‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಅಖಾಡಕ್ಕೆ ಬಂದ ಮಧ್ಯಮ ವರ್ಗದ ಹುಡುಗ ತ್ರಿವಿಕ್ರಮ್

ಕ್ರಿಕೆಟರ್​ ಹಾಗೂ ನಟನಾಗಿ ಗುರುತಿಸಿಕೊಂಡ ತ್ರಿವಿಕ್ರಮ್​ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ಮಧ್ಯಮ ವರ್ಗದಿಂದ ಬಂದಿರುವ ಅವರಿಗೆ ಈ ವೇದಿಕೆ ತುಂಬ ಮುಖ್ಯವಾಗುತ್ತಿದೆ. ಕಿರುತೆರೆ ನಟ ಶಿಶರ್​ ಅವರಿಗೆ ಪೈಪೋಟಿ ನೀಡುತ್ತಾ ತ್ರಿವಿಕ್ರಮ್​ ಅವರು ದೊಡ್ಮನೆ ಪ್ರವೇಶಿಸಿದ್ದಾರೆ. ಅವರ ಹಿನ್ನೆಲೆ ಬಗ್ಗೆ ಇಲ್ಲಿದೆ ಮಾಹಿತಿ..

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಅಖಾಡಕ್ಕೆ ಬಂದ ಮಧ್ಯಮ ವರ್ಗದ ಹುಡುಗ ತ್ರಿವಿಕ್ರಮ್
ತ್ರಿವಿಕ್ರಮ್
Follow us
|

Updated on: Sep 29, 2024 | 9:06 PM

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋ ಅದ್ದೂರಿಯಾಗಿ ಆರಂಭ ಆಗಿದೆ. ಸಿನಿಮಾ, ಕಿರುತೆರೆ, ಸೋಶಿಯಲ್​ ಮೀಡಿಯಾ ಮುಂತಾದ ಕ್ಷೇತ್ರದಲ್ಲಿ ಸದ್ದು ಮಾಡಿದ ವ್ಯಕ್ತಿಗಳು ಬಿಗ್ ಬಾಸ್​ ಅಖಾಡಕ್ಕೆ ಬಂದಿದ್ದಾರೆ. ಕ್ರಿಕೆಟರ್ ಆಗಬೇಕು ಅಂತ ಕನಸು ಕಂಡ ತ್ರಿವಿಕ್ರಮ್ ಅವರು ಕೂಡ ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಅವರಿಗೆ ಸೀರಿಯಲ್ ನಟ ಶಿಶಿರ್ ಅವರು ಪೈಪೋಟಿ ನೀಡಿದ್ದಾರೆ. ಅನುಷಾ ರೈ, ಲಾಯರ್​ ಜಗದೀಶ್​, ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್​, ಧನರಾಜ್​, ಗೌತಮಿ ಜಾಧವ್, ಭವ್ಯಾ ಗೌಡ, ಯಮುನಾ ಶ್ರೀನಿಧಿ ಮುಂತಾದವರು ಕೂಡ ಬಿಗ್​ ಬಾಸ್​ ಮನೆಗೆ ಕಾಲಿಟ್ಟಿದ್ದಾರೆ.

ಝಗಮಗಿಸುವ ವೇದಿಕೆಯಲ್ಲಿ ತ್ರಿವಿಕ್ರಮ್​ ಅವರು ಎಂಟ್ರಿ ನೀಡಿದ್ದಾರೆ. ಸಿಸಿಎಲ್​ನಲ್ಲಿ ಅವರು ಆಟ ಆಡಿದ ಅನುಭವ ಹೊಂದಿದ್ದಾರೆ. ಮುಂದಿನ ಮೂರು ತಿಂಗಳ ಕಾಲ ಅವರು ಬಿಗ್​ ಬಾಸ್​ನಲ್ಲೇ ಇದ್ದರೆ ಜನವರಿಯಲ್ಲಿ ಸಿಸಿಎಲ್​ ಬಂದಾಗ ಏನು ಮಾಡೋದು ಎಂದು ಸುದೀಪ್​ ಅವರು ಕಾಲೆಳೆದರು. ತ್ರಿವಿಕ್ರಮ್​ ಅವರು ಎಷ್ಟು ವಾರಗಳ ಕಾಲ ಬಿಗ್ ಬಾಸ್​ ಮನೆಯಲ್ಲಿ ಇರುತ್ತಾರೆ ಎಂಬುದನ್ನು ಕಾದು ನೋಡಬೇಕು.

