AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗೋಲ್ಡನ್​ ಗ್ಯಾಂಗ್​’ ಶೋ ಅದ್ದೂರಿ ಪ್ರೀ-ಲಾಂಚ್​ ಕಾರ್ಯಕ್ರಮ; ಗಣೇಶ್​ ಅಭಿಮಾನಿಗಳಿಗೆ ಹಬ್ಬ

Golden Gang Reality Show: ‘ಗೋಲ್ಡನ್ ಗ್ಯಾಂಗ್’ ಪ್ರೀ-ಲಾಂಚ್​ ಇವೆಂಟ್​ನಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಈ ಕಲರ್​ಫುಲ್​ ಸಂಚಿಕೆ ಹೊಸ ವರ್ಷದ ಪ್ರಯುಕ್ತ ಜ.2ರ ಭಾನುವಾರ ರಾತ್ರಿ 7.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ.

‘ಗೋಲ್ಡನ್​ ಗ್ಯಾಂಗ್​’ ಶೋ ಅದ್ದೂರಿ ಪ್ರೀ-ಲಾಂಚ್​ ಕಾರ್ಯಕ್ರಮ; ಗಣೇಶ್​ ಅಭಿಮಾನಿಗಳಿಗೆ ಹಬ್ಬ
ಯೋಗರಾಜ್​ ಭಟ್​, ಗಣೇಶ್​
TV9 Web
| Edited By: |

Updated on: Jan 01, 2022 | 4:53 PM

Share

ಕಿರುತೆರೆಯ ಕಾರ್ಯಕ್ರಮಗಳು ಕೂಡ ಸಿನಿಮಾದ ಗುಣಮಟ್ಟದಲ್ಲೇ ನಿರ್ಮಾಣ ಆಗುತ್ತಿವೆ. ಇಂಥ ಶೋಗಳನ್ನು ಜನರಿಗೆ ತಲುಪಿಸಲು ಅದ್ದೂರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ ಪ್ರೀ-ರಿಲೀಸ್​ ಇವೆಂಟ್​ ಮಾಡುವ ಟ್ರೆಂಡ್​ ಚಾಲ್ತಿಯಲ್ಲಿದೆ. ಅದೇ ರೀತಿ ಜೀ ಕನ್ನಡ (Zee Kannada) ವಾಹಿನಿ ಕೂಡ ತನ್ನ ಕಾರ್ಯಕ್ರಮವೊಂದರ ಪ್ರಸಾರಕ್ಕೂ ಮುನ್ನ ಭರ್ಜರಿಯಾಗಿ ಪ್ರೀ-ಲಾಂಚ್​ ಇವೆಂಟ್​ ಮಾಡಿದೆ. ಅದು, ‘ಗೋಲ್ಡನ್​ ಗ್ಯಾಂಗ್​’ (Golden Gang) ಕಾರ್ಯಕ್ರಮದ ಪ್ರೀ-ಲಾಂಚ್​ ಇವೆಂಟ್​. ಈ ಶೋ ನಡೆಸಿಕೊಡಲಿರುವುದು ‘ಗೋಲ್ಡನ್​ ಸ್ಟಾರ್​’ ಗಣೇಶ್​ (Golden Star Ganesh) ಎಂಬುದು ವಿಶೇಷ. ಈ ಕಾರ್ಯಕ್ರಮದ ಮೂಲಕ ಅವರು ಮತ್ತೆ ಕಿರುತೆರೆಗೆ ಮರಳಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ ‘ಗೋಲ್ಡನ್ ಗ್ಯಾಂಗ್’. ಸ್ನೇಹಿತರಿಂದ, ಸ್ನೇಹಿತರಿಗಾಗಿ, ಸ್ನೇಹಿತರಿಗೋಸ್ಕರವೇ ಸಿದ್ಧಗೊಂಡಿರುವ ಈ ಕಾರ್ಯಕ್ರಮಕ್ಕೆ ನಟ ಗಣೇಶ್ ಸಾರಥಿ ಆಗಿದ್ದಾರೆ. ಶೀಘ್ರವೇ ಈ ಶೋ ಪ್ರಸಾರ ಆರಂಭಿಸಲಿದೆ. ಅದಕ್ಕೂ ಮುನ್ನ ನಡೆದ ಪ್ರೀ-ಲಾಂಚ್​ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಈ ಕಲರ್​ಫುಲ್​ ಕಾರ್ಯಕ್ರಮವು ಹೊಸ ವರ್ಷದ ಪ್ರಯುಕ್ತ ಜ.2ರ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರ ಆಗಲಿದೆ. ಆ ಮೂಲಕ ಗಣೇಶ್​ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಸಿಗಲಿದೆ.

‘ಗೋಲ್ಡನ್​ ಗ್ಯಾಂಗ್​’ ಪ್ರೀ-ಲಾಂಚ್​ ಇವೆಂಟ್​ನಲ್ಲಿ ಜೀ ಕನ್ನಡ ಕುಟುಂಬದ ಕಲಾವಿದರ ಜೊತೆಗೆ ಗಣೇಶ್​ ಹೆಜ್ಜೆ ಹಾಕಿ, ಹಾಡಿ, ಆಡಿ, ನಲಿದಿದ್ದಾರೆ. ತಮ್ಮ ನಿರೂಪಣೆಯ ಹಳೆಯ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ನಿರೂಪಕಿ ಅನುಶ್ರೀ ಅವರೊಡನೆ ಜತೆಗೂಡಿ ಅವರು ನಿರೂಪಣೆ ಮಾಡಿದ್ದಾರೆ. ವಿಶೇಷ ಅತಿಥಿಯಾಗಿ ಆಗಮಿಸಿದ್ದ ನಿರ್ದೇಶಕ, ಗೀತರಚನಕಾರ ಯೋಗರಾಜ್ ಭಟ್ ಅವರು ‘ಮುಂಗಾರು ಮಳೆ’ ಚಿತ್ರದ ಆ ದಿನಗಳನ್ನು ಮೆಲುಕು ಹಾಕಿದರು. ಗಣೇಶ್​ ಜೊತೆಗಿನ ತರಲೆ, ತಮಾಷೆಯ ಪ್ರಸಂಗಗಳನ್ನು ಕೂಡ ಹಂಚಿಕೊಂಡರು.

ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ ‘ಗೋಲ್ಡನ್ ಗ್ಯಾಂಗ್’ ಕಾರ್ಯಕ್ರಮದ ಶೀರ್ಷಿಕೆ ಗೀತೆಗೆ ವಿಜಯ್ ಪ್ರಕಾಶ್ ಅವರು ಧ್ವನಿ ನೀಡಿದ್ದಾರೆ. ಯೋಗರಾಜ್​ ಭಟ್​ ಸಾಹಿತ್ಯ ರಚಿಸಿದ್ದಾರೆ. ಇದೀಗ ಈ ಫ್ರೆಂಡ್ಸ್ ಆಂಥೆಮ್ ಬಿಡುಗಡೆ ಆಗಿದ್ದು ಸಖತ್​ ಮೆಚ್ಚುಗೆ ಗಳಿಸುತ್ತಿದೆ.

ಹಿರಿತೆರೆ, ಕಿರುತೆರೆ, ರಾಜಕೀಯ, ಕ್ರೀಡಾವಲಯ ಹೀಗೆ ವಿವಿಧ ಕ್ಷೇತ್ರಗಳ ಸಾಧಕರು ಅವರ ಸ್ನೇಹಿತರ ಜೊತೆ ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ವೀಕ್ಷಕರಿಗೆ ತಮ್ಮ ಬಾಲ್ಯ, ಯೌವ್ವನದ ದಿನಗಳಲ್ಲಿ ತಾವು ಆಡಿದ ಆಟ-ತುಂಟಾಟಗಳನ್ನು ನೆನಪಿಸಲಿದ್ದಾರೆ. ಅದಕ್ಕೆ ಜೀ ಕನ್ನಡದ ‘ಗೋಲ್ಡನ್​ ಗ್ಯಾಂಗ್​’ ಕಾರ್ಯಕ್ರಮ ವೇದಿಕೆ ಕಲ್ಪಿಸಿಕೊಡಲಿದೆ.

ಇದನ್ನೂ ಓದಿ:

ಕನ್ನಡ ಕಿರುತೆರೆ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಉಮಾಶ್ರೀ ಸೀರಿಯಲ್​ ‘ಪುಟ್ಟಕ್ಕನ ಮಕ್ಕಳು’

Sakath Movie Review: ‘ಸಖತ್’​ ಮನರಂಜನೆ, ‘ಸಖತ್’​ ಸಂದೇಶ; ಇದು ಗಣೇಶ್​-ಸುನಿ ಪಂಚ್​

ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು