AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿಯಲ್ಲಿ ತಾವು ನಂಬಿದ ದೇವರ ದರ್ಶನ ಪಡೆದ ಪುನೀತ್​ ರಾಜ್​ಕುಮಾರ್​! ಯಾವುದು ಆ ದೇವರು?

ಸದ್ಯ ಪುನೀತ್​ ರಾಜ್​ಕುಮಾರ್​ ಅವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಇದೇ ವೇಳೆ ಬಳ್ಳಾರಿಗೆ ಭೇಟಿ ನೀಡಿ ತಾವು ನಂಬಿದ ದೇವರ ದರ್ಶನವನ್ನು ಪಡೆದುಕೊಂಡಿದ್ದಾರೆ.

ಬಳ್ಳಾರಿಯಲ್ಲಿ ತಾವು ನಂಬಿದ ದೇವರ ದರ್ಶನ ಪಡೆದ ಪುನೀತ್​ ರಾಜ್​ಕುಮಾರ್​! ಯಾವುದು ಆ ದೇವರು?
ಪುನೀತ್​ ರಾಜ್​ಕುಮಾರ್​
ಮದನ್​ ಕುಮಾರ್​
| Edited By: |

Updated on: Mar 22, 2021 | 3:44 PM

Share

‘ಪವರ್ ಸ್ಟಾರ್’​ ಪುನೀತ್​ ರಾಜ್​ಕುಮಾರ್​ ನಟನೆಯ ‘ಯುವರತ್ನ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಏ.1ರಂದು ಅದ್ದೂರಿಯಾಗಿ ಈ ಸಿನಿಮಾ ತೆರೆಗೆ ಬರಲಿದೆ. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿಯೂ ‘ಯುವರತ್ನ’ ತೆರೆಕಾಣಲಿದ್ದು, ಭರ್ಜರಿಯಾಗಿಯೇ ಪ್ರಚಾರ ಮಾಡಲಾಗುತ್ತಿದೆ. ಅದಕ್ಕಾಗಿ ಪುನೀತ್​ ರಾಜ್​ಕುಮಾರ್​ ಅವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ.

ಮಾ.21ರಿಂದ 23ರವರೆಗೆ ಮೊದಲ ಹಂತದ ರಾಜ್ಯ ಪ್ರವಾಸ ಮಾಡುತ್ತಿರುವ ಯುವರತ್ನ ಚಿತ್ರತಂಡ ಇಂದು (ಮಾ.22) ಬಳ್ಳಾರಿಗೆ ಭೇಟಿ ನೀಡಿತ್ತು. ಪುನೀತ್​ ರಾಜ್​ಕುಮಾರ್​ ಜೊತೆ ನಟ ಧನಂಜಯ, ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಕೂಡ ಸಾಥ್​ ನೀಡಿದ್ದರು. ಪುನೀತ್​ ಅವರನ್ನು ನೋಡಲು ಬಳ್ಳಾರಿ ಜನರು ಮುಗಿಬಿದ್ದಿದ್ದರು.

ತಮ್ಮನ್ನು ನೋಡಲು ಬಂದ ಸಾವಿರಾರು ಅಭಿಮಾನಿಗಳ ಎದುರಿನಲ್ಲಿ ಪುನೀತ್​ ಮಾತನಾಡಿದರು. ‘ಕನಕ ದುರ್ಗಮ್ಮ ದೇವಿ ದರ್ಶನ ಆಯ್ತು. ಆ ದೇವರ ದರ್ಶನ ನಡೆದ ಜಾಗದಲ್ಲಿ ಅಭಿಮಾನಿಗಳೇ ನಮ್ಮನೆ ದೇವ್ರು ಹಾಡು ಹೇಳಿದ್ದು ಕೂಡ ಆಯ್ತು. ದೇವರ ದರ್ಶನಕ್ಕೂ ಮುಂಚೆ ನಾವು ನಂಬಿರುವ ದೇವರ ದರ್ಶನ ಆಗಿಹೋಯ್ತು. ಈ ಪ್ರೀತಿ ವಿಶ್ವಾಸಕ್ಕೆ ನಾವು ಏನು ಮಾತನಾಡಿದರೂ ಕಮ್ಮಿ’ ಎನ್ನುವ ಮೂಲಕ ಅಭಿಮಾನಿಗಳೇ ತಾವು ನಂಬಿದ ದೇವರು ಎಂದು ಪುನೀತ್​ ಮತ್ತೊಮ್ಮೆ ಹೇಳಿದ್ದಾರೆ.

ಅಭಿಮಾನಿಗಳು ಹಾಕಿದ ಹೂವು, ಶಿಳ್ಳೆ, ಚಪ್ಪಾಳೆ, ಜೈಕಾರ ಕಂಡು ಪುನೀತ್​ ಫಿದಾ ಆಗಿದ್ದಾರೆ. ಬಳ್ಳಾರಿ ಜೊತೆ ತಮಗೆ ಇರುವ ಸಂಬಂಧವನ್ನು ಅವರು ನೆನಪಿಸಿಕೊಂಡರು. ‘ನನ್ನ ಅರಸು, ಪವರ್​ ಸಿನಿಮಾಗಳ ಹಾಡು ಇಲ್ಲೇ ಬಿಡುಗಡೆ ಆಗಿತ್ತು. ದೊಡ್ಮನೆ ಹುಡುಗ ಹಾಡು ಇಲ್ಲೇ ಶೂಟಿಂಗ್​ ಆಗಿತ್ತು. ಈಗ ಯುವರತ್ನಗೋಸ್ಕರ ಇಲ್ಲಿಗೆ ಬಂದಿದ್ದೇನೆ. ಯುವರತ್ನ ಎಂದರೆ ನಾನಲ್ಲ. ಪ್ರತಿಯೊಬ್ಬ ಯುವಕನೂ, ಇಲ್ಲಿರುವ ಎಲ್ಲರೂ ಯುವರತ್ನಗಳೇ’ ಎಂದು ಪುನೀತ್​ ಹೇಳಿದ್ದಾರೆ.

ನೆಚ್ಚಿನ ನಟನನ್ನು ನೋಡಲು ಸಾವಿರಾರು ಅಭಿಮಾನಿಗಳು ಒಟ್ಟಿಗೆ ಮುಗಿಬಿದ್ದಿದ್ದರಿಂದ ಕೆಲವು ಕಾಲ ನೂಕು ನುಗ್ಗಲು ಉಂಟಾಗಿತ್ತು. ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಚ್​ ಕೂಡ ಮಾಡಬೇಕಾಯಿತು. ಪುನೀತ್​ ಜೊತೆ ವೇದಿಕೆಯಲ್ಲಿ ಸಾಥ್​ ನೀಡಿದ ಡಾಲಿ ಧನಂಜಯ ಅವರು ‘ಯುವರತ್ನ’ ಸಿನಿಮಾದ ಡೈಲಾಗ್​ ಹೇಳಿ ಎಲ್ಲರನ್ನೂ ರಂಜಿಸಿದರು.

ಇದನ್ನೂ ಓದಿ: ನನ್ನನ್ನು ಪ್ರೀತಿಸಬೇಡಿ, ನನಗೆ ಮದ್ವೆ ಆಗಿದೆ; ಪುನೀತ್​ ರಾಜ್​ಕುಮಾರ್​ ಹೀಗೆ ಅಂದಿದ್ಯಾಕೆ?

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು