‘ಅಮೃತಧಾರೆ’:ಕಳೆದುಕೊಂಡಿದ್ದಕ್ಕಿಂತ 10 ಪಟ್ಟು ಹೆಚ್ಚು ಗಳಿಸ್ತೀನಿ; ಗೌತಮ್ ಚಾಲೆಂಜ್

ಅಮೃತಧಾರೆ ಧಾರಾವಾಹಿಯಲ್ಲಿ ದೊಡ್ಡ ತಿರುವು ಬಂದಿದೆ. ಗೌತಮ್ ದೀವಾನ್ ಕ್ಯಾಬ್ ಓಡಿಸುವುದನ್ನು ಬಿಟ್ಟು ಹೊಸ ಉದ್ಯಮ ಆರಂಭಿಸಲು ನಿರ್ಧರಿಸಿದ್ದಾನೆ. ತಾಯಿಯ ಬೇಸರ, ಭೂಮಿಕಾ ಜೊತೆಗಿನ ಪುನರ್ಮಿಲನ ಗೌತಮ್‌ಗೆ ಪ್ರೇರಣೆ ನೀಡಿದೆ. ದೀವಾನ್ ಗ್ರೂಪ್ ಆಫ್ ಕಂಪನೀಸ್‌ನ ಮಾಲೀಕನಾಗಿದ್ದ ಗೌತಮ್, ಮೋಸದಿಂದ ಕಳೆದುಕೊಂಡ ಆಸ್ತಿ ಮತ್ತು ಘನತೆಯನ್ನು ಮರಳಿ ಪಡೆಯಲು ಸಿದ್ಧನಾಗಿದ್ದಾನೆ.

‘ಅಮೃತಧಾರೆ’:ಕಳೆದುಕೊಂಡಿದ್ದಕ್ಕಿಂತ 10 ಪಟ್ಟು ಹೆಚ್ಚು ಗಳಿಸ್ತೀನಿ; ಗೌತಮ್ ಚಾಲೆಂಜ್
ಗೌತಮ್ ದೀವಾನ್
Edited By:

Updated on: Feb 11, 2026 | 7:57 AM

‘ಅಮೃತಧಾರೆ’ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಬರೋ ಸಮಯ ಬಂದಿದೆ. ಗೌತಮ್ ಅವರು ಕ್ಯಾಬ್ ಓಡಿಸಿಕೊಂಡು ಹಾಯಾಗಿದ್ದ. ಮಗ ಕ್ಯಾಬ್ ಓಡಿಸೋದನ್ನು ನೋಡಿ ಅವನ ತಾಯಿ ಬೇಸರ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಭೂಮಿಕಾ ಬಳಿ ಹೇಳುವಾಗ ಗೌತಮ್ ಇದನ್ನು ಕದ್ದು ಕೇಳಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಉದ್ಯಮ ಶುರು ಮಾಡೋದಾಗಿ ಹೇಳಿದ್ದಾನೆ. ಇದರಿಂದ ಹೊಸ ಅಧ್ಯಾಯ ತೆರೆದುಕೊಳ್ಳುವ ಸಾಧ್ಯತೆ ಇದೆ.

ಗೌತಮ್ ದೀವಾನ್ ‘ದೀವಾನ್ ಗ್ರೂಪ್ ಆಫ್ ಕಂಪನೀಸ್’ ಸಂಸ್ಥೆಯ ಮಾಲೀಕನಾಗಿದ್ದ. ಆದರೆ, ಆತನ ಮಲತಾಯಿ ಅವನಿಗೆ ಮೋಸ ಮಾಡಿದಳು. ಆತನ ತಮ್ಮ ಜಯದೇವ್ ಕೂಡ ಇದೇ ಕೆಲಸ ಮಾಡಿದ. ಮೋಸದಿಂದ ಎಲ್ಲ ಆಸ್ತಿಯನ್ನ ಬರೆಸಿಕೊಂಡನು. ಇದರಿಂದ ಗೌತಮ್ ಮನೆ ಬಿಟ್ಟು ಹೋಗುವಂತೆ ಆಯಿತು.

ಮೊದಲು ಭೂಮಿಕಾ ಗೌತಮ್ ಬಿಟ್ಟು ಹೋದಳು. ಇದರಿಂದ ಗೌತಮ್ ದೀವಾನ್ ಒಂಟಿ ಆದನು. ಮನೆಯವರ ಕುತಂತ್ರ ಸಹಿಸಲಾರದೆ ಆಸ್ತಿ ಬರೆದುಕೊಟ್ಟು ಮನೆ ಬಿಟ್ಟು ಹೋದನು. ಈಗ ಗೌತಮ್ ಹಾಗೂ ಭೂಮಿಕಾ ಒಂದಾಗಿದ್ದಾರೆ. ಈ ಸಂದರ್ಭದಲ್ಲಿ ಆತ ಕ್ಯಾಬ್ ಓಡಿಸಿಕೊಂಡು ಇರೋದನ್ನು ಆತನ ತಾಯಿ ಇಷ್ಟಪಟ್ಟಿಲ್ಲ. ಹೀಗಾಗಿ, ಹೊಸ ಉದ್ಯಮ ಮಾಡೋದಾಗಿ ಅವನು ತಾಯಿ ಭರವಸೆ ನೀಡಿದ್ದಾನೆ.

‘ನಾನು ಕಳೆದುಕೊಂಡಿದ್ದಕ್ಕಿಂತ 10 ಪಟ್ಟು ಹೆಚ್ಚು ಗಳಿಸಿ, ನಿನ್ನ ಕಾಲ ಕೆಳಗೆ ಹಾಕ್ತೀನಿ’ ಎಂದು ಅಮ್ಮನಿಗೆ ಪ್ರಾಮಿಸ್ ಮಾಡಿದ್ದಾನೆ. ಗೌತಮ್ ದೀವಾನ್ ಮಾತನ್ನು ಕೇಳಿ ತಾಯಿ ಖುಷಿ ಆಗಿದ್ದಾಳೆ. ಗೌತಮ್ ಇದನ್ನು ಸಾಧಿಸಿ ತೋರಿಸುತ್ತಾನೆ ಎಂಬ ನಂಬಿಕೆ ಎಲ್ಲರಿಗೂ ಬಂದಿದೆ.

ಇದನ್ನೂ ಓದಿ: ‘ಅಮೃತಧಾರೆ’; ಮಿಂಚು ಕೂಡ ಗೌತಮ್ ಮಗಳು ಅನ್ನೋದು ಗೊತ್ತಾಗಿ ಹೋಯ್ತು

ಅತ್ತ ಜಯದೇವ್ಗೆ ಸಂಕಷ್ಟ ಎದುರಾಗಿದೆ. ಅವರು ಮಾಡಿದ ಸಾಲದಿಂದ ಸಂಕಷ್ಟ ಬಂದಿದೆ. ಬ್ಯಾಂಕ್ನವರು ಮನೆಗೆ ಬಂದು ಪೀಡಿಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಎದುರಿಸೋ ಪರಿಸ್ಥಿತಿ ಬರಬಹುದು ಎಂದು ಹೇಳಲಾಗುತ್ತಾ ಇದೆ. ಗೌತಮ್ ಹಾಗೂ ಭೂಮಿಕಾ ಒಂದಾದ ಖುಷಿಯಲ್ಲಿ ಎಲ್ಲರೂ ಇದ್ದರು. ಇದರ ಜೊತೆ ಈಗ ಬಂಪರ್ ಸಿಹಿಸುದ್ದಿ ಸಿಕ್ಕಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us