AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಶ್ರೀಗೆ ಕೂಡಿಬಂತು ಕಂಕಣ ಭಾಗ್ಯ, ಮದುವೆಯ ಸುಳಿವು ಕೊಟ್ಟ ನಟಿ

Anchor Anushree: ನಟಿ, ಸ್ಟಾರ್ ನಿರೂಪಕಿ ಅನುಶ್ರೀ ಅವರ ಮದುವೆ ಬಗ್ಗೆ ಆಗಾಗ್ಗೆ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಆದರೆ ಪ್ರತಿಬಾರಿಯೂ ಅದು ಗಾಳಿ ಸುದ್ದಿಯಾಗುತ್ತದೆ. ಇದೀಗ ‘ವಿದ್ಯಾಪತಿ’ ಸಿನಿಮಾಕ್ಕಾಗಿ ಅನುಶ್ರೀ ಮಾಡಿದ ಇನ್​ಸ್ಟಾ ಲೈವ್​ನಲ್ಲಿ ಸ್ವತಃ ಅನುಶ್ರೀ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮದುವೆ ಯಾವಾಗ ಎಂಬುದನ್ನು ಅನುಶ್ರೀ ಅವರೇ ಹೇಳಿದ್ದಾರೆ.

ಅನುಶ್ರೀಗೆ ಕೂಡಿಬಂತು ಕಂಕಣ ಭಾಗ್ಯ, ಮದುವೆಯ ಸುಳಿವು ಕೊಟ್ಟ ನಟಿ
Anushree
Follow us
ಮಂಜುನಾಥ ಸಿ.
|

Updated on: Apr 09, 2025 | 2:48 PM

ಆಂಕರ್ ಅನುಶ್ರೀ (Ancor Anushree), ಮೋಸ್ಟ್ ಎಲಿಜಿಬೆಲ್ ಸಿಂಗಲ್ ನಟಿಯರಲ್ಲಿ ಒಬ್ಬರು. ಬಹಳ ಸಮಯದಿಂದಲೂ ಅವರ ಮದುವೆಯ ಗಾಳಿ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ ಈ ವರೆಗೂ ಅವರು ಸಿಂಗಲ್ ಆಗಿಯೇ ಇದ್ದಾರೆ. ಅನುಶ್ರೀಗೆ ಅವರ ಅಭಿಮಾನಿಗಳು ಸಹ ಹಲವು ಬಾರಿ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ, ಆದರೆ ಅನುಶ್ರೀ ಅವರದ್ದು ಪ್ರತಿಬಾರಿಯೂ ಹಾರಿಕೆಯ ಉತ್ತರವೇ ಆದರೆ ಈ ಬಾರಿ ಅನುಶ್ರೀ ಮದುವೆಯ (Marriage) ಸುಳಿವು ನೀಡಿದ್ದಾರೆ. ಇದೇ ವರ್ಷದಲ್ಲಿ ಮದುವೆ ಆಗುತ್ತಿರುವುದಾಗಿ ಹೇಳಿದ್ದಾರೆ ಅನುಶ್ರೀ. ಆದರೆ ವರ ಯಾರು?

ಅನುಶ್ರೀ ಅವರು ‘ವಿದ್ಯಾಪತಿ’ ಸಿನಿಮಾಕ್ಕಾಗಿ ವಿಶೇಷ ಇನ್​ಸ್ಟಾಗ್ರಾಂ ಲೈವ್ ಒಂದನ್ನು ಮಾಡಿದ್ದರು. ಲೈವ್​ನಲ್ಲಿ ಹಲವರು ಕಮೆಂಟ್ ಮಾಡಿ ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಹಲವರು ಅನುಶ್ರೀ ಅವರನ್ನು ಮದುವೆ ಬಗ್ಗೆ ಸಹ ಪ್ರಶ್ನೆ ಮಾಡಿದ್ದಾರೆ. ‘ವಿದ್ಯಾಪತಿ’ ಸಿನಿಮಾದ ನಾಯಕ ನಟ ನಾಗಭೂಷಣ್ ಸಹ ಅನುಶ್ರೀ ಅವರಿಗೆ ಇನ್​ಸ್ಟಾಗ್ರಾಂ ಲೈವ್​ನಲ್ಲಿ ಅನುಶ್ರೀ ಅವರಿಗೆ ಮದುವೆ ಬಗ್ಗೆ ಪ್ರಶ್ನೆ ಮಾಡಿದರು, ಈ ವೇಳೆ ಅವರಿಗೆ ಉತ್ತರ ನೀಡುತ್ತಾ, ತಾವು ಇದೇ ವರ್ಷ ಮದುವೆ ಆಗುವುದಾಗಿ ಹೇಳಿಕೊಂಡಿದ್ದಾರೆ.

