AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Year Ender 2024: ಈ ವರ್ಷ ಕನ್ನಡದಲ್ಲಿ ಹಿಟ್ ಆದ ಸಾಂಗ್​ಗಳ ಪಟ್ಟಿ ಇಲ್ಲಿದೆ; ಮಿಸ್ ಮಾಡದೇ ಕೇಳಿ

ಸಂಜಿತ್ ಹೆಗಡೆ ಹಾಗೂ ಸೋನು ನಿಗಮ್ ಜುಗಲ್​ಬಂದಿಯಲ್ಲಿ ಮೂಡಿಬಂದ ‘ಮಾಯಾವಿ..’ ಹಾಡು ಸಾಕಷ್ಟು ಗಮನ ಸೆಳೆದಿದೆ. ಈ ಹಾಡು ಸೃಷ್ಟಿಸಿದ ಸೆನ್ಸೇಷನ್ ಚಿಕ್ಕಮಟ್ಟದಲ್ಲ. ಈ ಹಾಡು ಈಗಲೂ ಅನೇಕರ ಕಿವಿಯಲ್ಲಿ ಗುನುಗುಡುತ್ತಿದೆ. ಈ ಹಾಡಿಗೆ ಸಂಜಿತ್ ಹೆಗಡೆ ಅವರೇ ಕಂಪೋಸ್ ಮಾಡಿದ್ದು, ಇದು ಆಲ್ಬಂ ಸಾಂಗ್. ಈ ರೀತಿಯ ಹಲವು ಹಿಟ್ ಹಾಡುಗಳು ಇವೆ.

Year Ender 2024: ಈ ವರ್ಷ ಕನ್ನಡದಲ್ಲಿ ಹಿಟ್ ಆದ ಸಾಂಗ್​ಗಳ ಪಟ್ಟಿ ಇಲ್ಲಿದೆ; ಮಿಸ್ ಮಾಡದೇ ಕೇಳಿ
ಸೂಪರ್ ಹಿಟ್ ಹಾಡು
ರಾಜೇಶ್ ದುಗ್ಗುಮನೆ
|

Updated on:Dec 23, 2024 | 2:39 PM

Share

2024ನೇ ಇಸ್ವಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಈ ವರ್ಷ ಹಲವು ಸೂಪರ್ ಹಿಟ್ ಸಿನಿಮಾಗಳು ಬಂದಿವೆ. ಅದೇ ರೀತಿ ಸೂಪರ್ ಹಿಟ್ ಹಾಡುಗಳು ಕೂಡ ಬಂದಿವೆ. ಕೆಲವು ಕಿವಿಗೆ ಇಂಪು ಕೊಟ್ಟರೆ, ಇನ್ನೂ ಕೆಲವು ಜನರನ್ನು ಭಾವನಾತ್ಮಕವಾಗಿ ಸೆಳೆದುಕೊಂಡಿವೆ. ಇನ್ನೂ ಕೆಲವು ಮಾಸ್ ಆಗಿದೆ. ಈ ವರ್ಷ ರಿಲೀಸ್ ಆಗಿ ಹಿಟ್ ಆದ ಕನ್ನಡ ಹಾಡುಗಳ ಬಗ್ಗೆ ಇಲ್ಲಿದೆ ವಿವರ.

‘ದ್ವಾಪರ..’

ಈ ವರ್ಷ ರಿಲೀಸ್ ಆಗಿ ಹಿಟ್ ಆದ ಸಿನಿಮಾಗಳ ಪೈಕಿ ‘ಕೃಷ್ಣಂ ಪ್ರಣಯ ಸಖಿ’ ಚಿತ್ರಕ್ಕೂ ಸ್ಥಾನ ಇದೆ. ಈ ಚಿತ್ರದ ‘ದ್ವಾಪರ..’ ಹಾಡು ಹಿಟ್ ಆಗಿದೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ. ಜಸ್ಕರಣ್ ಸಿಂಗ್ ಹಾಡಿಗೆ ಧ್ವನಿ ಆಗಿದ್ದಾರೆ. ಈ ಚಿತ್ರದ ‘ಚಿನ್ನಮ್ಮ’, ‘ಮೈ ಮ್ಯರೇಝ್ ಈಸ್ ಫಿಕ್ಸ್​..’, ‘ಹೇ ಗಗನಾ..’ ಹಾಡು ಕೂಡ ಗಮನ ಸೆಳೆದಿದೆ.

‘ಭೀಮ’ ಚಿತ್ರದ ಹಾಡುಗಳು

‘ಭೀಮ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದ ‘ಬ್ಯಾಡ್ ಬಾಯ್ಸ್ ಹಾಗೂ ‘ ಡೋಂಟ್ ವರಿ ಬೇಬಿ ಚಿನ್ನಮ್ಮ’, ‘ಆಡಿಬಾ ಮಗನೆ..’ ಹಾಡುಗಳು ಈ ಬಾರಿ ಗಮನ ಸೆಳೆದಿವೆ. ಇದು ದುನಿಯಾ ವಿಜಯ್ ನಟನೆಯ ಸಿನಿಮಾ.

