AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೃಜನ್ ಲೋಕೇಶ್​​ ಹೆದರುತ್ತಾರೆ, ಅದಕ್ಕೆ ಹೆಂಡತಿ ಎದುರು ಜಾಸ್ತಿ ಮಾತನಾಡಲ್ಲ’; ಅಚ್ಚರಿ ವಿಚಾರ ಬಿಚ್ಚಿಟ್ಟ ಅನುಪಮಾ ಗೌಡ

ಕಲರ್ಸ್​ ಕನ್ನಡ ವಾಹಿನಿ ‘ರಾಜಾ ರಾಣಿ’ ಹೆಸರಿನ ಹೊಸ ರಿಯಾಲಿಟಿ ಶೋ ಆರಂಭಿಸಿದೆ. ಈ ಶೋಗೆ ಸೃಜನ್​ ಲೋಕೆಶ್​ ಮತ್ತು ಹಿರಿಯ ನಟಿ ತಾರಾ ಜಡ್ಜ್​ ಆಗಿದ್ದಾರೆ. ಇನ್ನು, ಕಲರ್ಸ್​ ಕನ್ನಡ ವಾಹಿನಿಯ ಸಾಕಷ್ಟು ಸೆಲೆಬ್ರಿಟಿಗಳು ಈ ಶೋಗೆ ಸ್ಪರ್ಧಿಗಳಾಗಿ ಆಗಮಿಸಿದ್ದಾರೆ.

‘ಸೃಜನ್ ಲೋಕೇಶ್​​ ಹೆದರುತ್ತಾರೆ, ಅದಕ್ಕೆ ಹೆಂಡತಿ ಎದುರು ಜಾಸ್ತಿ ಮಾತನಾಡಲ್ಲ’; ಅಚ್ಚರಿ ವಿಚಾರ ಬಿಚ್ಚಿಟ್ಟ ಅನುಪಮಾ ಗೌಡ
‘ಸೃಜನ್ ಲೋಕೇಶ್​​ ಹೆದರುತ್ತಾರೆ, ಅದಕ್ಕೆ ಹೆಂಡತಿ ಎದುರು ಜಾಸ್ತಿ ಮಾತನಾಡಲ್ಲ’; ಅಚ್ಚರಿ ವಿಚಾರ ಬಿಚ್ಚಿಟ್ಟ ಅನುಪಮಾ ಗೌಡ
TV9 Web
| Edited By: |

Updated on:Sep 13, 2021 | 9:03 PM

Share

ಸೃಜನ್​ ಲೋಕೇಶ್​ ಮಾತಿನ ಮಲ್ಲ. ಅವರನ್ನು ಮಾತಿನಲ್ಲಿ ಸೋಲಿಸೋದು ಅಷ್ಟು ಸುಲಭವಲ್ಲ. ‘ಮಜಾ ಟಾಕೀಸ್​’ ವೇದಿಕೆ ಮೇಲೆ ಅವರು ಹೊಡೆಯುತ್ತಿದ್ದ ಒಂದೊಂದು ಡೈಲಾಗ್​ ಅನೇಕರ ಬಾಯಿ ಮುಚ್ಚಿಸುತ್ತಿತ್ತು. ಇನ್ನು, ವೇದಿಕೆ ಏರಿದರೆ ಸಾಕು ಮಾತು ಪಟಪಟನೆ ಉದುರತ್ತವೆ. ಆದರೆ, ​ಹೆಂಡತಿ ಎದುರು ಸೃಜನ್ ಮಾತನಾಡುವುದಿಲ್ಲ. ಇದಕ್ಕೆ ಭಯ ಕಾರಣ ಎಂದು ಅನುಪಮಾ ಗೌಡ ಹೇಳಿದ್ದಾರೆ!