ಮಾರ್ಚ್​ನಲ್ಲಿ ಸಿಹಿ ಸುದ್ದಿ ಕೊಡುವುದಾಗಿ ಅನುಶ್ರೀ ಅವರು ಈ ಹಿಂದೆ ಹೇಳಿಕೊಂಡಿದ್ದರು. ಈಗ ಮತ್ತೆ ಮದುವೆ ಬಗ್ಗೆ ಮಾತನಾಡಿ, ಈ ವರ್ಷ ಮುಗಿಯುವುದರ ಒಳಗಾಗಿ ತಾವು ಮದುವೆ ಆಗಿಯೇ ತೀರುವುದಾಗಿ ಅನುಶ್ರೀ ಹೇಳಿಕೊಂಡಿದ್ದಾರೆ. ಆದರೆ ಅನುಶ್ರೀ ಯಾರನ್ನು ಮದುವೆ ಆಗಲಿದ್ದಾರೆ ಎಂಬ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ ಆದರೆ ಈ ವರ್ಷ ಮದುವೆ ಆಗುವುದಾಗಿ ಮಾತ್ರ ಹೇಳಿದ್ದಾರೆ.

ಇದನ್ನೂ ಓದಿ:‘ಪುನೀತ್ ಕೊಟ್ಟ ಪ್ರೀತಿಯ ಭಿಕ್ಷೆ’; ಅಪ್ಪು ಬಗ್ಗೆ ಅನುಶ್ರೀ ಪ್ರೀತಿಯ ಮಾತು

ಅನುಶ್ರೀ ನಟಿಯಾಗಿ ಎಂಟ್ರಿ ಕೊಟ್ಟು ಈಗ ಕಿರುತೆರೆಯ ಸ್ಟಾರ್ ನಿರೂಪಕಿ ಆಗಿದ್ದಾರೆ. ಕೆಲವು ಟಾಪ್ ರಿಯಾಲಿಟಿ ಶೋಗಳನ್ನು ಅವರು ಅದ್ಭುತವಾಗಿ ನಿರೂಪಣೆ ಮಾಡುತ್ತಾರೆ. ಹಲವು ಸಿನಿಮಾ ಕಾರ್ಯಕ್ರಮ, ಸರ್ಕಾರಿ ಕಾರ್ಯಕ್ರಮಗಳಿಗೂ ಸಹ ಅನುಶ್ರೀ ನಿರೂಪಣೆ ಮಾಡುತ್ತಾರೆ. ಯೂಟ್ಯೂಬ್ ಚಾನೆಲ್ ಸಹ ನಡೆಸುವ ಅನುಶ್ರೀ, ಸಿನಿಮಾ ನಟ-ನಟಿಯರ ಸಂದರ್ಶನಗಳನ್ನು ಮಾಡುತ್ತಿರುತ್ತಾರೆ. ಈಗ ನಾಗಭೂಷಣ್, ಮಲೈಕಾ ನಟಿಸಿ ಡಾಲಿ ಧನಂಜಯ್ ನಿರ್ಮಾಣ ಮಾಡಿರುವ ‘ವಿದ್ಯಾಪತಿ’ ಸಿನಿಮಾದ ಪ್ರಚಾರಕ್ಕಾಗಿ ಇನ್​ಸ್ಟಾಗ್ರಾಂ ಲೈವ್​ನಲ್ಲಿ ಸಂದರ್ಶನ ಮಾಡಿದ್ದಾರೆ ಅನುಶ್ರೀ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್