AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೃಜನ್ ಲೋಕೇಶ್​​ ಹೆದರುತ್ತಾರೆ, ಅದಕ್ಕೆ ಹೆಂಡತಿ ಎದುರು ಜಾಸ್ತಿ ಮಾತನಾಡಲ್ಲ’; ಅಚ್ಚರಿ ವಿಚಾರ ಬಿಚ್ಚಿಟ್ಟ ಅನುಪಮಾ ಗೌಡ

ಕಲರ್ಸ್​ ಕನ್ನಡ ವಾಹಿನಿ ‘ರಾಜಾ ರಾಣಿ’ ಹೆಸರಿನ ಹೊಸ ರಿಯಾಲಿಟಿ ಶೋ ಆರಂಭಿಸಿದೆ. ಈ ಶೋಗೆ ಸೃಜನ್​ ಲೋಕೆಶ್​ ಮತ್ತು ಹಿರಿಯ ನಟಿ ತಾರಾ ಜಡ್ಜ್​ ಆಗಿದ್ದಾರೆ. ಇನ್ನು, ಕಲರ್ಸ್​ ಕನ್ನಡ ವಾಹಿನಿಯ ಸಾಕಷ್ಟು ಸೆಲೆಬ್ರಿಟಿಗಳು ಈ ಶೋಗೆ ಸ್ಪರ್ಧಿಗಳಾಗಿ ಆಗಮಿಸಿದ್ದಾರೆ.

‘ಸೃಜನ್ ಲೋಕೇಶ್​​ ಹೆದರುತ್ತಾರೆ, ಅದಕ್ಕೆ ಹೆಂಡತಿ ಎದುರು ಜಾಸ್ತಿ ಮಾತನಾಡಲ್ಲ’; ಅಚ್ಚರಿ ವಿಚಾರ ಬಿಚ್ಚಿಟ್ಟ ಅನುಪಮಾ ಗೌಡ
‘ಸೃಜನ್ ಲೋಕೇಶ್​​ ಹೆದರುತ್ತಾರೆ, ಅದಕ್ಕೆ ಹೆಂಡತಿ ಎದುರು ಜಾಸ್ತಿ ಮಾತನಾಡಲ್ಲ’; ಅಚ್ಚರಿ ವಿಚಾರ ಬಿಚ್ಚಿಟ್ಟ ಅನುಪಮಾ ಗೌಡ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Sep 13, 2021 | 9:03 PM

Share

ಸೃಜನ್​ ಲೋಕೇಶ್​ ಮಾತಿನ ಮಲ್ಲ. ಅವರನ್ನು ಮಾತಿನಲ್ಲಿ ಸೋಲಿಸೋದು ಅಷ್ಟು ಸುಲಭವಲ್ಲ. ‘ಮಜಾ ಟಾಕೀಸ್​’ ವೇದಿಕೆ ಮೇಲೆ ಅವರು ಹೊಡೆಯುತ್ತಿದ್ದ ಒಂದೊಂದು ಡೈಲಾಗ್​ ಅನೇಕರ ಬಾಯಿ ಮುಚ್ಚಿಸುತ್ತಿತ್ತು. ಇನ್ನು, ವೇದಿಕೆ ಏರಿದರೆ ಸಾಕು ಮಾತು ಪಟಪಟನೆ ಉದುರತ್ತವೆ. ಆದರೆ, ​ಹೆಂಡತಿ ಎದುರು ಸೃಜನ್ ಮಾತನಾಡುವುದಿಲ್ಲ. ಇದಕ್ಕೆ ಭಯ ಕಾರಣ ಎಂದು ಅನುಪಮಾ ಗೌಡ ಹೇಳಿದ್ದಾರೆ!

