AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇರೆಲ್ಲ ರಿಯಾಲಿಟಿ ಶೋಗಳಿಗೆ ಬೈಯ್ಯುವ ಸೋನು ನಿಗಮ್​ ಈ ಒಂದು ಶೋಗೆ ಜಡ್ಜ್​ ಆಗಲು ಒಪ್ಪಿದ್ದೇಕೆ?

ಅಷ್ಟಕ್ಕೂ ಬೆಂಗಾಲಿ ಭಾಷೆಯ ‘ಸೂಪರ್​ ಸಿಂಗರ್​’ ಕಾರ್ಯಕ್ರಮಕ್ಕೆ ಸೋನು ನಿಗಮ್​ ಯಾಕೆ ಜಡ್ಜ್​ ಆಗಿದ್ದಾರೆ? ಅಭಿಮಾನಿಗಳಿಗೆ ಈ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಸ್ವತಃ ಸೋನು ನಿಗಮ್​ ಉತ್ತರ ನೀಡಿದ್ದಾರೆ.

ಬೇರೆಲ್ಲ ರಿಯಾಲಿಟಿ ಶೋಗಳಿಗೆ ಬೈಯ್ಯುವ ಸೋನು ನಿಗಮ್​ ಈ ಒಂದು ಶೋಗೆ ಜಡ್ಜ್​ ಆಗಲು ಒಪ್ಪಿದ್ದೇಕೆ?
ಸೋನು ನಿಗಮ್​
TV9 Web
| Edited By: |

Updated on: Aug 01, 2021 | 8:12 AM

Share

ಖ್ಯಾತ ಗಾಯಕ ಸೋನು ನಿಗಮ್ (Sonu Nigam) ಅವರು ಆಗಾಗ ತಮ್ಮ ನೇರ ನಡೆ-ನುಡಿಯ ಕಾರಣದಿಂದ ಸುದ್ದಿ ಆಗುತ್ತಿರುತ್ತಾರೆ. ಸಿನಿಮಾ ಸಂಗೀತಲೋಕದಲ್ಲಿ ದೊಡ್ಡ ಸಾಧನೆ ಮಾಡಿರುವ ಅವರು ಬಹುಬೇಡಿಕೆಯ ಗಾಯಕ. ನೂರಾರು ಸೂಪರ್​ ಹಿಟ್​ ಗೀತೆಗಳಿಗೆ ಅವರು ಧ್ವನಿ ಆಗಿದ್ದಾರೆ. ಕೆಲವೊಮ್ಮೆ ತುಂಬ ನಿಷ್ಠುರವಾದ ಮಾತುಗಳನ್ನು ಆಡುವ ಮೂಲಕ ಅವರು ದೊಡ್ಡ ದೊಡ್ಡ ಮನರಂಜನಾ ವಾಹಿನಿ ಮತ್ತು ಮ್ಯೂಸಿಕ್​ ಕಂಪನಿಗಳ ವಿರೋಧವನ್ನೂ ಕಟ್ಟಿಕೊಂಡ ಉದಾಹರಣೆಗಳಿವೆ. ರಿಯಾಲಿಟಿ ಶೋಗಳ (Reality Show) ನಾಟಕೀಯತೆ ಬಗ್ಗೆಯೂ ಅವರಿಗೆ ಅಸಮಾಧಾನ ಇದೆ. ಆದರೂ ಅವರು ಸೂಪರ್​ ಸಿಂಗರ್​ ಶೋಗೆ ಜಡ್ಜ್​ ಆಗಿರುವುದು ವಿಶೇಷ. 

