BBK9: ಪ್ರಶಾಂತ್​ ಸಂಬರ್ಗಿಗೆ ‘ಬೌ ಬೌ ಸ್ಟಾರ್​’ ಬಿರುದು; ಎಲಿಮಿನೇಷನ್​ಗೂ ಮುನ್ನ ಭರ್ಜರಿ ನಗು

| Updated By: ಮದನ್​ ಕುಮಾರ್​

Updated on: Oct 30, 2022 | 5:58 PM

Arun Sagar | Prashanth Sambargi: ಸೆಲೆಬ್ರಿಟಿಗಳಿಗೆ ಬಿರುದುಗಳನ್ನು ಕೊಡುವುದು ಸಹಜ. ಬಿಗ್​ ಬಾಸ್​ ಮನೆಯಲ್ಲಿ ಇರುವ ಸ್ಪರ್ಧಿಗಳು ಪರಸ್ಪರ ಬಿರುದು ಕೊಟ್ಟುಕೊಂಡರೆ ಹೇಗಿರುತ್ತದೆ?

BBK9: ಪ್ರಶಾಂತ್​ ಸಂಬರ್ಗಿಗೆ ‘ಬೌ ಬೌ ಸ್ಟಾರ್​’ ಬಿರುದು; ಎಲಿಮಿನೇಷನ್​ಗೂ ಮುನ್ನ ಭರ್ಜರಿ ನಗು
ಬಿಗ್ ಬಾಸ್ ಕನ್ನಡ ಸೀಸನ್ 9
Follow us on

ಬಿಗ್​ ಬಾಸ್​ (Bigg Boss) ಮನೆಯಲ್ಲಿ ಭಾವನೆಗಳ ಆಟ ನಡೆದೇ ಇರುತ್ತದೆ. ಒಮ್ಮೆ ಕೋಪ, ಇನ್ನೊಮ್ಮೆ ಪ್ರೀತಿ, ಮತ್ತೊಮ್ಮೆ ನಗು, ಮಗದೊಮ್ಮೆ ಅಳು, ಆಗಾಗ ಜಗಳ, ಅದರ ನಡುವೆಯೂ ಸಾಮರಸ್ಯ.. ಹೀಗೆ ಹಲವು ರೀತಿಯ ಭಾವನೆಗಳಿಗೆ ಈ ರಿಯಾಲಿಟಿ ಶೋ ಜಾಗ ಮಾಡಿಕೊಡುತ್ತದೆ. ಕಿಚ್ಚ ಸುದೀಪ್​ (Kichcha Sudeep) ಅವರು ಮೊದಲ ಸೀಸನ್​ನಿಂದ ಇಲ್ಲಿಯವರೆಗೆ ನಿರೂಪಣೆಯ ಜವಾಬ್ದಾರಿಯನ್ನು ನಿಭಾಯಿಸುತ್ತ ಬಂದಿದ್ದಾರೆ. ವೈಯಕ್ತಿಕ ಕಾರಣದಿಂದ ಅವರು ಕಳೆದ ವಾರ ಬಿಗ್​ ಬಾಸ್​ ವೀಕೆಂಡ್​ ಎಪಿಸೋಡ್​ ನಡೆಸಿಕೊಡಲು ಸಾಧ್ಯವಾಗಿರಲಿಲ್ಲ. ಆದರೆ ಈ ವಾರ ಮರಳಿ ಬಂದಿದ್ದಾರೆ. ಅವರಿಂದಾಗಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರ (Bigg Boss Kannada Season 9) ಮೆರುಗು ಹೆಚ್ಚಿದೆ. ಈ ವಾರ ಎಲಿಮಿನೇಟ್​ ಆಗುವುದು ಯಾರು ಎಂಬುದು ತಿಳಿಸುವುದಕ್ಕೂ ಮುನ್ನ ಅವರು ಎಲ್ಲ ಸ್ಪರ್ಧಿಗಳನ್ನು ಭರ್ಜರಿಯಾಗಿ ನಗಿಸಿದ್ದಾರೆ.

ಕಿಚ್ಚ ಸುದೀಪ್​ ಅವರ ನಿರೂಪಣೆ ಎಂದರೆ ಅಭಿಮಾನಿಗಳಿಗೆ ಸಖತ್​ ಇಷ್ಟ. ಪ್ರತಿ ಸಂಚಿಕೆಯಲ್ಲೂ ತಮಾಷೆ ಮಾಡುತ್ತ ಅವರು ನಗು ಉಕ್ಕಿಸುತ್ತಾರೆ. ಯಾರಾದರೂ ತಪ್ಪು ಮಾಡಿದರೆ ಸರಿಯಾಗಿ ಕ್ಲಾಸ್​ ತೆಗೆದುಕೊಳ್ಳುತ್ತಾರೆ. ಇನ್ನು, ‘ಸೂಪರ್​ ಸಂಡೇ ವಿತ್​ ಸುದೀಪ’ ಸಂಚಿಕೆಯಲ್ಲಿ ಅವರು ಕೇಳುವ ‘ಎಸ್​ ಅಥವಾ ನೋ’ ಪ್ರಶ್ನೆಗಳು ಹೆಚ್ಚು ಮನರಂಜನೆ ನೀಡುತ್ತವೆ. ಅದೇ ರೀತಿ, ಎಲ್ಲ ಸ್ಪರ್ಧಿಗಳಿಂದಲೂ ಅವರು ಅಭಿಪ್ರಾಯಗಳನ್ನು ಕೇಳುತ್ತ ಇಡೀ ಸಂಚಿಕೆಯನ್ನು ಉಲ್ಲಾಸಮಯ ಆಗಿಸುತ್ತಾರೆ.

ಇದನ್ನೂ ಓದಿ
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಸೆಲೆಬ್ರಿಟಿಗಳಿಗೆ ಬಿರುದುಗಳನ್ನು ಕೊಡುವುದು ಸಹಜ. ಬಿಗ್​ ಬಾಸ್​ ಮನೆಯಲ್ಲಿ ಇರುವ ಸ್ಪರ್ಧಿಗಳು ಪರಸ್ಪರ ಬಿರುದು ಕೊಟ್ಟುಕೊಂಡರೆ ಹೇಗಿರುತ್ತದೆ? ಸದಾ ಕಾಲ ಜಗಳಕ್ಕೆ ಮುಂದಾಗುವ ಪ್ರಶಾಂತ್​ ಸಂಬರ್ಗಿಗೆ ‘ಬೌ ಬೌ ಸ್ಟಾರ್​’ ಎಂದು ಅರುಣ್​ ಸಾಗರ್​ ಬಿರುದು ನೀಡಿದ್ದಾರೆ. ಇದನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಲರ್ಸ್​ ಕನ್ನಡ ವಾಹಿನಿ ಒಂದು ಪ್ರೋಮೋ ಹಂಚಿಕೊಂಡಿದೆ. ಭಾನುವಾರದ (ಅ.30) ಸಂಚಿಕೆಯಲ್ಲಿ ನಗುವಿನ ಹಬ್ಬ ಯಾವ ರೀತಿ ಇರಲಿದೆ ಎಂಬುದಕ್ಕೆ ಈ ಪ್ರೋಮೋ ಸಾಕ್ಷಿ ಒದಗಿಸುತ್ತಿದೆ.

ಈ ವಾರ ರೂಪೇಶ್ ರಾಜಣ್ಣ, ರೂಪೇಶ್​ ಶೆಟ್ಟಿ, ನೇಹಾ ಗೌಡ, ​ಪ್ರಶಾಂತ್​ ಸಂಬರ್ಗಿ, ಅಮೂಲ್ಯ ಗೌಡ, ರಾಕೇಶ್​ ಅಡಿಗ ಹಾಗೂ ಕಾವ್ಯಶ್ರೀ ಗೌಡ ಅವರು ನಾಮಿನೇಟ್​ ಆಗಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಕಾವ್ಯಶ್ರೀ ಗೌಡ, ಆರ್ಯವರ್ಧನ್​ ಮತ್ತು ರಾಕೇಶ್​ ಅಡಿಗ ಸೇಫ್​ ಆದರು. ಸದ್ಯ ಇನ್ನುಳಿದವರ ಮೇಲೆ ಎಲಿಮಿನೇಷನ್​ ಕತ್ತಿ ತೂಗುತ್ತಿದೆ. ಆ ಪೈಕಿ ಯಾರು ಹೊರಹೋಗಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ. ಎಲಿಮಿನೇಟ್​ ಆದವರ ಹೆಸರನ್ನು​ ಘೋಷಿಸುವುದಕ್ಕೂ ಮುನ್ನ ಬಿಗ್​ ಬಾಸ್​ ಮನೆಯಲ್ಲಿ ನಗುವಿನ ವಾತಾವರಣ ಮೂಡಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:58 pm, Sun, 30 October 22