ಕಲರ್ಸ್​ ಕನ್ನಡ ವಾಹಿನಿ ‘ರಾಜಾ ರಾಣಿ’ ಹೆಸರಿನ ಹೊಸ ರಿಯಾಲಿಟಿ ಶೋ ಆರಂಭಿಸಿದೆ. ಈ ಶೋಗೆ ಸೃಜನ್​ ಲೋಕೇಶ್​ ಮತ್ತು ಹಿರಿಯ ನಟಿ ತಾರಾ ಜಡ್ಜ್​ ಆಗಿದ್ದಾರೆ. ಇನ್ನು, ಕಲರ್ಸ್​ ಕನ್ನಡ ವಾಹಿನಿಯ ಸಾಕಷ್ಟು ಸೆಲೆಬ್ರಿಟಿಗಳು ಈ ಶೋಗೆ ಸ್ಪರ್ಧಿಗಳಾಗಿ ಆಗಮಿಸಿದ್ದಾರೆ. ಹೆಸರೇ ಸೂಚಿಸುವಂತೆ ಈ ಶೋಗೆ ಒಬ್ಬರೇ ಬರುವಂತಿಲ್ಲ. ಜೋಡಿ ಸಮೇತವೇ ಬರಬೇಕು. ವೇದಿಕೆ ಮೇಲೆ ಸ್ಟಾರ್ ದಂಪತಿಗಳ ಸಾಕಷ್ಟು ಗುಟ್ಟು ಬಯಲಾಗಿದೆ. ಹೆಂಡತಿ ಎದುರು ಸೃಜನ್​ ಹೆಚ್ಚು ಮಾತನಾಡುವುದಿಲ್ಲ ಎನ್ನುವ ವಿಚಾರ ಕೂಡ ಹೊರ ಬಿದ್ದಿದೆ.

ಇದೇ ವಿಚಾರ ಇಟ್ಟುಕೊಂಡು ತಾರಾ ಹಾಗೂ ಅನುಪಮಾ ಮಾತನಾಡಿದ್ದಾರೆ. ‘ಸೃಜನ್​ ಲೋಕೇಶ್ ‘ರಾಜಾ ರಾಣಿ’ ಶೋನ ಜಡ್ಜ್. ಅವರು​ ​ ಹೆಂಡತಿ ಎದುರು ಏನೂ ಮಾತನಾಡುವುದಿಲ್ಲ’ ಎಂದರು ಅನುಪಮಾ. ಈ ಮಾತಿನ ಬಗ್ಗೆ ತಾರಾ ಅಚ್ಚರಿ ಹಾಗೂ ಅನುಮಾನ ಎರಡನ್ನೂ ಹೊರ ಹಾಕಿದರು. ‘ವೇದಿಕೆ ಏರಿದ್ರೆ ಸೃಜನ್​ ಆ ರೀತಿ ಮಾತನಾಡುತ್ತಾನೆ. ಆದರೆ, ನನ್ನ ಗಂಡ ಮನೆಯಲ್ಲಿ ಮಾತೇ ಆಡಲ್ಲ ಎಂದು ಅವನ ಹೆಂಡತಿ ಹೇಳ್ತಾಳೆ. ಸೃಜನ್​ ಮನೆಯಲ್ಲಿ ಮಾತನ್ನೇ ಆಡಲ್ಲ ಎಂಬ ನನಗೆ ಏಕೋ ಅನುಮಾನ’ ಎಂದರು. ಇದಕ್ಕೆ ಅನುಪಮಾ ಧ್ವನಿಗೂಡಿಸಿದರು. ‘ನನಗೂ ಅದೇ ಅನುಮಾನ. ಬಹುಶಃ ಹೆಂಡತಿ ಕಂಡರೆ ಭಯ ಇರಬೇಕು ಅದಕ್ಕೆ ಮಾತನಾಡುವುದಿಲ್ಲ’ ಎಂದು ಅನುಪಮಾ ಹೇಳಿದರು.

ಈ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದನ್ನು ನೋಡಿದ ಫ್ಯಾನ್ಸ್​ ನಕ್ಕಿದ್ದಾರೆ. ಅಂದಹಾಗೆ, ಈ ಶೋ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: ‘ಲೋಕೇಶ್ ಮಗನಾದರೂ ಯಾರ ಮುಂದೆಯೂ ಕೈ ಒಡ್ಡದೇ ಚಾನ್ಸ್​ಗಾಗಿ 14 ವರ್ಷ ಸೈಕಲ್​ ಹೊಡೆದಿದ್ದೇನೆ’; ವೇದಿಕೆ ಮೇಲೆ ಅತ್ತ ಸೃಜನ್​

VijayaLakshmi: ಸೃಜನ್​ ಲೋಕೇಶ್​ಗೆ ಒಳ್ಳೇದು ಬಯಸಿದ್ದೇ ಅದೇ ತಪ್ಪಾ: ವಿಜಯಲಕ್ಷ್ಮಿ

Published On - 8:43 pm, Mon, 13 September 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