ಅಷ್ಟಕ್ಕೂ ಬೆಂಗಾಲಿ ಭಾಷೆಯ ‘ಸೂಪರ್​ ಸಿಂಗರ್​’ ಕಾರ್ಯಕ್ರಮಕ್ಕೆ ಸೋನು ನಿಗಮ್​ ಯಾಕೆ ಜಡ್ಜ್​ ಆಗಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಸ್ವತಃ ಅವರೇ ಉತ್ತರ ನೀಡಿದ್ದಾರೆ. ‘ಸ್ಟಾರ್​ ಜಲ್ಸಾ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಈ ಸಿಂಗಿಂಗ್ ರಿಯಾಲಿಟಿ ಶೋ ನನಗೆ ಆಸಕ್ತಿಕರವಾಗಿದೆ. ಕುಮಾರ್​ ಸಾನು, ಕೌಶಿಕಿ ಚಕ್ರವರ್ತಿ ಕೂಡ ಜಡ್ಜ್​ ಆಗಿದ್ದಾರೆ. ಒಂದು ಒಳ್ಳೆಯ ವಾತಾವರಣ ಅದರಲ್ಲಿ ಇದೆ. ಈ ಕಾರ್ಯಕ್ರಮದಲ್ಲಿ ನನಗೆ ಕಂಫರ್ಟ್​ ಎನಿಸುತ್ತದೆ. ಒಂದು ವೇಳೆ ಅವರು ಕೂಡ ನನ್ನಿಂದ ಡ್ರಾಮಾ ಮಾಡಿಸಲು ಪ್ರಯತ್ನಿಸಿದರೆ ಆಗ ಅವರನ್ನು ನೋಡಿಕೊಳ್ಳುತ್ತೇನೆ’ ಎಂದು ಸೋನು ನಿಗಮ್​ ಎಚ್ಚರಿಕೆಯನ್ನೂ ನೀಡಿದ್ದಾರೆ.

ಈ ಹಿಂದೆ ಸರಿಗಮಪ, ಇಂಡಿಯನ್ ಐಡಲ್​ ಮುಂತಾದ ಶೋಗಳಿಗೆ ಸೋನು ನಿಗಮ್​ ಜಡ್ಜ್​ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ಇಂಡಿಯನ್​ ಐಡಲ್​ ಕಾರ್ಯಕ್ರಮದ ಬಗ್ಗೆ ಭಾರಿ ಟೀಕೆ ಕೇಳಿಬರುತ್ತಿದೆ. ಸ್ಪರ್ಧಿಗಳ ನಡುವೆ ಸುಳ್ಳು ಲವ್​ಸ್ಟೋರಿ ಸೃಷ್ಟಿ ಮಾಡಲಾಗುತ್ತಿದೆ. ಸ್ಪರ್ಧಿಗಳನ್ನು ಅನವಶ್ಯಕವಾಗಿ ಹೊಗಳಲಾಗುತ್ತದೆ. ಸುಳ್ಳು ಭಾವುಕತೆಯನ್ನು ವೇದಿಕೆ ಮೇಲೆ ಪ್ರದರ್ಶಿಸಲಾಗುತ್ತದೆ. ಬಡತನವನ್ನು ವೈಭವೀಕರಿಸಲಾಗುತ್ತದೆ ಎಂಬಿತ್ಯಾದಿ ಆರೋಪಗಳು ಕೇಳಿಬಂದಿವೆ. ಅನೇಕ ಸೆಲೆಬ್ರಿಟಿಗಳು ಕೂಡ ಈ ಶೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದುಂಟು.

ಇದನ್ನೂ ಓದಿ:

ಸ್ಪರ್ಧಿಗಳನ್ನು ಪ್ರಶಂಸಿಸಲು ಜಡ್ಜ್​ಗಳು ಅತಿರೇಕಕ್ಕೆ ಹೋಗುತ್ತಾರೆ; ರಿಯಾಲಿಟಿ ಶೋ ಬಗ್ಗೆ ಸೋನು ನಿಗಮ್​ ಬೇಸರ

ಮಗ ಗಾಯಕನಾಗೋದು ಸೋನು ನಿಗಮ್​ಗೆ ಇಷ್ಟ ಇಲ್ವಂತೆ! ಅದರಲ್ಲೂ ಭಾರತದಲ್ಲಿ..

Follow Us
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