‘ಒಂದು ಯಶಸ್ಸಿನ ಬಳಿಕ ಆ ಹೀರೋಗೆ ಧಿಮಾಕು ಬಂದಿದೆ’: ಕಟುವಾಗಿ ಹೇಳಿದ ‘ಬಾಹುಬಲಿ’ ನಿರ್ಮಾಪಕ

Shobu Yarlagadda: ವಿವಾದಕ್ಕೆ ನಾಂದಿ ಹಾಡುವ ರೀತಿಯಲ್ಲಿ ಶೋಭು ಯರ್ಲಗಡ್ಡ ಟ್ವೀಟ್​ ಮಾಡಿದರು. ಅನೇಕರು ತಮ್ಮ ಮನಸ್ಸಿಗೆ ಬಂದಂತೆ ಕಮೆಂಟ್​ ಮಾಡಿದರು. ನಂತರ ಏನಾಯ್ತು?

‘ಒಂದು ಯಶಸ್ಸಿನ ಬಳಿಕ ಆ ಹೀರೋಗೆ ಧಿಮಾಕು ಬಂದಿದೆ’: ಕಟುವಾಗಿ ಹೇಳಿದ ‘ಬಾಹುಬಲಿ’ ನಿರ್ಮಾಪಕ
ಶೋಭು ಯರ್ಲಗಡ್ಡ
Follow us
|

Updated on: Jul 31, 2023 | 8:54 PM

ಚಿತ್ರರಂಗದಲ್ಲಿ ಸೋಲು-ಗೆಲುವು ಸಹಜ. ಸೋತಾಗ ಕೆಲವರು ಕುಗ್ಗುತ್ತಾರೆ. ಗೆದ್ದಾಗ ಬೀಗುತ್ತಾರೆ. ಅದು ಕೂಡ ಸಹಜ. ಆದರೆ ಒಂದು ಯಶಸ್ಸು ಸಿಕ್ಕ ಮಾತ್ರಕ್ಕೆ ಅಹಂಕಾರ ತಲೆಗೆ ಏರಿಸಿಕೊಳ್ಳಬಾರದು. ಆ ರೀತಿ ವರ್ತಿಸಿದ ಓರ್ವ ಹೀರೋ ಬಗ್ಗೆ ಈಗ ಟಾಲಿವುಡ್​ (Tollywood) ಅಂಗಳದಲ್ಲಿ ಚರ್ಚೆ ನಡೆಯುತ್ತಿದೆ. ದೊಡ್ಡ ಬಜೆಟ್​ನ ಸಿನಿಮಾಗಳು ನೆಲ ಕಚ್ಚುತ್ತಿರುವ ಈ ಕಾಲದಲ್ಲಿ ಸಣ್ಣ ಬಜೆಟ್​ನ ಕೆಲವು ಚಿತ್ರಗಳು ಗೆದ್ದಿವೆ. ಅಂಥ ಒಂದು ಸಿನಿಮಾದ ಹೀರೋಗೆ ಆ್ಯಟಿಟ್ಯೂಡ್​ ಬಂದಿದೆ ಎಂದು ‘ಬಾಹುಬಲಿ’ (Baahubali) ಸಿನಿಮಾದ ನಿರ್ಮಾಪಕ ಶೋಭು ಯರ್ಲಗಡ್ಡ (Shobu Yarlagadda) ಅವರು ಹೇಳಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಅವರು ತಮ್ಮ ಟ್ವೀಟ್​ ಡಿಲೀಟ್​ ಮಾಡಿದರು.

ಶೋಭು ಯರ್ಲಗಡ್ಡ ಕಾಂಟ್ರವರ್ಸಿ ಟ್ವೀಟ್​:

‘ಯಶಸ್ಸನ್ನು ತಲೆಗೆ ಏರಿಸಿಕೊಳ್ಳಬಹುದು ಅಥವಾ ಸರಿಯಾಗಿ ನಿಭಾಯಿಸಲೂಬಹುದು. ಇತ್ತೀಚೆಗೆ ಯಶಸ್ಸು ಪಡೆದ ಓರ್ವ ಉದಯೋನ್ಮುಖ ನಟ ಆ್ಯಟಿಟ್ಯೂಡ್​ ತೋರಿಸುತ್ತಿದ್ದೇನೆ. ಕಥೆ ಹೇಳಲು ಬಂದ ಹೊಸ ನಿರ್ದೇಶಕರಿಗೆ ಆತ ಕನಿಷ್ಠ ಗೌರವವನ್ನೂ ನೀಡಿಲ್ಲ. ಈ ವರ್ತನೆಯಿಂದ ತನ್ನ ವೃತ್ತಿಜೀವನಕ್ಕೆ ಒಳ್ಳೆಯದಾಗಲ್ಲ ಎಂಬುದು ಇಂದಲ್ಲ ನಾಳೆ ಅವನಿಗೆ ಅರ್ಥ ಆಗುತ್ತದೆ’ ಎಂದು ಶೋಭು ಯರ್ಲಗಡ್ಡ ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ: ‘ಎಲ್ಲರನ್ನೂ ಖುಷಿಪಡಿಸಲು ನಾನು ಬಿರಿಯಾನಿ ಅಲ್ಲ’; ‘ಬೇಬಿ’ ವಿವಾದಕ್ಕೆ ವಿಶ್ವಕ್ ​ಸೇನ್ ಪ್ರತಿಕ್ರಿಯೆ

ಈ ಟ್ವೀಟ್​ನಲ್ಲಿ ಶೋಭು ಯರ್ಲಗಡ್ಡ ಅವರು ಯಾವುದೇ ನಟನ ಹೆಸರು ಪ್ರಸ್ತಾಪ ಮಾಡಿಲ್ಲ. ನಟ ವಿಶ್ವಕ್​ ಸೇನ್​ ಬಗ್ಗೆ ಅವರು ಹೇಳಿರಬಹುದು ಎಂದು ಕೆಲವರು ಊಹಿಸಿದರು. ಆದರೆ ಅವರು ತೀರಾ ಹೊಸ ನಟ ಅಲ್ಲ ಎಂಬ ಕಾರಣಕ್ಕೆ ಅವರ ಬಗ್ಗೆ ಹೇಳಿದ್ದಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಇನ್ನು, ಕೆಲವೇ ದಿನಗಳ ಹಿಂದೆ ‘ಬೇಬಿ’ ಸಿನಿಮಾದ ಮೂಲಕ ಆನಂದ್​ ದೇವರಕೊಂಡ ಸಕ್ಸಸ್​ ಕಂಡಿದ್ದಾರೆ. ಅವರ ಬಗ್ಗೆ ಶೋಭು ಯರ್ಲಗಡ್ಡ ಅವರು ಟ್ವೀಟ್​ ಮಾಡಿರಬಹುದೇ ಎಂಬ ಅನುಮಾನ ಕೂಡ ಮೂಡಿದೆ.

ಇದನ್ನೂ ಓದಿ: Baby Movie Collection: ‘ಅರ್ಜುನ್​ ರೆಡ್ಡಿ’ ಚಿತ್ರದ ಲೈಫ್​ಟೈಮ್​ ಗಳಿಕೆ ಮೀರಿಸಿದ ‘ಬೇಬಿ’; ಅಣ್ಣನ ರೀತಿಯೇ ಮಿಂಚಿದ ಆನಂದ್​ ದೇವರಕೊಂಡ

ಆ ನಟ ಯಾರು ಎಂಬುದನ್ನು ಬಹಿರಂಗಪಡಿಸಿ ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಅನೇಕರು ತಮ್ಮ ಮನಸ್ಸಿಗೆ ಬಂದಂತೆ ಕಮೆಂಟ್​ ಮಾಡಿದರು. ಇದು ದೊಡ್ಡ ವಿವಾದ ಆಗುವ ಸಾಧ್ಯತೆ ಇರುವ ಕಾರಣಕ್ಕೋ ಏನೋ ಶೋಭು ಯರ್ಲಗಡ್ಡ ಅವರು ತಮ್ಮ ಟ್ವೀಟ್​ ಡಿಲೀಟ್​ ಮಾಡಿದರು. ಅಷ್ಟುಹೊತ್ತಿಗಾಗಲೇ ಅದರ ಸ್ಕ್ರೀನ್​ ಶಾಟ್​ಗಳು ವೈರಲ್​ ಆದವು. ಅಂಥ ಆ್ಯಟಿಟ್ಯೂಡ್​ ತೋರಿಸಿದ ಉದಯೋನ್ಮುಖ ನಟ ಯಾರು ಎಂಬ ಪ್ರಶ್ನೆಯು ಸಿನಿಪ್ರಿಯರ ತಲೆಯಲ್ಲಿ ಈಗ ಕೊರೆಯುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