AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sadhu Kokila: ಸಾಧು ಹೆಸರಿನ ಜೊತೆ ಕೋಕಿಲ ಅಂತ ಸೇರಿಸಿದ್ದು ಕನ್ನಡದ ಈ ಸ್ಟಾರ್​ ಹೀರೋ

ಸಾಧು ಕೋಕಿಲ ಚಿತ್ರರಂಗಕ್ಕೆ ಬಂದಿದ್ದು ಮ್ಯೂಸಿಕ್ ಕಂಪೋಸರ್ ಆಗಿ. ನಂತರ ಅವರು ಬಣ್ಣ ಹಚ್ಚಿದರು. ಚಿತ್ರರಂಗಕ್ಕೆ ಬರುವಾಗ ಅವರು ಸಾಧು ಆಗಿದ್ದರು. ನಂತರ ಕೋಕಿಲ ಅನ್ನೋದು ಅವರ ಹೆಸರಿಗೆ ಸೇರ್ಪಡೆ ಆಯಿತು.

Sadhu Kokila: ಸಾಧು ಹೆಸರಿನ ಜೊತೆ ಕೋಕಿಲ ಅಂತ ಸೇರಿಸಿದ್ದು ಕನ್ನಡದ ಈ ಸ್ಟಾರ್​ ಹೀರೋ
ಸಾಧು ಕೋಕಿಲ
ರಾಜೇಶ್ ದುಗ್ಗುಮನೆ
|

Updated on: Feb 16, 2023 | 11:55 AM

Share

ಸಾಧು ಕೋಕಿಲ (Sadhu Kokila) ಅವರು ಮಾಡೋ ಕಾಮಿಡಿಗೆ ನಗದವರೇ ಇಲ್ಲ. ಅವರು ತೆರೆಮೇಲೆ ಬಂದರೆ ಸ್ಟಾರ್​ ಹೀರೋಗೆ ಬಿದ್ದಷ್ಟೇ ಶಿಳ್ಳೆ ಅವರಿಗೂ ಬೀಳುತ್ತದೆ. ಇದು ಸಾಧು ಕನ್ನಡದಲ್ಲಿ ಸೃಷ್ಟಿ ಮಾಡಿರುವ ಹವಾ. ಸಾಧು ಕೋಕಿಲ ಅವರು ತೀರಾ ಬಡ ಕುಟುಂಬದಿಂದ ಬಂದವರು. ಈಗ ಕನ್ನಡದ ಬೇಡಿಕೆಯ ಹಾಸ್ಯ ನಟ ಆಗಿದ್ದಾರೆ. ಅವರು ಚಿತ್ರರಂಗಕ್ಕೆ ಬಂದಿದ್ದು ಮ್ಯೂಸಿಕ್ ಕಂಪೋಸರ್ ಆಗಿ. ನಂತರ ಅವರು ಬಣ್ಣ ಹಚ್ಚಿದರು. ಚಿತ್ರರಂಗಕ್ಕೆ ಬರುವಾಗ ಅವರು ಸಾಧು ಆಗಿದ್ದರು. ನಂತರ ಕೋಕಿಲ ಅನ್ನೋದು ಅವರ ಹೆಸರಿಗೆ ಸೇರ್ಪಡೆ ಆಯಿತು. ಇದರಿಂದ ಅವರು ‘ಸಾಧು ಕೋಕಿಲ’ ಆದರು.

ಹೆಸರು ಕೊಟ್ಟಿದ್ದು ಉಪೇಂದ್ರ

‘ಶ್’ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿ ಬಂದ ಹಾರರ್, ಸಸ್ಪೆನ್ಸ್​ ಸಿನಿಮಾ. ಈ ಚಿತ್ರ ಹಿಟ್ ಆಯಿತು. ಈ ಚಿತ್ರಕ್ಕೆ ಸಾಧು ಕೋಕಿಲ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಕೂಡ ಮಾಡಿದ್ದರು. ಈ ಸಿನಿಮಾದ ಜತೆಗೆ ಹಾಡುಗಳು ಹಿಟ್ ಆದವು. ಈ ಚಿತ್ರದ ಶೂಟಿಂಗ್ ವೇಳೆ ಸಾಧು ಜತೆ ಕೋಕಿಲ ಎನ್ನುವುದನ್ನು ಉಪೇಂದ್ರ ಸೇರ್ಪಡೆ ಮಾಡಿದರು.

ಮೊದಲ ಸಿನಿಮಾ ಬಗ್ಗೆ ಹೇಳಿಕೊಂಡಿದ್ದ ಸಾಧು

‘ವಿ.ಮನೋಹರ್ ಅವರಿಂದ ನಾನು ಉಪೇಂದ್ರಗೆ ಪರಿಚಯಗೊಂಡೆ. ಕಂಪೋಸ್​ಗೆ ತಿಂಗಳಾನುಗಟ್ಟಲೆ ತೆಗೆದುಕೊಂಡೆ. ಯಾವುದೇ ಟ್ಯೂನ್ ಕಂಪೋಸ್ ಮಾಡಿದರೂ ಅವರಿಗೆ ಇಷ್ಟ ಆಗುತ್ತಿರಲಿಲ್ಲ. ನನ್ನ ನೋಡಿ ಅವರು ನಗುತ್ತಿದ್ದರು. ಒಂದಿನ ಸೆಟ್​ಗೆ ಬನ್ನಿ ಎಂದರು. ನಾನು ಹೋದೆ. ಆಗ ಆ್ಯಕ್ಟ್ ಮಾಡಿ ಎಂದರು. ನಾನು ನಟಿಸಿದೆ. ಅಲ್ಲಿಂದ ನನ್ನ ನಟನಾ ಪಯಣ ಶುರು. ಅವರೇ ನನಗೆ ಗಾಡ್ ಫಾದರ್​’ ಎಂದು ಸಾಧು ಕೋಕಿಲ ‘ವೀಕೆಂಡ್ ವಿತ್ ರಮೇಶ್ ಸೀಸನ್ 2’ನಲ್ಲಿ ಹೇಳಿಕೊಂಡಿದ್ದರು.

‘ನಾನು ಚೆನ್ನಾಗಿ ಮ್ಯೂಸಿಕ್ ಮಾಡ್ತೀನಿ ಎನ್ನುವ ಕಾರಣಕ್ಕೆ ಕೋಕಿಲ ಅಂತ ನನ್ನ ಹೆಸರಿಗೆ ಸೇರಿಸಿದ್ದು ಉಪೇಂದ್ರ. ನಾನು ಸಾಧು ಅಷ್ಟೇ ಆಗಿದ್ದೆ. ಕೋಗಿಲೆ ಚೆನ್ನಾಗಿ ಕೂಗುತ್ತದೆ. ನೀವು ಸಖತ್​ ಆಗಿ ಮ್ಯೂಸಿಕ್ ಮಾಡ್ತೀರಾ. ಹೀಗಾಗಿ, ನನ್ನ ಹೆಸರಿಗೆ ಕೋಕಿಲ ಅನ್ನೋದನ್ನು ಸೇರಿಸಿದರು’ ಎಂದು ಸುವರ್ಣ ವಾಹಿನಿಯ ಕಾರ್ಯಕ್ರಮದಲ್ಲಿ ಸಾಧು ಈ ಮೊದಲು ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