AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​

Darsh Chandrappa: ಎಲ್ಲರ ಜೊತೆಗೂ ದರ್ಶ್ ಚಂದ್ರಪ್ಪ​ ಹೆಚ್ಚು ಬೆರೆಯುತ್ತಿರಲಿಲ್ಲ. ಮನರಂಜನೆ ನೀಡುವಂತಹ ವಿಶೇಷ ಗುಣವೂ ಅವರಲ್ಲಿ ಕಂಡುಬರಲಿಲ್ಲ. ಇದರಿಂದ ಅವರಿಗೆ ಹಿನ್ನಡೆ ಆಯಿತು.

Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
ದರ್ಶ್ ಚಂದ್ರಪ್ಪ
TV9 Web
| Updated By: ಮದನ್​ ಕುಮಾರ್​|

Updated on:Oct 16, 2022 | 10:42 PM

Share

ಪ್ರತಿ ವಾರ ಬಿಗ್​ ಬಾಸ್​ ಮನೆಯಿಂದ ಒಬ್ಬರು ಔಟ್​ ಆಗಲೇಬೇಕು. ಇದು ಈ ಶೋ ನಿಯಮ. ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada Season 9) ಕಾರ್ಯಕ್ರಮ ಈಗ ಮೂರು ವಾರಗಳನ್ನು ಪೂರೈಸಿದೆ. ಮೂರನೇ ವಾರದಲ್ಲಿ ನಟ ದರ್ಶ್ ಚಂದ್ರಪ್ಪ (Darsh Chandrappa) ಅವರು ಎಲಿಮಿನೇಟ್​ ಆಗಿದ್ದಾರೆ. ಕೊನೆವರೆಗೂ ಪೈಪೋಟಿ ನೀಡಬೇಕು ಎಂದುಕೊಂಡು ಬಂದಿದ್ದ ಅವರ ಆಟ ಬಹಳ ಬೇಗ ಅಂತ್ಯವಾಗಿದೆ. ಕಿಚ್ಚ ಸುದೀಪ್​ (Kichcha Sudeep) ಅವರು ಭಾನುವಾರದ (ಅ.16) ಸಂಚಿಕೆಯಲ್ಲಿ ಎಲಿಮಿನೇಷನ್​ ಘೋಷಿಸಿದರು. ಡೇಂಜರ್​ ಝೋನ್​ನಲ್ಲಿ ಇದ್ದ ನಟಿ ಮಯೂರಿ ಅವರು ಸೇಫ್​ ಆದರು. ಇದರಿಂದ ಅವರು ನಿಟ್ಟುಸಿರು ಬಿಟ್ಟಿದ್ದಾರೆ.

ತುಂಬ ಉತ್ಸಾಹದಲ್ಲಿಯೇ ದರ್ಶ್​ ಅವರು ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದರು. ಮೊದಲ ದಿನವೇ ಅವರು ಆಕ್ರಮಣಕಾರಿಯಾಗಿ ಆಟ ಶುರು ಮಾಡಿದ್ದರು. ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದ ಪ್ರಶಾಂತ್​ ಸಂಬರ್ಗಿ ಅವರನ್ನೇ ಟಾರ್ಗೆಟ್​ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ ಬರುಬರುತ್ತಾ ದರ್ಶ್​ ಸೈಲೈಂಟ್​ ಆಗಲು ಆರಂಭಿಸಿರು. ಅದೇ ಅವರಿಗೆ ಮುಳುವಾಯಿತು.

ಮೂರನೇ ವಾರದಲ್ಲಿ ರೂಪೇಶ್​ ರಾಜಣ್ಣ, ಪ್ರಶಾಂತ್​ ಸಂಬರ್ಗಿ, ದರ್ಶ್​, ದಿವ್ಯಾ ಉರುಡುಗ, ಮಯೂರಿ, ವಿನೋದ್​ ಗೊಬ್ಬರಗಾಲ, ದೀಪಿಕಾ ದಾಸ್​, ರೂಪೇಶ್​ ಶೆಟ್ಟಿ, ಅಮೂಲ್ಯ ಗೌಡ ಹಾಗೂ ಅನುಪಮಾ ಗೌಡ ಅವರು ನಾಮಿನೇಟ್​ ಆಗಿದ್ದರು. ಅಂತಿಮವಾಗಿ ದರ್ಶ್​ ಅವರು ಮನೆಯಿಂದ ಹೊರಬರಬೇಕಾಯಿತು.

