AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ 2ನೇ ಸ್ಪರ್ಧಿಯಾಗಿ ದೊಡ್ಮನೆಗೆ ಬಂದ ಯಮುನಾ ಶ್ರೀನಿಧಿ; ಸಿಕ್ತು ನೇರ ಸ್ವರ್ಗ

ಸಿನಿಮಾ ಮತ್ತು ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಯಮುನಾ ಶ್ರೀನಿಧಿ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮಕ್ಕೆ 2ನೇ ಸ್ಪರ್ಧಿಯಾಗಿ ಬಂದಿದ್ದಾರೆ. ಕಿರುತೆರೆ ನಟಿ ಭವ್ಯಾ ಗೌಡ ಜೊತೆ ಅವರು ದೊಡ್ಮನೆಯೊಳಗೆ ಕಾಲಿಟ್ಟಿದ್ದಾರೆ. ಇಬ್ಬರಿಗೂ ನೇರವಾಗಿ ಸ್ಪರ್ಗಕ್ಕೆ ಎಂಟ್ರಿ ಸಿಕ್ಕಿದೆ. ಯಮುನಾ ಶ್ರೀನಿಧಿ ಅವರ ಬಗ್ಗೆ ಇಲ್ಲಿದೆ ಮಾಹಿತಿ...

ಬಿಗ್​ ಬಾಸ್​ 2ನೇ ಸ್ಪರ್ಧಿಯಾಗಿ ದೊಡ್ಮನೆಗೆ ಬಂದ ಯಮುನಾ ಶ್ರೀನಿಧಿ; ಸಿಕ್ತು ನೇರ ಸ್ವರ್ಗ
ಯಮುನಾ ಶ್ರೀನಿಧಿ
ಮದನ್​ ಕುಮಾರ್​
|

Updated on: Sep 29, 2024 | 6:42 PM

Share

ಬಣ್ಣದ ಲೋಕದಲ್ಲಿ ಯಮುನಾ ಶ್ರೀನಿಧಿ ಅವರು ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ, ಕಿರುತೆರೆ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ಹಲವು ಸೀರಿಯಲ್​ಗಳಲ್ಲಿ ನಟಿಸಿದ್ದಾರೆ. ಅವರು ಭರತನಾಟ್ಯ ಡ್ಯಾನ್ಸರ್​ ಕೂಡ ಹೌದು. ಭರತನಾಟ್ಯದಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಅನೇಕರಿಗೆ ಭರತನಾಟ್ಯವನ್ನು ಕಲಿಸಿದ್ದಾರೆ. ‘ಅಶ್ವಿನಿ ನಕ್ಷತ್ರ’, ‘ಅಮೃತ ವರ್ಷಿಣಿ’, ‘ತ್ರಿವೇಣಿ ಸಂಗಮ’, ‘ಕಮಲಿ’, ‘ಮನಸಾರೆ’ ಮುಂತಾದ ಸೀರಿಯಲ್​ಗಳಲ್ಲಿ ಯಮುನಾ ಶ್ರೀನಿಧಿ ಅವರು ನಟಿಸಿದ್ದಾರೆ. ಈಗ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಅವರು 2ನೇ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ.