‘ಮಾಯಾವಿ..’

ಸಂಜಿತ್ ಹೆಗಡೆ ಹಾಗೂ ಸೋನು ನಿಗಮ್ ಜುಗಲ್​ಬಂದಿಯಲ್ಲಿ ಮೂಡಿಬಂದ ‘ಮಾಯಾವಿ..’ ಹಾಡು ಸಾಕಷ್ಟು ಗಮನ ಸೆಳೆದಿದೆ. ಈ ಹಾಡು ಸೃಷ್ಟಿಸಿದ ಸೆನ್ಸೇಷನ್ ಚಿಕ್ಕಮಟ್ಟದಲ್ಲ. ಈ ಹಾಡು ಈಗಲೂ ಅನೇಕರ ಕಿವಿಯಲ್ಲಿ ಗುನುಗುಡುತ್ತಿದೆ. ಈ ಹಾಡಿಗೆ ಸಂಜಿತ್ ಹೆಗಡೆ ಅವರೇ ಕಂಪೋಸ್ ಮಾಡಿದ್ದು, ಇದು ಆಲ್ಬಂ ಸಾಂಗ್.

‘ನೀ ನಂಗೆ ಅಲ್ಲವ..’

ಸಂಜಿತ್ ಹೆಗಡೆ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದ್ದೇ ‘ನೀ ನಂಗೆ ಅಲ್ಲವ..’ ಹಾಡು. ಈ ಹಾಡನ್ನು ಸಿನಿಪ್ರಿಯರು ಸಖತ್ ಇಷ್ಟಪಟ್ಟರು. ಈ ಹಾಡಿನ ಲಿರಿಕ್ಸ್ ಇಷ್ಟ ಆಗಿದೆ. ಸಂಜಿತ್ ಹೆಗಡೆ ಅವರೇ ಈ ಹಾಡನ್ನು ಹಾಡಿದ್ದಾರೆ.

‘ಸೌಗಂಧಿಕ..’

ಪ್ರಯೋಗಾತ್ಮಕ ಸಿನಿಮಾಗಳ ಪೈಕಿ ‘ಶಾಖಾಹಾರಿ..’ ಚಿತ್ರ ಹಿಟ್ ಆಗಿದೆ. ಈ ಸಿನಿಮಾದ ‘ಸೌಗಂಧಿಕ..’ ಹಾಡು ಮೆಲೋಡಿಯಾಗಿದ್ದು ಕೇಳುಗರಿಗೆ ಇಷ್ಟ ಆಗಿದೆ. ಇದು ಈ ವರ್ಷದ ಹಿಟ್ ಹಾಡುಗಳಲ್ಲಿ ಒಂದು.

ಮ್ಯಾಕ್ಸಿಮ್ ಮಾಸ್

ಸುದೀಪ್ ಇದ್ದಾರೆ ಎಂದರೆ ಅಲ್ಲಿ ಮ್ಯಾಕ್ಸಿಮಮ್ ಮಾಸ್ ಪಕ್ಕಾ. ಅವರು ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ‘ಮ್ಯಾಕ್ಸಿಮಮ್ ಮಾಸ್..’ ಹಾಡು ಗಮನ ಸೆಳೆದಿದೆ. ಈ  ಹಾಡಿಗೆ ಅನೂಪ್ ಭಂಡಾರಿ ಲಿರಿಕ್ಸ್ ಬರೆದಿದ್ದಾರೆ.

ಎಲ್ಲಾ ಮಾತನ್ನು..

‘ಒಂದು ಸರಳ ಪ್ರೇಮ ಕಥೆ’ ಈ ವರ್ಷದ ಹಿಟ್ ಚಿತ್ರಗಳಲ್ಲಿ ಒಂದು. ಈ ಸಿನಿಮಾದ ‘ಎಲ್ಲಾ ಮಾತನ್ನು..’ ಹಾಡು ಹಿಟ್ ಆಗಿದೆ. ಈ ವರ್ಷ ಬಂದ ಸೂಪರ್ ಹಿಟ್ ಹಾಡುಗಳಲ್ಲಿ ಇದು ಕೂಡ ಒಂದು.

‘ನನಗೆ ನೀನು..’

ಚಿಕ್ಕಣ್ಣ ನಟನೆಯ ‘ಉಪಾಧ್ಯಕ್ಷ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾದ ‘ನನಗೆ ನೀನು..’ ಹಾಡು ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:38 pm, Mon, 23 December 24

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು