AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡತಿ ಚೈತ್ರಾ ಆಚಾರ್ ಮೊದಲ ತಮಿಳು ಸಿನಿಮಾಕ್ಕೆ ಭರಪೂರ ಪ್ರಶಂಸೆ

Siddharth-Chaithra Achar: 3 ಬಿಎಚ್​​ಕೆ ಸಿನಿಮಾ ಮಧ್ಯಮ ವರ್ಗದ ಕುಟುಂಬವೊಂದರ ಕತೆಯನ್ನು ಒಳಗೊಂಡಿದ್ದು, ಸಿನಿಮಾನಲ್ಲಿ ಕನ್ನಡತಿ ಚೈತ್ರಾ ಆಚಾರ್ ನಾಯಕಿ. ಇಂದು (ಜುಲೈ 3) ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾದ ನೋಡಿದ ಬಹುತೇಕ ಎಲ್ಲರೂ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಕನ್ನಡತಿ ಚೈತ್ರಾ ಆಚಾರ್ ಮೊದಲ ತಮಿಳು ಸಿನಿಮಾಕ್ಕೆ ಭರಪೂರ ಪ್ರಶಂಸೆ
3 Bhk Twitter Review
ಮಂಜುನಾಥ ಸಿ.
|

Updated on:Jul 04, 2025 | 12:15 PM

Share

‘ಸಪ್ತ ಸಾಗರದಾಚೆ ಎಲ್ಲೊ’, ‘ಟೋಬಿ’ ಇನ್ನೂ ಹಲವು ಉತ್ತಮ ಕನ್ನಡ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿರುವ ನಟಿ ಚೈತ್ರಾ ಆಚಾರ್ ಮೊದಲ ಬಾರಿಗೆ ತಮಿಳು ಸಿನಿಮಾ ಒಂದರಲ್ಲಿ ನಟಿಸಿದ್ದಾರೆ. ಖ್ಯಾತ ನಟ ಸಿದ್ಧಾರ್ಥ್ ಎದುರು ನಾಯಕಿಯಾಗಿ ಚೈತ್ರಾ ಆಚಾರ್ ನಟಿಸಿದ್ದು, ಸಿನಿಮಾದ ಹೆಸರು ‘3 ಬಿಎಚ್​​ಕೆ’. ಮಧ್ಯಮ ವರ್ಗದ ಕುಟುಂಬವೊಂದರ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾನಲ್ಲಿ ಚೈತ್ರಾ ಆಚಾರ್ ನಾಯಕಿ. ಇಂದು (ಜುಲೈ 3) ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾದ ನೋಡಿದ ಬಹುತೇಕ ಎಲ್ಲರೂ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಖ್ಯಾತ ನಟ, ನಿರ್ಮಾಪಕ ಸಿಂಭು ಕೆಲ ದಿನಗಳ ಮುಂಚೆಯೇ ‘3 ಬಿಎಚ್​​ಕೆ’ ಸಿನಿಮಾ ನೋಡಿದ್ದು, ಸಿನಿಮಾ ಅದ್ಬುತವಾಗಿದೆ ಎಂದಿದ್ದಾರೆ. ನಟ ಸಿದ್ಧಾರ್ಥ್, ಶರತ್​​ಕುಮಾರ್ ಮತ್ತು ನಿರ್ದೇಶಕ ಶ್ರೀಗಣೇಶ್ ಅವರನ್ನು ಕೊಂಡಾಡಿದ್ದಾರೆ. ಇದೊಂದು ಸುಂದರವಾದ ಸಿನಿಮಾ, ನಿಮ್ಮನ್ನು ಭಾವುಕ ಪ್ರಪಂಚದ ಒಳಕ್ಕೆ ಇದು ಕರೆದೊಯ್ಯುತ್ತದೆ. ಅದ್ಭುತವಾದ ಸಿನಿಮಾ ನೀಡಿದ್ದಕ್ಕೆ ಚಿತ್ರತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.

ರಾಜೇಶ್ ಕುಮಾರ್ ರೆಡ್ಡಿ ಎಂಬುವರು ಟ್ವೀಟ್ ಮಾಡಿ, ‘3 ಬಿಎಚ್​ಕೆ ಸಿನಿಮಾ ಎಲ್ಲರಿಗೂ ತಾಗುವಂಥಹಾ, ತಮ್ಮನ್ನು ತಾವು ನೋಡಿಕೊಳ್ಳುವಂಥಹಾ ಸಿನಿಮಾ. ಇಡೀ ಸಿನಿಮಾ ಮೌನವಾಗಿಯೇ ಮಧ್ಯಮ ವರ್ಗದ ನೋವುಗಳನ್ನು ಒಂದೊಂದನ್ನಾಗಿ ಮುಟ್ಟುತ್ತದೆ. ಎಂದೂ ಪೂರ್ಣವಾಗದ ಕನಸುಗಳು, ಕನಸುಗಳನ್ನು ಪೂರ್ಣಗೊಳಿಸುವ ಹಾದಿಯಲ್ಲಿ ಎದುರಾಗುವ ನೋವುಗಳನ್ನು ಸಿನಿಮಾ ತೋರಿಸಿದೆ’ ಎಂದಿದ್ದಾರೆ.