ಇದನ್ನೂ ಓದಿ
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ
Image
ಆರ್ಯವರ್ಧನ್​ ಗುರೂಜಿ ಕುಟುಂಬದ ಆಸ್ತಿ 5 ಸಾವಿರ ಕೋಟಿ ರೂಪಾಯಿ; ಶಾಕ್​ ಆದ ಸ್ಪರ್ಧಿಗಳು

ಎಲ್ಲರ ಜೊತೆಗೂ ದರ್ಶ್​ ಹೆಚ್ಚು ಬೆರೆಯುತ್ತಿರಲಿಲ್ಲ. ಮನರಂಜನೆ ನೀಡುವಂತಹ ವಿಶೇಷ ಗುಣವೂ ಅವರಲ್ಲಿ ಕಂಡುಬರಲಿಲ್ಲ. ಹಾಗಾಗಿ ವೀಕ್ಷಕರಿಂದ ಅವರಿಗೆ ಕಡಿಮೆ ವೋಟ್​ ಬಿದ್ದಿರಬಹುದು. ಎಲಿಮಿನೇಟ್​ ಆದ ದರ್ಶ್​ ಅವರು ಕೂಲ್​ ಆಗಿಯೇ ದೊಡ್ಮನೆಯಿಂದ ಹೊರಬಂದಿದ್ದಾರೆ. ಅವರ ಮುಂದಿನ ​ಜರ್ನಿಗೆ ಶುಭವಾಗಲಿ ಎಂದು ಎಲ್ಲರೂ ಹಾರೈಸಿದ್ದಾರೆ.

ಎಲಿಮಿನೇಟ್​ ಆಗಿ ಮನೆಯಿಂದ ಹೊರಬರುವುದಕ್ಕೂ ಮುನ್ನ ಮುಂದಿನ ವಾರಕ್ಕೆ ಒಬ್ಬರನ್ನು ನೇರವಾಗಿ ನಾಮಿನೇಟ್​ ಮಾಡುವ ಅಧಿಕಾರ ದರ್ಶ್​ ಅವರಿಗೆ ಸಿಕ್ತು. ಅವರು ರೂಪೇಶ್​ ಶೆಟ್ಟಿ ಹೆಸರನ್ನು ಸೂಚಿಸಿದರು. ಆ ಮೂಲಕ ರೂಪೇಶ್​ ಶೆಟ್ಟಿಗೆ ನಾಲ್ಕನೇ ವಾರ ಚಾಲೆಂಜಿಂಗ್ ಆಗುವಂತೆ ಮಾಡಿದ್ದಾರೆ ದರ್ಶ್​.

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆದಂತೆಲ್ಲ ಆಟದ ಕಾವು ಹೆಚ್ಚುತ್ತದೆ. ದೊಡ್ಮನೆಯ ವಾತಾವರಣಕ್ಕೆ ಹೊಂದಿಕೊಂಡ ಎಲ್ಲರೂ ಇನ್ನಷ್ಟು ಚೆನ್ನಾಗಿ ಆಡಬೇಕು ಎಂಬ ಹುಮ್ಮಸ್ಸು ಪಡೆಯುತ್ತಾರೆ. ಆ ಹುಮ್ಮಸ್ಸಿನೊಂದಿಗೆ 4ನೇ ವಾರ ಶುರುವಾಗುತ್ತಿದೆ. ಎಲ್ಲರೂ ತಮ್ಮದೇ ತಂತ್ರಗಳನ್ನು ಬಳಸಿ ಆಟ ಮುಂದುವರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:41 pm, Sun, 16 October 22

ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