AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಷಾಗೆ ಧರ್ಮ ಕಡೆಯಿಂದ ಸಿಹಿಮುತ್ತು; ಕೊನೆ ಆಯಿತು ಮುನಿಸು

ಅನುಷಾ ಮತ್ತು ಧರ್ಮರ ನಡುವೆ ಮುನಿಸು ಉಂಟಾಯಿತು. ಧರ್ಮ ಅನುಷಾರ ತಂಡವನ್ನು ನಾಮಿನೇಟ್ ಮಾಡಿದ್ದರಿಂದ ಅವರ ನಡುವೆ ಜಗಳವಾಯಿತು. ಒಂದು ರೊಮ್ಯಾಂಟಿಕ್ ಕಿಸ್ ಮೂಲಕ ಅವರ ಮುನಿಸು ಕೊನೆಗೊಂಡಿತು.

ಅನುಷಾಗೆ ಧರ್ಮ ಕಡೆಯಿಂದ ಸಿಹಿಮುತ್ತು; ಕೊನೆ ಆಯಿತು ಮುನಿಸು
ಅನುಷಾ-ಧರ್ಮ
Follow us
ರಾಜೇಶ್ ದುಗ್ಗುಮನೆ
|

Updated on:Nov 16, 2024 | 7:50 AM

ಅನುಷಾ ರೈ ಹಾಗೂ ಧರ್ಮ ಹಲವು ವರ್ಷಗಳಿಂದ ಗೆಳೆಯರು. ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ಇವರು ಒಟ್ಟಾಗಿ ಸಿನಿಮಾ ಕೂಡ ಮಾಡಿದ್ದಾರೆ. ಈ ಕಾರಣಕ್ಕೆ ಧರ್ಮ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಧರ್ಮ ಕೂಡ ಅನುಷಾ ಮೇಲೆ ವಿಶೇಷ ಕಾಳಜಿ ತೋರಿಸುತ್ತಾರೆ. ಆದರೆ, ಈ ವಾರ ಎಲ್ಲವೂ ಬದಲಾಗಿತ್ತು. ಧರ್ಮ ಹಾಗೂ ಅನುಷಾ ಮಧ್ಯೆ ಮುನಿಸು ಮೂಡಿತ್ತು. ಈಗ ಸಿಹಿಮುತ್ತಿನಿಂದ ಎಲ್ಲವೂ ತಿಳಿಯಾಗಿದೆ. ಮುನಿಸು ಮರೆಯಾಗಿದೆ.

ಅನುಷಾ ಹಾಗೂ ಧರ್ಮ ಈ ಬಾರಿ ಒಟ್ಟಿಗೆ ಇರೋಕೆ ಸಾಧ್ಯವಾಗಿರಲಿಲ್ಲ. ಅದಕ್ಕೆ ಕಾರಣವಾಗಿದ್ದು ಜೋಡಿ ಟಾಸ್ಕ್. ಅನುಷಾ ಅವರು ಸುರೇಶ್​ಗೆ ಜೊತೆಯಾದರೆ ಧರ್ಮ ಅವರು ಐಶ್ವರ್ಯಾಗೆ ಜೊತೆಯಾದರು. ಇನ್ನು ನೇರ ನಾಮಿನೇಷನ್ ಮಾಡುವಾಗ ಧರ್ಮ ಅವರು ಅನುಷಾ ತಂಡವನ್ನು ನಾಮಿನೇಟ್ ಮಾಡಿದರು. ಇದು ಅನುಷಾ ಕೋಪಕ್ಕೆ ಕಾರಣ ಆಯಿತು. ಅವರು ಇದನ್ನು ಸಹಿಸಿಕೊಳ್ಳಲೇ ಇಲ್ಲ. ಈ ಕಾರಣಕ್ಕೆ ಇಬ್ಬರ ಮಧ್ಯೆ ಕಿತ್ತಾಟ ನಡೆಯಿತು.

