AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಪಮಾ ಆಟ ನೋಡಿ ಬಿಗ್ ಬಾಸ್​ ಸ್ಕ್ರಿಪ್ಟೆಡ್​ ಎಂದ ಆರ್ಯವರ್ಧನ್; ಇದರ ಅಸಲಿಯತ್ತೇನು?

ಪ್ರತಿ ವೀಕೆಂಡ್​ನಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ಒಂದಷ್ಟು ಪ್ರಶ್ನೆ ಕೇಳುತ್ತಾರೆ. ಈ ವಾರ ‘ಈ ಬಾರಿಯ ಬಿಗ್​ ಬಾಸ್​ನಲ್ಲಿ ಟಾಪ್ 2 ಯಾರು ಆಗಬಹುದು’ ಎಂಬ ಪ್ರಶ್ನೆ ಕೇಳಿದರು. ಇದಕ್ಕೆ ಅನೇಕರು ಗುರೂಜಿ ಹೆಸರನ್ನು ತೆಗೆದುಕೊಂಡರು.

ಅನುಪಮಾ ಆಟ ನೋಡಿ ಬಿಗ್ ಬಾಸ್​ ಸ್ಕ್ರಿಪ್ಟೆಡ್​ ಎಂದ ಆರ್ಯವರ್ಧನ್; ಇದರ ಅಸಲಿಯತ್ತೇನು?
ಆರ್ಯವರ್ಧನ್​-ಅನುಪಮಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Oct 17, 2022 | 6:22 PM

Share

‘ಬಿಗ್ ಬಾಸ್’ (Bigg Boss) ಮನೆಯಲ್ಲಿ ನಡೆಯುವ ಎಲ್ಲಾ ಜಗಳಗಳು ಹಾಗೂ ಪ್ರೀತಿ-ಪ್ರೇಮ ಹುಟ್ಟಿಕೊಳ್ಳುವ ವಿಚಾರ ಸ್ಕ್ರಿಪ್ಟೆಡ್ ಎಂಬ ಆರೋಪ ಈ ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ, ಇದನ್ನು ವಾಹಿನಿಯವರು ಅಲ್ಲಗಳೆಯುತ್ತಲೇ ಬರುತ್ತಿದ್ದಾರೆ. ಒಂದು ವರ್ಗದ ವೀಕ್ಷಕರು ಇದನ್ನು ಒಪ್ಪುವುದಿಲ್ಲ. ಈಗ ಅಚ್ಚರಿ ಎಂಬಂತೆ ಮನೆ ಒಳಗೆ ತೆರಳಿದ ಸ್ಪರ್ಧಿಯೇ ಬಿಗ್ ಬಾಸ್ ಸ್ಕ್ರಿಪ್ಟೆಡ್ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಈ ಹೇಳಿಕೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಈ ರೀತಿ ಹೇಳಿದವರು ಬೇರಾರು ಅಲ್ಲ ಆರ್ಯವರ್ಧನ್ ಗುರೂಜಿ (Aryavardhan Guruji). ಅವರು ಹೀಗೆ ಹೇಳೋಕೆ ಕಾರಣ ಅನುಪಮಾ ಗೌಡ ಅವರು ನೀಡಿದ ಆ ಒಂದು ಹೇಳಿಕೆ.

ಪ್ರತಿ ವೀಕೆಂಡ್​ನಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ಒಂದಷ್ಟು ಪ್ರಶ್ನೆ ಕೇಳುತ್ತಾರೆ. ಈ ವಾರ ‘ಈ ಬಾರಿಯ ಬಿಗ್​ ಬಾಸ್​ನಲ್ಲಿ ಟಾಪ್ 2 ಯಾರು ಆಗಬಹುದು’ ಎಂಬ ಪ್ರಶ್ನೆ ಕೇಳಿದರು. ಇದಕ್ಕೆ ಅನೇಕರು ಗುರೂಜಿ ಹೆಸರನ್ನು ತೆಗೆದುಕೊಂಡರು. ಆದರೆ, ಗುರೂಜಿ ಪಾಳಿ ಬಂದಾಗ ಅವರು ನೀಡಿದ ಉತ್ತರ ಶಾಕಿಂಗ್ ಆಗಿತ್ತು. ಸುದೀಪ್ ಎದುರೇ ಈ ರೀತಿ ಅವರು ಹೇಳುತ್ತಾರೆ ಎಂದು ಯಾರೆಂದರೆ ಯಾರೂ ಕೂಡ ಊಹಿಸಿರಲಿಲ್ಲ.

ಕಳೆದ ವಾರ ಚಿನ್ನದ ಗಣಿ ಟಾಸ್ಕ್ ನೀಡಲಾಗಿತ್ತು. ಕ್ಯಾಪ್ಟನ್ಸಿ ಟಾಸ್ಕ್​ಗಾಗಿ ನಡೆದ ಆಟದಿಂದ ಅನುಪಮಾ ಅವರು ಮೊದಲೇ ಔಟ್ ಆಗಿದ್ದರು. ಆದರೆ, ಕೊನೆಯಲ್ಲಿ ಸಿಕ್ಕ ಟ್ವಿಸ್ಟ್​ನಿಂದ ಅನುಪಮಾ ಅವರು ಕ್ಯಾಪ್ಟನ್ಸಿ ರೇಸ್​ಗೆ ಮತ್ತೆ ಎಂಟ್ರಿ ಪಡೆದರು. ಅಂತಿಮವಾಗಿ ಕ್ಯಾಪ್ಟನ್ಸಿ ಟಾಸ್ಕ್​​ನಲ್ಲಿ ದೀಪಿಕಾ ದಾಸ್, ಅನುಪಮಾ ಗೌಡ ಹಾಗೂ ರೂಪೇಶ್ ಶೆಟ್ಟಿ ಇದ್ದರು. ‘ಅನುಪಮಾ ಅವರನ್ನು ಮತ್ತೆ ಕರೆತರಬೇಕು ಎಂಬ ಉದ್ದೇಶದಿಂದಲೇ ಟ್ವಿಸ್ಟ್ ನೀಡಲಾಗಿದೆ. ಇವೆಲ್ಲ ಮ್ಯಾಚ್​​​ಫಿಕ್ಸಿಂಗ್’ ಎಂಬ ಆರೋಪ ಮಾಡಿದರು ಆರ್ಯವರ್ಧನ್. ಗುರೂಜಿ ಮಾತು ಕೇಳಿ ಸುದೀಪ್ ಕೂಡ ಸಿಟ್ಟಾದರು.

ಇದನ್ನೂ ಓದಿ
Image
ಮಹಿಳಾ ಸ್ಪರ್ಧಿಗಳ ಜೊತೆ ಮಿಂಗಲ್ ಆಗುವ ರೂಪೇಶ್ ಶೆಟ್ಟಿಯ ಕಾಲೆಳೆದ ಸುದೀಪ್
Image
‘ಬಿಗ್ ಬಾಸ್ ಶುರುವಾದಾಗ ನಾನು ಬಂದು ಪ್ರೀತಿ ಮಾಡಿ ಅಂತ ಹೇಳಿದ್ನಾ?’; ಸುದೀಪ್ ಪ್ರಶ್ನೆಗೆ ಕಂಗಾಲಾದ ರೂಪೇಶ್
Image
ರೂಪೇಶ್ ಶೆಟ್ಟಿ-ಸಾನ್ಯಾ ಮಧ್ಯೆ ಬಂದ ಕಾವ್ಯಶ್ರೀ ಗೌಡ; ಐಯ್ಯರ್ ಕಣ್ಣಲ್ಲಿ ತುಂಬಿತು ನೀರು
Image
BBK 9: ‘ರೂಪೇಶ್ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 9ರ ವಿನ್ನರ್’; ಏನಿದು ಸಮಾಚಾರ?

ಇದನ್ನೂ ಓದಿ: ಬಿಗ್ ಬಾಸ್​ನಿಂದ ಹೊರ ನಡೆಯಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ; ಈ ವೀಕೆಂಡ್​ನಲ್ಲೇ ಎಲಿಮಿನೇಷನ್​?

ಗುರೂಜಿ ಈ ರೀತಿ ಹೇಳಿಕೆ ನೀಡೋಕೆ ಕಳೆದವಾರ ಅನುಪಮಾ ಕೊಟ್ಟ ಒಂದು ಹೇಳಿಕೆಯೇ ಕಾರಣ. ಕಳೆದ ವಾರ ಆರ್ಯವರ್ಧನ್ ಗುರೂಜಿ ಕ್ಯಾಪ್ಟನ್ ಆಗಿದ್ದರು. ‘ರೂಪೇಶ್ ಹಾಗೂ ರಾಕೇಶ್ ಸಹಾಯದಿಂದ ಆರ್ಯವರ್ಧನ್ ಕ್ಯಾಪ್ಟನ್ ಆಗಿದ್ದಾರೆ’ ಎಂಬ ಆರೋಪವನ್ನು ಅನುಪಮಾ ಮಾಡಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಆರ್ಯವರ್ಧನ್​ ಮ್ಯಾಚ್​ ಫಿಕ್ಸಿಂಗ್ ಹೇಳಿಕೆ ನೀಡಿದ್ದರು.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು