Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನಿಗೆ ವಿದೇಶದಲ್ಲಿ ಶಿಕ್ಷಣ ಕೊಡಿಸಲು ಮುಂದಾದ ಸೋನು​; ಒಂದು ತಪ್ಪೇ ಇದಕ್ಕೆ ಕಾರಣ

ಸೋನು ನಿಗಮ್​ ಮಗನ ಹೆಸರು ನೀವನ್​. 2012ರಲ್ಲಿ ನೀವನ್​ಗೆ ನಾಲ್ಕು ವರ್ಷ. ಆಗ ‘ಕೊಲವೆರಿ ಡಿ..’ ಹಾಡನ್ನು ತಮ್ಮದೇ ವರ್ಷನ್​ನಲ್ಲಿ ಹಾಡುವ ಮೂಲಕ ಅವನು ಎಲ್ಲರ ಗಮನ ಸೆಳೆದಿದ್ದ. ಈ ಮೂಲಕ ಅವನು ಸೆನ್ಸೇಷನ್​ ಹುಟ್ಟು ಹಾಕಿದ್ದ.

ಮಗನಿಗೆ ವಿದೇಶದಲ್ಲಿ ಶಿಕ್ಷಣ ಕೊಡಿಸಲು ಮುಂದಾದ ಸೋನು​; ಒಂದು ತಪ್ಪೇ ಇದಕ್ಕೆ ಕಾರಣ
ಸೋನು ನಿಗಮ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 11, 2021 | 9:10 PM

ಸೆಲೆಬ್ರಿಟಿಗಳ ಮಕ್ಕಳು ಎಂದರೆ ಮಾಧ್ಯಮಗಳಲ್ಲಿ ಹೈಲೈಟ್​ ಆಗುತ್ತಾರೆ. ಇವರ ಮಕ್ಕಳು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅಭಿಮಾನಿಗಳು ಸೆಲೆಬ್ರಿಟಿಗಳಿಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಅವರಿಗೂ ನೀಡುತ್ತಾರೆ. ಈ ಕಾರಣಕ್ಕೆ ಅನೇಕ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಸೋಶಿಯಲ್​ ಮೀಡಿಯಾದಿಂದ ಆದಷ್ಟು ದೂರ ಇಡಲು ಬಯಸುತ್ತಾರೆ. ಅವರಿಗೆ ಹೈಪ್​ ಸಿಗದಿರಲಿ ಎನ್ನುವ ಬಗ್ಗೆ ಎಚ್ಚರಿಕೆ ವಹಿಸುತ್ತಾರೆ. ಈಗ ನಟ ಸೋನು ನಿಗಮ್​​ ತಮ್ಮ ಮಗನನ್ನು ವಿದೇಶಕ್ಕೆ ಕಳಿಸೋಕೆ ನಿರ್ಧರಿಸಿದ್ದಾರೆ. ಇದರ ಹಿಂದೆ ಒಂದು ಬಲವಾದ ಕಾರಣ ಇದೆ.  

ಸೋನು ನಿಗಮ್​ ಮಗನ ಹೆಸರು ನೀವನ್​. 2012ರಲ್ಲಿ ನೀವನ್​ಗೆ ನಾಲ್ಕು ವರ್ಷ. ಆಗ ‘ಕೊಲವೆರಿ ಡಿ..’ ಹಾಡನ್ನು ತಮ್ಮದೇ ವರ್ಷನ್​ನಲ್ಲಿ ಹಾಡುವ ಮೂಲಕ ಅವನು ಎಲ್ಲರ ಗಮನ ಸೆಳೆದಿದ್ದ. ಈ ಮೂಲಕ ಅವನು ಸೆನ್ಸೇಷನ್​ ಹುಟ್ಟು ಹಾಕಿದ್ದ. ಇದು ಸೋನು ನಿಗಮ್​​​ಗೆ ಈಗ ಸಮಸ್ಯೆ ಆಗಿದೆ. ಸೆಲೆಬ್ರಿಟಿ ಮಗ ಎನ್ನುವ ಕಾರಣಕ್ಕೆ ಅವನಿಗೆ ವಿಶೇಷ ಆತಿಥ್ಯ ನೀಡಲಾಗುತ್ತದೆ. ಇದು ಆಗಬಾರದು ಎನ್ನುವುದು ಸೋನು ಆಶಯ.

‘ಪ್ರತಿ ಪಾರ್ಟಿಯಲ್ಲಿ ನಾನು ನನ್ನ ಮಗುವನ್ನು ಪರಿಚಯಿಸಲು ಬಯಸಿದರೆ ಮತ್ತು ನನ್ನ ಮಗ ಹೊಸ ಹಾಡನ್ನು ಹೇಳಬೇಕು ಎಂದು ಬಯಸಿದರೆ ಅವನು ಒತ್ತಡಕ್ಕೆ ಒಳಗಾಗುತ್ತಾನೆ. ಪೋಷಕರಾಗಿ, ನಾವು ಅವನ ಬಾಲ್ಯವನ್ನು ಹಾಳುಮಾಡಲು ಬಯಸುವುದಿಲ್ಲ. ಅವನು ಎಲ್ಲರಂತೆ ಬಾಲ್ಯವನ್ನು ಅನುಭವಿಸಬೇಕು ಎಂದು ನಾನು ಬಯಸುತ್ತೇನೆ’ ಎಂದಿದ್ದಾರೆ ಸೋನು.

‘ನನ್ನ ಮಗ ವಿದೇಶದಲ್ಲಿ ಓದಬೇಕು, ಅಲ್ಲಿಯೇ ವಾಸ ಮಾಡಬೇಕು. ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಗ್ರೀನ್ ಕಾರ್ಡ್‌ ಹೊಂದಿದ್ದೇವೆ. ನನ್ನ ಮಗ ಅಮೆರಿಕದ ಪ್ರಜೆ. ನಾವು 2009ರಲ್ಲಿ ಅಮೆರಿಕಕ್ಕೆ ಹೋಗಲು ಯೋಜಿಸುತ್ತಿದ್ದೆವು. ಆದರೆ, ಲಾಸ್​ ಏಂಜಲಿಸ್​ನಿಂದ ಮುಂಬೈಗೆ ಪ್ರಯಾಣಿಸುವುದು ತುಂಬಾ ಕಷ್ಟ. ಹಾಗಾಗಿ ನಾನು ಅಲ್ಲಿ ವಾಸಿಸುವ ಕಲ್ಪನೆಯನ್ನು ಕೈಬಿಟ್ಟೆ. ಮುಂಬೈನಿಂದ ದುಬೈ ತುಂಬಾನೇ ಹತ್ತಿರದಲ್ಲಿದೆ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ತಾವು ಕೂಡ ದುಬೈನಲ್ಲಿ ವಾಸಿಸುವ ಆಲೋಚನೆ ಹೊಂದಿರುವ ಬಗ್ಗೆ ಅವರು ಪರೋಕ್ಷವಾಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೇರೆಲ್ಲ ರಿಯಾಲಿಟಿ ಶೋಗಳಿಗೆ ಬೈಯ್ಯುವ ಸೋನು ನಿಗಮ್​ ಈ ಒಂದು ಶೋಗೆ ಜಡ್ಜ್​ ಆಗಲು ಒಪ್ಪಿದ್ದೇಕೆ?

Puneeth Rajkumar: ಪುನೀತ್ ಮುಂದಿನ ಚಿತ್ರದ ವಿಡಿಯೋ ತುಣುಕು ರಿಲೀಸ್; ಭಾವುಕರಾದ ಫ್ಯಾನ್ಸ್

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