ಕೆಲವು ದಿನಗಳ ಕಾಲ ಅನುಷಾ ಹಾಗೂ ಧರ್ಮ ಸರಿಯಾಗಿ ಮಾತನಾಡಿಕೊಳ್ಳಲೇ ಇಲ್ಲ. ಇತ್ತೀಚೆಗೆ ಇಬ್ಬರೂ ಕುಳಿತು ಮಾತನಾಡಿದ್ದರು. ‘ನನಗೆ ಎಲ್ಲರೂ ನಾಲಾಯಕ್ ಎಂದರು. ಹೀಗಾಗಿ, ನಾನು ನನ್ನ ಕೋಪ ನಿಯಂತ್ರಿಸಿಕೊಳ್ಳಲು ಸಾಧ್ಯವಾಗಿಲ್ಲ’ ಎಂದರು ಧರ್ಮ. ಇದನ್ನು ಅನುಷಾ ಅರ್ಥ ಮಾಡಿಕೊಂಡರು. ಈ ಮಾತುಕತೆಯಿಂದ ಪರಿಸ್ಥಿತಿ ಸ್ವಲ್ಪ ತಿಳಿ ಆಯಿತು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಚೈತ್ರಾ; ಪರಿಸ್ಥಿತಿ ಗಂಭೀರ

ಈಗ ಜೋಡಿ ಟಾಸ್ಕ್ ನಡೆಯುವಾಗಲೇ ಕಿಚನ್​ನಲ್ಲಿ ಅನುಷಾ, ಧರ್ಮ, ಸುರೇಶ್ ಹಾಗೂ ಐಶ್ವರ್ಯಾ ನಿಂತಿದ್ದರು. ಈ ವೇಳೆ ಅನುಷಾ ಹಾಗೂ ಧರ್ಮ ರೊಮ್ಯಾಂಟಿಕ್ ಆಗಿ ನಡೆದುಕೊಳ್ಳಬೇಕು ಎಂದು ಕೋರಲಾಯಿತು. ಅದೇ ರೀತಿ ಧರ್ಮ ಹಾಗೂ ಅನುಷಾ ಕ್ಲೋಸ್​ಅಪ್​ನಲ್ಲಿ ಬಂದರು. ಆಗ ಧರ್ಮ ಅವರು ಅನುಷಾರನ್ನು ಎಳೆದುಕೊಂಡು ತಲೆಗೆ ಮುತ್ತಿಟ್ಟರು. ಈ ಮೂಲಕ ಮುನಿಸು ಕೊನೆ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:49 am, Sat, 16 November 24

ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!
ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!
ಸಾಲ್ಟ್ ಬ್ಯಾಟಿಂಗ್ ನೋಡಿದ ಯುವತಿಯರು ಉಪ್ಪಿಗಿಂತ ರುಚಿಯಿಲ್ಲ ಅಂದರು!
ಸಾಲ್ಟ್ ಬ್ಯಾಟಿಂಗ್ ನೋಡಿದ ಯುವತಿಯರು ಉಪ್ಪಿಗಿಂತ ರುಚಿಯಿಲ್ಲ ಅಂದರು!
ಉಳ್ಳಾಲದಲ್ಲಿ ಮನೆಗಳಿಗೆ ನುಗ್ಗಿದ ನೀರು: ಬೈಕ್, ಕಾರು ಮುಳುಗಡೆ
ಉಳ್ಳಾಲದಲ್ಲಿ ಮನೆಗಳಿಗೆ ನುಗ್ಗಿದ ನೀರು: ಬೈಕ್, ಕಾರು ಮುಳುಗಡೆ
ಏರ್​​ಪೋರ್ಟ್​ನಲ್ಲಿ ಯುವತಿಯ ಮೇಕಪ್​ ತೆಗೆಸಿದ ಏರ್​ಪೋರ್ಟ್​ ಸಿಬ್ಬಂದಿ
ಏರ್​​ಪೋರ್ಟ್​ನಲ್ಲಿ ಯುವತಿಯ ಮೇಕಪ್​ ತೆಗೆಸಿದ ಏರ್​ಪೋರ್ಟ್​ ಸಿಬ್ಬಂದಿ
VIDEO: ಇದೆಂಥ ಕೀಳುಮಟ್ಟದ ವರ್ತನೆ... ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ
VIDEO: ಇದೆಂಥ ಕೀಳುಮಟ್ಟದ ವರ್ತನೆ... ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ
ಪಂಜಾಬ್​ನಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ, 4 ಮಂದಿ ಸಾವು, 25 ಜನರಿಗೆ ಗಾಯ
ಪಂಜಾಬ್​ನಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ, 4 ಮಂದಿ ಸಾವು, 25 ಜನರಿಗೆ ಗಾಯ