AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ಪಾರ್ಟ್​ಗಳಲ್ಲಿ ಮಹಾಭಾರತ ಸಿನಿಮಾ, ಅದು ನನ್ನ ಕನಸು: ರಾಜಮೌಳಿ

Rajamouli: ಮಹಾಭಾರತ ಕತೆಯನ್ನು ಸಿನಿಮಾ ಮಾಡುವುದು ನಿರ್ದೇಶಕ ರಾಜಮೌಳಿಯ ಬಹು ವರ್ಷಗಳ ಆಸೆ. ಮಹಾಭಾರತ ಕತೆಯನ್ನು ಸಿನಿಮಾ ಮಾಡುವ ಬಗ್ಗೆ ರಾಜಮೌಳಿ ಮಾತನಾಡಿದ್ದಾರೆ.

10 ಪಾರ್ಟ್​ಗಳಲ್ಲಿ ಮಹಾಭಾರತ ಸಿನಿಮಾ, ಅದು ನನ್ನ ಕನಸು: ರಾಜಮೌಳಿ
ರಾಜಮೌಳಿ
ಮಂಜುನಾಥ ಸಿ.
|

Updated on: May 09, 2023 | 8:13 PM

Share

ರಾಜಮೌಳಿ (Rajamouli), ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕ (Director). ಅದರಲ್ಲಿಯೂ ಪೌರಾಣಿಕ ಕತೆಗಳನ್ನು ಅದ್ಧೂರಿಯಾಗಿ ತೆರೆಗೆ ಅಳವಡಿಸುವಲ್ಲಿ ರಾಜಮೌಳಿಯನ್ನು ಮೀರಿಸುವ ನಿರ್ದೇಶಕರು ಸದ್ಯಕ್ಕಂತೂ ಭಾರತದಲ್ಲಿಲ್ಲ. ಭಾರತದ ಶ್ರೀಮಂತ ಪೌರಾಣಿಕ ಕತೆಗಳಿಗೆ ಬೆಳ್ಳಿ ಪರದೆಯ ಮೇಲೆ ಸೂಕ್ತ ನ್ಯಾಯ ಒದಗಿಸಬಲ್ಲ ನಿರ್ದೇಶಕ ರಾಜಮೌಳಿ ಎಂಬುದು ಬಹುಜನರ ಅಭಿಪ್ರಾಯ. ಸ್ವತಃ ರಾಜಮೌಳಿ ಕೂಡ ಭಾರತದ ಪೌರಾಣಿಕ, ಸಾಂಸ್ಕೃತಿ ಕತೆಗಳ ದೊಡ್ಡ ಅಭಿಮಾನಿ. ಅದರಲ್ಲಿಯೂ ಮಹಾಭಾರತ ಕತೆ ರಾಜಮೌಳಿಗೆ ಬಹು ಅಚ್ಚು-ಮೆಚ್ಚು. ಮಹಾಭಾರತ ಕತೆಯನ್ನು ತೆರೆಗೆ ತರಬೇಕು ಎಂಬುದು ರಾಜಮೌಳಿಯ ಆಸೆ. ಈ ಬಗ್ಗೆ ಸ್ವತಃ ರಾಜಮೌಳಿ ಮಾತನಾಡಿದ್ದಾರೆ.

ಮಹಾಭಾರತ ನನ್ನ ನೆಚ್ಚಿನ ಕತೆ, ಕನಿಷ್ಟ 10 ಪಾರ್ಟ್​ಗಳಲ್ಲಿ ಆ ಕತೆಯನ್ನು ಸಿನಿಮಾ ಮಾಡಬಹುದು. ಅದು ನನ್ನ ಆಸೆ ಸಹ. ಈಗ ನಾನು ಮಾಡುತ್ತಿರುವ ಪ್ರಾಜೆಕ್ಟ್​ಗಳೆಲ್ಲವೂ ಮಹಾಭಾರತವನ್ನು ಸಿನಿಮಾ ಮಾಡುವೆಡೆಗೆ ನನ್ನ ಪಯಣ ಎಂದು ಹೇಳಬಹುದು ಎಂದಿದ್ದಾರೆ. ರಾಜಮೌಳಿ ಈ ಹಿಂದೆ ಹಲವು ಸಂದರ್ಶನಗಳಲ್ಲಿ ಮಹಾಭಾರತ ಹಾಗೂ ರಾಮಾಯಣ ಮಹಾಕಾವ್ಯಗಳ ಬಗ್ಗೆ ಮಾತನಾಡಿದ್ದಿದೆ. ಅವುಗಳನ್ನು ಸಿನಿಮಾ ಮಾಡುವುದು ತಮ್ಮ ಆಸೆ ಎಂದು ಸಹ ಅವರು ಹೇಳಿಕೊಂಡಿದ್ದಾರೆ.

