AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದ ಇತಿಹಾಸದ ಬಗ್ಗೆ ವಿಷ್ಣುವರ್ಧನ್ ಅದೆಷ್ಟು ಸುಂದರವಾಗಿ ಮಾತನಾಡಿದ್ದರು ನೋಡಿ; ಇಲ್ಲಿದೆ ವಿಡಿಯೋ

ಕಮಲ್ ಹಾಸನ್ ಅವರ ಹೇಳಿಕೆಯಿಂದ ಕನ್ನಡದ ಹುಟ್ಟು ಮತ್ತು ಅದರ ಇತಿಹಾಸದ ಬಗ್ಗೆ ಚರ್ಚೆ ನಡೆದಿದೆ. ವಿಷ್ಣುವರ್ಧನ್ ಅವರ ಒಂದು ಹಳೆಯ ಸಂದರ್ಶನದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ತಮ್ಮ ಆಳವಾದ ಅಭಿಮಾನವನ್ನು ವ್ಯಕ್ತಪಡಿಸಿದ್ದರು. ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

ಕನ್ನಡದ ಇತಿಹಾಸದ ಬಗ್ಗೆ ವಿಷ್ಣುವರ್ಧನ್ ಅದೆಷ್ಟು ಸುಂದರವಾಗಿ ಮಾತನಾಡಿದ್ದರು ನೋಡಿ; ಇಲ್ಲಿದೆ ವಿಡಿಯೋ
ವಿಷ್ಣುವರ್ಧನ್
ರಾಜೇಶ್ ದುಗ್ಗುಮನೆ
|

Updated on: Jun 02, 2025 | 11:45 AM

Share

ಸದ್ಯ ಕನ್ನಡದ ಹುಟ್ಟಿನ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ಆಗಿದ್ದು ಕಾಲಿವುಡ್ ನಟ ಕಮಲ್ ಹಾಸನ್ (Kamal Haasan). ‘ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎಂದು ಹೇಳುವ ಮೂಲಕ ಸಾಕಷ್ಟು ಚರ್ಚೆ ಹುಟ್ಟುಹಾಕಿದರು. ಈ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿವೆ. ಹೀಗಿರುವಾಗಲೇ ವಿಷ್ಣುವರ್ಧನ್ ಸಿನಿಮಾದ ಕ್ಲಿಪ್ ಒಂದು ವೈರಲ್ ಆಗಿದೆ. ಈ ಕ್ಲಿಪ್​ನಲ್ಲಿ ಅವರು ಕನ್ನಡದ ಇತಿಹಾಸದ ಬಗ್ಗೆ ಮಾತನಾಡಿದ್ದರು.

ವಿಷ್ಣುವರ್ಧನ್ ಅವರು ಕನ್ನಡದ ಪರ ಸಾಕಷ್ಟು ಬಾರಿ ಧ್ವನಿ ಎತ್ತಿದ್ದಾರೆ. ಕನ್ನಡದ ನಾಡು-ನುಡಿ ಎಂಬುದು ಬಂದಾಗ ಅವರು ಕನ್ನಡದ ಪರವಾಗಿ ನಿಂತಿದ್ದಾರೆ. ಈ ಸಂದರ್ಭದ ವಿಡಿಯೋಗಳು ಸಾಕಷ್ಟು ಬಾರಿ ವೈರಲ್ ಆಗಿವೆ. ಅದೇ ರೀತಿ ಸಿನಿಮಾಗಳಲ್ಲೂ ವಿಷ್ಣುವರ್ಧನ್ ಕನ್ನಡ ಪರ ಧ್ವನಿ ಎತ್ತಿದ್ದರು. ಆ ವಿಡಿಯೋ ಈಗ ವೈರಲ್ ಆಗಿದೆ. ಸದ್ಯದ ಸಂದರ್ಭಕ್ಕೆ ಈ ವಿಡಿಯೋ ಸರಿ ಹೊಂದುವ ರೀತಿಯಲ್ಲಿದೆ.

