AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿನಿಮಾ ವಿಚಾರದಲ್ಲಿ ಸಂದೀಪ್ ರೆಡ್ಡಿ ಆರ್​ಜಿವಿಯ ಅಪ್ಪ’; ಕೊಂಡಾಡಿದ ರಾಜಮೌಳಿ

ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರ ವಿಭಿನ್ನ ಹಾಗೂ ರಾ ಸಿನಿಮಾ ಮೇಕಿಂಗ್ ಶೈಲಿ ಗಮನ ಸೆಳೆದಿದೆ. ಅವರ ಯಶಸ್ವಿ ಮೂರು ಚಿತ್ರಗಳನ್ನು ರಾಜಮೌಳಿ 'RGV ಅಪ್ಪ' ಎಂದು ಹೊಗಳಿದ್ದಾರೆ. ರಾಜಮೌಳಿ ಮೆಚ್ಚುಗೆಯಿಂದ ವಂಗಾಗೆ ಹೊಸ ಹುಮ್ಮಸ್ಸು ಬಂದಿದೆ. ಮಹಿಳಾ ವಿರೋಧಿ ಆರೋಪಗಳ ಹೊರತಾಗಿಯೂ, ತಮ್ಮ 'ಆಲ್ಫಾ ಮೇಲ್' ಚಿತ್ರಗಳನ್ನು ವಂಗಾ ಸಮರ್ಥಿಸಿಕೊಂಡಿದ್ದಾರೆ.

‘ಸಿನಿಮಾ ವಿಚಾರದಲ್ಲಿ ಸಂದೀಪ್ ರೆಡ್ಡಿ ಆರ್​ಜಿವಿಯ ಅಪ್ಪ’; ಕೊಂಡಾಡಿದ ರಾಜಮೌಳಿ
ಸಂದೀಪ್-ರಾಜಮೌಳಿ
ರಾಜೇಶ್ ದುಗ್ಗುಮನೆ
|

Updated on:Nov 12, 2025 | 12:23 PM

Share

ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರ ಸಿನಿಮಾ ಮೇಕಿಂಗ್ ಭಿನ್ನ. ಅವರು ಎಲ್ಲ ವಿಷಯಗಳನ್ನು ತುಂಬಾನೇ ರಾ ಆಗಿ ತೋರಿಸುತ್ತಾರೆ. ಅವರು ನಿರ್ದೇಶನ ಮಾಡಿದ್ದು ಮೂರು ಸಿನಿಮಾಗಳನ್ನು ಮಾತ್ರ. ಈ ಮೂರು ಚಿತ್ರಗಳು ಹಿಟ್ ಆಗಿವೆ. ಈಗ ಅವರನ್ನು ಖ್ಯಾತ ನಿರ್ದೇಶಕ ಎಸ್​​ಎಸ್​ ರಾಜಮೌಳಿ ಬಾಯ್ತುಂಬ ಹೊಗಳಿದ್ದಾರೆ. ‘ಸಿನಿಮಾ ವಿಚಾರದಲ್ಲಿ ಸಂದೀಪ್ ಅವರು ಆರ್​ಜಿವಿ ಅಪ್ಪ’ ಎಂದು ಕರೆದಿದ್ದಾರೆ.

ಆರ್​ಜಿವಿ ಅವರು ರಾ ಸಿನಿಮಾಗಳನ್ನು ಹೆಚ್ಚು ನೀಡಿದ್ದಾರೆ. ಅವರು ಯಾವುದೇ ವಿಚಾರಗಳನ್ನು ಹೇಳಬೇಕು ಎಂದರೆ ನೇರ ಮಾತುಗಳಲ್ಲಿ ಹೇಳುತ್ತಾರೆ. ಸಂದೀಪ್ ಅವರಲ್ಲೂ ಇದೇ ಗುಣ ಇದೆ ಎಂಬುದು ರಾಜಮೌಳಿಯ ಅಭಿಪ್ರಾಯ. ಹೀಗಾಗಿ, ಸಂದೀಪ್ ಅವರನ್ನು ಆರ್​ಜಿವಿಗೆ ಹೋಲಿಕೆ ಮಾಡಿ ಹೊಗಳಿದ್ದಾರೆ ಸಂದೀಪ್.

