AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶಾಂತ್ ನೀಲ್ ಸಿನಿಮಾಗಳ ಬಗ್ಗೆ ಸಂದೀಪ್ ರೆಡ್ಡಿ ವಂಗಾ ಹೇಳಿದ್ದೇನು? ನೀವು ಇದನ್ನು ಒಪ್ಪುತ್ತೀರ?

Sandeep Reddy Vanga: ಸಂದೀಪ್ ರೆಡ್ಡಿ ವಂಗಾ ಪ್ರಸ್ತುತ ದೇಶದಾದ್ಯಂತ ಸದ್ದು ಮಾಡಿರುವ ನಿರ್ದೇಶಕ. ಅವರ ‘ಅರ್ಜುನ್ ರೆಡ್ಡಿ’, ‘ಅನಿಮಲ್’ ಸಿನಿಮಾಗಳು ಭಾರಿ ಯಶಸ್ವಿಯಾಗಿದ್ದು ಮಾತ್ರವೇ ಅಲ್ಲದೆ, ದೊಡ್ಡ ಮಟ್ಟದ ಚರ್ಚೆಗೆ ಸಹ ಕಾರಣವಾಗಿವೆ. ಇದೀಗ ಸಂದೀಪ್ ರೆಡ್ಡಿ ವಂಗಾ, ನಿರ್ದೇಶಕ ಪ್ರಶಾಂತ್ ನೀಲ್ ಅವರ ಸಿನಿಮಾ ನಿರ್ದೇಶನ ಶೈಲಿಯ ಬಗ್ಗೆ ಮಾತನಾಡಿದ್ದಾರೆ.

ಪ್ರಶಾಂತ್ ನೀಲ್ ಸಿನಿಮಾಗಳ ಬಗ್ಗೆ ಸಂದೀಪ್ ರೆಡ್ಡಿ ವಂಗಾ ಹೇಳಿದ್ದೇನು? ನೀವು ಇದನ್ನು ಒಪ್ಪುತ್ತೀರ?
Neel Sandeep
Follow us
ಮಂಜುನಾಥ ಸಿ.
|

Updated on: Jun 18, 2025 | 1:57 PM

ಪ್ರಶಾಂತ್ ನೀಲ್ (Prashanth Neel) ಪ್ಯಾನ್ ಇಂಡಿಯಾ (Pan India) ನಿರ್ದೇಶಕ. ‘ಉಗ್ರಂ’, ‘ಕೆಜಿಎಫ್’ ಗೆಲುವು ಕೇವಲ ಅದೃಷ್ಟ ಅಲ್ಲ ಎಂಬುದನ್ನು ಅವರು ‘ಕೆಜಿಎಫ್ 2’ ಮತ್ತು ‘ಸಲಾರ್’ ಮೂಲಕ ಸಾಬೀತು ಮಾಡಿದ್ದಾರೆ. ಪ್ರಸ್ತುತ ಬೇಡಿಕೆಯಲ್ಲಿರುವ ಹಲವು ಪ್ಯಾನ್ ಇಂಡಿಯಾ ನಿರ್ದೇಶಕರ ಪೈಕಿ ಪ್ರಶಾಂತ್ ನೀಲ್ ಬಹಳ ಭಿನ್ನವಾದ ನಿರ್ದೇಶಕ. ಅವರಂತೆ ಎಲಿವೇಶನ್ ಸೀನ್​ಗಳನ್ನು ಕಟ್ಟಿಕೊಡುವ ಇನ್ನೊಬ್ಬ ನಿರ್​ದೇಶಕ ಭಾರತದಲ್ಲಿ ಪ್ರಸ್ತುತ ಇಲ್ಲ. ಆದರೆ ಅವರ ನಿರ್ದೇಶನದ ಸ್ಟೈಲ್ ಬಗ್ಗೆ ಟೀಕೆ ಮಾಡುವವರೂ ಸಹ ಇದ್ದಾರೆ. ಇದೀಗ ಜನಪ್ರಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ಪ್ರಶಾಂತ್ ನೀಲ್ ನಿರ್ದೇಶನದ ಸ್ಟೈಲ್ ಬಗ್ಗೆ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಸಂದೀಪ್ ರೆಡ್ಡಿ ವಂಗಾ, ಪ್ರಶಾಂತ್ ನೀಲ್ ಅವರ ಶೈಲಿಯನ್ನು ಕೊಂಡಾಡಿದ್ದಾರೆ. ಪ್ರಶಾಂತ್ ನೀಲ್ ಅವರ ಶೈಲಿ ಬಹಳ ಭಿನ್ನವಾದುದು. ಅವರ ಸಿನಿಮಾಗಳಲ್ಲಿ ಕತೆ ಇರುವುದಿಲ್ಲ ಅಥವಾ ಇದ್ದರೂ ತೆಳು ಪದರದಂತಿರುತ್ತದೆ. ಆದರೆ ಎಲಿವೇಶನ್ ಸೀನ್​ಗಳ ಮೂಲಕವೇ ಅವರು ಕತೆ, ಪಾತ್ರಗಳನ್ನು ಜನರಿಗೆ ಹತ್ತಿರವಾಗಿಸುತ್ತಾ ಹೋಗುತ್ತಾರೆ. ಅದು ಅಷ್ಟು ಸುಲಭದ ಕಾರ್ಯವಲ್ಲ ಎಂದಿದ್ದಾರೆ.

ಒಬ್ಬ ಹೀರೋ ಬಗ್ಗೆ ಇಬ್ಬರು, ಮೂವರು ಭಿನ್ನ ಪಾತ್ರಗಳ ಮೂಲಕ ಅಭಿಪ್ರಾಯಗಳನ್ನು ಹೇಳಿಸುವುದು, ಕೊನೆಗೆ ಮೂರು ಪಾತ್ರಗಳ ಹೇಳಿಕೆಗಳನ್ನು ಒಂದು ಪಾಯಿಂಟ್​ಗೆ ತಂದು ನಿಲ್ಲಿಸುವುದು ಇದೆಲ್ಲ ಅಂದುಕೊಂಡಷ್ಟು, ನೋಡಿದಷ್ಟು ಸರಳವಲ್ಲ. ಅದು ಪ್ರಶಾಂತ್ ನೀಲ್ ಒಬ್ಬರೇ ಮಾಡಲು ಸಾಧ್ಯ. ಅದನ್ನು ಬೇರೆಯವರು ಕಾಪಿ ಸಹ ಮಾಡಲಾರರು. ಕಾಪಿ ಮಾಡಲು ಪ್ರಯತ್ನಿಸಿದವರು ಸೋತಿದ್ದಾರೆ ಎಂದಿದ್ದಾರೆ ಸಂದೀಪ್ ರೆಡ್ಡಿ ವಂಗಾ.

ಇದನ್ನೂ ಓದಿ:ಪ್ರಭಾಸ್ ಮುಂದಿಟ್ಟುಕೊಂಡು ಬಾಲಿವುಡ್​ ಮೇಲೆ ಪ್ರತೀಕಾರಕ್ಕೆ ಮುಂದಾದರೇ ಸಂದೀಪ್ ರೆಡ್ಡಿ ವಂಗಾ

ಪ್ರಶಾಂತ್ ನೀಲ್ ಅವರ ಶೈಲಿಯನ್ನು ಟೀಕೆ ಮಾಡುವವರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಿಶೇಷವಾಗಿ ಅವರು ಬಳಸುವ ಕಪ್ಪು ಅಥವಾ ಗ್ರೇ ಬಣ್ಣದ ಥೀಮ್​​ನ ಬಗ್ಗೆ ಅವರು ಆಗಾಗ್ಗೆ ಟ್ರೋಲ್ ಆಗುತ್ತಲೇ ಇರುತ್ತಾರೆ. ಆ ಥೀಮ್ ಬಳಸಲು ಅವರಿಗಿರುವ ಓಸಿಡಿ ಸಮಸ್ಯೆ ಕಾರಣ ಎಂದು ಅವರೇ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ನೀಲ್, ತಮ್ಮ ಸಿನಿಮಾಗಳಲ್ಲಿ ಅತಿಯಾದ ಎಲಿವೇಶನ್ ಸೀನ್​ಗಳನ್ನು ಬಳಸುತ್ತಾರೆ. ನಾಯಕನಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಸ್ಕೋಪ್ ನೀಡುತ್ತಾರೆ ಎಂಬ ಟೀಕೆಯೂ ಇದೆ. ಆದರೆ ಇದರಿಂದಾಗಿಯೇ ಅವರ ಸಿನಿಮಾಗಳು ಭಾರಿ ಗೆಲುವು ಸಾಧಿಸಿವೆ. ಅವರ ಸಿನಿಮಾಗಳು ಸುದೀರ್ಘ ಟ್ರೈಲರ್​ ರೀತಿ ಇರುತ್ತವೆ, ಉದ್ದೇಶಪೂರ್ವಕವಾಗಿ ಪ್ರತಿ ದೃಶ್ಯದಲ್ಲಿಯೂ ಆಕ್ಷನ್, ಸೆಂಟಿಮೆಂಟ್ ತುಂಬಿರುತ್ತಾರೆ ಎಂದು ಟೀಕಿಸುವವರೂ ಇದ್ದಾರೆ. ಟೀಕೆ ಏನೇ ಆಗಿರಲಿ, ತಮ್ಮ ಶೈಲಿಯಿಂದ ನೀಲ್ ಗೆಲ್ಲುತ್ತಿದ್ದಾರೆ. ಗೆಲ್ಲುತ್ತಿರುವವರೆಗೆ ಯಾವ ಟೀಕೆಗಳಿಗೂ ನೀಲ್ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂಬುದು ಅವರ ಅಭಿಮಾನಿಗಳ ಮಾತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