1997ರಲ್ಲಿ ರಿಲೀಸ್ ಆದ ‘ಎಲ್ಲರಂತಲ್ಲ ನನ್ನ ಗಂಡ’ ಸಿನಿಮಾದಲ್ಲಿ ವಿಷ್ಣುವರ್ಧನ್, ಪ್ರೇಮಾ, ಉಮಾಶ್ರೀ, ತಾರಾ ಮೊದಲಾದವರು ನಟಿಸಿದ್ದರು. ಈ ಚಿತ್ರಕ್ಕೆ ಎಸ್. ಉಮೇಶ್ ನಿರ್ದೇಶನ ಇತ್ತು. ಸಂದರ್ಶನಕ್ಕಾಗಿ ಬರೋ ವಿಷ್ಣುವರ್ಧನ್​ಗೆ ಕನ್ನಡದ ಬಗ್ಗೆ ಹಾಗೂ ಬೆಂಗಳೂರಿನ ಬಗ್ಗೆ, ಕರ್ನಾಟಕದ ಇತಿಹಾಸದ ಬಗ್ಗೆ ವಿವಿಧ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪ್ರಶ್ನೆಗೆ ಅವರು ಉತ್ತರಿಸಿದ ರೀತಿ ಈಗಿನ ಜನರೇಶನ್ ಮಕ್ಕಳಿಗೆ ಒಂದೊಳ್ಳೆಯ ವಿಕಿಪೀಡಿಯಾ ರೀತಿಯಲ್ಲಿ  ಕಾಣುತ್ತದೆ.

ಇದನ್ನೂ ಓದಿ
Image
ತುಲಾಭಾರ ಮಾಡಿಸಿದ ನಟಿ ಶ್ರೀಲೀಲಾ; ಕಾರಣ ಏನು?
Image
‘ಕರ್ಮ ಸರಿ ಮಾಡುತ್ತದೆ’; ಸಮಂತಾ ಜೊತೆ ಡೇಟ್ ಮಾಡ್ತಿರೋ ಪತಿಗೆ ಪತ್ನಿ ಟಾಂಗ್
Image
‘ಥಗ್ ಲೈಫ್’ ಚಿತ್ರಕ್ಕಿಂದು ನಿರ್ಣಾಯಕ ದಿನ; ಸಿನಿಮಾ ಪ್ರದರ್ಶನ ಅನುಮಾನ
Image
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?

ಆಗಿನ ಕಾಲದಲ್ಲೇ ಬೆಂಗಳೂರಿಗೆ ಪರಭಾಷಿಗರು ಬಂದು ನೆಲೆಸುತ್ತಿದ್ದರು. ಆ ಸಮಸ್ಯೆ ಈಗ ದೊಡ್ಡದಾಗಿದೆ. ಈ ಬಗ್ಗೆ ವಿಷ್ಣುವರ್ಧನ್ ಆಗಿನ ಕಾಲದಲ್ಲೇ ಎಚ್ಚರಿಸಿದ್ದರು. ಬ್ರೀಟಿಷರ ವಶದ ಬಗ್ಗೆ ಮಾತನಾಡುತ್ತಾ, ‘ಬೆಂಗಳೂರನ್ನು ಹಲವು ಭಾಷೆಯವರು ವಶ ಮಾಡಿಕೊಂಡಿದ್ದಾರೆ. ಮುಂದಿನ ವರ್ಷಗಳಲ್ಲಿ ಬೆಂಗಳೂರಲ್ಲಿ ಕನ್ನಡಿಗರು ಎಲ್ಲಿದ್ದಾರೆ ಎಂಬುದನ್ನು ದುರ್ಬೀನ್ ಹಾಕಿ ಹುಡುಕಬೇಕಾಗುತ್ತದೆ’ ಎಂದಿದ್ದರು. ಅದು ಈಗ ನಿಜ ಎನಿಸುತ್ತಿದೆ.

ಇದನ್ನೂ ಓದಿ: ತಮಿಳು ಕನ್ನಡದ ತಾಯಿ ಭಾಷೆ ಅಲ್ಲ, ಸೋದರ ಭಾಷೆ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ

ವಿಷ್ಣುವರ್ಧನ್, ರಾಜ್​ಕುಮಾರ್ ಅವರ ಸಿನಿಮಾಗಳಲ್ಲಿ ಈ ರೀತಿಯ ಅನೇಕ ಉದಾಹರಣೆಗಳು ಸಿಗುತ್ತವೆ. ಆದರೆ, ಇತ್ತೀಚಿನ ಸಿನಿಮಾಗಳಲ್ಲಿ ಇದು ಕಡಿಮೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.