ಕಲರ್ಸ್​ ಕನ್ನಡ ವಾಹಿನಿ ‘ರಾಜಾ ರಾಣಿ’ ಹೆಸರಿನ ಹೊಸ ರಿಯಾಲಿಟಿ ಶೋ ಆರಂಭಿಸಿದೆ. ಈ ಶೋಗೆ ಸೃಜನ್​ ಲೋಕೇಶ್​ ಮತ್ತು ಹಿರಿಯ ನಟಿ ತಾರಾ ಜಡ್ಜ್​ ಆಗಿದ್ದಾರೆ. ಇನ್ನು, ಕಲರ್ಸ್​ ಕನ್ನಡ ವಾಹಿನಿಯ ಸಾಕಷ್ಟು ಸೆಲೆಬ್ರಿಟಿಗಳು ಈ ಶೋಗೆ ಸ್ಪರ್ಧಿಗಳಾಗಿ ಆಗಮಿಸಿದ್ದಾರೆ. ಹೆಸರೇ ಸೂಚಿಸುವಂತೆ ಈ ಶೋಗೆ ಒಬ್ಬರೇ ಬರುವಂತಿಲ್ಲ. ಜೋಡಿ ಸಮೇತವೇ ಬರಬೇಕು. ವೇದಿಕೆ ಮೇಲೆ ಸ್ಟಾರ್ ದಂಪತಿಗಳ ಸಾಕಷ್ಟು ಗುಟ್ಟು ಬಯಲಾಗಿದೆ. ಹೆಂಡತಿ ಎದುರು ಸೃಜನ್​ ಹೆಚ್ಚು ಮಾತನಾಡುವುದಿಲ್ಲ ಎನ್ನುವ ವಿಚಾರ ಕೂಡ ಹೊರ ಬಿದ್ದಿದೆ.

ಇದೇ ವಿಚಾರ ಇಟ್ಟುಕೊಂಡು ತಾರಾ ಹಾಗೂ ಅನುಪಮಾ ಮಾತನಾಡಿದ್ದಾರೆ. ‘ಸೃಜನ್​ ಲೋಕೇಶ್ ‘ರಾಜಾ ರಾಣಿ’ ಶೋನ ಜಡ್ಜ್. ಅವರು​ ​ ಹೆಂಡತಿ ಎದುರು ಏನೂ ಮಾತನಾಡುವುದಿಲ್ಲ’ ಎಂದರು ಅನುಪಮಾ. ಈ ಮಾತಿನ ಬಗ್ಗೆ ತಾರಾ ಅಚ್ಚರಿ ಹಾಗೂ ಅನುಮಾನ ಎರಡನ್ನೂ ಹೊರ ಹಾಕಿದರು. ‘ವೇದಿಕೆ ಏರಿದ್ರೆ ಸೃಜನ್​ ಆ ರೀತಿ ಮಾತನಾಡುತ್ತಾನೆ. ಆದರೆ, ನನ್ನ ಗಂಡ ಮನೆಯಲ್ಲಿ ಮಾತೇ ಆಡಲ್ಲ ಎಂದು ಅವನ ಹೆಂಡತಿ ಹೇಳ್ತಾಳೆ. ಸೃಜನ್​ ಮನೆಯಲ್ಲಿ ಮಾತನ್ನೇ ಆಡಲ್ಲ ಎಂಬ ನನಗೆ ಏಕೋ ಅನುಮಾನ’ ಎಂದರು. ಇದಕ್ಕೆ ಅನುಪಮಾ ಧ್ವನಿಗೂಡಿಸಿದರು. ‘ನನಗೂ ಅದೇ ಅನುಮಾನ. ಬಹುಶಃ ಹೆಂಡತಿ ಕಂಡರೆ ಭಯ ಇರಬೇಕು ಅದಕ್ಕೆ ಮಾತನಾಡುವುದಿಲ್ಲ’ ಎಂದು ಅನುಪಮಾ ಹೇಳಿದರು.

ಈ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದನ್ನು ನೋಡಿದ ಫ್ಯಾನ್ಸ್​ ನಕ್ಕಿದ್ದಾರೆ. ಅಂದಹಾಗೆ, ಈ ಶೋ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: ‘ಲೋಕೇಶ್ ಮಗನಾದರೂ ಯಾರ ಮುಂದೆಯೂ ಕೈ ಒಡ್ಡದೇ ಚಾನ್ಸ್​ಗಾಗಿ 14 ವರ್ಷ ಸೈಕಲ್​ ಹೊಡೆದಿದ್ದೇನೆ’; ವೇದಿಕೆ ಮೇಲೆ ಅತ್ತ ಸೃಜನ್​

VijayaLakshmi: ಸೃಜನ್​ ಲೋಕೇಶ್​ಗೆ ಒಳ್ಳೇದು ಬಯಸಿದ್ದೇ ಅದೇ ತಪ್ಪಾ: ವಿಜಯಲಕ್ಷ್ಮಿ

Published On - 8:43 pm, Mon, 13 September 21

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್