ್ನಡದ ಈ ಸ್ಟಾರ್​ ಹೀರೋ

ಸಾಧು ಕೋಕಿಲ ಚಿತ್ರರಂಗಕ್ಕೆ ಬಂದಿದ್ದು ಮ್ಯೂಸಿಕ್ ಕಂಪೋಸರ್ ಆಗಿ. ನಂತರ ಅವರು ಬಣ್ಣ ಹಚ್ಚಿದರು. ಚಿತ್ರರಂಗಕ್ಕೆ ಬರುವಾಗ ಅವರು ಸಾಧು ಆಗಿದ್ದರು. ನಂತರ ಕೋಕಿಲ ಅನ್ನೋದು ಅವರ ಹೆಸರಿಗೆ ಸೇರ್ಪಡೆ ಆಯಿತು.

Sadhu Kokila: ಸಾಧು ಹೆಸರಿನ ಜೊತೆ ಕೋಕಿಲ ಅಂತ ಸೇರಿಸಿದ್ದು ಕನ್ನಡದ ಈ ಸ್ಟಾರ್​ ಹೀರೋ
ಸಾಧು ಕೋಕಿಲ
ರಾಜೇಶ್ ದುಗ್ಗುಮನೆ
|

Updated on: Feb 16, 2023 | 11:55 AM

Share

ಸಾಧು ಕೋಕಿಲ (Sadhu Kokila) ಅವರು ಮಾಡೋ ಕಾಮಿಡಿಗೆ ನಗದವರೇ ಇಲ್ಲ. ಅವರು ತೆರೆಮೇಲೆ ಬಂದರೆ ಸ್ಟಾರ್​ ಹೀರೋಗೆ ಬಿದ್ದಷ್ಟೇ ಶಿಳ್ಳೆ ಅವರಿಗೂ ಬೀಳುತ್ತದೆ. ಇದು ಸಾಧು ಕನ್ನಡದಲ್ಲಿ ಸೃಷ್ಟಿ ಮಾಡಿರುವ ಹವಾ. ಸಾಧು ಕೋಕಿಲ ಅವರು ತೀರಾ ಬಡ ಕುಟುಂಬದಿಂದ ಬಂದವರು. ಈಗ ಕನ್ನಡದ ಬೇಡಿಕೆಯ ಹಾಸ್ಯ ನಟ ಆಗಿದ್ದಾರೆ. ಅವರು ಚಿತ್ರರಂಗಕ್ಕೆ ಬಂದಿದ್ದು ಮ್ಯೂಸಿಕ್ ಕಂಪೋಸರ್ ಆಗಿ. ನಂತರ ಅವರು ಬಣ್ಣ ಹಚ್ಚಿದರು. ಚಿತ್ರರಂಗಕ್ಕೆ ಬರುವಾಗ ಅವರು ಸಾಧು ಆಗಿದ್ದರು. ನಂತರ ಕೋಕಿಲ ಅನ್ನೋದು ಅವರ ಹೆಸರಿಗೆ ಸೇರ್ಪಡೆ ಆಯಿತು. ಇದರಿಂದ ಅವರು ‘ಸಾಧು ಕೋಕಿಲ’ ಆದರು.

ಹೆಸರು ಕೊಟ್ಟಿದ್ದು ಉಪೇಂದ್ರ

‘ಶ್’ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿ ಬಂದ ಹಾರರ್, ಸಸ್ಪೆನ್ಸ್​ ಸಿನಿಮಾ. ಈ ಚಿತ್ರ ಹಿಟ್ ಆಯಿತು. ಈ ಚಿತ್ರಕ್ಕೆ ಸಾಧು ಕೋಕಿಲ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಕೂಡ ಮಾಡಿದ್ದರು. ಈ ಸಿನಿಮಾದ ಜತೆಗೆ ಹಾಡುಗಳು ಹಿಟ್ ಆದವು. ಈ ಚಿತ್ರದ ಶೂಟಿಂಗ್ ವೇಳೆ ಸಾಧು ಜತೆ ಕೋಕಿಲ ಎನ್ನುವುದನ್ನು ಉಪೇಂದ್ರ ಸೇರ್ಪಡೆ ಮಾಡಿದರು.

ಮೊದಲ ಸಿನಿಮಾ ಬಗ್ಗೆ ಹೇಳಿಕೊಂಡಿದ್ದ ಸಾಧು

‘ವಿ.ಮನೋಹರ್ ಅವರಿಂದ ನಾನು ಉಪೇಂದ್ರಗೆ ಪರಿಚಯಗೊಂಡೆ. ಕಂಪೋಸ್​ಗೆ ತಿಂಗಳಾನುಗಟ್ಟಲೆ ತೆಗೆದುಕೊಂಡೆ. ಯಾವುದೇ ಟ್ಯೂನ್ ಕಂಪೋಸ್ ಮಾಡಿದರೂ ಅವರಿಗೆ ಇಷ್ಟ ಆಗುತ್ತಿರಲಿಲ್ಲ. ನನ್ನ ನೋಡಿ ಅವರು ನಗುತ್ತಿದ್ದರು. ಒಂದಿನ ಸೆಟ್​ಗೆ ಬನ್ನಿ ಎಂದರು. ನಾನು ಹೋದೆ. ಆಗ ಆ್ಯಕ್ಟ್ ಮಾಡಿ ಎಂದರು. ನಾನು ನಟಿಸಿದೆ. ಅಲ್ಲಿಂದ ನನ್ನ ನಟನಾ ಪಯಣ ಶುರು. ಅವರೇ ನನಗೆ ಗಾಡ್ ಫಾದರ್​’ ಎಂದು ಸಾಧು ಕೋಕಿಲ ‘ವೀಕೆಂಡ್ ವಿತ್ ರಮೇಶ್ ಸೀಸನ್ 2’ನಲ್ಲಿ ಹೇಳಿಕೊಂಡಿದ್ದರು.

‘ನಾನು ಚೆನ್ನಾಗಿ ಮ್ಯೂಸಿಕ್ ಮಾಡ್ತೀನಿ ಎನ್ನುವ ಕಾರಣಕ್ಕೆ ಕೋಕಿಲ ಅಂತ ನನ್ನ ಹೆಸರಿಗೆ ಸೇರಿಸಿದ್ದು ಉಪೇಂದ್ರ. ನಾನು ಸಾಧು ಅಷ್ಟೇ ಆಗಿದ್ದೆ. ಕೋಗಿಲೆ ಚೆನ್ನಾಗಿ ಕೂಗುತ್ತದೆ. ನೀವು ಸಖತ್​ ಆಗಿ ಮ್ಯೂಸಿಕ್ ಮಾಡ್ತೀರಾ. ಹೀಗಾಗಿ, ನನ್ನ ಹೆಸರಿಗೆ ಕೋಕಿಲ ಅನ್ನೋದನ್ನು ಸೇರಿಸಿದರು’ ಎಂದು ಸುವರ್ಣ ವಾಹಿನಿಯ ಕಾರ್ಯಕ್ರಮದಲ್ಲಿ ಸಾಧು ಈ ಮೊದಲು ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?