ಈಗಾಗಲೇ ಬಾಹುಬಲಿ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ ರಾಜಮೌಳಿ. ಇದೀಗ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಅವರುಗಳ ಪಾತ್ರಗಳನ್ನು ಇರಿಸಿಕೊಂಡು ಮಾಡಿರುವ ಆರ್​ಆರ್​ಆರ್ ಸಿನಿಮಾ ಬಹಳ ದೊಡ್ಡ ಹಿಟ್ ಆಗಿದೆ. ಅಂತಾಷ್ಟ್ರೀಯ ಮಟ್ಟದಲ್ಲಿ ರಾಜಮೌಳಿಗೆ ಹೆಸರು ತಂದುಕೊಟ್ಟಿದೆ. ಆರ್​ಆರ್​ಆರ್ ಬಳಿಕ ರಾಜಮೌಳಿ ಅಂತರಾಷ್ಟ್ರೀಯ ಮಟ್ಟದ ನಿರ್ದೇಶಕ ಎಂದು ಹೆಸರುಗಳಿಸಿದ್ದಾರೆ.

ರಾಜಮೌಳಿ ಇದೀಗ ಮಹೇಶ್ ಬಾಬು ಅವರೊಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಆರ್​ಆರ್​ಆರ್ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಮಹೇಶ್ ಬಾಬು ಜೊತೆಗೆ ರಾಜಮೌಳಿ ಸಿನಿಮಾ ಘೋಷಣೆ ಮಾಡಿದ್ದರು. ಆದರೆ ಆರ್​ಆರ್​ಆರ್ ಸಿನಿಮಾ ಊಹಿಸದ ಮಟ್ಟದಲ್ಲಿ ಹಿಟ್ ಆಗಿ ಅಂತರಾಷ್ಟ್ರೀಯ ಖ್ಯಾತಿ ಬಂದ ಬಳಿಕ ಮಹೇಶ್ ಬಾಬು ಸಿನಿಮಾದ ನಿರ್ಮಾಣ ಗುಣಮಟ್ಟದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ ರಾಜಮೌಳಿ.

ಇದನ್ನೂ ಓದಿ:ಮಗನ ಚಿತ್ರಕ್ಕೆ ನಿರ್ದೇಶನ ಮಾಡಲು ರಾಜಮೌಳಿಗೆ ಇಲ್ಲ ಆಸಕ್ತಿ; ಓಪನ್​ ಆಗಿ ಹೇಳಿದ ಕಾರ್ತಿಕೇಯ

ಮಹೇಶ್ ಬಾಬು ಅವರೊಟ್ಟಿಗೆ ಸಾಹಸಮಯ ಪ್ರಯಾಣದ ಕತೆಯುಳ್ಳ ಸಿನಿಮಾವನ್ನು ರಾಜಮೌಳಿ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಅಡವಿಯಲ್ಲಿ ನಡೆಯುವ ಸಾಹಸಮಯ ದೃಶ್ಯಗಳು ಸನ್ನಿವೇಶಗಳು ಸಾಕಷ್ಟಿವೆಯಂತೆ. ಭಾರತದ ಕೆಲವು ನಗರಗಳು, ಅಮೆಜಾನ್ ಕಾಡುಗಳು, ದುಬೈ ಮರುಭೂಮಿ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತದೆ. ಸಿನಿಮಾದ ಚಿತ್ರೀಕರಣ, ಗುಣಮಟ್ಟದ ಕುರಿತಾಗಿ ಹಾಲಿವುಡ್​ನ ಕೆಲವು ಸಂಸ್ಥೆಗಳೊಟ್ಟಿಗೆ ರಾಜಮೌಳಿ ಈಗಾಗಲೇ ಮಾತುಕತೆ ನಡೆಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಿನಿಮಾದ ಚಿತ್ರೀಕರಣ ಅಧಿಕೃತವಾಗಿ ಆರಂಭವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