‘ಕಳೆದ 10 ವರ್ಷಗಳಿಂದ ಜೀವನದಲ್ಲಿ ಒಂದು ಜಡತ್ವ ಹಿಡಿದಿದೆ. ಏನೂ ಚಾಲೆಂಜಿಂಗ್​ ಆಗಿ ಮಾಡಿಲ್ಲ. ಅದಕ್ಕಾಗಿ ಬಿಗ್​ ಬಾಸ್​ಗೆ ಬಂದಿದ್ದೇನೆ. ಮಗಳು ಹೇಳಿದ್ದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ಯಮುನಾ ಶ್ರೀನಿಧಿ ಅವರು ಹೇಳಿದ್ದಾರೆ. ಕಿರುತೆರೆ ನಟಿ ಭವ್ಯಾ ಗೌಡ ಅವರ ಜೊತೆ ಬಿಗ್​ ಬಾಸ್​ ವೇದಿಕೆಗೆ ಬಂದರು. ‘ನನ್ನ ವಯಸ್ಸನ್ನು ನೋಡಿದರೆ, ಇಷ್ಟು ವರ್ಷಗಳ ಅನುಭವ ಇದೆ. ನನಗೆ ತಾಳ್ಮೆ ಕೂಡ ಇರುತ್ತದೆ. ಮೊದಲು ನಾನು ಶಾರ್ಟ್​ಪೆಂಟರ್​ ವ್ಯಕ್ತಿ ಆಗಿದ್ದೆ. ನನಗೆ ಒಸಿಡಿ ಇದೆ’ ಎಂದು ತಮ್ಮನ್ನು ತಾವು ಯಮುನಾ ಪರಿಚಯಿಸಿಕೊಂಡರು.

ಭವ್ಯಾ ಗೌಡ ಮತ್ತು ಯಮುನಾ ಶ್ರೀನಿಧಿ ಅವರು ಪರಸ್ಪರ ಸ್ಪರ್ಧಿಗಳಾಗಿ ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದರು. ಯಾರು ಸ್ಪರ್ಗಕ್ಕೆ ಹೋಗುತ್ತಾರೆ? ಯಾರು ನರಕಕ್ಕೆ ಹೋಗುತ್ತಾರೆ ಎಂಬ ಪ್ರಶ್ನೆ ಕೇಳಲಾಯಿತು. ‘ನನಗೆ ನರಕಕ್ಕೆ ಹೋಗೋಕೆ ಇಷ್ಟ. ಯಾಕೆಂದರೆ, ನಾನು ಕಂಫರ್ಟ್​ ಝೋನ್​ನಿಂದ ಹೊರಗೆ ಬರಬೇಕು’ ಎಂದರು ಯಮುನಾ ಶ್ರೀನಿಧಿ. ವೇದಿಕೆಯಲ್ಲಿ ಸುದೀಪ್​ ಅವರು ಭವ್ಯಾ ಮತ್ತು ಯಮುನಾಗೆ ಒಂದು ವಿಶೇಷ ಅವಕಾಶ ನೀಡಿದರು. ಮೊದಲು ದೊಡ್ಮನೆಗೆ ಕಾಲಿಡುತ್ತಿರುವ ಈ ಇಬ್ಬರು ಸ್ಪರ್ಧಿಗಳಿಗೆ ನೇರವಾಗಿ ಸ್ವರ್ಗಕ್ಕೆ ಎಂಟ್ರಿ ನೀಡಲಾಯಿತು.

ಇದನ್ನೂ ಓದಿ: BBK 11: ಮೊದಲ ಎಪಿಸೋಡ್​ಗೆ ಸುದೀಪ್​ ಲುಕ್ ಜತೆ ಸ್ವರ್ಗ-ನರಕದ ಝಲಕ್​ ಇಲ್ಲಿದೆ..

ಮುಂಬರುವ ಸ್ಪರ್ಧಿಗಳನ್ನು ಸ್ವರ್ಗಕ್ಕೆ ಕಳಿಸಬೇಕಾ ಅಥವಾ ನರಕಕ್ಕೆ ಕಳಿಸಬೇಕ ಎಂಬ ಅಧಿಕಾರವನ್ನು ಕೂಡ ಯಮುನಾ ಮತ್ತು ಭವ್ಯಾ ಗೌಡ ಅವರಿಗೆ ಬಿಗ್ ಬಾಸ್​ ನೀಡಿದರು. ಹಾಗಾಗಿ ನೇರವಾಗಿ ಅವರನ್ನು ಕನ್​ಫೆಷನ್​ ರೂಮ್​ಗೆ ಕಳಿಸಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