AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಷಾಗೆ ಧರ್ಮ ಕಡೆಯಿಂದ ಸಿಹಿಮುತ್ತು; ಕೊನೆ ಆಯಿತು ಮುನಿಸು

ಅನುಷಾ ಮತ್ತು ಧರ್ಮರ ನಡುವೆ ಮುನಿಸು ಉಂಟಾಯಿತು. ಧರ್ಮ ಅನುಷಾರ ತಂಡವನ್ನು ನಾಮಿನೇಟ್ ಮಾಡಿದ್ದರಿಂದ ಅವರ ನಡುವೆ ಜಗಳವಾಯಿತು. ಒಂದು ರೊಮ್ಯಾಂಟಿಕ್ ಕಿಸ್ ಮೂಲಕ ಅವರ ಮುನಿಸು ಕೊನೆಗೊಂಡಿತು.

ಅನುಷಾಗೆ ಧರ್ಮ ಕಡೆಯಿಂದ ಸಿಹಿಮುತ್ತು; ಕೊನೆ ಆಯಿತು ಮುನಿಸು
ಅನುಷಾ-ಧರ್ಮ
ರಾಜೇಶ್ ದುಗ್ಗುಮನೆ
|

Updated on:Nov 16, 2024 | 7:50 AM

Share

ಅನುಷಾ ರೈ ಹಾಗೂ ಧರ್ಮ ಹಲವು ವರ್ಷಗಳಿಂದ ಗೆಳೆಯರು. ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ಇವರು ಒಟ್ಟಾಗಿ ಸಿನಿಮಾ ಕೂಡ ಮಾಡಿದ್ದಾರೆ. ಈ ಕಾರಣಕ್ಕೆ ಧರ್ಮ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಧರ್ಮ ಕೂಡ ಅನುಷಾ ಮೇಲೆ ವಿಶೇಷ ಕಾಳಜಿ ತೋರಿಸುತ್ತಾರೆ. ಆದರೆ, ಈ ವಾರ ಎಲ್ಲವೂ ಬದಲಾಗಿತ್ತು. ಧರ್ಮ ಹಾಗೂ ಅನುಷಾ ಮಧ್ಯೆ ಮುನಿಸು ಮೂಡಿತ್ತು. ಈಗ ಸಿಹಿಮುತ್ತಿನಿಂದ ಎಲ್ಲವೂ ತಿಳಿಯಾಗಿದೆ. ಮುನಿಸು ಮರೆಯಾಗಿದೆ.

ಅನುಷಾ ಹಾಗೂ ಧರ್ಮ ಈ ಬಾರಿ ಒಟ್ಟಿಗೆ ಇರೋಕೆ ಸಾಧ್ಯವಾಗಿರಲಿಲ್ಲ. ಅದಕ್ಕೆ ಕಾರಣವಾಗಿದ್ದು ಜೋಡಿ ಟಾಸ್ಕ್. ಅನುಷಾ ಅವರು ಸುರೇಶ್​ಗೆ ಜೊತೆಯಾದರೆ ಧರ್ಮ ಅವರು ಐಶ್ವರ್ಯಾಗೆ ಜೊತೆಯಾದರು. ಇನ್ನು ನೇರ ನಾಮಿನೇಷನ್ ಮಾಡುವಾಗ ಧರ್ಮ ಅವರು ಅನುಷಾ ತಂಡವನ್ನು ನಾಮಿನೇಟ್ ಮಾಡಿದರು. ಇದು ಅನುಷಾ ಕೋಪಕ್ಕೆ ಕಾರಣ ಆಯಿತು. ಅವರು ಇದನ್ನು ಸಹಿಸಿಕೊಳ್ಳಲೇ ಇಲ್ಲ. ಈ ಕಾರಣಕ್ಕೆ ಇಬ್ಬರ ಮಧ್ಯೆ ಕಿತ್ತಾಟ ನಡೆಯಿತು.

ಕೆಲವು ದಿನಗಳ ಕಾಲ ಅನುಷಾ ಹಾಗೂ ಧರ್ಮ ಸರಿಯಾಗಿ ಮಾತನಾಡಿಕೊಳ್ಳಲೇ ಇಲ್ಲ. ಇತ್ತೀಚೆಗೆ ಇಬ್ಬರೂ ಕುಳಿತು ಮಾತನಾಡಿದ್ದರು. ‘ನನಗೆ ಎಲ್ಲರೂ ನಾಲಾಯಕ್ ಎಂದರು. ಹೀಗಾಗಿ, ನಾನು ನನ್ನ ಕೋಪ ನಿಯಂತ್ರಿಸಿಕೊಳ್ಳಲು ಸಾಧ್ಯವಾಗಿಲ್ಲ’ ಎಂದರು ಧರ್ಮ. ಇದನ್ನು ಅನುಷಾ ಅರ್ಥ ಮಾಡಿಕೊಂಡರು. ಈ ಮಾತುಕತೆಯಿಂದ ಪರಿಸ್ಥಿತಿ ಸ್ವಲ್ಪ ತಿಳಿ ಆಯಿತು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಚೈತ್ರಾ; ಪರಿಸ್ಥಿತಿ ಗಂಭೀರ

ಈಗ ಜೋಡಿ ಟಾಸ್ಕ್ ನಡೆಯುವಾಗಲೇ ಕಿಚನ್​ನಲ್ಲಿ ಅನುಷಾ, ಧರ್ಮ, ಸುರೇಶ್ ಹಾಗೂ ಐಶ್ವರ್ಯಾ ನಿಂತಿದ್ದರು. ಈ ವೇಳೆ ಅನುಷಾ ಹಾಗೂ ಧರ್ಮ ರೊಮ್ಯಾಂಟಿಕ್ ಆಗಿ ನಡೆದುಕೊಳ್ಳಬೇಕು ಎಂದು ಕೋರಲಾಯಿತು. ಅದೇ ರೀತಿ ಧರ್ಮ ಹಾಗೂ ಅನುಷಾ ಕ್ಲೋಸ್​ಅಪ್​ನಲ್ಲಿ ಬಂದರು. ಆಗ ಧರ್ಮ ಅವರು ಅನುಷಾರನ್ನು ಎಳೆದುಕೊಂಡು ತಲೆಗೆ ಮುತ್ತಿಟ್ಟರು. ಈ ಮೂಲಕ ಮುನಿಸು ಕೊನೆ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:49 am, Sat, 16 November 24

Follow Us
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
ಟಾಕ್ಸಿಕ್ ರಿಲೀಸ್​ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳಕ್ಕೆ ಬಂದ ಯಶ್
ಟಾಕ್ಸಿಕ್ ರಿಲೀಸ್​ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳಕ್ಕೆ ಬಂದ ಯಶ್