ಇತ್ತೀಚೆಗೆ ಸಿನಿಮಾ ಈವೆಂಟ್​ ಒಂದರಲ್ಲಿ ರಾಜಮೌಳಿ ಅವರು ಮಾತನಾಡಿದ್ದಾರೆ. ‘ಆರ್​ಜಿವಿ, ಸಂದೀಪ್ ರೆಡ್ಡಿ ವಂಗ ಇವರೆಲ್ಲ ಖ್ಯಾತ ನಿರ್ದೇಶಕರು. ಅಪರೂಪಕ್ಕೆ ಒಮ್ಮೆ ಈ ರೀತಿಯ ನಿರ್ದೇಶಕರು ಸಿಗುತ್ತಾರೆ’ ಎಂದು ರಾಜಮೌಳಿ ಹೇಳಿದ್ದಾರಂತೆ. ಅಲ್ಲದೆ, ರಾಜಮೌಳಿಯ ಹೊಗಳಿಕೆಯಿಂದ ಸಂದೀಪ್​ಗೆ ಹೊಸ  ಹುಮ್ಮಸ್ಸು ಸಿಕ್ಕಂತೆ ಆಗಿದೆ.

ಸಂದೀಪ್ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅವರು ‘ಸ್ಪಿರಿಟ್’ ಸಿನಿಮಾನ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ ಆಗಿರಬೇಕಿತ್ತು. ಆದರೆ, ಚಿತ್ರದಿಂದ ಅವರು ಹೊರ ನಡೆದರು. ಇದಕ್ಕೆ ಸಂದೀಪ್ ಕಾರಣ ಎಂದು ನೇರವಾಗಿಯೇ ಹೇಳಿದ್ದರು. ಇದರಿಂದ ಸಂದೀಪ್ ಅವರ ಚಾರ್ಮ್​ಗೆ ಧಕ್ಕೆ ಬಂದಿತ್ತು. ಆದರೆ, ರಾಜಮೌಳಿ ಅವರಂಥ ನಿರ್ದೇಶಕರು ಅವರು ಬಗ್ಗೆ ಮೆಚ್ಚುಗೆ ಸೂಚಿಸಿದಾಗ ಅವರಿಗೆ ಸಹಜವಾಗಿಯೇ ಖುಷಿ ಆಗುತ್ತದೆ.

ಇದನ್ನೂ ಓದಿ: ಸಂದೀಪ್ ರೆಡ್ಡಿ ವಂಗ ಯಾವಾಗಲೂ ಕುರ್ತಾ ಧರಿಸೋದು ಏಕೆ? ಆ ಘಟನೆಯೇ ಕಾರಣ

ಸಂದೀಪ್ ರೆಡ್ಡಿ ಅವರು ಆಲ್ಫಾ ಮೇಲ್ ಸಿನಿಮಾಗಳನ್ನು ತೆಗೆಯುತ್ತಾರೆ. ಅವರ ಸಿನಿಮಾಗಳಲ್ಲಿ ಮಹಿಳೆಯರನ್ನು ಕೀಳಾಗಿ ತೋರಿಸಲಾಗುತ್ತದೆ ಎಂಬ ಆರೋಪ ಇದೆ. ಆದರೆ, ಈ ವಿಚಾರದಲ್ಲಿ ಸಂದೀಪ್ ಅವರಿಗೆ ಯಾವುದೇ ಬೇಸರ ಇಲ್ಲ. ಅವರು ತಮ್ಮ ಸಿನಿಮಾಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:52 am, Wed, 12 November 25

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!