AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗ್ರಂ ಮಂಜು ಜೊತೆ ಚೈತ್ರಾ ಕುಂದಾಪುರ ಕಿರಿಕ್: ಬಿಗ್​ ಬಾಸ್ ಮೊದಲ ದಿನವೇ ರಂಪಾಟ

‘ಕಲರ್ಸ್​ ಕನ್ನಡ’ ಮತ್ತು ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋ ವೀಕ್ಷಿಸಬಹುದು. ಆಟ ಆರಂಭವಾದ ಮೊದಲ ದಿನವೇ ಚೈತ್ರಾ ಕುಂದಾಪುರ ಅವರು ಕಿರಿಕ್​ ತೆಗೆದಿದ್ದಾರೆ. ಅವರಿಗೆ ಉಗ್ರಂ ಮಂಜು ಎಚ್ಚರಿಕೆ ನೀಡಿದ್ದಾರೆ. ಸ್ವರ್ಗ ವರ್ಸಸ್​ ನರಕ ಎಂಬ ಕಾನ್ಸೆಪ್ಟ್ ಇರುವುದರಿಂದ ಈ ಬಾರಿ ಬಿಗ್​ ಬಾಸ್​ ಭಿನ್ನವಾಗಿದೆ.

ಉಗ್ರಂ ಮಂಜು ಜೊತೆ ಚೈತ್ರಾ ಕುಂದಾಪುರ ಕಿರಿಕ್: ಬಿಗ್​ ಬಾಸ್ ಮೊದಲ ದಿನವೇ ರಂಪಾಟ
ಉಗ್ರಂ ಮಂಜು
ಮದನ್​ ಕುಮಾರ್​
|

Updated on: Sep 30, 2024 | 6:47 PM

Share

ಬಿಗ್​ ಬಾಸ್​ ಎಂದರೆ ಅಲ್ಲಿ ಕಿತ್ತಾಟ ಸಹಜ. ಹಾಗಂತ, ಆರಂಭದ ದಿನಗಳಲ್ಲೇ ಅಷ್ಟೇನೂ ಕಿರಿಕ್​ ಆಗುವುದಿಲ್ಲ. ಆದರೆ ಈ ಬಾರಿ ಆಟ ಬೇರೆ ರೀತಿ ಇದೆ. ಮೊದಲ ದಿನವೇ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಜಗಳ ಶುರುವಾಗಿದೆ. ಉಗ್ರಂ ಮಂಜು ಮತ್ತು ಚೈತ್ರಾ ಕುಂದಾಪುರ ಅವರ ನಡುವೆ ಕಿತ್ತಾಟ ಶುರುವಾಗಿದೆ. ಹೊರಗಡೆ ಇದ್ದಾಗ ಚೈತ್ರಾ ಕುಂದಾಪುರ ಅವರು ಅನೇಕ ವಿವಾದಗಳನ್ನು ಮಾಡಿಕೊಂಡಿದ್ದರು. ಬಿಗ್ ಬಾಸ್​ ಮನೆಯ ಒಳಗೆ ಅವರಿಂದಲೇ ಮೊದಲು ಜಗಳ ಆರಂಭ ಆಗುತ್ತದೆ ಎಂದು ಬಹುತೇಕರು ಊಹಿಸಿದ್ದರು. ಹಾಗೆಯೇ ಆಗಿದೆ.

ಬಿಗ್​ ಬಾಸ್​ ಮನೆ ಮೊದಲಿನಂತೆ ಇಲ್ಲ. ಈ ಸೀಸನ್​ನಲ್ಲಿ ದೊಡ್ಮನೆ ಎರಡು ಭಾಗವಾಗಿದೆ. ಒಂದು ಭಾಗದಲ್ಲಿ ಸ್ವರ್ಗ ಇದೆ. ಇನ್ನೊಂದು ಭಾಗದಲ್ಲಿ ನರಕ ಇದೆ. ನರಕದಲ್ಲಿ ಇರುವವರಿಗೆ ಸವಲತ್ತುಗಳು ಕಡಿಮೆ. ಸದ್ಯಕ್ಕೆ ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್, ಅನುಷಾ ರೈ, ಶಿಶಿರ್​, ಮಾನಸಾ, ಮೋಕ್ಷಿತಾ ಪೈ ಮತ್ತು ರಂಜಿತ್​ ಅವರು ನರಕವಾಸಿಗಳಾಗಿ ಬಿಗ್​ ಬಾಸ್​ನಲ್ಲಿ ಆಟ ಆರಂಭಿಸಿದ್ದಾರೆ.

ಇದನ್ನೂ ಓದಿ: ತುಕಾಲಿ ಸಂತು ಪತ್ನಿ ಮಾನಸಾಗೆ ಸವಾಲು ಹಾಕಿ ಬಿಗ್​ ಬಾಸ್​ಗೆ ಬಂದ ನಟಿ ಹಂಸಾ

ಉಗ್ರಂ ಮಂಜು, ಐಶ್ವರ್ಯಾ, ಹಂಸಾ, ತ್ರಿವಿಕ್ರಮ್​, ಲಾಯರ್​ ಜಗದೀಶ್​, ಧರ್ಮ ಕೀರ್ತಿರಾಜ್​, ಗೌತಮಿ ಜಾಧವ್​, ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನರಾಜ್​ ಅವರು ಸ್ವರ್ಗದಲ್ಲಿ ಸ್ಥಾನ ಪಡೆದಿದ್ದಾರೆ. ಆಟ ಶುರುವಾದ ಮೊದಲ ದಿನವೇ ಸ್ವರ್ಗ ವಾಸಿಗಳಿಗೆ ಹಾಗೂ ನರಕವಾಸಿಗಳಿಗೆ ಕಿತ್ತಾಟ ಆರಂಭ ಆಗಿದೆ. ಆಟದ ನಿಯಮಗಳ ವಿಚಾರದಲ್ಲಿ ಉಗ್ರಂ ಮಂಜು ಮತ್ತು ಚೈತ್ರಾ ಕುಂದಾಪುರ ಅವರ ನಡುವೆ ವಾದ ಆಗಿದೆ.

ಚೈತ್ರಾ ಕುಂದಾಪುರ ನರಕದಲ್ಲಿ ಇರುವುದರಿಂದ ಅವರಿಗೆ ವಿಶೇಷ ಅಧಿಕಾರಗಳು ಇಲ್ಲ. ಆದರೆ ಅವರು ತಮ್ಮ ಮಿತಿಮಿತಿಗಳನ್ನು ಮೀರಿದಂತಿದೆ. ಮೊದಲ ದಿನದ ಝಲಕ್ ತೋರಿಸುವ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಅವರು ಕೂಗಾಡಿರುವುದು ಕಾಣಿಸಿದೆ. ‘ನೀವು ಮಾತನಾಡುವಂತಿಲ್ಲ’ ಎಂದು ಚೈತ್ರಾಗೆ ಉಗ್ರಂ ಮಂಜು ತಾಕೀತು ಮಾಡಿದ್ದಾರೆ. ‘ಮಾತನಾಡಬಾರದು ಅಂತ ರೂಲ್​ ಬುಕ್​ನಲ್ಲಿ ಇದ್ದರೆ ತೋರಿಸಿ, ನಾನು ಮಾತನಾಡಲ್ಲ’ ಎಂದು ಚೈತ್ರಾ ತಿರುಗೇಟು ನೀಡಿದ್ದಾರೆ. ಈ ಘಟನೆಯಿಂದ ಬಿಗ್​ ಬಾಸ್​ ಮನೆಯ ಸ್ಪರ್ಧಿಗಳ ನಡುವೆ ಆರಂಭದಲ್ಲೇ ಮನಸ್ತಾಪ ಹುಟ್ಟಿಕೊಂಡಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್