ಅಮಾಮುತ್ತ ಸೂರ್ಯ ಎಂಬುವರು ಟ್ವೀಟ್ ಮಾಡಿ, ‘3 ಬಿಎಚ್​​ಕೆ ಸಿನಿಮಾ ಯಾವುದೋ ಒಂದು ದೃಶ್ಯದಲ್ಲಿ ನಾನು ಅಳುವಂತೆ ಮಾಡಲಿಲ್ಲ ಬದಲಿಗೆ ಇಡೀ ಸಿನಿಮಾ ಒಂದೊಂದೇ ದೃಶ್ಯದಲ್ಲಿ ನನ್ನನ್ನು ಮೌನವಾಗಿ ಬಾಧಿಸಿತು, ಕೊನೆಗೆ ದುಖಃದ ಕಟ್ಟೆ ಒಡೆಯಿತು. ಏಕೆಂದರೆ ಎಷ್ಟೋ ಬಾರಿ ಒಂದು ವೇದನೆಯಿಂದ ನೋವಾಗುತ್ತದೆ. ಆದರೆ ಹಲವು ಬಾರಿ ಒಂದೊಂದೆ ನೋವುಗಳು ಸೇರಿ ದುಖಃದ ಕಟ್ಟೆ ಒಡೆಯುತ್ತದೆ’ ಎಂದಿದ್ದಾರೆ.

ಪ್ರಕಾಶ್ ರಾಜ್ ಎಂಬುವರು ಟ್ವೀಟ್ ಮಾಡಿ, ‘3 ಬಿಎಚ್​​ಕೆ ಕೇವಲ ಸಿನಿಮಾ ಅಲ್ಲ. ಇದು ಪ್ರತಿ ಮಧ್ಯಮವರ್ಗ ಕುಟುಂಬದ ಕತೆ. ನಿರಾಕರಣೆ, ಸೋಲು ಎಲ್ಲವೂ ಪ್ರತಿದಿನವೂ ನಮಗೆ ಎದುರಾಗುತ್ತಲೇ ಇರುತ್ತದೆ. ಆದರೆ ಒಂದು ಭರವಸೆಯ ಮೇಲೆ ನಾವು ಬದುಕುತ್ತಿರುತ್ತೇವೆ. ನಾವು ಪ್ರತಿದಿನ ಎದುರಿಸುವ ನೋವು, ಹತಾಶೆ ಎಲ್ಲವನ್ನೂ ಈ ಸಿನಿಮಾ ತೋರಿಸಿದೆ’ ಎಂದಿದ್ದಾರೆ.

ಆದಿಲ್ ಎಂಬುವರು ಟ್ವೀಟ್ ಮಾಡಿ, ‘3ಬಿಎಚ್​​ಕೆ, ಒಂದೊಳ್ಳೆ ಕತೆ ಹೇಳುವ ಪ್ರಮಾಣಿಕ ಪ್ರಯತ್ನ. ಮಧ್ಯಮ ವರ್ಗದ ಜನ ತಮ್ಮನ್ನು ತಾವು ಈ ಸಿನಿಮಾನಲ್ಲಿ ನೋಡಿಕೊಳ್ಳುತ್ತಾರೆ. ಸಿನಿಮಾದಲ್ಲಿ ಹಲವು ನೆನಪುಳಿವ ದೃಶ್ಯಗಳು ಇವೆ. ಉದ್ದೇಶಪೂರ್ವಕ ನರೇಶನ್ ಇದ್ದಾಗಿಯೂ ಸಾಕಷ್ಟು ಆಳವೂ ಸಹ ಸಿನಿಮಾದ ಸಂಭಾಷಣೆಗಳಲ್ಲಿ ಇದೆ. ಒಂದೊಳ್ಳೆ ಹಾಗೂ ನೋಡಲೇ ಬೇಕಾದ ಸಿನಿಮಾ ಇದು’ ಎಂದಿದ್ದಾರೆ.

Published On - 12:08 pm, Fri, 4 July 25

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!