ಕಳೆದ 6 ವರ್ಷಗಳಿಂದ ತ್ರಿವಿಕ್ರಮ್​ ಅವರು ನಟನಾಗಿ ಗುರುತಿಸಿಕೊಂಡಿದ್ದಾರೆ. ‘ಮಧ್ಯಮವರ್ಗದಿಂದ ಬಂದಿರುವ ಜನರಿಗೆ ಬಿಗ್​ ಬಾಸ್​ ರೀತಿಯ ಒಂದು ವೇದಿಕೆ ಖಂಡಿತವಾಗಿಯೂ ಬೇಕು. ನಮ್ಮ ಅಪ್ಪ ಡ್ರೈವರ್​, ಅಮ್ಮ ಗೃಹಿಣಿ. ಕ್ರಿಕೆಟರ್​ ಆಗಬೇಕು ಅಂತ ಕನಸು ಇಟ್ಟುಕೊಂಡು ನಾನು ಬೆಂಗಳೂರಿಗೆ ಬಂದವನು’ ಎಂದು ತ್ರಿವಿಕ್ರಮ್​ ಅವರು ಹೇಳಿದ್ದಾರೆ.

‘ನಾನು ಕ್ರಿಕೆಟರ್ ಆಗಬೇಕು ಅಂತ ಬೆಂಗಳೂರಿಗೆ ಬಂದೆ. ಆದರೆ ಕ್ರಿಕೆಟರ್ ಆಗಲು ಒಂದು ಹಿನ್ನೆಲೆ ಬೇಕು ಅಂತ ಗೊತ್ತಾಯಿತು. ಜಿಮ್​ ಟ್ರೇನರ್​ ಆಗಿ ಸೇರಿಕೊಂಡೆ. ಅಲ್ಲಿ ಜನರ ಪರಿಚಯ ಆಯಿತು. ಸಿರಿಯಲ್ ಮತ್ತು ಸಿನಿಮಾದ ಅವಕಾಶಗಳು ಸಿಕ್ಕವು. ಆದರೆ ಅಷ್ಟರಲ್ಲೇ ಲಾಕ್​ಡೌನ್​ ಶುರುವಾಯಿತು. ಲಾಕ್​ಡೌನ್​ ಬಂದಿದ್ದರಿಂದ ನಮಗೆ ದೊಡ್ಡ ಹಿನ್ನಡೆ ಆಯಿತು’ ಎಂದಿದ್ದಾರೆ ತ್ರಿವಿಕ್ರಮ್.

ಇದನ್ನೂ ಓದಿ: ಬಿಗ್​ ಬಾಸ್​ 2ನೇ ಸ್ಪರ್ಧಿಯಾಗಿ ದೊಡ್ಮನೆಗೆ ಬಂದ ಯಮುನಾ ಶ್ರೀನಿಧಿ; ಸಿಕ್ತು ನೇರ ಸ್ವರ್ಗ

‘ನನಗೆ ಅಡುಗೆ ಬರುತ್ತದೆ. ಯಾವುದೇ ಕೆಲಸವನ್ನೂ ನೀಟಾಗಿ ಮಾಡುತ್ತೇನೆ. ಸ್ಪೋರ್ಟ್ಸ್​, ಜಿಮ್​ ಮತ್ತು ನಟನೆಯ ಅನುಭವವನ್ನು ಬಿಗ್​ ಬಾಸ್​ ಮನೆಯಲ್ಲಿ ಬಳಸಿಕೊಳ್ಳುತ್ತೇನೆ’ ಎಂದು ತ್ರಿವಿಕ್ರಮ್​ ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡುವಾಗ ತ್ರಿವಿಕ್ರಮ್​ ಅವರು ಸ್ವರ್ಗಕ್ಕೆ ಕಾಲಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