ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಬಂತು ಕಹಿ ದಿನ; ಕಣ್ಣೀರು ಹಾಕಿದ ಐಶ್ವರ್ಯಾ

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಐಶ್ವರ್ಯಾ ತಮ್ಮ ತಾಯಿಯ ನೆನಪಿನಲ್ಲಿ ಕಣ್ಣೀರು ಹಾಕಿದ್ದಾರೆ. ನಾಲ್ಕು ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡ ನೋವು ಇನ್ನೂ ಅವರನ್ನು ಕಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಅವರನ್ನು ಸಮಾಧಾನಪಡಿಸಲು ಸಹಪ್ರತಿಸ್ಪರ್ಧಿ ಚೈತ್ರಾ ಪ್ರಯತ್ನಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಬಂತು ಕಹಿ ದಿನ; ಕಣ್ಣೀರು ಹಾಕಿದ ಐಶ್ವರ್ಯಾ
ಐಶ್ವರ್ಯಾ

Updated on: Nov 30, 2024 | 9:51 AM

‘ಬಿಗ್ ಬಾಸ್’ ಮನೆಯಲ್ಲಿ ಐಶ್ವರ್ಯಾ ಅವರ ಆಟ ದಿನ ಕಳೆದಂತೆ ಡಲ್ ಆಗುತ್ತಿದೆ. ಅವರಿಗೆ ಉತ್ತಮ ರೀತಿಯಲ್ಲಿ ಆಟ ಆಡಲು ಸಾಧ್ಯವಾಗುತ್ತಿಲ್ಲ. ಶಿಶಿರ್ ಹಾಗೂ ಅವರ ರೊಮ್ಯಾನ್ಸ್ ಜಾಸ್ತಿ ಆಯಿತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈಗ ಐಶ್ವರ್ಯಾ ಅವರು ಬಿಗ್ ಬಾಸ್ ಮನೆಯಲ್ಲಿರುವಾಗಲೇ ಒಂದು ಕಹಿ ದಿನ ಬಂದಿದೆ. ಅದನ್ನು ನೆನೆದು ಕಣ್ಣೀರು ಹಾಕಿದ್ದಾರೆ. ‘ವರ್ಷ ಕಳೆದಂತೆ ಇನ್ನಷ್ಟು ಕಷ್ಟ ಆಗುತ್ತಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಐಶ್ವರ್ಯಾ ತುಂಬಾನೇ ಕಷ್ಟದಲ್ಲಿ ಜೀವನ ನಡೆಸಿದವರು. ಅವರಿಗೆ ತಂದೆ ಹಾಗೂ ತಾಯಿ ಇಬ್ಬರೂ ಇಲ್ಲ. ತಾಯಿ 2020ರ ನವೆಂಬರ್​ನಲ್ಲಿ ನಿಧನ ಹೊಂದಿದ್ದರು. ಅವರು ತಾಯಿ ಅಗಲಿದೆ ದಿನ ದೊಡ್ಮನೆಯಲ್ಲಿದ್ದಾಗಲೇ ಬಂದಿದೆ. ಅವರು ತಾಯಿಯನ್ನು ಕಳೆದುಕೊಂಡು ನಾಲ್ಕು ವರ್ಷಗಳು ಆಗಿದ್ದು, ಇದನ್ನು ನೆನೆದು ಅವರು ಕಣ್ಣೀರು ಹಾಕಿದ್ದಾರೆ. ಅವರಿಗೆ ಆ ಕರಾಳ ದಿನ ನೆನಪಿಸಿಕೊಂಡು ಮತ್ತಷ್ಟು ನೋವಾಗಿದೆ.

ಚೈತ್ರಾ ಬಳಿ ಈ ವಿಚಾರವನ್ನು ಐಶ್ವರ್ಯಾ ಅವರು ಹೇಳಿಕೊಂಡಿದ್ದಾರೆ. ‘ನನ್ನ ತಾಯಿಯ ತಿಥಿ ಇವತ್ತು. ಅಮ್ಮ ಹೋಗಿ ನಾಲ್ಕು ವರ್ಷ ಆಗಿದೆ’ ಎಂದರು ಐಶ್ವರ್ಯಾ. ಆಗ ಚೈತ್ರಾ ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ‘ಅಳಬಾರದು. ಇದು ಜವಾಬ್ದಾರಿ ನಿಭಾಯಿಸುವ ಸಮಯ. ನಿಮ್ಮ ಅಮ್ಮನಿಗೆ ಏನು ಇಷ್ಟವೋ ಅದೇ ಅಡುಗೆ ಮಾಡೋಣ’ ಎಂದರು ಚೈತ್ರಾ.

‘ಅಮ್ಮನಿಗೆ ಒಬ್ಬಟ್ಟು ಎಂದರೆ ಸಖತ್ ಇಷ್ಟ. ಅವರು ನನ್ನ ರೀತಿ ಆಗಿರಲಿಲ್ಲ. ತುಂಬಾನೇ ಸಿಂಪಲ್ ಆಗಿದ್ದರು. ನಾಲ್ಕು ವರ್ಷ ಆಯ್ತು. ವರ್ಷ ಕಳೆದಂತೆ ಮತ್ತಷ್ಟು ಕಷ್ಟವೇ ಆಗುತ್ತಿದೆಯೇ ಹೊರತು ಸುಲಭವಂತೂ ಆಗಲ್ಲ. ತುಂಬಾನೇ ಕಷ್ಟ’ ಎಂದು ಐಶ್ವರ್ಯಾ ಹೇಳಿದ್ದರು.

ಇದನ್ನೂ ಓದಿ: ಐಶ್ವರ್ಯಾ ಜೊತೆ ಕ್ಲೋಸ್ ಆದ ಧರ್ಮ; ದುಷ್ಮನ್ ಆಗಿ ಬದಲಾದ ಅನುಷಾ ರೈ

ಐಶ್ವರ್ಯಾ ಅವರಿಗೆ ಮನೆಯಿಂದ ಊಟ ಬಂದಿರಲಿಲ್ಲ. ಆಗ ಮಂಜು ಅವರು ತಮ್ಮ ಮನೆಯ ಊಟವನ್ನು ಐಶ್ವರ್ಯಾಗೆ ನೀಡಿದ್ದರು. ‘ಇದು ನಿಮ್ಮ ಮನೆಯಿಂದ ಕಳುಹಿಸಿದ ಊಟ’ ಎಂದಿದ್ದರು. ಅದೇ ರೀತಿ ಐಶ್ವರ್ಯಾಗೆ ಸುದೀಪ್ ಅವರು ಪ್ರೀತಿಯಿಂದ ಕೆಲವು ತಿನಿಸುಗಳನ್ನು ಕಳುಹಿಸಿದ್ದರು. ಈ ಮೂಲಕ ಅವರಿಗೆ ಕುಟುಂಬದವರು ಇಲ್ಲ ಎನ್ನುವ ನೋವನ್ನು ಮರೆಸುವ ಕೆಲಸ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:58 am, Sat, 30 November 24

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us